ಸಿಟ್ಟು ನೆತ್ತಿ'ಗೇರಿದಾಗ ಏನು ಮಾಡಬೇಕು, ಏನು ಮಾಡಬಾರದು : ಇಲ್ಲಿದೆ ಟಿಪ್ಸ್

Published : Oct 20, 2016, 07:13 PM ISTUpdated : Apr 11, 2018, 01:06 PM IST
ಸಿಟ್ಟು ನೆತ್ತಿ'ಗೇರಿದಾಗ  ಏನು ಮಾಡಬೇಕು, ಏನು ಮಾಡಬಾರದು : ಇಲ್ಲಿದೆ ಟಿಪ್ಸ್

ಸಾರಾಂಶ

ಅನಿವಾರ್ಯ ಕಾರಣಗಳಿಂದ ಪ್ರತಿಯೊಬ್ಬರಿಗೂ ಸಿಟ್ಟು ನೆತ್ತಿಗೇರುತ್ತದೆ. ಆಗ ಕುಟುಂಬದ ಮೇಲೋ, ಪ್ರೀತಿ ಪಾತ್ರರ ಮೇಲೋ ಹರಿಹಾಯುತ್ತೇವೆ. ಕೋಪ ನಿಯಂತ್ರಿಸಿಕೊಳ್ಳಲು ಕಲಿಯಬೇಕು ನಿಜ. ಅದಕ್ಕೂ ಮೊದಲು ಸಿಟ್ಟಿಗೆದ್ದ ಸಮಯದಲ್ಲಿ ಏನನ್ನು ಮಾಡಬಾರದು ಎಂಬುದನ್ನು ಅರಿತುಕೊಳ್ಳಲು ಇಲ್ಲಿವೆ ಟಿಪ್ಸ್

1)ಸಂಬಂಧ ಕಡಿತ: ಸಿಟ್ಟು ಬಂದಾಕ್ಷಣ ಸಂಬಂಧ ಕಡಿದುಕೊಳ್ಳುವ ಮಾತನ್ನು ಆಡಬೇಡಿ. ಆ ಕ್ಷಣಕ್ಕೆ ಹೀಗೆ ಹೇಳುವುದರಿಂದ ನಾನೇ ಗೆದ್ದೆ ಎಂದು ಅನಿಸಬಹುದು. ಆದರೆ, ಅದರಿಂದ ದೀರ್ಘಕಾಲ ದುಃಖ ಪಡಬೇಕಾದ ಸ್ಥಿತಿ ಎದುರಾಗಬಹುದು.

 

2) ಕೆಟ್ಟಭಾಷೆ: ನೀವೆಷ್ಟೇ ಕೋಪಿಷ್ಠರಾಗಿ ದ್ದರೂ, ಅದು ಗೊತ್ತಿರುವವರು ಹೊಂದಿಕೊಂಡು ಹೋಗುತ್ತಾರೆ. ಆದರೆ, ಸಿಟ್ಟು ಬಂದಾಗ ಯಾವುದೇ ಕಾರಣಕ್ಕೂ ಅವಾಚ್ಯ ಪದ ಬಳಸಬೇಡಿ. ಬಳಸಿದರೆ ಅದು ಪರಿಸ್ಥಿತಿಯನ್ನು ವಿಕೋಪಕ್ಕೆ ತಳ್ಳಬಹುದು.


3) ನಕಾರಾತ್ಮಕ ಚಿಂತನೆ: ಒಂದು ಬಾರಿ ಸಂಬಂಧ ಕಡಿದರೆ ಮತ್ತೆ ಸಿಗುವುದಿಲ್ಲ. ಹಾಗಾಗಿ, ಕೋಪ ಬಂದಾಗ ನೆಗೆಟಿವ್‌ ಆಗಿ ಯೋಚನೆ ಮಾಡಬೇಡಿ. ಆ ವ್ಯಕ್ತಿಯೊಂದಿಗೆ ಕಳೆದ ಮಧುರ ಕ್ಷಣಗಳನ್ನು ನೆನಪಿಸಿಕೊಂಡು, ಕೋಪ ತಣಿಸಲು ಯತ್ನಿಸಿ.


4) ನಡತೆ ಬಗ್ಗೆ ಮಾತು: ಕೋಪದ ಭರದಲ್ಲಿ ನಿಮ್ಮ ಎದುರಿಗಿರುವ ವ್ಯಕ್ತಿಯ ನಡತೆಯ ಬಗ್ಗೆ ಕೆಟ್ಟಮಾತುಗಳನ್ನಾಡುವುದನ್ನು ಮಾಡಲೇಬೇಡಿ. ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು ಎಂಬ ಗಾದೆ ನೆನಪಿಟ್ಟುಕೊಳ್ಳಿ.


5) ಹೊಯ್‌ ಕೈ ಬೇಡ: ಆತ್ಮೀಯರಲ್ಲಿ ಸಿಟ್ಟಾಗುವುದು ಸಹಜ. ಹಾಗಂತ, ಯಾವುದೇ ಬಲಪ್ರಯೋಗ ಮಾಡಬೇಡಿ. ಹೊಡೆಯುವುದು, ಕೈಗೆ ಸಿಕ್ಕ ವಸ್ತುಗಳನ್ನು ಬಿಸಾಕುವುದು ಮಾಡಬೇಡಿ. ಇದರಿಂದ ನಿಮಗೇ ನಷ್ಟ.

 

 

 

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಸ್ಯಹಾರಿಗಳಾಗಿ ಬದಲಾದ ಬಾಲಿವುಡ್ ತಾರೆಯರು… ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!
ಈ 4 ರಾಶಿ ಜನಗಳೊಂದಿಗೆ ಜಾಗರೂಕರಾಗಿರಿ, ಅವರು ನಿಮ್ಮ ಮನಸ್ಸಿನಲ್ಲಿ ಏನಿದೆ ಎಂದು ಓದುತ್ತಾರೆ