LIVE NOW
Published : Apr 16, 2026, 06:54 AM ISTUpdated : Apr 16, 2026, 10:02 AM IST

India Latest News Live: ನಾಗಾರ್ಜುನ ಮಾಡಿದ ಒಂದು ತಪ್ಪಿನಿಂದ ನಾಗ ಚೈತನ್ಯಗೆ ಬ್ಲಾಕ್‌ಬಸ್ಟರ್ ಹಿಟ್ ಮಿಸ್!

ಸಾರಾಂಶ

ಜೈಪುರ: ವಿಚಿತ್ರವಾದ, ಅವಹೇಳನಕಾರಿಯಾದ ಮತ್ತು ಸಾಮಾಜಿಕವಾಗಿ ತೀರಾ ಹಳೆಯದಾದ ಹೆಸರುಳ್ಳ ವಿದ್ಯಾರ್ಥಿಗಳಿಗೆ ಮರುನಾಮಕರಣ ಮಾಡುವ ವಿಶಿಷ್ಟ ಅಭಿಯಾನವೊಂದನ್ನು ರಾಜಸ್ಥಾನ ಸರ್ಕಾರ ಆರಂಭಿಸಿದೆ. ಇದರನ್ವಯ ಬಬ್ಲು, ಶೇರು, ಶೈತಾನ್‌ ಎಂಬಿತ್ಯಾದಿ ಹೆಸರಿನ ಮಕ್ಕಳು ಬಾಲಮುಕುಂದ, ಬದರೀನಾಥ, ಆರವ್‌, ಅಥರ್ವ ಇತ್ಯಾದಿಯಾಗಿ ಬದಲಾಗಲಿದ್ದಾರೆ.

ಏನಿದು ಅಭಿಯಾನ?:

ರಾಜಸ್ಥಾನ ಸರ್ಕಾರ ‘ಸಾರ್ಥಕ ನಾಮ ಅಭಿಯಾನ’ವನ್ನು ಆರಂಭಿಸಿದೆ. ವಿಚಿತ್ರವಾದ ಮತ್ತು ಹಳೆಯ ಹೆಸರುಗಳು ಬಾಲ್ಯದಲ್ಲಿ ಏನೂ ಪರಿಣಾಮ ಬೀರದಿದ್ದರೂ ಮಕ್ಕಳು ದೊಡ್ಡವರಾದ ಮೇಲೆ ಅವರಲ್ಲಿ ಕೀಳರಿಮೆ ಮೂಡಿಸುತ್ತದೆ ಮತ್ತು ವ್ಯಕ್ತಿತ್ವ ವಿಕಸನಕ್ಕೆ ತೊಂದರೆಯಾಗುತ್ತದೆ. ಹೀಗಾಗಿ ಅರ್ಥಪೂರ್ಣವಾದ ಹೆಸರಿಡಬೇಕು ಎಂಬುದು ಸರ್ಕಾರ ಆಶಯ.

ಇದಕ್ಕಾಗಿ 1,409 ಹುಡುಗರ ಮತ್ತು 1,541 ಹೆಣ್ಣುಮಕ್ಕಳ ಸೇರಿ ಒಟ್ಟು 3,000 ಸುಂದರವಾದ ಹೆಸರುಗಳನ್ನು ಪಟ್ಟಿ ಮಾಡಿದೆ. ವಿಚಿತ್ರವಾದ ಹೆಸರುಳ್ಳ ಮಕ್ಕಳ ಪಾಲಕರ ಬಳಿ ಚರ್ಚೆ ನಡೆಸಿ, ಅವರ ಅನುಮತಿ ಪಡೆದು ಮಕ್ಕಳಿಗೆ ಹೊಸ ಹೆಸರಿಡಲಾಗುತ್ತದೆ. ಹೀಗಾಗಿ ಬಬ್ಲು, ಶೇರು, ಶೈತಾನ್, ಕಾಳು ಮತ್ತು ಟಿಂಕು ಎಂಬೆಲ್ಲ ಹೆಸರಿಟ್ಟುಕೊಂಡಿರುವ ಮಕ್ಕಳಿಗೆ ಇನ್ನು ಹೊಸ ಹೆಸರಿನ ಭಾಗ್ಯ ಸಿಗಲಿದೆ. ಹೆಣ್ಣುಮಕ್ಕಳೂ ಹಳೆಯ ಹೆಸರಿನ ಬದಲು ವೈಷ್ಣವಿ, ಅನ್ನಪೂರ್ಣಾ, ಆರಾಧ್ಯಾ ಇತ್ಯಾದಿ ನಾಮ ಪಡೆಯಲಿದ್ದಾರೆ.

10:02 AM (IST) Apr 16

ನಾಗಾರ್ಜುನ ಮಾಡಿದ ಒಂದು ತಪ್ಪಿನಿಂದ ನಾಗ ಚೈತನ್ಯಗೆ ಬ್ಲಾಕ್‌ಬಸ್ಟರ್ ಹಿಟ್ ಮಿಸ್!

ನಾಗ ಚೈತನ್ಯ 'ಜೋಶ್' ಚಿತ್ರದ ಮೂಲಕ ಹೀರೋ ಆಗಿ ಎಂಟ್ರಿ ಕೊಟ್ಟರು. ಆದರೆ ಈ ಸಿನಿಮಾ ಸೋಲು ಕಂಡಿತು. ಒಂದು ಬ್ಲಾಕ್‌ಬಸ್ಟರ್ ಚಿತ್ರದೊಂದಿಗೆ ಪಾದಾರ್ಪಣೆ ಮಾಡಬೇಕಿದ್ದ ನಾಗ ಚೈತನ್ಯ, ತಂದೆ ನಾಗಾರ್ಜುನ ಅವರ ಒಂದು ನಿರ್ಧಾರದಿಂದ ಆ ಅವಕಾಶವನ್ನು ಕಳೆದುಕೊಂಡರು.
Read Full Story

09:34 AM (IST) Apr 16

IPL 2026 - ನಿನ್ನೆ ನಡೆದ ಆರ್‌ಸಿಬಿ-ಲಖನೌ ನಡುವಿನ ಮ್ಯಾಚ್ ಗೆದ್ದಿದ್ದು ಯಾರು?

ಐಪಿಎಲ್‌ 2026ರಲ್ಲಿ ಲಖನೌ ಸೂಪರ್‌ ಜೈಂಟ್ಸ್‌ ವಿರುದ್ಧ 5 ವಿಕೆಟ್‌ಗಳ ಜಯ ಸಾಧಿಸಿದ ಆರ್‌ಸಿಬಿ, ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದೆ. ಬೌಲಿಂಗ್ ಮತ್ತು ಬ್ಯಾಟಿಂಗ್ ಪವರ್-ಪ್ಲೇನಲ್ಲಿ ತೋರಿದ ಅದ್ಭುತ ಪ್ರದರ್ಶನ ತಂಡದ ಗೆಲುವಿಗೆ ಕಾರಣವಾಯಿತು, ವಿರಾಟ್ ಕೊಹ್ಲಿ 49 ರನ್ ಗಳಿಸಿ ಪ್ರಮುಖ ಪಾತ್ರ ವಹಿಸಿದರು.
Read Full Story

07:45 AM (IST) Apr 16

ಎರಡು ಐತಿಹಾಸಿಕ ಸಂವಿಧಾನಿಕ ತಿದ್ದುಪಡಿ ಮಸೂದೆಗಳು ಇಂದು ಸಂಸತ್‌ನಲ್ಲಿ ಮಂಡನೆ, ವಿಪಕ್ಷಗಳ ವಿರೋಧ ಏಕೆ?

ಕೇಂದ್ರ ಸರ್ಕಾರವು ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡುವ 'ನಾರಿ ಶಕ್ತಿ ವಂದನ ಅಧಿನಿಯಮ' ಹಾಗೂ ಲೋಕಸಭಾ ಕ್ಷೇತ್ರಗಳನ್ನು 850ಕ್ಕೆ ಹೆಚ್ಚಿಸುವ ಮಸೂದೆಯನ್ನು ಮಂಡಿಸಲಿದೆ. ಆದರೆ, ಸರ್ಕಾರದ ಈ ನಡೆಯು ರಾಜಕೀಯ ಪ್ರೇರಿತವಾಗಿದೆಎಂದು ವಿಪಕ್ಷಗಳು ಪ್ರತಿಭಟನೆ.

Read Full Story

More Trending News