LIVE NOW
Published : Apr 05, 2026, 07:07 AM ISTUpdated : Apr 05, 2026, 07:50 PM IST

India Latest News Live: ವರ್ಷದ ಮೊದಲೇ ರಾಘವ್ ಚಡ್ಡಾಗೆ ಆಪ್‌ನಿಂದ ಕೊಕ್ ಭವಿಷ್ಯ ನುಡಿದಿದ್ದ ಕುಮಾರ್ ವಿಶ್ವಾಸ್, ವಿಡಿಯೋ ವೈರಲ್

ಸಾರಾಂಶ

ಟೆಹ್ರಾನ್‌/ ದುಬೈ: ಐಟಿ ಕಂಪನಿಗಳನ್ನು ಗುರಿಯಾಗಿಸಿ ದಾಳಿ ಮಾಡುವುದಾಗಿ ಹೇಳಿದ್ದ ಇರಾನ್‌, ಶನಿವಾರ ದುಬೈನಲ್ಲಿನ ಅಮೆರಿಕ ಮೂಲದ ಒರಾಕಲ್‌ ಕಂಪನಿಯ ಕಟ್ಟಡದ ಮೇಲೆ ದಾಳಿ ನಡೆಸಿದೆ. ದಾಳಿಯಲ್ಲಿ ಕಟ್ಟಡಕ್ಕೆ ಹಾನಿಯಾಗಿದೆ ಎಂದು ವರದಿಗಳು ತಿಳಿಸಿವೆ. ಇತ್ತೀಚೆಗಷ್ಟೇ ತನ್ನ ಹಿಟ್‌ಲಿಸ್ಟ್‌ನಲ್ಲಿರುವ ಒರಾಕಲ್‌ ಸೇರಿದಂತೆ ಅಮೆರಿಕದ 18 ಐಟಿ ಕಂಪನಿಗಳ ಪಟ್ಟಿಯನ್ನು ಇರಾನ್ ಬಿಡುಗಡೆ ಮಾಡಿತ್ತು. ಇದಕ್ಕೂ ಮೊದಲು ಯುಎಇ ಮತ್ತು ಬಹ್ರೈನ್‌ನಲ್ಲಿರುವ ಅಮೆಜಾನ್‌ ವೆಬ್‌ ಸರ್ವೀಸ್‌ ಕಟ್ಟಡದ ಮೇಲೂ ಇರಾನ್‌ ದಾಳಿ ನಡೆಸಿತ್ತು.

ಇದರ ಜೊತೆಗೆ ಹೋರ್ಮಜ್‌ ಜಲಸಂಧಿಯಲ್ಲಿ ಸಾಗುತ್ತಿದ್ದ ಇಸ್ರೇಲ್‌ ನಂಟಿನ ಹಡಗಿನ ಮೇಲೆ ದಾಳಿ ನಡೆಸಿದ್ದಾಗಿಯೂ ಇರಾನ್‌ ಹೇಳಿದೆ. ಈ ನಡುವೆ ಟೆಹ್ರಾನ್‌ನಲ್ಲಿನ ಇರಾನ್‌ನ ಬ್ಯಾಲೆಸ್ಟಿಕ್‌ ಮತ್ತು ಆ್ಯಂಟಿ ಏರ್‌ಕ್ರಾಫ್ಟ್‌ ಕ್ಷಿಪಣಿ ಸಂಗ್ರಹಾಗಾರ ಮೇಲೆ ದಾಳಿ ನಡೆಸಿದ್ದಾಗಿ ಇಸ್ರೇಲ್‌ ಹೇಳಿಕೊಂಡಿದೆ.

ಅಮೆರಿಕದ 365 ಯೋಧರಿಗೆ ಗಾಯ

36 ದಿನ ಪೂರ್ಣಗೊಳಿಸಿರುವ ಮಧ್ಯಪ್ರಾಚ್ಯ ಯುದ್ಧದಲ್ಲಿ ಇದುವರೆಗೆ ಅಮೆರಿಕದ 365 ಯೋಧರು ಗಾಯಗೊಂಡಿದ್ದಾರೆ ಎಂಬ ಮಾಹಿತಿಯನ್ನು ಅಮೆರಿಕ ನೀಡಿದೆ.

07:50 PM (IST) Apr 05

ವರ್ಷದ ಮೊದಲೇ ರಾಘವ್ ಚಡ್ಡಾಗೆ ಆಪ್‌ನಿಂದ ಕೊಕ್ ಭವಿಷ್ಯ ನುಡಿದಿದ್ದ ಕುಮಾರ್ ವಿಶ್ವಾಸ್, ವಿಡಿಯೋ ವೈರಲ್

ವರ್ಷದ ಮೊದಲೇ ರಾಘವ್ ಚಡ್ಡಾಗೆ ಆಪ್‌ನಿಂದ ಕೊಕ್ ಭವಿಷ್ಯ ನುಡಿದಿದ್ದ ಕುಮಾರ್ ವಿಶ್ವಾಸ್, ವಿಡಿಯೋ ವೈರಲ್ ಆಗಿದೆ. ಆಪ್ ಮುಂದಿನ ಟಾರ್ಗೆಟ್ ರಾಘವ್ ಚಡ್ಡಾ, ನೋಡುತ್ತಾ ಇರೀ ಆಪ್‌ನಿಂದ ಹೊರಬರುವ ಪರಿಸ್ಥಿತಿ ಎದುರಾಗಲಿದೆ ಎಂದು ಭವಿಷ್ಯ ನುಡಿದಿದ್ದರು.

Read Full Story

07:12 PM (IST) Apr 05

ಚುನಾವಣಾ ಪ್ರಚಾರ ಮುಗಿಸಿ ಮರಳುವಾದ ಬಿಜೆಪಿ ಮಹಿಳಾ ಅಭ್ಯರ್ಥಿ ಕಾರು ಅಪಘಾತ, ತೆಲೆಗೆ ಗಾಯ

ಚುನಾವಣಾ ಪ್ರಚಾರ ಮುಗಿಸಿ ಮರಳುವಾದ ಬಿಜೆಪಿ ಮಹಿಳಾ ಅಭ್ಯರ್ಥಿ ಕಾರು ಅಪಘಾತ, ತೆಲೆಗೆ ಗಾಯ, ಕಾರು ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ. ಗಾಯಗೊಂಡಿರುವ ಅಭ್ಯರ್ಥಿಯನ್ನು ಆಸ್ಪತ್ರೆ ದಾಖಲಿಸಲಾಗಿದೆ.

Read Full Story

07:10 PM (IST) Apr 05

ಪೆನ್​ ಒಳಗೆ ಸಂಪೂರ್ಣ ಸಿಲೇಬಸ್​ ಕಾಪಿ - ಪರೀಕ್ಷೆಯಲ್ಲಿ ಸಿಕ್ಕಬಿದ್ದ ಭಾವಿ ಲಾಯರ್!​ ಟ್ಯಾಲೆಂಟ್​ಗೆ​ ಪೊಲೀಸರೂ ಸುಸ್ತು

 ಕಾನೂನು ವಿದ್ಯಾರ್ಥಿಯೊಬ್ಬ ಪರೀಕ್ಷೆಯಲ್ಲಿ ನಕಲು ಮಾಡಲು ವಿನೂತನ ಉಪಾಯ ಬಳಸಿದ್ದಾನೆ. ಆತ ತನ್ನೆಲ್ಲಾ ಪೆನ್ನುಗಳ ಮೇಲೆ ಸೂಜಿಯಿಂದ ಇಡೀ ಪಠ್ಯಕ್ರಮವನ್ನು ಕೆತ್ತಿ, ಪರೀಕ್ಷಾ ಮೇಲ್ವಿಚಾರಕರ ಕೈಗೆ ಸಿಕ್ಕಿಬಿದ್ದಿದ್ದಾನೆ. ಈ ಪೆನ್ನುಗಳ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಆತನ ಬುದ್ಧಿವಂತಿಕೆಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

Read Full Story

06:18 PM (IST) Apr 05

ಅಕ್ಕಿಯಿಂದ ಸ್ಮಾರ್ಟ್‌ ಮೆಟಿರಿಯಲ್ ಅಭಿವೃದ್ಧಿಪಡಿಸಿದ ವಿಜ್ಞಾನಿಗಳ ತಂಡ, ದುಪ್ಪಟ್ಟಾಗಲಿದೆ ಬೇಡಿಕೆ

ಅಕ್ಕಿಯಿಂದ ಸ್ಮಾರ್ಟ್‌ ಮೆಟಿರಿಯಲ್ ಅಭಿವೃದ್ಧಿಪಡಿಸಿದ ವಿಜ್ಞಾನಿಗಳ ತಂಡ, ದುಪ್ಪಟ್ಟಾಗಲಿದೆ ಬೇಡಿಕೆ, ಏನಿದು ಸ್ಮಾರ್ಟ್ ಮೆಟಿರಿಯಲ್ ಇದರ ಉಪಯೋಗವೇನು? ಇನ್ನು ಅಕ್ಕಿ ಬೇಡಿಕೆ ದುಪ್ಪಟ್ಟಾಗುವ ಸಾಧ್ಯತೆ ಇದೆ.

 

Read Full Story

05:49 PM (IST) Apr 05

ದಿವ್ಯಾ ಭಾರತಿ ಅಲ್ಪಾಯುಷಿ ಎಂಬುದು ಮೊದಲೇ ಗೊತ್ತಿತ್ತು.. ಹಾಗೇ, ಆಕೆ ಮರುಜನ್ಮ ಪಡೆಯುವುದೂ ನಿಜ; ಆದರೆ..!

ಕೇವಲ 19ನೇ ವಯಸ್ಸಿನಲ್ಲಿ ಇಡೀ ಚಿತ್ರರಂಗವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದ ನಟಿ ದಿವ್ಯಾ ಭಾರತಿ, ಅಷ್ಟೇ ವೇಗವಾಗಿ ಇಹಲೋಕ ತ್ಯಜಿಸಿದ್ದು ಇಂದಿಗೂ ಒಂದು ನಿಗೂಢ. ಅವರ ಪುಣ್ಯತಿಥಿಯ ಈ ಸಂದರ್ಭದಲ್ಲಿ, ದಿವ್ಯಾ ಅವರ ಸೋದರಸಂಬಂಧಿ ಮತ್ತು ನಟಿ ಕೈನಾತ್ ಅರೋರಾ ಕೆಲವು ಕಹಿಸತ್ಯಗಳನ್ನು ಹಂಚಿಕೊಂಡಿದ್ದಾರೆ. 

Read Full Story

05:27 PM (IST) Apr 05

ಸಿಎಸ್‌ಕೆ ಎದುರು ಅಪರೂಪದ ದಾಖಲೆ ಬರೆಯಲು ವಿರಾಟ್ ಕೊಹ್ಲಿಗೆ ಬೇಕಿದೆ ಜಸ್ಟ್ 14 ರನ್!

ಇಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಆರ್‌ಸಿಬಿ ಮತ್ತು ಸಿಎಸ್‌ಕೆ ನಡುವಿನ ಐಪಿಎಲ್ ಪಂದ್ಯದಲ್ಲಿ, ವಿರಾಟ್ ಕೊಹ್ಲಿ ಕೇವಲ 14 ರನ್ ಗಳಿಸಿದರೆ ಒಂದೇ ತಂಡದ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ತಮ್ಮದೇ ದಾಖಲೆಯನ್ನು ಮುರಿಯಲಿದ್ದಾರೆ. ಗಾಯದ ಕಾರಣ ಧೋನಿ ಈ ಪಂದ್ಯದಲ್ಲಿ ಆಡುತ್ತಿಲ್ಲವಾದ್ದರಿಂದ, ಸಂಕಷ್ಟದಲ್ಲಿರುವ ಚೆನ್ನೈ ತಂಡದ ವಿರುದ್ಧ ಆರ್‌ಸಿಬಿ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಅವಕಾಶ ಹೊಂದಿದೆ.

Read Full Story

04:31 PM (IST) Apr 05

ಶಾಕಿಂಗ್ ಸುದ್ದಿ - ಧುರಂಧರ್ ಚಿತ್ರಕ್ಕಿಂತ ಮೊದಲು 'ಡಿಸ್ಕೋ ಡ್ಯಾನ್ಸರ್' ಈ ದಾಖಲೆ ಮಾಡಿತ್ತಾ? ಅದು ಹೇಗೆ ನೋಡಿ..!

ತಂತ್ರಜ್ಞಾನ ಮತ್ತು ಮಾರ್ಕೆಟಿಂಗ್ ಇಲ್ಲದ ಕಾಲದಲ್ಲೇ ಮಿಥುನ್ ಚಕ್ರವರ್ತಿ ಅವರು ಸೃಷ್ಟಿಸಿದ ದಾಖಲೆಗಳು ಇಂದಿಗೂ ಸ್ಫೂರ್ತಿದಾಯಕ. 'ಡಿಸ್ಕೋ ಡ್ಯಾನ್ಸರ್' ಭಾರತೀಯ ಸಿನಿಮಾವನ್ನು ಜಾಗತಿಕ ಮಟ್ಟಕ್ಕೆ ಪರಿಚಯಿಸಿದರೆ, 'ಧುರಂಧರ್' ನಂತಹ ಸಿನಿಮಾಗಳು ಆ ಮಾರುಕಟ್ಟೆಯನ್ನು ವಿಸ್ತರಿಸುತ್ತಿವೆ. ಏನೇ ಆದರೂ ಧುರಂಧರ್ ಸಿನಿಮಾ ಮೆಚ್ಚತಕ್ಕದ್ದು. 

Read Full Story

04:19 PM (IST) Apr 05

ಪ್ರೀತ್ಸೆ ಎಂದು ದಲಿತ ಅಪ್ರಾಪ್ತೆ ಹಿಂದೆ ಬಿದ್ದ ಕಿರಾತಕ, ನಿರಾಕರಿಸಿದ ಹುಡುಗಿ ಹಾಡಹಗಲೇ ಹತ್ಯೆ

ಪ್ರೀತ್ಸೆ ಎಂದು ದಲಿತ ಅಪ್ರಾಪ್ತೆ ಹಿಂದೆ ಬಿದ್ದ ಕಿರಾತಕ, ನಿರಾಕರಿಸಿದ ಹುಡುಗಿ ಹಾಡಹಗಲೇ ಹತ್ಯೆ, ಅಕ್ಕ ಹಾಗೂ ತಮ್ಮನ ಜೊತೆ ಮೊಬೈಲ್ ಶಾಪ್‌ಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಅಟ್ಟಾಡಿಸಿಕೊಂಡು ಅಪ್ರಾಪ್ತೆಯನ್ನು ಹತ್ಯೆ ಮಾಡಲಾಗಿದೆ.

Read Full Story

03:51 PM (IST) Apr 05

ಜಾಗತಿಕ ಮಾನದಂಡ GMT ಬದಲು ಮಹಾಕಾಲ್ ಸ್ಟಾಂಡರ್ಟ್ ಟೈಮ್ (MST) ಪ್ರಸ್ತಾವನೆ ಇಟ್ಟ ಭಾರತ

ಜಾಗತಿಕ ಮಾನದಂಡ GMT ಬದಲು ಮಹಾಕಾಲ್ ಸ್ಟಾಂಡರ್ಟ್ ಟೈಮ್ (MST) ಪ್ರಸ್ತಾವನೆ ಇಟ್ಟ ಭಾರತ, ಜಾಗತಿಕ ಮಟ್ಟದಲ್ಲಿ ಸಮಯ ಹೇಳುವಾಗ ಜಿಎಂಟಿ ಎಂದು ಬಳಸಲಾಗುತ್ತದೆ. ಇದು ಬ್ರಿಟಿಷರು ಆಡಳಿತದಲ್ಲಿ ಕೊಟ್ಟ ಹೆಸರು, ಆದರೆ ಇನ್ನು ಜಾಗತಿಕವಾಗಿ ಮಹಾಕಾಲ್ ಸ್ಟಾಂಡರ್ಟ್ ಟೈಮ್ ಅಂಗೀಕರಿಸಲು ಪ್ರಸ್ತಾವನೆ ಇಡಲಾಗಿದೆ.

Read Full Story

03:03 PM (IST) Apr 05

ಇಂದಿನ ಆರ್‌ಸಿಬಿ-ಸಿಎಸ್‌ಕೆ ನಡುವಿನ ಮ್ಯಾಚ್ ಗೆಲ್ಲೋದು ಯಾರು? ಅಚ್ಚರಿ ಭವಿಷ್ಯ ನುಡಿದ ರವಿಚಂದ್ರನ್ ಅಶ್ವಿನ್

ಬೆಂಗಳೂರು: ಐಪಿಎಲ್ 2026ರ ಬಹುನಿರೀಕ್ಷಿತ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ನಡುವಿನ ಪಂದ್ಯಕ್ಕೂ ಮುನ್ನ, ಟೀಂ ಇಂಡಿಯಾದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತಮ್ಮ ಭವಿಷ್ಯ ನುಡಿದಿದ್ದಾರೆ.

 

Read Full Story

03:02 PM (IST) Apr 05

ಅಮೆರಿಕ ಇತಿಹಾಸದಲ್ಲೇ ಅತ್ಯಂತ ಸವಾಲಿನ ಸೇನಾ ರಕ್ಷಣಾ ಕಾರ್ಯಾಚರಣೆ, ಇರಾನ್ ನುಗ್ಗಿದ ಫೈಟರ್ ಜೆಟ್

ಅಮೆರಿಕ ಇತಿಹಾಸದಲ್ಲೇ ಅತ್ಯಂತ ಸವಾಲಿನ ಸೇನಾ ರಕ್ಷಣಾ ಕಾರ್ಯಾಚರಣೆ, ಇರಾನ್ ನುಗ್ಗಿದ ಫೈಟರ್ ಜೆಟ್, ಇರಾನ್ ಹಾಗೂ ಅಮೆರಿಕ ಯುದ್ಧ ತೀವ್ರ ಸ್ವರೂಪ ಪಡೆದುಕೊಂಡಿದೆ. ಅಮೆರಿಕ ಫೈಟೆರ್ ಜೆಟ್ ಪತನದ ಬಳಿಕ ಮಹತ್ವದ ಘಟನೆ ನಡೆದಿದೆ.

 

Read Full Story

02:06 PM (IST) Apr 05

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಭವಿಷ್ಯದ ಬಗ್ಗೆ ಅಚ್ಚರಿಯ ಮಾತುಗಳನ್ನಾಡಿದ ಯುವರಾಜ್ ಸಿಂಗ್!

2027ರ ಏಕದಿನ ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಪಾಲ್ಗೊಳ್ಳುವಿಕೆಯ ಬಗ್ಗೆ ಟೀಂ ಮ್ಯಾನೇಜ್‌ಮೆಂಟ್ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಮಾಜಿ ಆಟಗಾರ ಯುವರಾಜ್ ಸಿಂಗ್ ಒತ್ತಾಯಿಸಿದ್ದಾರೆ. ಈ ಇಬ್ಬರು ದಿಗ್ಗಜ ಆಟಗಾರರೊಂದಿಗೆ ಪಾರದರ್ಶಕ ಮಾತುಕತೆ ನಡೆಸಿ, ಅವರ ಭವಿಷ್ಯದ ಬಗ್ಗೆ ಗೊಂದಲವಿಲ್ಲದಂತೆ ನೋಡಿಕೊಳ್ಳಬೇಕು ಎಂದು ಯುವಿ ಸಲಹೆ ನೀಡಿದ್ದಾರೆ.
Read Full Story

01:42 PM (IST) Apr 05

ಪತ್ನಿ ರಶ್ಮಿಕಾ ಹುಟ್ಟುಹಬ್ಬಕ್ಕೆ ''ಐ ಲವ್ ಯೂ ಜಯಮ್ಮ' ಎಂದು ವಿಶ್ ಮಾಡಿದ ಪತಿ ವಿಜಯ್; ಇದೇನ್ ಮ್ಯಾಟರ್ ನೋಡಿ!

ವೈಯಕ್ತಿಕ ಜೀವನದಲ್ಲಿ ವಿಜಯ್ ದೇವರಕೊಂಡ ಅವರ ಕೈಹಿಡಿದು ಸುಖವಾಗಿರುವ ರಶ್ಮಿಕಾ, ವೃತ್ತಿಜೀವನದಲ್ಲೂ ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ಕೊಡಗಿನಿಂದ ಶುರುವಾದ ಈ ಸುಂದರಿಯ ಪಯಣ ಇಂದು ಇಡೀ ಭಾರತ ಮೆಚ್ಚುವ ಮಟ್ಟಕ್ಕೆ ಬೆಳೆದಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ಹ್ಯಾಪಿ ಬರ್ತ್‌ಡೇ ರಶ್ಮಿಕಾ ಮಂದಣ್ಣ!

Read Full Story

12:55 PM (IST) Apr 05

ಸ್ಟೇಟಸ್‌ಗಾಗಿ ಹೊಸ ಕಾರ್ ತಗೋತಿದ್ದೀರಾ? ವಾರೆನ್ ಬಫೆಟ್ ಪ್ರಕಾರ ಈ 5 ತಪ್ಪುಗಳನ್ನು ಮಾತ್ರ ಮಾಡ್ಬೇಡಿ!

ಶ್ರೀಮಂತರಾಗಬೇಕು ಅನ್ನೋ ಆಸೆ ಎಲ್ಲರಿಗೂ ಇರುತ್ತೆ. ಆದರೆ, ಅದಕ್ಕಾಗಿ ಕೆಲವು ನಿಯಮಗಳನ್ನು ಪಾಲಿಸಬೇಕು ಮತ್ತು ಕೆಲವು ತಪ್ಪುಗಳನ್ನು ಮಾಡಬಾರದು. ವಿಶ್ವದ ಖ್ಯಾತ ಹೂಡಿಕೆದಾರ ವಾರೆನ್ ಬಫೆಟ್ ಹೇಳುವ ಪ್ರಕಾರ, ಶ್ರೀಮಂತರಾಗಲು ಈ ತಪ್ಪುಗಳನ್ನು ಮಾಡಲೇಬಾರದು.
Read Full Story

11:15 AM (IST) Apr 05

'ದಯವಿಟ್ಟು ಕ್ಷಮಿಸಿ..' - ಧೋನಿ, ಕಪಿಲ್‌ ದೇವ್‌ಗೆ ಬಹಿರಂಗವಾಗಿ ಕ್ಷಮೆ ಕೇಳಿದ ಯುವರಾಜ್‌ ಸಿಂಗ್!

ನವದೆಹಲಿ: ಭಾರತಕ್ಕೆ ವಿಶ್ವಕಪ್ ಗೆದ್ದುಕೊಟ್ಟ ನಾಯಕರಾದ ಕಪಿಲ್ ದೇವ್ ಹಾಗೂ ಎಂ ಎಸ್ ಧೋನಿ ಮೇಲೆ ಪದೇ ಪದೇ ಬಹಿರಂಗವಾಗಿ ಕಿಡಿಕಾರುತ್ತಿರುವ ತಮ್ಮ ತಂದೆಯ ಹೇಳಿಕೆಯ ಬಗ್ಗೆ ಯುವರಾಜ್ ಸಿಂಗ್ ಪಾಡ್‌ಕಾಸ್ಟ್‌ವೊಂದರಲ್ಲಿ ಬಹಿರಂಗವಾಗಿಯೇ ಕ್ಷಮೆಯಾಚಿಸಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

Read Full Story

10:56 AM (IST) Apr 05

ದಕ್ಷಿಣದ ಭಾರತದ ಲೋಕಸಭಾ ಸ್ಥಾನಗಳ ಕಡಿತ ಇಲ್ಲ - ಪ್ರಧಾನಿ ಮೋದಿ ಮಹತ್ವದ ಹೇಳಿಕೆ

ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆಯಿಂದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗುತ್ತದೆ ಎಂಬ ಆತಂಕಕ್ಕೆ ಪ್ರಧಾನಿ ನರೇಂದ್ರ ಮೋದಿ ತೆರೆ ಎಳೆದಿದ್ದಾರೆ.

Read Full Story

10:56 AM (IST) Apr 05

Yogi Adityanath - ಚಿತ್ರರಂಗಕ್ಕೆ ಖಡಕ್ ಎಚ್ಚರಿಕೆ ಕೊಟ್ಟ ಯೋಗಿ ಆದಿತ್ಯ ನಾಥ್; ಸದ್ಯದ 'Bad is Good' ಟ್ರೆಂಡ್ ಬಗ್ಗೆ ಕಿಡಿಕಿಡಿ!

ಈಗ ಸಿನೆಮಾ ಮಂದಿ ಯೋಗಿಜೀ ಅವರ ಈ 'ಸ್ಕ್ರಿಪ್ಟ್' ಅನ್ನು ಫಾಲೋ ಮಾಡುತ್ತಾರಾ ಅಥವಾ ಹಳೇ ದಾರಿಯಲ್ಲೇ ಸಾಗುತ್ತಾರಾ? ಕಾದು ನೋಡಬೇಕು. ಆದರೆ ಒಂದು ಮಾತು ಮಾತ್ರ ನಿಜ, ಹೀರೊ ಅಂದರೆ ಅನ್ಯಾಯ ಮಾಡುವವನಲ್ಲ, ಅನ್ಯಾಯವನ್ನು ಮೆಟ್ಟಿನಿಲ್ಲುವವನು ಎಂಬ ದೊಡ್ಡ ಸತ್ಯವನ್ನಂತೂ ಅವರು ಸಾಬೀತುಪಡಿಸಿದ್ದಾರೆ!

Read Full Story

10:38 AM (IST) Apr 05

ಮುಂಬೈ ಸೋಲಿಸಿದ ಸಮೀರ್ ರಿಜ್ವಿ; ಸಿಎಸ್‌ಕೆ ತಂಡದಿಂದ ಕೈಬಿಟ್ಟಿದ್ದಕ್ಕೆ ಆಕ್ರೋಶ ಹೊರಹಾಕಿದ ಫ್ಯಾನ್ಸ್

ಮುಂಬೈ ಇಂಡಿಯನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸಮೀರ್ ರಿಜ್ವಿ 90 ರನ್ ಸಿಡಿಸಿ ಭರ್ಜರಿ ಗೆಲುವು ತಂದುಕೊಟ್ಟಿದ್ದಾರೆ. ಈ ಹಿಂದೆ ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಕೈಬಿಡಲಾಗಿದ್ದ ರಿಜ್ವಿಯ ಈ ಪ್ರದರ್ಶನದಿಂದ, ಸಿಎಸ್‌ಕೆ ಫ್ರಾಂಚೈಸಿ ವಿರುದ್ಧ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಿಜ್ವಿ ಇದೀಗ ಆರೆಂಜ್ ಕ್ಯಾಪ್ ಕೂಡ ಪಡೆದಿದ್ದಾರೆ.
Read Full Story

09:34 AM (IST) Apr 05

ಫಸ್ಟ್‌ನೈಟ್‌ನಲ್ಲಿ ಐವರು ಗೆಳೆಯರೊಂದಿಗೆ ಎರಗಿದ ಗಂಡ ನವಾಜ್ - ಮತ್ತೊಂದು ಲವ್ ಜಿಹಾದ್ ಕೇಸ್!

ಯುವತಿಯೊಬ್ಬರನ್ನು ಪ್ರೀತಿಸಿ, ಹೆಸರು ಬದಲಿಸಿಕೊಂಡು ಮದುವೆಯಾದ ನವಾಜ್ ಎಂಬಾತ, ಮೊದಲ ರಾತ್ರಿಯಂದೇ ತನ್ನ ಸ್ನೇಹಿತರೊಂದಿಗೆ ಸೇರಿ ಗ್ಯಾಂಗ್ ರೇ*ಪ್ ಮಾಡಿದ್ದಾನೆ. ಬಳಿಕ ಹಣ, ಆಭರಣ ದೋಚಿ, ಬೀಫ್ ತಿನ್ನಲು ಮತ್ತು ಕಲ್ಮಾ ಓದಲು ಒತ್ತಾಯಿಸಿ ಕಿರುಕುಳ ನೀಡಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.

Read Full Story

09:22 AM (IST) Apr 05

ಫಿಫಾ ವಿಶ್ವಕಪ್‌ ಫುಟ್ಬಾಲ್ ಟೂರ್ನಿ - ಕೇವಲ ಪಾರ್ಕಿಂಗ್‌ಗೆ ₹64,000, ಫೈನಲ್‌ನ ಟಿಕೆಟ್‌ಗೆ ₹10.2 ಲಕ್ಷ ಮೌಲ್ಯ!

2026ರ ಫಿಫಾ ವಿಶ್ವಕಪ್‌ನ ಟಿಕೆಟ್ ದರಗಳು ಲಕ್ಷಗಳನ್ನು ದಾಟಿದ್ದು, ಫೈನಲ್ ಪಂದ್ಯದ ಟಿಕೆಟ್‌ಗೆ ₹10 ಲಕ್ಷಕ್ಕೂ ಅಧಿಕ ಬೆಲೆ ನಿಗದಿಪಡಿಸಲಾಗಿದೆ. ಇದರೊಂದಿಗೆ, ವಾಹನ ಪಾರ್ಕಿಂಗ್ ಪಾಸ್‌ಗಳು ಮತ್ತು ಕೆಲವು ದೇಶಗಳ ಪ್ರೇಕ್ಷಕರಿಗೆ ವಿಧಿಸಲಾಗಿರುವ ದುಬಾರಿ ವೀಸಾ ಠೇವಣಿ ಪಂದ್ಯ ವೀಕ್ಷಣೆಯನ್ನು ಅತ್ಯಂತ ದುಬಾರಿಯಾಗಿಸಿದೆ.
Read Full Story

08:28 AM (IST) Apr 05

ಘಾಯಲ್‌ ಹೂಂ, ಇಸೀಲಿಯೇ ಘಾತಕ್‌ ಹೂಂ - ಧುರಂಧರ್‌ ಸ್ಟೈಲ್‌ನಲ್ಲಿ AAP ವಿರುದ್ಧ ಛಡ್ಡಾ ಗುಡುಗು

ರಾಜ್ಯಸಭೆಯ ಆಪ್ ಉಪನಾಯಕ ಸ್ಥಾನದಿಂದ ವಜಾಗೊಂಡಿರುವ ರಾಘವ್ ಛಡ್ಡಾ, ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ತಮ್ಮ ಮೇಲಿನ ಆರೋಪಗಳು ಸುಳ್ಳು ಎಂದು ಸವಾಲೆಸೆದಿರುವ ಅವರು, ಜನರ ಧ್ವನಿಯಾಗಲು ಸಂಸತ್ತಿಗೆ ಬಂದಿದ್ದೇನೆ ಹೊರತು ಗದ್ದಲ ಸೃಷ್ಟಿಸಲು ಅಲ್ಲ ಎಂದು ತಿರುಗೇಟು ನೀಡಿದ್ದಾರೆ.
Read Full Story

08:28 AM (IST) Apr 05

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿಂದು ಆರ್‌ಸಿಬಿ-ಸಿಎಸ್‌ಕೆ ಹೈವೋಲ್ಟೇಜ್ ಫೈಟ್! ಮತ್ತೊಂದು ಜಯದ ವಿಶ್ವಾಸದಲ್ಲಿ ಬೆಂಗಳೂರು!

ಐಪಿಎಲ್ 2026ರ ಪಂದ್ಯದಲ್ಲಿ, ಸತತ 2ನೇ ಗೆಲುವಿನ ನಿರೀಕ್ಷೆಯಲ್ಲಿರುವ ಆರ್‌ಸಿಬಿ ತಂಡವು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಎದುರಿಸಲಿದೆ. ಬಲಿಷ್ಠ ಬ್ಯಾಟಿಂಗ್ ಮತ್ತು ಸುಧಾರಿತ ಬೌಲಿಂಗ್‌ನಿಂದ ಆರ್‌ಸಿಬಿ ಸಮತೋಲನದಿಂದ ಕೂಡಿದ್ದರೆ, ಸತತ ಸೋಲುಗಳಿಂದ ಕಂಗೆಟ್ಟಿರುವ ಸಿಎಸ್‌ಕೆ ಬೌಲಿಂಗ್ ಸಮಸ್ಯೆಯಿಂದ ಬಳಲುತ್ತಿದೆ.
Read Full Story

08:08 AM (IST) Apr 05

ಗ್ಯಾಸ್ ಟ್ರಬಲ್; ಕೆಲಸ ಕಳೆದುಕೊಂಡು ನಗರಗಳಿಂದ ತವರಿನತ್ತ ಹೊರಟ ಲಕ್ಷಾಂತರ ಕಾರ್ಮಿಕರು

ಮಧ್ಯಪ್ರಾಚ್ಯ ಸಂಘರ್ಷದಿಂದ ಉಂಟಾದ ಎಲ್‌ಪಿಜಿ ಬಿಕ್ಕಟ್ಟು ದೇಶದ ವಲಸೆ ಕಾರ್ಮಿಕರ ಮೇಲೆ ಗಂಭೀರ ಪರಿಣಾಮ ಬೀರಿದೆ. ಗ್ಯಾಸ್ ದರ ಏರಿಕೆ ಮತ್ತು ಪೂರೈಕೆ ವ್ಯತ್ಯಯದಿಂದ ಹೋಟೆಲ್‌ಗಳು ಮುಚ್ಚುತ್ತಿದ್ದು, ಕೆಲಸ ಕಳೆದುಕೊಂಡ ಲಕ್ಷಾಂತರ ಕಾರ್ಮಿಕರು  ತಮ್ಮ ತವರು ರಾಜ್ಯಗಳಿಗೆ ಮರಳುತ್ತಿದ್ದಾರೆ.

Read Full Story

07:51 AM (IST) Apr 05

ಶತ್ರುರಾಷ್ಟ್ರದಲ್ಲಿ ವಿಮಾನ ಪತನವಾದಾಗ ಪೈಲಟ್‌ ಏನು ಮಾಡ್ತಾರೆ? ಇಲ್ಲಿದೆ ಅಚ್ಚರಿ ಮಾಹಿತಿ

ಶತ್ರುರಾಷ್ಟ್ರದಲ್ಲಿ ವಿಮಾನ ಪತನವಾದಾಗ, ಪೈಲಟ್‌ಗಳು ತಮ್ಮನ್ನು ರಕ್ಷಿಸಿಕೊಳ್ಳಲು ಕಠಿಣ ಶಿಷ್ಟಾಚಾರವನ್ನು ಪಾಲಿಸುತ್ತಾರೆ. ತಮ್ಮ ಗುರುತನ್ನು ನಾಶಪಡಿಸಿ, ಸುರಕ್ಷಿತ ಸ್ಥಳವನ್ನು ಹುಡುಕಿ, ರಹಸ್ಯ ಸಾಧನಗಳ ಮೂಲಕ ತಮ್ಮ ಸೇನೆಯನ್ನು ಸಂಪರ್ಕಿಸಲು ಯತ್ನಿಸುತ್ತಾರೆ. 

Read Full Story

07:32 AM (IST) Apr 05

ಯಾರ ಕಣ್ಣಿಗೂ ಕಾಣದ ಅಮೆರಿಕದ ಅತ್ಯಾಧುನಿಕ F-35 ಯುದ್ಧ ವಿಮಾನ ಇರಾನ್‌ಗೆ ಕಂಡಿದ್ದೇಗೆ?

ಅಮೆರಿಕದ ಅತ್ಯಾಧುನಿಕ ಎಫ್‌-35 ಯುದ್ಧ ವಿಮಾನವನ್ನು ಇರಾನ್‌ ಹೊಡೆದುರುಳಿಸಿದೆ ಎಂದು ಹೇಳಿಕೊಂಡಿದೆ. ರಾಡಾರ್‌ಗೆ ಕಾಣದ ಈ ವಿಮಾನದ ಇಂಜಿನ್‌ನಿಂದ ಹೊರಹೊಮ್ಮುವ ಉಷ್ಣತೆಯನ್ನು ಪತ್ತೆಹಚ್ಚಲು ಇರಾನ್ ಸರಳವಾದ ಐಆರ್‌ಎಸ್‌ಟಿ ತಂತ್ರಜ್ಞಾನ ಬಳಸಿದೆ. 

Read Full Story

More Trending News