ದೇಶದಲ್ಲಿ ಗಣರಾಜ್ಯೋತ್ಸವ ಸಂಭ್ರಮ, ಯೋಗಿಗೆ ಕೊಲೆ ಬೆದರಿಕೆ ಆತಂಕ, ಜ.26ರ Top 10 News!

By Contributor AsianetFirst Published Jan 26, 2022, 5:19 PM IST
Highlights

ದೆಹಲಿ ಸೇರಿದಂತೆ ದೇಶದೆಲ್ಲೆಡೆ ಗಣರಾಜ್ಯೋತ್ಸವ ಆಚರಿಸಲಾಗಿದೆ. ಗಣತಂತ್ರ ದಿನ 128 ಸಾಧಕರಿಗೆ ಪದ್ಮ ಪ್ರಶಸ್ತಿ ನೀಡಲಾಗಿದೆ.  ಇತ್ತ ಯುಪಿ ಸಿಂ ಯೋಗಿ ಆದಿತ್ಯನಾಥ್‌ಗೆ ಕೊಲೆ ಬೆದರಿಕೆ ಬಂದಿದೆ. ಕ್ರಿಕೆಟಿಗ ಯುವರಾಜ್ ಸಿಂಗ್ ತಂದೆಯಾಗಿ ಬಡ್ತಿ ಪಡೆದಿದ್ದಾರೆ.  ಟ್ರೋಲ್ ಆದ ದೀಪಿಕಾ ಪಡುಕೋಣೆ, ಸ್ವದೇಶಿ ಮೊಬೈಲ್  ಆಪರೇಟಿಂಗ್ ಸಿಸ್ಟಮನ್ನು ಅಭಿವೃದ್ಧಿ ಸೇರಿದಂತೆ ಜನವರಿ 26ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

Yogi death threats ಬಾಂಬ್ ಜೊತೆಗೆ ಸಿಎಂ ಯೋಗಿ ಆದಿತ್ಯನಾಥ್‌ಗೆ ಕೊಲೆ ಬೆದರಿಕೆ, ಭದ್ರತೆ ಹೆಚ್ಚಿಸಿದ ಸರ್ಕಾರ!

Latest Videos

ಉತ್ತರ ಪ್ರದೇಶ ಚುನಾವಣೆ(Uttar Pradesh Election 2022) ವೇಳೆ ಭಾರಿ ಉಗ್ರ ದಾಳಿಗೆ ಸಂಚು(Terror Attack) ನಡೆದಿರುವ ಸಾಧ್ಯತೆಗಳು ಕಾಣತೊಡಗಿದೆ. ಚುನಾವಣೆ ಸಮೀಪಿಸುತ್ತಿದ್ದಂತೆ ಇದೀಗ ಯುಪಿ ಸಿಎಂ ಯೋಗಿ ಆದಿತ್ಯನಾಥ್‌ಗೆ(CM Yogi Adityanath) ಕೊಲೆ ಬೆದರಿಕೆ ಪತ್ರವೊಂದು ಮಧ್ಯಪ್ರದೇಶದಲ್ಲಿ ಪತ್ತೆಯಾಗಿದೆ. 

Republic Day: ಮಣಿಪುರಿ ಶಾಲ್‌ ಉತ್ತರಾಖಂಡ್ ಟೋಪಿ... ಪ್ರಧಾನಿ ಧಿರಿಸಿನ ಬಗ್ಗೆ ಭಾರಿ ಚರ್ಚೆ

ಪ್ರತಿ ವರ್ಷದ ಗಣರಾಜ್ಯೋತ್ಸವದಂದು ಪ್ರಧಾನಿ ವರ್ಣರಂಜಿತ ಪೇಟ ಧರಿಸುತ್ತಿದ್ದರು.  ಈ ಬಾರಿಯೂ ಅವರ ಧಿರಿಸು ಎಲ್ಲರನ್ನು ಸೆಳೆಯುತ್ತಿದೆ. ಪ್ರಧಾನಿ ಈ ಬಾರಿ ಮಣಿಪುರಿ ಶಾಲ್‌ ಹಾಗೂ ಉತ್ತರಾಖಂಡ್‌ ಟೋಪಿ ಧರಿಸಿದ್ದಾರೆ

Padma Awards 2022: 128 ಸಾಧಕರಿಗೆ ಪದ್ಮ ಗೌರವ: ಯೋಧರಿಗೆ ಶೌರ್ಯ ಪದಕ!

 ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ದೇಶ- ವಿದೇಶಗಳ 128 ಗಣ್ಯರಿಗೆ ಕೇಂದ್ರ ಸರ್ಕಾರ, ಗಣರಾಜ್ಯೋತ್ಸವದ ಮುನ್ನಾ ದಿನವಾದ ಮಂಗಳವಾರ ಪದ್ಮಪ್ರಶಸ್ತಿಗಳನ್ನು ಪ್ರಕಟಿಸಿದೆ. 

Republic Day: ಗಣತಂತ್ರ ದಿನದ ಸಂದೇಶ ರವಾನಿಸಿದ ಮೋದಿಗೆ ಧನ್ಯವಾದ ಅರ್ಪಿಸಿದ ಗೇಲ್‌, ಜಾಂಟಿ ರೋಡ್ಸ್..!

 ದೇಶಾದಾದ್ಯಂತ ಅತ್ಯಂತ ಸಡಗರದಿಂದ 73ನೇ ಗಣರಾಜ್ಯೋತ್ಸವವನ್ನು (73rd Republic Day) ಆಚರಿಸಲಾಗುತ್ತಿದೆ. ಸ್ವಯಂ ಘೋಷಿತ ಯೂನಿವರ್ಸಲ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್‌ (Chris Gayle) ಹಾಗೂ ದಕ್ಷಿಣ ಆಫ್ರಿಕಾ ತಂಡದ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್‌(Jonty Rhodes), ಭಾರತದ 73ನೇ ಗಣತಂತ್ರ ದಿನಕ್ಕೆ ಶುಭಾಶಯಗಳನ್ನು ಕೋರಿದ್ದಾರೆ.

Good News: ತಂದೆಯಾದ ಯುವರಾಜ್‌ ಸಿಂಗ್‌, ಮೊಮ್ಮಗು ಕ್ರಿಕೆಟಿಗನಾಗಬೇಕು ಎಂದ ಅಜ್ಜ

ಕಳೆದ ರಾತ್ರಿ ಯುವರಾಜ್ ಸಿಂಗ್ (Yuvraj Singh) ಮತ್ತು ಹ್ಯಾಝೆಲ್ ಕೀಚ್ (Hazel Keech) ದಂಪತಿಗಳು ತಮ್ಮ ಮೊದಲ ಮಗುವನ್ನು ಸ್ವಾಗತಿಸಿದ್ದರು. ಸೋಶಿಯಲ್‌ ಮೀಡಿಯಾ ಮೂಳಕ ಯುವಾರಾಜ್‌ ಸಿಂಗ್‌ ತಾವು  ಅವರು ಗಂಡು ಮಗುವಿನ ತಂದೆಯಾಗಿರುವ ಗುಡ್‌ನ್ಯೂಸ್‌ ಹಂಚಿಕೊಂಡಿದ್ದಾರೆ. ಯುವರಾಜ್‌ ಸಿಂಗ್‌ ತಂದೆ  ಯೋಗರಾಜ್ ಸಿಂಗ್  ಮೊಮ್ಮಗು ತಂದೆಯಂತೆಯೇ ಕ್ರಿಕೆಟಿಗನಾಗಬೇಕೆಂದು ಬಯಸಿದ್ದಾರೆ.

Deepika Padukone: ದೀಪಿಕಾ ಧರಿಸಿದ್ದು ರಣವೀರ್ ಡ್ರೆಸ್‌ ಅಲ್ಲ ತಾನೇ! ಕಾಲೆಳೆಯುತ್ತಿರೋ ನೆಟ್ಟಿಗರು

ದೀಪಿಕಾ ಪಡುಕೋಣೆ ಸದ್ಯ ಸಖತ್ ಸುದ್ದಿಯಲ್ಲಿದ್ದಾರೆ. ಅವರ ಗೆಹ್ರಾಯಿಯಾನ್ ಸಿನಿಮಾದ ಹಾಟ್ ಲುಕ್ ಒಂದು ಕಾರಣ ಆದ್ರೆ, ಈ ಸಿನಿಮಾದ ಪ್ರೊಮೋಶನ್‌ಗೆ ಹಾಕ್ಕೊಂಡು ಬಂದ 90 ಸಾವಿರ ಬೆಲೆಬಾಳೋ ಡ್ರೆಸ್ ಇನ್ನೊಂದು ಕಾರಣ. ಅದನ್ನು ನೋಡಿ ನೆಟಿಜನ್ಸ್ ಏ, ದೀಪಿಕಾ, ಇದೇನು ರಣವೀರ್ ಸಿಂಗ್ ಡ್ರೆಸ್ ಹಾಕ್ಕೊಂಡು ಬಂದ್ರಿ ಅಂತ ಕಾಲೆಳೆಯುತ್ತಿದ್ದಾರೆ.

Android, iOSಗೆ ಪರ್ಯಾಯ ಸ್ವದೇಶಿ Mobile Operating System ಅಭಿವೃದ್ಧಿ: ರಾಜೀವ್ ಚಂದ್ರಶೇಖರ್!

ಗೂಗಲ್‌ನ ಆಂಡ್ರಾಯ್ಡ್ ಮತ್ತು ಆ್ಯಪಲ್‌ನ ಐಒಎಸ್‌ಗೆ ಪರ್ಯಾಯವಾಗಿ ಸ್ಥಳೀಯ ಆಪರೇಟಿಂಗ್ ಸಿಸ್ಟಮನ್ನು ಅಭಿವೃದ್ಧಿಗಾಗಿ ಅನುಕೂಲವಾಗುವಂತೆ  ಹೊಸ ನೀತಿಯನ್ನು ತರಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ತಿಳಿಸಿದ್ದಾರೆ
 

click me!