Published : Aug 08, 2025, 07:33 AM ISTUpdated : Aug 08, 2025, 10:24 PM IST

India Latest News Live: ಟ್ರಂಪ್ ಮಾತಾಡುವ ರೀತಿ ತುಂಬಾ ಮೂರ್ಖತನದ್ದು, ಅಮೆರಿಕದ ಆಮದುಗಳ ಮೇಲೆಯೂ ಭಾರತ 50% ಸುಂಕ ವಿಧಿಸಿ ಪ್ರತೀಕಾರ ಕೈಗೊಳ್ಳಬೇಕು - ಶಶಿ ತರೂರ್

ಸಾರಾಂಶ

ಡೆಹ್ರಾಡೂನ್: ಕಂಡುಕೇಳರಿಯದ ಮೇಘಸ್ಫೋಟಕ್ಕೆ ಸಿಲುಕಿದ ಉತ್ತರಾಖಂಡ ಹಲವು ದುರಂತಗಳಿಗೆ ಸಾಕ್ಷಿಯಾಗಿದೆ. 1990ರಲ್ಲಿ ಪುಣೆಯಲ್ಲಿ 10ನೇ ಕ್ಲಾಸ್‌ ಓದಿದ್ದ 24 ಸ್ನೇಹಿತರು 35 ವರ್ಷಗಳ ಬಳಿಕ ಒಂದಾಗಿ ಚಾರ್‌ಧಾಮ ಯಾತ್ರೆ ನಿಮಿತ್ತ ಉತ್ತರಾಖಂಡಕ್ಕೆ ತೆರಳಿದ್ದರು. ಇವರು ಸೋಮವಾರ ಸಂಜೆ ಗಂಗೋತ್ರಿಯಿಂದ 10 ಕಿ.ಮೀ ದೂರದಲ್ಲಿ ಸಿಲುಕಿದ್ದರು. ಆ ಬಳಿಕ ನಾಪತ್ತೆಯಾಗಿದ್ದಾರೆ. ಅವರೊಂದಿಗೆ ಸಂಪರ್ಕ ಸಾಧ್ಯವಾಗುತ್ತಿಲ್ಲ ಎಂದು ಸಿಲುಕಿರುವವರ ಪೈಕಿ ಓರ್ವರ ಪುತ್ರ ಹೇಳಿದ್ದಾರೆ.

ಮುಂದುವರಿದ ರಕ್ಷಣಾ ಕಾರ್ಯ:

ಉತ್ತರಕಾಶಿಯಲ್ಲಿ ರಕ್ಷಣಾ ಕಾರ್ಯ ಮುಂದುವರಿಸಿರುವ ಸೇನೆಯು, ಗುರುವಾರ 70 ಜನರನ್ನು ರಕ್ಷಿಸಿದೆ. ಇನ್ನು 50 ಜನರ ಪತ್ತೆಯಾಗಬೇಕಿದೆ ಎಂದು ತಿಳಿಸಿದೆ. ಈವರೆಗೆ 276 ಜನರನ್ನು ರಕ್ಷಿಸಲಾಗಿದೆ. ಜೊತೆಗೆ ಮೇಘಸ್ಫೋಟಕ್ಕೆ ತೀವ್ರವಾಗಿ ತತ್ತರಿಸಿರುವ ಧರಾಲಿಯಲ್ಲಿ ರಕ್ಷಣಾ ಕಾರ್ಯಕ್ಕಾಗಿ ಅತ್ಯಾಧುನಿಕ ಉಪಕರಣಗಳನ್ನು ಏರ್‌ಲಿಫ್ಟ್‌ ಮಾಡಲು ಸೇನೆ ಸಿದ್ಧತೆ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

10:24 PM (IST) Aug 08

ಟ್ರಂಪ್ ಮಾತಾಡುವ ರೀತಿ ತುಂಬಾ ಮೂರ್ಖತನದ್ದು, ಅಮೆರಿಕದ ಆಮದುಗಳ ಮೇಲೆಯೂ ಭಾರತ 50% ಸುಂಕ ವಿಧಿಸಿ ಪ್ರತೀಕಾರ ಕೈಗೊಳ್ಳಬೇಕು - ಶಶಿ ತರೂರ್

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿದೇಶಾಂಗ ನೀತಿಯನ್ನು ಕಾಂಗ್ರೆಸ್ ನಾಯಕ ಶಶಿ ತರೂರ್ ತೀವ್ರವಾಗಿ ಟೀಕಿಸಿದ್ದಾರೆ. ಭಾರತದ ಮೇಲಿನ ಸುಂಕವನ್ನು ಅನ್ಯಾಯ ಮತ್ತು ದ್ವಿಮುಖ ಎಂದು ಕರೆದ ತರೂರ್, ಭಾರತವು ಪ್ರತಿಕಾರ ತೀರಿಸಿಕೊಳ್ಳಬೇಕು  ಎಂದು ಸಲಹೆ ನೀಡಿದ್ದಾರೆ.

Read Full Story

07:49 PM (IST) Aug 08

Small Business Tips - ಸ್ವಂತ ಉದ್ಯಮ ಆರಂಭಿಸುವ ಯೋಚನೆ ಇದ್ಯಾ? ನಿಮಗಾಗಿ ಇಲ್ಲಿ ಕೆಲವು ಟಿಪ್ಸ್​...

ಭಾರತದ ಅರ್ಥವ್ಯವಸ್ಥೆ ಏರುಗತಿಯಲ್ಲಿ ಸಾಗುತ್ತಿರುವ ಈ ದಿನಗಳಲ್ಲಿ, ಸಣ್ಣ ಉದ್ಯಮ ಆರಂಭಿಸಲು ಬಯಸುವವರಿಗೆ ಇಲ್ಲಿದೆ ಕೆಲವೊಂದು ಮೂಲ ಸಲಹೆಗಳು…

 

Read Full Story

07:31 PM (IST) Aug 08

ಚೂಡಿದಾರ್​ ಧರಿಸಿದ ಮಹಿಳೆಯರಿಗೆ ರೆಸ್ಟೋರೆಂಟ್ ಪ್ರವೇಶ ನಿಷೇಧ! ತುಂಡುಡುಗೆ ಇದ್ರೆ ಮಾತ್ರ ಎಂಟ್ರಿ!

ಈ ರೆಸ್ಟೋರೆಂಟ್‌ನಲ್ಲಿ, ಚೂಡಿದಾರ್ ಧರಿಸಿದ್ದ ಮಹಿಳೆಗೆ ಪ್ರವೇಶ ನಿರಾಕರಿಸಿದೆ. ಈ ವಿಡಿಯೋ ವೈರಲ್ ಆಗಿದ್ದು, ರೆಸ್ಟೋರೆಂಟ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಘಟನೆ ವೈರಲ್ ಆಗಿದ್ದು, ನೆಟ್ಟಿಗರು ಕೂಡ ರೆಸ್ಟೋರೆಂಟ್ ಮಾಲೀಕರಿಗೆ ಛೀಮಾರಿ ಹಾಕಿದ್ದಾರೆ.

Read Full Story

06:51 PM (IST) Aug 08

ಸಾರ್ವತ್ರಿಕ ಗರಿಷ್ಠ ದರ ತಲುಪಿದ ಬಂಗಾರ; ಭವಿಷ್ಯದಲ್ಲಿ ಚಿನ್ನದ ಬೆಲೆ ಕುಸಿತದ ಮಾಹಿತಿ ಇಲ್ಲಿದೆ!

ಚಿನ್ನದ ಬೆಲೆ ಗುರುವಾರ ಒಂದೇ ದಿನ 10 ಗ್ರಾಂಗೆ ಭರ್ಜರಿ 3 ಸಾವಿರ ರೂ.ಗಿಂತ ಅಧಿಕ ಏರಿಕೆಯಾಗಿದೆ. ಇಂದಿನ ದರ 1,06,100 ತಲುಪುವ ಮೂಲಕ  ಭಾರತದಲ್ಲಿ ಚಿನ್ನದ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿದೆ. ಹಾಗಾದರೆ ಚಿನ್ನದ ಬೆಲೆ ಏರಿಕೆ ಹಾಗೂ ಭವಿಷ್ಯದ ಬೆಲೆ ಕುಸಿತ ಆಗುವ ಮಾಹಿತಿ ಇಲ್ಲಿದೆ.

Read Full Story

06:46 PM (IST) Aug 08

ಇವಳು ಹುಟ್ಟುತ್ತಲೇ ಲವ್​ ಆಗೋಯ್ತು ಎಂದು ಮೊಮ್ಮಗಳನ್ನೇ ಮದ್ವೆಯಾದ 75ರ ಅಜ್ಜ! ಇವ್ರ ಮಾತು ಕೇಳಿ...

ಕಾಮದಾಸೆಯನ್ನು ತೀರಿಸಿಕೊಳ್ಳಲು ಮಕ್ಕಳಾದರೇನು, ಮೊಮ್ಮಕ್ಕಳಾದರೇನು? ಅಂಥದ್ದೇ ಒಂದು ವಿಡಿಯೋ ಇಲ್ಲಿ ವೈರಲ್​ ಆಗಿದೆ ನೋಡಿ. 70ರ ಅಜ್ಜ ಸ್ವಂತ ಮೊಮ್ಮಗಳನ್ನು ಮದುವೆಯಾಗಿದ್ದಾನೆ. ಆ ಯುವತಿಯ ಮಾತು ಕೇಳಿ....

 

Read Full Story

06:02 PM (IST) Aug 08

Cyber Dost - ಸೈಬರ್ ವಂಚನೆ ತಡೆಯಲು ರಾಷ್ಟ್ರೀಯ ಸಹಾಯವಾಣಿ ಆರಂಭ; ಚಂದದಾರಾಗಲು ಈ ನಂಬರ್‌ಗೆ ಕರೆ ಮಾಡಿ!

ಆನ್‌ಲೈನ್ ವಂಚನೆಗಳನ್ನು ಎದುರಿಸಲು ಭಾರತ ಸರ್ಕಾರವು ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್ ಮತ್ತು ಸಹಾಯವಾಣಿ 1930 ಅನ್ನು ಪ್ರಾರಂಭಿಸಿದೆ. ಡಿಜಿಟಲ್ ಸಾಕ್ಷರತೆ ಮತ್ತು ಸೈಬರ್ ಜಾಗೃತಿ ಅಭಿಯಾನಗಳನ್ನು ತೀವ್ರಗೊಳಿಸಲಾಗುವುದು. ಸೈಬರ್ ದೋಸ್ತ್‌ಗೆ ಚಂದಾದಾರರಾಗಿ, 1930ಗೆ ಕರೆ ಮಾಡಿ, 

Read Full Story

05:25 PM (IST) Aug 08

ವಾರ್ 2 ಸಿನಿಮಾ ಲೀಕ್ ಆಯ್ತಾ? ಹೃತಿಕ್, ಜ್ಯೂ.ಎನ್‌ಟಿಆರ್ ಪಾತ್ರಗಳ ಸಂಬಂಧ ರಿವೀಲ್!

ಯಶ್ ರಾಜ್ ಫಿಲ್ಮ್ಸ್‌ನ 'ವಾರ್ 2' ಚಿತ್ರದಲ್ಲಿ ಹೃತಿಕ್ ರೋಷನ್ ಮತ್ತು ಜೂನಿಯರ್ ಎನ್‌ಟಿಆರ್ ಪಾತ್ರಗಳ ನಡುವಿನ ಸಂಬಂಧ ಏನೆಂಬುದು ಸಿನಿಮಾ ಬಿಡುಗಡೆಗೂ ಮುನ್ನವೇ ಬಹಿರಂಗವಾಗಿದೆ. ಬಾಲಿವುಡ್ ಮತ್ತು ಮತ್ತು ದಕ್ಷಿಣ ಭಾರತದ ನಟರ ನಡುವಿನ ಈ ಆಕ್ಷನ್ ಥ್ರಿಲ್ಲರ್ ಹಾಗೂ ಡ್ಯಾನ್ಸ್ ಜುಗಲ್‌ಬಂದಿ ಹೇಗಿರಲಿದೆ ನೋಡಿ.

Read Full Story

05:14 PM (IST) Aug 08

ಕೇಂದ್ರ ಸಂಪುಟ ಸಭೆ ನಿರ್ಧಾರ - ಉಜ್ವಲ ಯೋಜನೆಗೆ 12 ಸಾವಿರ ಕೋಟಿ, ತೈಲ ಕಂಪನಿಗಳಿಗೆ 30 ಸಾವಿರ ಕೋಟಿ ಸಬ್ಸಿಡಿ!

ಶುಕ್ರವಾರ ನಡೆದ ಮಹತ್ವದ ಸಭೆಯಲ್ಲಿ ಕೇಂದ್ರ ಸಚಿವ ಸಂಪುಟವು 52,667 ಕೋಟಿ ರೂ.ಗಳ ಪ್ಯಾಕೇಜ್‌ಗೆ ಅನುಮೋದನೆ ನೀಡಿತು. ಇದರಲ್ಲಿ ಈಶಾನ್ಯ ಪ್ರದೇಶದ ಎಲ್‌ಪಿಜಿ, ಶಿಕ್ಷಣ, ಮೂಲಸೌಕರ್ಯ ಮತ್ತು ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗಿದೆ.

 

Read Full Story

04:18 PM (IST) Aug 08

ಮುದ್ದಿನ ಅತ್ತೆನಾ ಗಂಡನ ಮನೆಗೆ ಕಳುಹಿಸುವ ಮನಸ್ಸಿಲ್ಲದೇ ಫೈಟ್ - ಬಾಲ್ಯ ನೆನಪಿಸಿದ ಪುಟ್ಟ ಬಾಲಕನ ವೀಡಿಯೋ

ಮದುವೆಯ ಬಳಿಕ  ಅತ್ತೆಯನ್ನು ಗಂಡನ ಮನೆಗೆ  ಕಳುಹಿಸಿಕೊಡಲು ಒಪ್ಪದೇ  ಪುಟ್ಟ ಹುಡುಗನೊಬ್ಬ ಕೋಲು ಹಿಡಿದು ಮಾವನಿಗೆ ಹೊಡೆಯಲು ಬಂದ ಘಟನೆಯ ವೀಡಿಯೋ ವೈರಲ್ ಆಗಿದ್ದು, ಅನೇಕರಿಗೆ ತಮ್ಮ ಬಾಲ್ಯವನ್ನು ನೆನಪಿಸಿದೆ.

Read Full Story

03:11 PM (IST) Aug 08

ಹೊರಡುವ ವೇಳೆ ಕೆಲ್ಸ ಇದೆ ಎಂದ ಮ್ಯಾನೇಜರ್‌ಗೆ ನೋ ಎಂದು ಎದ್ದು ಹೋದ G-Z ಉದ್ಯೋಗಿ

ಮೊದಲೆಲ್ಲಾ ಭಾರತೀಯರು MNC ಕಂಪನಿಗಳಲ್ಲಿ ತಮ್ಮ ಅವಧಿಗೂ ಮೀರಿ ಕೆಲಸ ಮಾಡುತ್ತಿದ್ದರು. ಆದre ಜನರೇಷನ್ ಜೆಡ್ ಉದ್ಯೋಗಿಗಳು ಜನರೇಷನ್ ವೈ ಹಾಗೂ ಎಕ್ಸ್ ರೀತಿ ತಲೆತಗ್ಗಿಸಿಕೊಂಡು ಮ್ಯಾನೇಜರ್‌ ಹೇಳುವುದನ್ನೆಲ್ಲಾ ಕೇಳಲು ಸಿದ್ಧರಿಲ್ಲ. 

Read Full Story

03:11 PM (IST) Aug 08

ವಿವಾದಕ್ಕೆ ತೆರೆ, ಟಾಟಾ ಸನ್ಸ್‌ನ 3 ಲಕ್ಷ ಕೋಟಿ ಷೇರು ವರ್ಗಾವಣೆ ಮಾಡಲಿರುವ ಶಪೂರ್ಜಿ ಪಲ್ಲೊಂಜಿ ಗ್ರೂಪ್?

ಟಾಟಾ ಸನ್ಸ್‌ನಲ್ಲಿನ ತಮ್ಮ 18.37% ಪಾಲನ್ನು ಖರೀದಿಸಲು ಟಾಟಾ ಸನ್ಸ್ ಮತ್ತು ಶಪೂರ್ಜಿ ಪಲ್ಲೊಂಜಿ ಗ್ರೂಪ್ ಆರಂಭಿಕ ಹಂತದ ಮಾತುಕತೆಗಳನ್ನು ಪ್ರಾರಂಭಿಸಿವೆ. ಈ ಚರ್ಚೆಗಳು ಪ್ರಾಥಮಿಕ ಹಂತದಲ್ಲಿದ್ದರೂ, ಎರಡೂ ಗುಂಪುಗಳ ನಡುವಿನ ಸಂಬಂಧದಲ್ಲಿ ಸುಧಾರಣೆಯನ್ನು ಸೂಚಿಸುತ್ತವೆ.
Read Full Story

02:34 PM (IST) Aug 08

ಅತ್ಯಂತ ಕ್ವಿಕ್‌ ಆಗಿ ಕ್ರೆಡಿಟ್‌ ಸ್ಕೋರ್‌ ಸುಧಾರಿಸೋದು ಹೇಗೆ, ಇಲ್ಲಿವೆ ಸಿಂಪಲ್‌ ಟಿಪ್ಸ್‌!

ಉತ್ತಮ ಕ್ರೆಡಿಟ್ ಸ್ಕೋರ್ ನಿಮ್ಮ ಗೃಹ ಸಾಲ, ವೈಯಕ್ತಿಕ ಸಾಲ ಅಥವಾ ಕ್ರೆಡಿಟ್ ಕಾರ್ಡ್ ಪಡೆಯುವ ಸಾಧ್ಯತೆಗಳನ್ನು ಹೆಚ್ಚಿಸಬಹುದು, ಜೊತೆಗೆ ಕಡಿಮೆ ಬಡ್ಡಿದರವನ್ನು ಪಡೆಯಲು ನೆರವಾಗಲಿದೆ.

 

Read Full Story

01:27 PM (IST) Aug 08

ಭಾರತದಲ್ಲಿ ಸುರಕ್ಷಿತ, ಹೆಚ್ಚಿನ ಆದಾಯಕ್ಕಾಗಿ ಇರುವ ದೀರ್ಘಾವಧಿಯ ಹೂಡಿಕೆ ಆಯ್ಕೆಗಳು!

ದೀರ್ಘಾವಧಿಯ ಹೂಡಿಕೆಗಳು ಹೆಚ್ಚಿನ ಲಾಭವನ್ನು ನೀಡುತ್ತವೆ ಮತ್ತು ಆರ್ಥಿಕ ಸ್ಥಿರತೆಯನ್ನು ಖಚಿತಪಡಿಸುತ್ತವೆ. ಚಿನ್ನ, PPF, ಮ್ಯೂಚುವಲ್ ಫಂಡ್‌ಗಳು, ಷೇರುಗಳು, FD, ರಿಯಲ್ ಎಸ್ಟೇಟ್, ಬಾಂಡ್‌ಗಳು, NPS, ULIP, NSC, ಪೋಸ್ಟ್ ಆಫೀಸ್ ಟೈಮ್ ಠೇವಣಿ, ಡೆಟ್ ಫಂಡ್ ಮತ್ತು ಹೈಬ್ರಿಡ್ ಫಂಡ್‌ಗಳು ಆಯ್ಕೆಗಳಾಗಿವೆ.

Read Full Story

01:03 PM (IST) Aug 08

ಖ್ಯಾತ ಜಲಾಶಯದಲ್ಲಿ ಮೂತ್ರ ವಿಸರ್ಜನೆ ಮಾಡಿದ ಪ್ರವಾಸಿಗ - ವೀಡಿಯೋ ವೈರಲ್ ಆಗುತ್ತಿದ್ದಂತೆ ಭಾರಿ ಆಕ್ರೋಶ

ಪ್ರಸಿದ್ಧ ಜಲಾಶಯದಲ್ಲಿ ಪ್ರವಾಸಿಗರೊಬ್ಬರು ನೀರಿನಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ನಾಗರಿಕ ಪ್ರಜ್ಞೆಯ ಕೊರತೆಯ ಬಗ್ಗೆ ಚರ್ಚೆ ಹುಟ್ಟುಹಾಕಿದೆ.

Read Full Story

12:17 PM (IST) Aug 08

ಯೂಟ್ಯೂಬ್ ವೀಡಿಯೋ ನೋಡಿ ಗಂಡನ ಕಿವಿಗೆ ಕೀಟನಾಶಕ ಸುರಿದು ಕೊಲೆ

ತೆಲಂಗಾಣದಲ್ಲಿ ಮಹಿಳೆಯೊಬ್ಬಳು ಗಂಡನನ್ನು ಯೂಟ್ಯೂಬ್ ವೀಡಿಯೋ ನೋಡಿ ಕೊಲೆ ಮಾಡಿದ್ದು, ಈ ಕೊಲೆ ಪ್ರಕರಣ ನಗರವನ್ನು ಬೆಚ್ಚಿ ಬೀಳಿಸಿದೆ.

Read Full Story

More Trending News