Published : Jul 11, 2025, 07:42 AM ISTUpdated : Jul 11, 2025, 07:08 PM IST

India News Live: ಎರಡು ವಿಚ್ಚೇದನ, ಮದ್ಯದ ಚಟ, ಕ್ಯಾನ್ಸರ್ ಹೃತಿಕ್ ರೋಷನ್‌ ಅಕ್ಕನನ್ನು ಕಾಡಿದ ಸಮಸ್ಯೆಗಳು ಒಂದೆರಡಲ್ಲ!

ಸಾರಾಂಶ

ಬೆಂಗಳೂರು (ಜುಲೈ 11): ಮಹಾರಾಷ್ಟ್ರ ರಾಜಧಾನಿ ಮುಂಬೈನಲ್ಲಿ ಕರ್ನಾಟಕದ ಕರಾವಳಿ ಮೂಲದ ಶೆಟ್ಟಿಗಳಿಗೆ ಆಹಾರ ಪೂರೈಕೆ ಗುತ್ತಿಗೆ ನೀಡೋದಕ್ಕೆ ಶಿವಸೇನೆಯ ತಕರಾರು ಆರಂಭವಾಗಿದೆ. ಮುಂಬೈನಲ್ಲಿ ಕ್ಯಾಂಟೀನ್‌ ಗುತ್ತಿಗೆಯ ವ್ಯವಹಾರವನ್ನು ಮರಾಠಿಗರಿಗಷ್ಟೇ ನೀಡಿ ಎಂದು ಮಹಾರಾಷ್ಟ್ರ ಶಿವಸೇನೆ ನಾಯಕ ಸಂಜಯ್‌ ಗಾಯಕ್ವಾಡ್‌ ಹೇಳಿದ್ದಾರೆ. ಕೆಲ ದಿನಗಳ ಹಿಂದೆ ಹಳಸಿದ ಆಹಾರ ಕೊಟ್ಟಿದ್ದಾರೆ ಎನ್ನುವ ಕಾರಣಕ್ಕೆ ಈತ ಕ್ಯಾಂಟೀನ್‌ ಸಿಬ್ಬಂದಿಯ ಮೇಲೆ ಗೂಂಡಾಗಿರಿ ನಡೆಸಿದ್ದ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್‌ ಬ್ಲಾಗ್‌..

 

07:08 PM (IST) Jul 11

ಎರಡು ವಿಚ್ಚೇದನ, ಮದ್ಯದ ಚಟ, ಕ್ಯಾನ್ಸರ್ ಹೃತಿಕ್ ರೋಷನ್‌ ಅಕ್ಕನನ್ನು ಕಾಡಿದ ಸಮಸ್ಯೆಗಳು ಒಂದೆರಡಲ್ಲ!

ಸುನೈನಾ ರೋಷನ್ ಅವರ ಜೀವನವು ಹಲವು ಸವಾಲುಗಳಿಂದ ಕೂಡಿದೆ. ವಿವಾಹ ವಿಚ್ಛೇದನ, ಆರೋಗ್ಯ ಸಮಸ್ಯೆಗಳು ಮತ್ತು ವ್ಯಸನಗಳನ್ನು ಎದುರಿಸಿ, ಅವರು ತಮ್ಮ ಬದುಕನ್ನು ಪುನರ್ನಿರ್ಮಿಸಿಕೊಂಡಿದ್ದಾರೆ. ಈ ಕಥೆಯು ಸಂಕಷ್ಟಗಳ ನಡುವೆಯೂ ಆಶಾವಾದ ಮತ್ತು ಧೈರ್ಯದಿಂದ ಬದುಕುವುದರ ಮಹತ್ವವನ್ನು ಸಾರುತ್ತದೆ.
Read Full Story

06:43 PM (IST) Jul 11

ಅಮೇಜಾನ್ ಆಫರ್‌ನಲ್ಲಿವೆ ₹15,000 ರೊಳಗಿನ ಟಾಪ್-7 ಸೂಪರ್ 5G ಫೋನ್‌ಗಳು

ಕೇವಲ 15,000 ರೂ. ಒಳಗೆ ಉತ್ತಮ ಫೋನ್‌ ಖರೀದಿಸಬೇಕೆಂದು ಯೋಚಿಸುತ್ತಿದ್ದೀರಾ? ಅಮೆಜಾನ್‌ನಲ್ಲಿ ನಡೆಯುತ್ತಿರುವ ಡೀಲ್‌ಗಳನ್ನು ತಪ್ಪಿಸಿಕೊಳ್ಳಬೇಡಿ. ಅನೇಕ ಸ್ಮಾರ್ಟ್‌ಫೋನ್‌ಗಳು ಬಜೆಟ್‌ಗೆ ಸೂಕ್ತವಲ್ಲ, ಆದರೆ ಫ್ಲ್ಯಾಗ್‌ಶಿಪ್‌ಗಳಿಗಿಂತ ಕಡಿಮೆಯಿಲ್ಲ. ನಿಮಗಾಗಿ 7 ಅತ್ಯುತ್ತಮ ಫೋನ್‌ಗಳನ್ನು ನೋಡಿ...

Read Full Story

06:22 PM (IST) Jul 11

ಅನಂತ್-ರಾಧಿಕಾಗೆ ಮೊದಲ ಆನಿವರ್ಸರಿ - ಅಂಬಾನಿ ಸೊಸೆಯ 10 ಸತ್ಯ ಸಂಗತಿಗಳು ರಿವೀಲ್!

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ, ಅಂಬಾನಿ ಕುಟುಂಬದ ಸೊಸೆ ರಾಧಿಕಾ ಮರ್ಚೆಂಟ್ ಅವರ ಶಿಕ್ಷಣ, ವೃತ್ತಿಜೀವನ ಮತ್ತು ಕಲಾತ್ಮಕ ಹಿನ್ನೆಲೆಯ ಬಗ್ಗೆ ತಿಳಿದುಕೊಳ್ಳೋಣ.
Read Full Story

06:00 PM (IST) Jul 11

ಈ ದೇಶದಲ್ಲಿ ಗೋವುಗಳಿಗೂ ಇದೇ ಪಾಸ್‌ಪೋರ್ಟ್‌ - ಏನೀದರ ವಿಶೇಷತೆ

ಭಾರತದಲ್ಲಿ ಗೋವುಗಳಿಗೆ ಸರಿಯಾದ ಸುರಕ್ಷತೆ ಇಲ್ಲದಿರುವಾಗ, ಐರ್ಲೆಂಡ್‌ನಲ್ಲಿ ಪ್ರತಿ ಹಸುವಿಗೂ ಪಾಸ್‌ಪೋರ್ಟ್ ಕಡ್ಡಾಯ. ಈ ಪಾಸ್‌ಪೋರ್ಟ್ ವಿಶೇಷತೆ ಏನು ಅಂತ ನೋಡೋಣ ಬನ್ನಿ.

Read Full Story

05:33 PM (IST) Jul 11

ಆರೋಗ್ಯ ಕ್ಷೇತ್ರದಲ್ಲಿ ಅದಾನಿ 60,000 ಕೋಟಿ ರೂ. ಹೂಡಿಕೆ, AI ತಂತ್ರಜ್ಞಾನ ಬಳಕೆ

ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅವರು ಅಹಮದಾಬಾದ್ ಮತ್ತು ಮುಂಬೈನಲ್ಲಿ AI ಆಧಾರಿತ ಆರೋಗ್ಯ ಸೇವಾ ಕೇಂದ್ರಗಳನ್ನು ಸ್ಥಾಪಿಸುವ ಯೋಜನೆಯನ್ನು ಘೋಷಿಸಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ಸುಮಾರು 60,000 ಕೋಟಿ ರೂ. ಬಂಡವಾಳ ಹೂಡಿಕೆ ಮಾಡುವುದಾಗಿ ತಿಳಿಸಿದ್ದಾರೆ.  

Read Full Story

05:11 PM (IST) Jul 11

ದೊಡ್ಡ ಸಂಬಳ ಇರ್ಲಿಲ್ಲ ಆದ್ರೂ 45ರಲ್ಲಿ ನಿವೃತ್ತಿಯಾದ ವ್ಯಕ್ತಿಯ ಉಳಿತಾಯ ನೋಡಿದ್ರೆ ಹೌಹಾರೋದು ಪಕ್ಕಾ

ಸರಳ ಜೀವನ ಮತ್ತು ನಿರಂತರ ಉಳಿತಾಯದಿಂದ 45ರ ಹರೆಯದಲ್ಲಿ ವ್ಯಕ್ತಿಯೊಬ್ಬರು 4.7 ಕೋಟಿ ಉಳಿತಾಯ ಮಾಡಿದ್ದಾರೆ. ತಿಂಗಳ ಸಂಬಳದಲ್ಲೇ ಸಣ್ಣ ಮೊತ್ತ ಉಳಿಸಿ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಮೂಲಕ ಇದು ಸಾಧ್ಯವಾಯಿತು. ಈ ಕಥೆ ಉಳಿತಾಯದ ಮಹತ್ವವನ್ನು ಎತ್ತಿ ತೋರಿಸುತ್ತದೆ.
Read Full Story

05:00 PM (IST) Jul 11

Viral Video - ಜಾಗ್ವಾರ್‌ ದುರಂತದಲ್ಲಿ ಸಾವು ಕಂಡ ಐಎಎಫ್‌ ಪೈಲಟ್‌ಗೆ ವಿದಾಯ ಹೇಳಿದ ಒಂದು ತಿಂಗಳ ಮಗ!

ಬುಧವಾರ ಬೆಳಿಗ್ಗೆ ಸಂಭವಿಸಿದ ಅಪಘಾತದಲ್ಲಿ ಸಾವನ್ನಪ್ಪಿದ ಮತ್ತೊಬ್ಬ ಐಎಎಫ್ ಪೈಲಟ್ ಫ್ಲೈಟ್ ಲೆಫ್ಟಿನೆಂಟ್ ರಿಷಿರಾಜ್ ಸಿಂಗ್ (23) ಆಗಿದ್ದಾರೆ.

 

Read Full Story

04:21 PM (IST) Jul 11

ರಸ್ತೆಯಲ್ಲಿ ನಿಂತ ನೀರಲ್ಲಿ ಜಾರಿಬಿದ್ದ ಮೊಬೈಲ್‌ ಯುವಕ, ಕಣ್ಣೀರಿಡುತ್ತಲೇ ಹುಡುಕಾಟ!

ಜೈಪುರದಲ್ಲಿ ಜಲಾವೃತಗೊಂಡ ರಸ್ತೆಯಲ್ಲಿ ಸ್ಕೂಟರ್‌ನಲ್ಲಿ ಹೋಗುವಾಗ ಯುವಕನೊಬ್ಬನ ಮೊಬೈಲ್ ನೀರಿಗೆ ಬಿದ್ದ ಘಟನೆ ನಡೆದಿದೆ. ಮೊಬೈಲ್ ಸಿಗದೇ ಯುವಕ ಕಣ್ಣೀರು ಹಾಕುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ನಗರದ ಕಳಪೆ ಮೂಲಸೌಕರ್ಯದ ಬಗ್ಗೆ ಚರ್ಚೆಗೆ ಕಾರಣವಾಗಿದೆ.
Read Full Story

03:59 PM (IST) Jul 11

ಸತ್ತು 9 ತಿಂಗಳು ಕಳೆದರೂ ಗೊತ್ತಾಗೇ ಇಲ್ಲ - ವಿಚಾರಿಸಿಕೊಳ್ಳುವ ಒಂದು ಜೀವವೂ ಇರಲಿಲ್ವಾ ಈ ನಟಿಗೆ

ಕೆಲ ದಿನಗಳ ಹಿಂದೆ ಶವವಾಗಿ ಪಾಕಿಸ್ತಾನಿ ನಟಿ ಹುಮೈರಾ ಅಸ್ಗರ್  ಅವರು ಸಾವನ್ನಪ್ಪಿ 9 ತಿಂಗಳುಗಳೇ ಕಳೆದಿದ್ದವು ಎಂಬ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.

Read Full Story

03:06 PM (IST) Jul 11

'ಆಪರೇಷನ್ ಸಿಂದೂರ್‌ ವೇಳೆ ಭಾರತಕ್ಕೆ ಆದ ಡ್ಯಾಮೇಜ್‌ ತೋರಿಸಿ..' ವಿದೇಶಿ ಮಾಧ್ಯಮಗಳಿಗೆ ಸವಾಲೆಸೆದ ಅಜಿತ್‌ ಧೋವಲ್‌

ಐಐಟಿ ಮದ್ರಾಸ್‌ನ 62ನೇ ಘಟಿಕೋತ್ಸವದಲ್ಲಿ ದೋವಲ್ ಮಾತನಾಡುತ್ತಿದ್ದರು.

 

Read Full Story

02:49 PM (IST) Jul 11

ಸಿಎ ಪರೀಕ್ಷೆಯಲ್ಲಿ ಟಾಪರ್‌ ಆದ ರಿಕ್ಷಾ ಚಾಲಕ ಮಗಳು, ಮಕ್ಕಳಿಗಾಗಿ ಜಮೀನು ಮಾರಿದ ತಂದೆ

ರಿಕ್ಷಾ ಚಾಲಕನ ಮಗಳು ಪ್ರೇಮಾ ಜಯಕುಮಾರ್, ಸಿಎ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದು ಸಾಧನೆ ಮಾಡಿದ್ದಾರೆ. ಕಠಿಣ ಪರಿಶ್ರಮ ಮತ್ತು ಪೋಷಕರ ಬೆಂಬಲದಿಂದ ಈ ಯಶಸ್ಸು ಗಳಿಸಿದ್ದಾರೆ. ಸೀಮಿತ ಸಂಪನ್ಮೂಲಗಳ ನಡುವೆಯೂ ಅವರ ಸಾಧನೆ ಎಲ್ಲರಿಗೂ ಪ್ರೇರಣೆ.
Read Full Story

01:47 PM (IST) Jul 11

ಚೆನಾಬ್‌ ನದಿಯ ಮೇಲೆ ಶೀಘ್ರದಲ್ಲೇ Kwar Dam ನಿರ್ಮಿಸಲು 3,119 ಕೋಟಿ ಸಾಲಕ್ಕೆ ಮುಂದಾದ ಭಾರತ, ಪಾಕ್‌ಗೆ ಆತಂಕ!

540 ಮೆಗಾವ್ಯಾಟ್ ಕ್ವಾರ್ ಜಲ ವಿದ್ಯುತ್ ಯೋಜನೆಗೆ ಭಾಗಶಃ ಹಣಕಾಸು ಒದಗಿಸಲು ಈ ಯೋಜನೆಯು ವಿವಿಧ ಹಣಕಾಸು ಸಂಸ್ಥೆಗಳು ಮತ್ತು ಬ್ಯಾಂಕ್‌ಗಳಿಂದ ಉತ್ತಮ ಸ್ಪರ್ಧಾತ್ಮಕ ಬಡ್ಡಿದರಗಳನ್ನು ಕೋರಿದೆ.

 

Read Full Story

01:30 PM (IST) Jul 11

ಸ್ವಾತಂತ್ರ್ಯ ಹೋರಾಟಗಾರರನ್ನು ಪ್ರಶ್ನೆ ಪತ್ರಿಕೆಗಳಲ್ಲಿ ಟೆರರಿಸ್ಟ್‌ಗಳು ಎಂದು ಕರೆದ ಬಂಗಾಳ ವಿವಿ!

ವಿವಾದ ಉಲ್ಬಣಗೊಳ್ಳುತ್ತಿದ್ದಂತೆ ಉಪಕುಲಪತಿ ದೀಪಕ್ ಕುಮಾರ್ ಕರ್ ಅವರು ಮುದ್ರಣ ದೋಷದಿಂದ ಈ ತಪ್ಪಾಗಿದೆ ಎಂದು ಸ್ಪಷ್ಟೀಕರಣವನ್ನು ನೀಡಿದರು.

 

Read Full Story

10:32 AM (IST) Jul 11

Kanwar Yatra 2025 - ಮಾಂಸಾಹಾರಿ, ಮದ್ಯದಂಗಡಿ ಬಂದ್, ಶಿವಭಕ್ತರ ಕನ್ವರ್ ಯಾತ್ರೆ ಯೋಗಿ ಸರ್ಕಾರದ ಭದ್ರತೆ ಹೇಗಿದೆ ಗೊತ್ತಾ?!

ಶ್ರಾವಣ ಮಾಸದ ಕನ್ವರ್ ಯಾತ್ರೆಗೆ ಮೊರಾದಾಬಾದ್‌ನಲ್ಲಿ ವ್ಯಾಪಕ ಭದ್ರತೆ, ಸಿಸಿಟಿವಿ, ಡ್ರೋನ್‌ಗಳಿಂದ ನಿಗಾ, ಭಕ್ತರಿಗೆ ಊಟ-ವಸತಿ ವ್ಯವಸ್ಥೆ, ಮಾಂಸದಂಗಡಿ, ಮದ್ಯದಂಗಡಿ ಬಂದ್.
Read Full Story

07:45 AM (IST) Jul 11

ಶೆಟ್ಟಿಗಳಿಗೆ ಮುಂಬೈನಲ್ಲಿ ಆಹಾರ ಪೂರೈಕೆ ಗುತ್ತಿಗೆ : ಸೇನೆ ಶಾಸಕ ಕ್ಯಾತೆ

ಶಿವಸೇನೆ ಶಾಸಕ ಸಂಜಯ್‌ ಗಾಯಕ್ವಾಡ್‌ ಇದೀಗ ಕರ್ನಾಟಕದ ಶೆಟ್ಟಿ ಸಮುದಾಯ ಮತ್ತು ದಕ್ಷಿಣ ಭಾರತೀಯರ ವಿರುದ್ಧ ಕೀಳು ಹೇಳಿಕೆ ನೀಡಿದ್ದಾರೆ. ಶೆಟ್ಟಿಗಳಿಗೇಕೆ ಮುಂಬೈನಲ್ಲಿ ಆಹಾರ ಪೂರೈಸುವ ಗುತ್ತಿಗೆ ನೀಡುತ್ತೀರಿ. ಅದನ್ನು ಮರಾಠಿಗರಿಗೆ ನೀಡಿ ಎಂದು ಹೇಳಿದ್ದಾರೆ.

 

Read Full Story

07:45 AM (IST) Jul 11

ಟೆನ್ನಿಸ್‌ ಆಟಗಾರ್ತಿ ಪುತ್ರಿ ರಾಧಿಕಾ ಯಾದವ್‌ಗೆ ಗುಂಡಿಕ್ಕಿ ಕೊಂದ ತಂದೆ

ಹೆಚ್ಚು ರೀಲ್ಸ್‌ ನೋಡುತ್ತಿದ್ದ ಕಾರಣ, ಹರ್ಯಾಣದ ಟೆನ್ನಿಸ್ ಆಟಗಾರ್ತಿ ರಾಧಿಕಾ ಯಾದವ್ ಅವರನ್ನು ತಂದೆಯೇ ಗುಂಡಿಟ್ಟು ಹತ್ಯೆಗೈದ ದಾರುಣ ಘಟನೆ ಗುರುವಾರ ನಡೆದಿದೆ.

 

Read Full Story

07:44 AM (IST) Jul 11

ಜು.14ಕ್ಕೆ ಶುಭಾಂಶು ಭೂಮಿಗೆ ಮರಳುವ ಸಾಧ್ಯತೆ

ಆಕ್ಸಿಯೋಂ-4 ಮಿಷನ್ ಭಾಗವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ(ಐಎಸ್‌ಎಸ್‌)ಗೆ ತೆರಳಿರುವ ಭಾರತೀಯ ಶುಭಾಂಶು ಶುಕ್ಲಾ ಸೇರಿ 4 ಗಗನಯಾತ್ರಿಗಳು ಜು.14ರಂದು ಭೂಮಿಗೆ ಮರಳುವ ಸಾಧ್ಯತೆ ಇದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಮಾಹಿತಿ ನೀಡಿದೆ.

 

Read Full Story

07:44 AM (IST) Jul 11

ಬಿಹಾರದಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಸಂವಿಧಾನ ಬದ್ಧ : ಸುಪ್ರೀಂ

ವರ್ಷಾಂತ್ಯದಲ್ಲಿ ವಿಧಾನಸಭೆ ಚುನಾವಣೆ ಎದುರಿಸಲಿರುವ ಬಿಹಾರದಲ್ಲಿ ಚುನಾವಣಾ ಆಯೋಗವು ತರಾತುರಿಯಲ್ಲಿ ನಡೆಸಲುದ್ದೇಶಿಸಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆಗೆ ಸುಪ್ರೀಂ ಕೋರ್ಟ್‌ ತಡೆ ನೀಡಲು ನಿರಾಕರಿಸಿದೆ.

 

Read Full Story

07:44 AM (IST) Jul 11

ಮಾರನ್ ಸೋದರರ ಆಸ್ತಿ ವಿವಾದಕ್ಕೆ ಸ್ಟಾಲಿನ್‌ ಬ್ರೇಕ್‌

ಸನ್‌ ಟಿವಿ ನೆಟ್‌ವರ್ಕ್‌ಗೆ ಸಂಬಂಧಿಸಿದಂತೆ ಕಿತ್ತಾಡುತ್ತಿರುವ ಮಾರನ್‌ ಸಹೋದರರಿಗೆ, ಮಾತುಕತೆಯ ಮೂಲಕ ಸಮಸ್ಯೆಯನ್ನು ಪರಿಹರಿಸಿಕೊಳ್ಳುವಂತೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಸಲಹೆ ನೀಡಿದ್ದಾರೆ.

 

Read Full Story

07:43 AM (IST) Jul 11

ತುರ್ತುಪರಿಸ್ಥಿತಿ ಇತಿಹಾಸದ ಕರಾಳ ಅಧ್ಯಾಯ : ತರೂರ್‌

ಕಾಂಗ್ರೆಸ್‌ ಸಂಸದರಾಗಿದ್ದರೂ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶಂಸಿಸುತ್ತಾ, ಬಿಜೆಪಿಯ ನಡೆ ಬೆಂಬಲಿಸುತ್ತಿರುವ ಶಶಿ ತರೂರ್‌, ತಮ್ಮದೇ ಪಕ್ಷ 5 ದಶಕದ ಹಿಂದೆ ದೇಶದಲ್ಲಿ ಹೇರಿದ್ದ ತುರ್ತುಸ್ಥಿತಿಯನ್ನು ‘ಭಾರತದ ಇತಿಹಾಸದ ಕರಾಳ ಅಧ್ಯಾಯ’ ಎಂದು ಕರೆದಿದ್ದಾರೆ.

 

Read Full Story

07:43 AM (IST) Jul 11

ಮಲೇಷ್ಯಾ ದೇಗುಲದಲ್ಲಿ ಅರ್ಚಕರಿಂದ ಲೈಂಗಿಕ ಕಿರುಕುಳ : ನಟಿ ಲಿಶಾ

ಸ್ಥಳೀಯ ದೇಗುಲದ ಅರ್ಚಕರೊಬ್ಬರು ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮಲೇಷ್ಯಾದ ತಮಿಳು ನಟಿ ಲಿಶಾಲಿನಿ ಕನರನ್‌ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಚೆನ್ನೈನಲ್ಲಿ ದೂರು ದಾಖಲಾಗಿದೆ.

 

Read Full Story

07:43 AM (IST) Jul 11

ಧರ್ಮಗ್ರಂಥ ಹಾನಿ ತಡೆವಬಿಲ್‌ ಇಂದು ಪಂಜಾಬಲ್ಲಿ ಮಂಡನೆ : ಗಲ್ಲು ಶಿಕ್ಷೆ?

ಧರ್ಮಗ್ರಂಥಗಳಿಗೆ ಹಾನಿ ಮಾಡುವವರ ವಿರುದ್ಧ ಅತ್ಯಂತ ಕಠಿಣ ಶಿಕ್ಷೆಗೆ ಅವಕಾಶ ನೀಡುವ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಲು ಪಂಜಾಬ್‌ನ ಆಮ್‌ಆದ್ಮಿ ಸರ್ಕಾರ ನಿರ್ಧರಿಸಿದೆ.

 

Read Full Story

More Trending News