ಭೋಪಾಲ್: 'ಪೋಷಕರು ತಮ್ಮ ಮನೆಯ ಹೆಣ್ಣು ಮಕ್ಕಳು ಹಿಂದೂಯೇತರರ ಮನೆಗೆ ಹೋಗುವುದನ್ನು ತಡೆಯಬೇಕು. ಒಂದು ವೇಳೆ ಅವರು ಅದನ್ನು ಕೇಳದಿದ್ದರೆ ಕಾಲು ಮುರಿಯಿರಿ' ಎಂದು ಮಾಜಿ ಸಂಸದೆ, ಬಿಜೆಪಿ ನಾಯಕಿ ಪ್ರಜ್ಞಾ ಸಿಂಗ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಭೋಪಾಲ್ನಲ್ಲಿ ಮಾತನಾಡಿದ ಅವರು, 'ನಿಮ್ಮ ಮನಸ್ಸುಗಳನ್ನು ಬಲಪಡಿಸಿಕೊಳ್ಳಿ. ಅದೆಷ್ಟರ ಮಟ್ಟಿಗೆ ಅಂದರೆ ಮಗಳು ನಿಮ್ಮ ಮಾತನ್ನು ಕೇಳದಿದ್ದರೆ, ಹಿಂದೂಯೇತರರ ಮನೆಗೆ ಹೋದರೆ ಅವಳ ಕಾಲು ಮುರಿವ ಅವಕಾಶ ಕಳೆದುಕೊಳ್ಳಬೇಡಿ. ನಿಮ್ಮ ಮಕ್ಕಳ ಯೋಗಕ್ಷೇಮಕ್ಕಾಗಿ ಹೊಡೆಯಬೇ ಕಾದರೆ ಹಿಂದೆ ಸರಿಯಬೇಡಿ' ಎಂದರು.

09:16 PM (IST) Oct 20
ಮಗಳು CD ಮುರಿದರೆ, ಜನರು ಏನಿದು ಅಂದ್ರು, ಶಾರುಖ್ ಜೊತೆಗಿನ ಕೊಯ್ಲಾ ಸೀನ್ ಘಟನೆ ಬಿಚ್ಚಿಟ್ಟ ನಟಿ, ಹಲವರು ನನ್ನ ಒಂದು ಸೀನ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಅಷ್ಟಕ್ಕೂ ಆ ಸೀನ್ ಏನು? ನಟಿ ಹೇಳಿದ್ದೇನು?
07:11 PM (IST) Oct 20
ಬೇಗ ಮದುವೆ ಆಗಿ, ಕಾಯುತ್ತಿದ್ದೇವೆ, ರಾಹುಲ್ ಗಾಂಧಿಗೆ ಸ್ವೀಟ್ ಶಾಪ್ ಮಾಲೀಕ ಕೊಟ್ಟ ಸಲಹೆಯಲ್ಲಿತ್ತು ಟ್ವಿಸ್ಟ್, ಐತಿಹಾಸಿಕ ಸ್ವೀಟ್ ಶಾಪ್ಗೆ ಭೇಟಿ ನೀಡಿದ ರಾಹುಲ್ ಗಾಂಧಿ ಜಿಲೇಬಿ ಸೇರದಂತೆ ಕೆಲ ತಿಂಡಿಗಳನ್ನು ಮಾಡಿದ್ದಾರೆ. ಈ ವೇಳೆ ಮಾಲೀಕನ ಮಾತು ಇದೀಗ ಭಾರಿ ಚರ್ಚೆಯಾಗುತ್ತಿದೆ.
06:31 PM (IST) Oct 20
ಬ್ಲಿಂಕಿಟ್, ಸ್ವಿಗ್ಗಿ ಸೇರಿ ಎಲ್ಲಾ ಆ್ಯಪ್ನಿಂದ ಸ್ವೀಟ್ ಆರ್ಡರ್ ಮಾಡಿ ಡೆಲಿವರಿ ಬಾಯ್ಗೆ ಅಚ್ಚರಿ ಕೊಟ್ಟ ವ್ಯಕ್ತಿ, ಕೆಲ ಘಟನೆಗಳು ಹೃದಯಸ್ವರ್ಶಿಯಾಗಿರುತ್ತದೆ. ಇದೀಗ ವ್ಯಕ್ತಿಯೊಬ್ಬನ ಪ್ರಯತ್ನಕ್ಕೆ ದೇಶವೇ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದೆ.
05:46 PM (IST) Oct 20
ಬಿಹಾರ ಚುನಾವಣೆ ರಂಗೇರಿದ್ದು, ರಾಜಕೀಯ ಪಕ್ಷಗಳ ಲೆಕ್ಕಾಚಾರದ ನಡುವೆ ಜ್ಯೋತಿಷಿಗಳ ಭವಿಷ್ಯವಾಣಿ ಕುತೂಹಲ ಕೆರಳಿಸಿದೆ. ಹಾಲಿ ಸಿಎಂ ನಿತೀಶ್ ಕುಮಾರ್ ಹಾಗೂ ತೇಜಸ್ವಿ ಯಾದವ್ ಹಾಗೂ ಬಿಜೆಪಿಯ ಸಮ್ರಾಟ್ ಚೌಧರಿ ನಡುವೆ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಜ್ಯೋತಿಷಿಗಳು ಹೇಳಿದ್ದೇನು?
05:30 PM (IST) Oct 20
2027ರ ವಿಶ್ವಕಪ್ ಗೆಲ್ಲಲು ಕೋಚ್ ಗಂಭೀರ್ ಮತ್ತು ಆಯ್ಕೆಗಾರ ಅಗರ್ಕರ್ ಅವರನ್ನು ತೆಗೆದುಹಾಕಬೇಕೆಂದು ತಾನು ಹೇಳಿದ್ದಾಗಿ ಹರಿದಾಡುತ್ತಿರುವ ಸುಳ್ಳು ಸುದ್ದಿಯನ್ನು ಮಾಜಿ ಕ್ರಿಕೆಟಿಗ ನವಜೋತ್ ಸಿಧು ನಿರಾಕರಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಈ ಹೇಳಿಕೆಗಳನ್ನು ತಾನು ನೀಡಿಲ್ಲ ಎಂದಿದ್ದಾರೆ.
04:55 PM (IST) Oct 20
ದೀಪಾವಳಿಗೆ ಭಾರತೀಯ ರೈಲ್ವೇ ಗುಡ್ ನ್ಯೂಸ್, ಈ ಬಾರಿ 7 ಸಾವಿರ ಅಲ್ಲ 12,000 ಸ್ಪೆಷಲ್ ಟ್ರೈನ್ ಸೇವೆ ನೀಡುತ್ತಿದೆ. ಪ್ರಯಾಣಿಕರ ಸಂಖ್ಯೆ ದುಪ್ಪಟ್ಟಾಗಿರುವ ಕಾರಣ ಈ ಬಾರಿ ಸಂಚಾರ ದಟ್ಟಣ ಕಡಿಮೆ ಮಾಡಲು ವಿಶೇಷ ಪ್ರಯತ್ನ ಮಾಡಿದೆ.
04:24 PM (IST) Oct 20
Heartwarming Video: ಮಾತು ಬಾರದ ತಂದೆಯೊಬ್ಬರಿಗೆ ಅವರ ಪುಟ್ಟ ಮಗಳೇ ವ್ಯವಹಾರದಲ್ಲಿ ಸಹಾಯ ಮಾಡುತ್ತಿದ್ದಾಳೆ. ಗ್ರಾಹಕರೊಂದಿಗೆ ಮೂಕ ಭಾಷೆಯಲ್ಲಿ ಮಾತನಾಡುವ ತಂದೆಯ ಮಾತನ್ನು ಅರ್ಥೈಸುವ ಮೂಲಕ ತಂದೆಗೆ ಆಸರೆಯಾಗಿ ನಿಂತಿರುವ ಈ ಬಾಲಕಿಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
04:10 PM (IST) Oct 20
ಆಸ್ಟ್ರೇಲಿಯಾ ಸರಣಿಯಿಂದ ಕೈಬಿಟ್ಟಿದ್ದಕ್ಕೆ ಆಯ್ಕೆಗಾರ ಅಜಿತ್ ಅಗರ್ಕರ್ ವಿರುದ್ಧ ಮೊಹಮ್ಮದ್ ಶಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವಿವಾದದ ಕುರಿತು ಮಾತನಾಡಿರುವ ಆರ್. ಅಶ್ವಿನ್, ಆಟಗಾರರು ಮತ್ತು ಆಯ್ಕೆಗಾರರ ನಡುವಿನ ನೇರ ಸಂವಹನದ ಕೊರತೆಯೇ ಇಂತಹ ಸಮಸ್ಯೆಗಳಿಗೆ ಮೂಲ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ.
02:47 PM (IST) Oct 20
ಪರ್ತ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ನಿರಾಸೆ ಅನುಭವಿಸಿದೆ. ಮಳೆಯಿಂದಾಗಿ 26 ಓವರ್ಗಳಿಗೆ ಸೀಮಿತವಾದ ಈ ಮ್ಯಾಚ್ನಲ್ಲಿ ಭಾರತ 136/9 ರನ್ ಗಳಿಸಿತ್ತು. ಬೌಲರ್ಗಳು ಈ ಗುರಿಯನ್ನು ಕಾಪಾಡಿಕೊಳ್ಳುವಲ್ಲಿ ವಿಫಲರಾದರು.
01:22 PM (IST) Oct 20
12:51 PM (IST) Oct 20
ಚಿಕ್ಕ ವಯಸ್ಸಿನಲ್ಲೇ ಸಾಕಷ್ಟು ಹೆಸರು, ಖ್ಯಾತಿ ಗಳಿಸಿದ ಕ್ರಿಕೆಟಿಗರು ಬಹಳಷ್ಟು ಮಂದಿ ಇದ್ದಾರೆ. ಹಾಗೆಯೇ, ಚಿಕ್ಕ ವಯಸ್ಸಿನಲ್ಲೇ ಕಳೆದುಹೋದ ಕ್ರಿಕೆಟಿಗರೂ ಇದ್ದಾರೆ. ಇದೇ ವಿಚಾರವನ್ನು ನೆನಪಿಸುತ್ತಾ ಮಾಜಿ ಕ್ರಿಕೆಟಿಗರೊಬ್ಬರು ವೈಭವ್ ಸೂರ್ಯವಂಶಿಗೆ ಎಚ್ಚರಿಕೆ ನೀಡಿದ್ದಾರೆ.
11:56 AM (IST) Oct 20
ಭಾರತ-ಆಸ್ಟ್ರೇಲಿಯಾ ಏಕದಿನ ಪಂದ್ಯದಲ್ಲಿ ಮಿಚೆಲ್ ಸ್ಟಾರ್ಕ್ ಬೌಲ್ ಮಾಡಿದ ಚೆಂಡು 176.5 ಕಿ.ಮೀ ವೇಗದಲ್ಲಿ ದಾಖಲಾಗಿದೆ. ಇದು ಶೋಯೆಬ್ ಅಖ್ತರ್ ಅವರ ವಿಶ್ವದಾಖಲೆಯನ್ನು ಮುರಿದಿದೆಯೇ ಎಂಬ ಚರ್ಚೆಗೆ ಕಾರಣವಾಗಿದೆ.
11:48 AM (IST) Oct 20
36,000 ಅಡಿ ಎತ್ತರದಲ್ಲಿ ಹಾರುತ್ತಿದ್ದ ವಿಮಾನದ ವಿಂಡ್ಶೀಲ್ಡ್ನಲ್ಲಿ ಬಿರುಕು ಕಾಣಿಸಿಕೊಂಡಿದ್ದರಿಂದ ವಿಮಾನ ತುರ್ತು ಭೂಸ್ಪರ್ಶ ಮಾಡಲಾಗಿದೆ. ಈ ಘಟನೆಯಲ್ಲಿ ಪೈಲಟ್ಗೆ ಸಣ್ಣಪುಟ್ಟ ಗಾಯಗಳಾಗಿದ್ದು, 140 ಪ್ರಯಾಣಿಕರು ಸುರಕ್ಷಿತವಾಗಿ ಪಾರಾಗಿದ್ದಾರೆ.
10:35 AM (IST) Oct 20
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟಾಗಿದ್ದು, ಅವರ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಈ ಡಕೌಟ್ನಿಂದಾಗಿ, ಕೊಹ್ಲಿಯವರ ದೀರ್ಘಕಾಲದ 50+ ಏಕದಿನ ಬ್ಯಾಟಿಂಗ್ ಸರಾಸರಿಯು 50ಕ್ಕಿಂತ ಕೆಳಗೆ ಕುಸಿದಿದೆ.
10:16 AM (IST) Oct 20
Actress Deepika Padukone: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ 2015ರಲ್ಲಿ 'ಮೈ ಚಾಯ್ಸ್' ವಿಡಿಯೋದಲ್ಲಿ ಮದುವೆಗೂ ಮುನ್ನ ದೈಹಿಕ ಸಂಬಂಧ ಹೊಂದುವ ಬಗ್ಗೆ ನೀಡಿದ್ದ ಹೇಳಿಕೆಯು ಇದೀಗ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ
09:03 AM (IST) Oct 20