Published : Sep 02, 2025, 07:17 AM ISTUpdated : Sep 02, 2025, 08:50 PM IST

India Latest News Live: ವಿದೇಶಕ್ಕೆ ಬೈಕ್ ರೈಡ್ ಹೋದ ಭಾರತೀಯ ಕಂಗಾಲು, ಲಂಡನ್‌ನಲ್ಲಿ ಕಾಣೆಯಾಯ್ತು ಬೈಕ್

ಸಾರಾಂಶ

ಕಲ್ಲಿಕೋಟೆ: ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾ ಸೋಂಕಿನ ಪ್ರಕರಣಗಳು ಮುಂದುವರೆದಿದ್ದು, 3 ತಿಂಗಳ ಮಗು ಸೇರಿದಂತೆ ಮತ್ತೆ 2 ಸಾವು ಸಂಭವಿಸಿದೆ. ಈ ಮೂಲಕ ಕಳೆದೊಂದು ತಿಂಗಳಲ್ಲಿ ಮೆದುಳಿನ ಸೋಂಕಿಗೆ ಬಲಿಯಾದವರ ಸಂಖ್ಯೆ 3ಕ್ಕೇರಿಯಾಗಿದೆ. ಅಮೀ ಬಿಕ್ ಮೆನಿಂಗೊಎನ್ಸೆಫಾಲಿಟಿಸ್‌ ಎಂಬ ಈ ವಿಚಿತ್ರ ಕಾಯಿಲೆಗೆ ಆ.14ರಂದು 9 ವರ್ಷದ ಬಾಲಕಿ ಬಲಿಯಾಗಿದ್ದಳು. ಅದರ ನಡುವೆಯೇ, 1 ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 3 ತಿಂಗಳ ಮಗು ಚಿಕಿತ್ಸೆ ಫಲಿಸದೆ ಭಾನುವಾರ ಸಾವನ್ನಪ್ಪಿದೆ. ಮತ್ತೊಂದು ಪ್ರಕರಣದಲ್ಲಿ ರಮ್ಲಾ (52) ಎನ್ನುವ ಮಹಿಳೆ ರೋಗ ಲಕ್ಷಣ ಹಿನ್ನೆಲೆ ಜು.8 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಸೋಮವಾರ ಸಾವನ್ನಪ್ಪಿದ್ದಾರೆ. ಸದ್ಯ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ 8 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಲುಷಿತ ನೀರಿನಲ್ಲಿ ಈಜು, ಸ್ನಾನ ಈ ಸೋಂಕಿಗೆ ಕಾರಣ. ತಲೆನೋವು, ಜ್ವರ, ತಲೆಸುತ್ತು ಇದರ ಪ್ರಾಥಮಿಕ ಲಕ್ಷಣಗಳಾಗಿರುತ್ತದೆ.

Bike ride

08:50 PM (IST) Sep 02

ವಿದೇಶಕ್ಕೆ ಬೈಕ್ ರೈಡ್ ಹೋದ ಭಾರತೀಯ ಕಂಗಾಲು, ಲಂಡನ್‌ನಲ್ಲಿ ಕಾಣೆಯಾಯ್ತು ಬೈಕ್

ಮುಂಬೈನಿಂದ ಬೈಕ್ ಮೂಲಕ 17 ದೇಶ ಸುತ್ತಿ 24,000 ಕಿಲೋಮೀಟರ್ ರೈಡ್ ಮಾಡಿದ ಭಾರತೀಯ ಲಂಡನ್ ತಲುಪುತ್ತಿದ್ದಂತೆ ಕಂಗಾಲಾಗಿದ್ದಾನೆ. ಕಾರಣ ಈತನ ಬೈಕ್ ಕಾಣದಾಗಿದೆ.

Read Full Story

08:47 PM (IST) Sep 02

'ಗಂಡ ನಿನ್ನ ಜೊತೆ ಇದ್ರೆ ಸಕ್ಸಸ್‌ ಸಿಗಲ್ಲ..' ಲೇಡಿ ಸೂಪರ್‌ಸ್ಟಾರ್‌ ಬಾಳಿನಲ್ಲಿ ನಿಜವಾಯ್ತು ಜ್ಯೋತಿಷಿಯ ಮಾತು!

ವಿಚ್ಛೇದನದ ನಂತರ ಮಂಜು ವಾರಿಯರ್ ಅವರ ಬದುಕು ಹೊಸ ತಿರುವು ಪಡೆದುಕೊಂಡಿತು. ಚಿತ್ರರಂಗಕ್ಕೆ ಮರಳಿ ಲೇಡಿ ಸೂಪರ್‌ಸ್ಟಾರ್ ಆಗಿ ಮಿಂಚಿದರು. ಅವರ ಯಶಸ್ಸಿನ ಪಯಣ ಅನೇಕರಿಗೆ ಸ್ಫೂರ್ತಿ.
Read Full Story

08:13 PM (IST) Sep 02

ಏರ್ ಇಂಡಿಯಾ ವಿಮಾನದಲ್ಲಿ ಬೆಂಕಿ, ಮೇಡೇ ಸಂದೇಶದ ಬಳಿಕ ಪ್ಯಾನ್ ಪ್ಯಾನ್ ಇಂಡಿಕೇಶನ್

ಏರ್ ಇಂಡಿಯಾ ವಿಮಾನ ಟೇಕ್ ಆಫ್ ಆದ ಬೆನ್ನಲ್ಲೇ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪೈಲೆಟ್ ಮೇಡೇ, ಮೇಡೇ ಎಂದು ಸಂದೇಶ ರವಾನಿಸಲಾಗಿದೆ. ಬಳಿಕ ಪ್ಯಾನ್ ಪ್ಯಾನ್ ಇಂಡಿಕೇಶನ್ ನೀಡಲಾಗಿದೆ.

Read Full Story

06:39 PM (IST) Sep 02

ಪ್ರವಾಹದಲ್ಲಿ ಕೊಚ್ಚಿಹೋದ ಹಸು, ಎಮ್ಮೆಗಳು - ತೇಲಿಬಂತು ಚಿರತೆ ಶವ - ಮನಕಲುಕುವ ವಿಡಿಯೋ

ಪಂಜಾಬ್, ಜಮ್ಮು ಮತ್ತು ಕಾಶ್ಮೀರ, ಮತ್ತು ಉತ್ತರ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಹಲವಾರು ಜಾನುವಾರುಗಳು ನೀರಿನಲ್ಲಿ ಕೊಚ್ಚಿಹೋಗಿವೆ. ಈ ಘಟನೆಯ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರಲ್ಲಿ ಆತಂಕ ಮೂಡಿಸಿವೆ. 

Read Full Story

06:13 PM (IST) Sep 02

ಸಾಧಾರಣ ಸ್ಯಾಲರಿ ಹೈಕ್‌ ನೀಡಿದ ಟಿಸಿಎಸ್‌, ಬೆಸ್ಟ್‌ ವರ್ಕರ್‌ಗೆ ಮಾತ್ರ ಡಬಲ್‌ ಡಿಜಿಟ್‌ ಹೈಕ್‌!

ಟಿಸಿಎಸ್ ತನ್ನ ಉದ್ಯೋಗಿಗಳಿಗೆ ವೇತನ ಹೆಚ್ಚಳವನ್ನು ಘೋಷಿಸಿದೆ. ಹೆಚ್ಚಿನ ಉದ್ಯೋಗಿಗಳಿಗೆ ಶೇ. 4.5 ರಿಂದ 7 ರಷ್ಟು ಹೆಚ್ಚಳವಾಗಿದ್ದು, ಅತ್ಯುತ್ತಮ ಕಾರ್ಯಕ್ಷಮತೆ ತೋರಿದವರಿಗೆ ಶೇ. 10 ಕ್ಕಿಂತ ಹೆಚ್ಚಿನ ಹೆಚ್ಚಳ ದೊರೆತಿದೆ. ಈ ಹೆಚ್ಚಳ ಸೆಪ್ಟೆಂಬರ್ 1 ರಿಂದ ಜಾರಿಗೆ ಬಂದಿದೆ.
Read Full Story

05:44 PM (IST) Sep 02

ಧರ್ಮಸ್ಥಳ ಕೇಸಲ್ಲಿ ಹೆಸರು ಕೇಳಿ ಬಂದ ಸಂಸದ ಸಸಿಕಾತ್‌ ಸೆಂಥಿಲ್ ಉಪವಾಸ ಸತ್ಯಾಗ್ರಹಕ್ಕೆ ಯು ಟರ್ನ್‌!

ತಮಿಳುನಾಡಿಗೆ ಶಿಕ್ಷಣ ನಿಧಿ ಬಿಡುಗಡೆಗೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸಂಸದ ಶಶಿಕಾಂತ್ ಸೆಂಥಿಲ್ ತಮ್ಮ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂತೆಗೆದುಕೊಂಡಿದ್ದಾರೆ. ಕಾಂಗ್ರೆಸ್ ನಾಯಕರು ಮತ್ತು ತಮಿಳುನಾಡು ಸಿಎಂ ಮನವಿಯ ಮೇರೆಗೆ ಈ ನಿರ್ಧಾರ ಕೈಗೊಂಡಿದ್ದಾರೆ.
Read Full Story

05:29 PM (IST) Sep 02

ಶೋಕಕ್ಕೆ ತಿರುಗಿದ ಓಣಂ ಸಂಭ್ರಮಾಚರಣೆ - ಡಾನ್ಸ್‌ ಮಾಡುತ್ತಲೇ ಕುಸಿದು ಬಿದ್ದು ವಿಧಾನಸಭೆ ನೌಕರ ಸಾವು

ಕೇರಳ ವಿಧಾನಸಭೆಯಲ್ಲಿ ಓಣಂ ಆಚರಣೆ ವೇಳೆ ನೌಕರರೊಬ್ಬರು ಡಾನ್ಸ್ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. 45 ವರ್ಷದ ಜುನೈಸ್ ಎಂಬ ಲೈಬ್ರೇರಿಯನ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. 

Read Full Story

03:39 PM (IST) Sep 02

ದೆಹಲಿ ಗಲಭೆ - ಉಮರ್‌ ಖಾಲಿದ್‌, ಶಾರ್ಜೀಲ್‌ ಇಮಾಮ್‌ ಸೇರಿದಂತೆ 7 ಮಂದಿ ಜಾಮೀನು ನಿರಾಕರಿಸಿದ ಕೋರ್ಟ್‌!

2020 ರ ದೆಹಲಿ ಗಲಭೆ ಪ್ರಕರಣದಲ್ಲಿ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್ ಸೇರಿದಂತೆ ಹಲವರಿಗೆ ದೆಹಲಿ ಹೈಕೋರ್ಟ್ ಜಾಮೀನು ನಿರಾಕರಿಸಿದೆ. ಹಲವು ಬಾರಿ ವಿಚಾರಣೆ ನಡೆಸಿದ ನಂತರ ನ್ಯಾಯಾಲಯ ಈ ತೀರ್ಪು ನೀಡಿದೆ.
Read Full Story

03:00 PM (IST) Sep 02

ಭಾರತೀಯ ಯುವತಿ ಮದ್ವೆಗೆ ಪಾಪ್‌ ತಾರೆಯ ಸರ್‌ಫ್ರೈಸ್ ವಿಸಿಟ್ - ಮದ್ವೆ ಆಗೋಕೆ ಮನಸ್ಸಾಗ್ತಿಲ್ಲ ಎಂದ ಲೇಡಿ ಫ್ಯಾನ್ಸ್‌

ಅಮೆರಿಕದಲ್ಲಿ ನಡೆದ ಭಾರತೀಯ ಮೂಲದ ಯುವತಿಯ ಮದುವೆಗೆ ಪಾಪ್ ತಾರೆ ಜಸ್ಟೀನ್ ಬೀಬರ್ ಅಚ್ಚರಿಯ ಭೇಟಿ ನೀಡಿದ್ದು, ಈ ಭೇಟಿಯ ವೀಡಿಯೋ ವೈರಲ್ ಆಗಿದೆ.

Read Full Story

02:39 PM (IST) Sep 02

ಶಾಲಾ ವಾಹನ ಎಂದು ಮಕ್ಕಳ ಕಿಡ್​ನ್ಯಾಪ್ - ಪೋಷಕರೇ ಎಚ್ಚರ- Master Anand ಶಾಕಿಂಗ್​ ವಿಷ್ಯ ರಿವೀಲ್​!

ಶಾಲೆಗೆ ನಿಮ್ಮ ಮಕ್ಕಳನ್ನು ಶಾಲಾ ವಾಹನ ಅಥವಾ ಖಾಸಗಿ ವಾಹನದಲ್ಲಿ ಕಳುಹಿಸುತ್ತಿದ್ದರೆ, ಮೈಯೆಲ್ಲಾ ಕಣ್ಣಾಗಿ ಇರಬೇಕು. ನಿಜಕ್ಕೂ ಏನಾಗ್ತಿದೆ? ಮಾಸ್ಟರ್​ ಆನಂದ್ ನೀಡಿದ ಎಚ್ಚರಿಕೆ ಕೇಳಿ...

 

Read Full Story

01:09 PM (IST) Sep 02

ಭಾರತದಲ್ಲಿನ ತನ್ನೆಲ್ಲಾ ವ್ಯವಹಾರ ಕ್ಲೋಸ್ ಮಾಡ್ತಿದೆ ಬ್ಯಾಂಕ್; ನಿಮ್ಮ ಅಕೌಂಟ್ ಇದ್ಯಾ?

ಭಾರತದಲ್ಲಿ ತನ್ನ ಚಿಲ್ಲರೆ ವ್ಯವಹಾರಗಳನ್ನು ಮಾರಾಟ ಮಾಡಲು ಬಿಡ್‌ಗಳನ್ನು ಆಹ್ವಾನಿಸಿದೆ. ಈ ಕ್ರಮವು ಬ್ಯಾಂಕಿನ ವೆಚ್ಚ ಕಡಿತದ ಕ್ರಮಗಳ ಭಾಗವಾಗಿದೆ ಮತ್ತು ಭಾರತದಲ್ಲಿ ವಿದೇಶಿ ಬ್ಯಾಂಕ್‌ಗಳು ಎದುರಿಸುತ್ತಿರುವ ಸವಾಲುಗಳನ್ನು ಎತ್ತಿ ತೋರಿಸುತ್ತದೆ. 

Read Full Story

01:07 PM (IST) Sep 02

ಕೂದಲು ರಹಿತ ನಾಯಿಗೆ ಅನಸ್ಥೇಸಿಯಾ ನೀಡದೇ ಟ್ಯಾಟೂ ಹಾಕಿ ಕ್ರೌರ್ಯ - ವೀಡಿಯೋಗೆ ಭಾರಿ ಆಕ್ರೋಶ

ಶಾಂಘೈನಲ್ಲಿ ನಡೆದ ಸಾಕುಪ್ರಾಣಿಗಳ ಉತ್ಸವದಲ್ಲಿ ಟ್ಯಾಟೂ ಹಾಕಿಸಿಕೊಂಡ ನಾಯಿಯೊಂದು ಪ್ರದರ್ಶಿಸಲ್ಪಟ್ಟಿತ್ತು. ಆದರೆ ಈ ನಾಯಿಗೆ ಅನಸ್ಥೇಸಿಯಾ ನೀಡದೆ ಟ್ಯಾಟೂ ಹಾಕಿದ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಭಾರೀ ಆಕ್ರೋಶ ವ್ಯಕ್ತವಾಗಿದೆ. 

Read Full Story

12:20 PM (IST) Sep 02

ಇದುವೇ ನೋಡಿ ವಿಶ್ವದ ಅತಿ ಉದ್ದವಾದ ರಸ್ತೆ; 14 ದೇಶಗಳಿಗೆ ಸಂಪರ್ಕ

ವಿಶ್ವದ ಅತಿ ಉದ್ದದ ರಸ್ತೆ ಸುಮಾರು 30,600 ಕಿ.ಮೀ. ಉದ್ದವಾಗಿದೆ. ಈ ರಸ್ತೆ 14 ದೇಶಗಳನ್ನು ಹಾದುಹೋಗುತ್ತದೆ. ಇದರ ಸಂಪೂರ್ಣ ಮಾರ್ಗವನ್ನು ಕ್ರಮಿಸಲು 60 ದಿನಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.
Read Full Story

10:39 AM (IST) Sep 02

ಭಾರತ ನಮ್ ಜೊತೆ ಇರ್ಬೇಕಿತ್ತು ರಷ್ಯಾ ಜೊತೆ ಅಲ್ಲ - ಪುಟಿನ್ ಮೋದಿ ಭೇಟಿ ಬಳಿ ಟ್ರಂಪ್ ಸಲಹೆಗಾರ ಹೇಳಿದ್ದೇನು?

ರಷ್ಯಾ ಅಧ್ಯಕ್ಷ ಪುಟಿನ್ ಮತ್ತು ಚೀನಾ ನಾಯಕ ಕ್ಸಿ ಜಿಂಪಿಂಗ್ ಅವರನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದ ನಂತರ ಟ್ರಂಪ್ ಸಲಹೆಗಾರ ಪೀಟರ್ ನವರೋ ಭಾರತವನ್ನು ಮತ್ತೆ ಟೀಕಿಸಿದ್ದಾರೆ.

Read Full Story

08:10 AM (IST) Sep 02

ಉಪವಾಸ ಸತ್ಯಾಗ್ರಹ ಹಿಂಪಡೆದ ಸಂಸದ ಸಸಿಕಾಂತ್ ಸೆಂಥಿಲ್

ತಮಿಳುನಾಡಿಗೆ ಶಿಕ್ಷಣ ನಿಧಿ ಬಿಡುಗಡೆ ಮಾಡುವಂತೆ ಒತ್ತಾಯಿಸಿ ೪ ದಿನಗಳಿಂದ ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ಹಿಂಪಡೆಯುವುದಾಗಿ ತಿರುವಳ್ಳೂರು ಸಂಸದ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.
Read Full Story

More Trending News