ಜೈಪುರ: ವಿಚಿತ್ರವಾದ, ಅವಹೇಳನಕಾರಿಯಾದ ಮತ್ತು ಸಾಮಾಜಿಕವಾಗಿ ತೀರಾ ಹಳೆಯದಾದ ಹೆಸರುಳ್ಳ ವಿದ್ಯಾರ್ಥಿಗಳಿಗೆ ಮರುನಾಮಕರಣ ಮಾಡುವ ವಿಶಿಷ್ಟ ಅಭಿಯಾನವೊಂದನ್ನು ರಾಜಸ್ಥಾನ ಸರ್ಕಾರ ಆರಂಭಿಸಿದೆ. ಇದರನ್ವಯ ಬಬ್ಲು, ಶೇರು, ಶೈತಾನ್ ಎಂಬಿತ್ಯಾದಿ ಹೆಸರಿನ ಮಕ್ಕಳು ಬಾಲಮುಕುಂದ, ಬದರೀನಾಥ, ಆರವ್, ಅಥರ್ವ ಇತ್ಯಾದಿಯಾಗಿ ಬದಲಾಗಲಿದ್ದಾರೆ.
ಏನಿದು ಅಭಿಯಾನ?:
ರಾಜಸ್ಥಾನ ಸರ್ಕಾರ ‘ಸಾರ್ಥಕ ನಾಮ ಅಭಿಯಾನ’ವನ್ನು ಆರಂಭಿಸಿದೆ. ವಿಚಿತ್ರವಾದ ಮತ್ತು ಹಳೆಯ ಹೆಸರುಗಳು ಬಾಲ್ಯದಲ್ಲಿ ಏನೂ ಪರಿಣಾಮ ಬೀರದಿದ್ದರೂ ಮಕ್ಕಳು ದೊಡ್ಡವರಾದ ಮೇಲೆ ಅವರಲ್ಲಿ ಕೀಳರಿಮೆ ಮೂಡಿಸುತ್ತದೆ ಮತ್ತು ವ್ಯಕ್ತಿತ್ವ ವಿಕಸನಕ್ಕೆ ತೊಂದರೆಯಾಗುತ್ತದೆ. ಹೀಗಾಗಿ ಅರ್ಥಪೂರ್ಣವಾದ ಹೆಸರಿಡಬೇಕು ಎಂಬುದು ಸರ್ಕಾರ ಆಶಯ.
ಇದಕ್ಕಾಗಿ 1,409 ಹುಡುಗರ ಮತ್ತು 1,541 ಹೆಣ್ಣುಮಕ್ಕಳ ಸೇರಿ ಒಟ್ಟು 3,000 ಸುಂದರವಾದ ಹೆಸರುಗಳನ್ನು ಪಟ್ಟಿ ಮಾಡಿದೆ. ವಿಚಿತ್ರವಾದ ಹೆಸರುಳ್ಳ ಮಕ್ಕಳ ಪಾಲಕರ ಬಳಿ ಚರ್ಚೆ ನಡೆಸಿ, ಅವರ ಅನುಮತಿ ಪಡೆದು ಮಕ್ಕಳಿಗೆ ಹೊಸ ಹೆಸರಿಡಲಾಗುತ್ತದೆ. ಹೀಗಾಗಿ ಬಬ್ಲು, ಶೇರು, ಶೈತಾನ್, ಕಾಳು ಮತ್ತು ಟಿಂಕು ಎಂಬೆಲ್ಲ ಹೆಸರಿಟ್ಟುಕೊಂಡಿರುವ ಮಕ್ಕಳಿಗೆ ಇನ್ನು ಹೊಸ ಹೆಸರಿನ ಭಾಗ್ಯ ಸಿಗಲಿದೆ. ಹೆಣ್ಣುಮಕ್ಕಳೂ ಹಳೆಯ ಹೆಸರಿನ ಬದಲು ವೈಷ್ಣವಿ, ಅನ್ನಪೂರ್ಣಾ, ಆರಾಧ್ಯಾ ಇತ್ಯಾದಿ ನಾಮ ಪಡೆಯಲಿದ್ದಾರೆ.
10:42 PM (IST) Apr 16
ಲೆನ್ಸ್ಕಾರ್ಟ್ ತನ್ನ ಕಚೇರಿ ಡ್ರೆಸ್ಕೋಡ್ನಲ್ಲಿ ಬಿಂದಿ, ತಿಲಕದಂತಹ ಹಿಂದೂ ಸಂಪ್ರದಾಯದ ಕುರುಹುಗಳನ್ನು ನಿಷೇಧಿಸಿ, ಹಿಜಾಬ್ಗೆ ಅನುಮತಿ ನೀಡಿದೆ ಎಂಬ ಆರೋಪದಿಂದ ವಿವಾದಕ್ಕೆ ಸಿಲುಕಿದೆ. ಈ ಬಗ್ಗೆ ಸಿಇಒ ಪಿಯೂಷ್ ಬನ್ಸಾಲ್ ಸ್ಪಷ್ಟನೆ ನೀಡಿದ್ದಾರೆ.
10:17 PM (IST) Apr 16
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಧ್ಯಸ್ಥಿಕೆಯಲ್ಲಿ, ದಶಕಗಳಿಂದ ಸಂಘರ್ಷದಲ್ಲಿರುವ ಇಸ್ರೇಲ್ ಮತ್ತು ಲೆಬನಾನ್ 10 ದಿನಗಳ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ. 34 ವರ್ಷಗಳ ಈ ಎರಡೂ ದೇಶಗಳು ಮಾತುಕತೆಯ ಟೇಬಲ್ಗೆ ಬಂದಿದ್ದವು.
09:28 PM (IST) Apr 16
ನಟಿ ಮೀನಾ ತಮ್ಮ ಸಿನಿ ಪಯಣದಲ್ಲಿ ಎದುರಾದ ಕೆಲವು ಸ್ವಾರಸ್ಯಕರ ಅನುಭವಗಳನ್ನು ಹಂಚಿಕೊಂಡಿದ್ದಾರೆ. ನಟಿ ರೋಜಾ ಜೊತೆಗಿನ ಪೈಪೋಟಿ, ಸೌಂದರ್ಯ ಜೊತೆಗಿನ ಸ್ನೇಹ ಮತ್ತು ಗ್ಲಾಮರ್ ಪಾತ್ರಗಳಿಗಾಗಿ ತಾವು ಪಟ್ಟ ಪಾಡಿನ ಬಗ್ಗೆ ಅವರು ಹೇಳಿದ ಮಾತುಗಳು ಈಗ ವೈರಲ್ ಆಗುತ್ತಿವೆ.
09:26 PM (IST) Apr 16
ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ವಿಧೇಯಕದ ಚರ್ಚೆಯ ವೇಳೆ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ಗೃಹ ಸಚಿವ ಅಮಿತ್ ಶಾ ಅವರ ರಾಜಕೀಯ ಚತುರತೆಯನ್ನು 'ಚಾಣಕ್ಯನ ಕುಟಿಲತೆ'ಗೆ ಹೋಲಿಸಿ ವ್ಯಂಗ್ಯವಾಡಿದರು.
08:59 PM (IST) Apr 16
ಪಂಜಾಬ್ನ ಫರೀದ್ಕೋಟ್ನಲ್ಲಿ, ಎಎಸ್ಐ ಸರಬ್ಜಿತ್ ಕೌರ್ ಎಂಬುವವರು ತಮ್ಮ ಮೊಮ್ಮಗಳನ್ನು ಬಿಸಿಲಿನಲ್ಲಿ ಕಟ್ಟಿಹಾಕಿದ ಅಮಾನವೀಯ ಘಟನೆ ನಡೆದಿದೆ. ಈ ವಿಡಿಯೋ ವೈರಲ್ ಆದ ನಂತರ, ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
08:27 PM (IST) Apr 16
08:14 PM (IST) Apr 16
ಖ್ಯಾತ ನಟಿ ತಮ್ಮ ವೃತ್ತಿಜೀವನದಲ್ಲಿ ಮೈದುನನ ಜೊತೆ 14 ಸಿನಿಮಾಗಳಲ್ಲಿ ನಟಿಸಿದ್ದಾರೆ. ತೆರೆಯ ಮೇಲೆ ಸೂಪರ್ ಹಿಟ್ ಜೋಡಿಯಾಗಿದ್ದ ಇವರು, ನಿಜ ಜೀವನದಲ್ಲಿ ಅತ್ತಿಗೆ-ಮೈದುನ ಸಂಬಂಧ ಹೊಂದಿದ್ದರು. ಸದ್ಯ ಈ ನಟಿ ಇಬ್ಬರು ಮಕ್ಕಳು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
08:06 PM (IST) Apr 16
ಕೇರಳದ ಕೊಲ್ಲಂನಲ್ಲಿ, ಬ್ಲಾಕ್ ಬೆಲ್ಟ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ 11 ವರ್ಷದ ಬಾಲಕಿ ಕರಾಟೆ ತರಬೇತಿ ವೇಳೆ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ. ತೀವ್ರ ಹೊಟ್ಟೆನೋವು ಮತ್ತು ವಾಂತಿಯಿಂದ ಬಳಲಿದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.
07:54 PM (IST) Apr 16
ನಟ ರಣವೀರ್ ಸಿಂಗ್ ಅಪ್ಪಟ ಶಿವಭಕ್ತ. ಪಾತ್ರಕ್ಕಾಗಿ ತಮ್ಮದೇ ಆದ ಹೊಸ ಅಭ್ಯಾಸ, ಪದ್ಧತಿಗಳನ್ನು ರೂಢಿಸಿಕೊಳ್ಳುತ್ತಾರೆ. 'ಧುರಂಧರ್ 2' ಸಿನಿಮಾದಲ್ಲಿ ಹಮ್ಜಾ ಪಾತ್ರಕ್ಕೆ ತಯಾರಾಗುವಾಗ, ಪ್ರತಿದಿನ 'ಓಂ'ಕಾರ ಜಪಿಸುತ್ತಾ ದಿನ ಆರಂಭಿಸುತ್ತಿದ್ದರಂತೆ.
07:33 PM (IST) Apr 16
ಲಿಂಕ್ಡ್ಇನ್ ತನ್ನ 'ಗ್ರಾಡ್ಸ್ ಗೈಡ್ 2026' ವರದಿಯನ್ನು ಬಿಡುಗಡೆ ಮಾಡಿದ್ದು, ಇದು ಭಾರತದಲ್ಲಿ ಹೊಸ ಪದವೀಧರರಿಗೆ ವೇಗವಾಗಿ ಬೆಳೆಯುತ್ತಿರುವ ಉದ್ಯೋಗಗಳು, ವಲಯಗಳು ಮತ್ತು ಸ್ಥಳಗಳ ಬಗ್ಗೆ ಒಳನೋಟಗಳನ್ನು ನೀಡುತ್ತದೆ. ಈ ವರದಿಯ ಪ್ರಕಾರ, ಎಐ ಸ್ಪೆಷಲಿಸ್ಟ್, ಜನರೇಟಿವ್ ಎಐ ಇಂಜಿನಿಯರ್ ಮತ್ತು ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಹುದ್ದೆಗಳಿಗೆ ಹೆಚ್ಚಿನ ಬೇಡಿಕೆಯಿದೆ.
07:31 PM (IST) Apr 16
ನಟಿ ಹಾಗೂ ಸಂಸದೆ ಕಂಗನಾ ರನೌತ್, ಲೋಕ ಜನಶಕ್ತಿ ಪಕ್ಷದ ನಾಯಕ ಮತ್ತು ಸಂಸದ ಚಿರಾಗ್ ಪಾಸ್ವಾನ್ ಜೊತೆ ಪ್ರೀತಿಯಲ್ಲಿದ್ದಾರಾ? ಈ ಪ್ರಶ್ನೆಗೆ ಕಂಗನಾ ಈಗ ಉತ್ತರ ನೀಡಿದ್ದಾರೆ. ಇವರಿಬ್ಬರ ಸಂಬಂಧದ ಬಗ್ಗೆ ಹಬ್ಬಿದ್ದ ಊಹಾಪೋಹಗಳಿಗೆ..
07:11 PM (IST) Apr 16
ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮಾ ಅವರು ವಿಚಾರಣೆಯಿಂದ ಹಿಂದೆ ಸರಿಯಬೇಕೆಂಬ ಅರವಿಂದ್ ಕೇಜ್ರಿವಾಲ್ ಅವರ ಮನವಿಯನ್ನು ಸಿಬಿಐ ಬಲವಾಗಿ ವಿರೋಧಿಸಿದೆ. ಕೇಜ್ರಿವಾಲ್ ಅವರ ತರ್ಕವು ನ್ಯಾಯಾಂಗದ ಮೇಲೆ ಒತ್ತಡ ಹೇರುವ ಪ್ರಯತ್ನವಾಗಿದೆ ಎಂದು ಸಿಬಿಐ ವಾದಿಸಿದೆ.
06:43 PM (IST) Apr 16
ಪವರ್ ಸೋಪ್ಸ್ ಲಿಮಿಟೆಡ್ ಕಂಪನಿಯು ತಮ್ಮ ಫೋಟೋಗಳನ್ನು ಒಪ್ಪಂದದ ನಂತರವೂ ಅನಧಿಕೃತವಾಗಿ ಬಳಸಿದೆ ಎಂದು ಆರೋಪಿಸಿ ನಟಿ ತಮನ್ನಾ ಭಾಟಿಯಾ ಸಲ್ಲಿಸಿದ್ದ 1 ಕೋಟಿ ರೂ. ನಷ್ಟ ಪರಿಹಾರದ ಮೇಲ್ಮನವಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದೆ.
06:25 PM (IST) Apr 16
06:17 PM (IST) Apr 16
05:50 PM (IST) Apr 16
05:18 PM (IST) Apr 16
ಭಾರತೀಯ ಅರಣ್ಯ ಸೇವಾ ಅಧಿಕಾರಿಯೊಬ್ಬರು ಹಂಚಿಕೊಂಡ, ಜನಿಸಿ ಕೇವಲ ಒಂದು ದಿನವಾದ ಖಡ್ಗಮೃಗದ ಮರಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಅಪರೂಪದ ಚಿತ್ರವನ್ನು ತರಬೇತಿ ಪಡೆದ ಆನೆಯ ಮೇಲೆ ಕುಳಿತು ಸುರಕ್ಷಿತವಾಗಿ ತೆಗೆಯಲಾಗಿದೆ.
05:10 PM (IST) Apr 16
ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ (TCS) ಕಂಪನಿಯಲ್ಲಿ ನಡೆದಿದೆ ಎನ್ನಲಾದ ಕಾರ್ಪೊರೇಟ್ ಜಿಹಾದ್ ಪ್ರಕರಣದ ಪ್ರಮುಖ ಆರೋಪಿ, ಮಾನವ ಸಂಪನ್ಮೂಲ ಅಧಿಕಾರಿ ನಿದಾ ಖಾನ್ ತಲೆಮರೆಸಿಕೊಂಡಿದ್ದಾಳೆ. ಇದೀಗ ಈಕೆಯ ಕೈವಾಡ ದೆಹಲಿಯ ಕೆಂಪು ಕೋಟೆ ಸ್ಫೋಟ ಪ್ರಕರಣದಲ್ಲೂ ಇರಬಹುದೆಂಬ ಆತಂಕಕಾರಿ ವರದಿ ಬಂದಿದೆ. ಏನಿದು ಕೇಸ್?
05:07 PM (IST) Apr 16
05:02 PM (IST) Apr 16
ಟೊವಿನೋ ಥಾಮಸ್ ನಟನೆಯ, ಡಿಜೋ ಜೋಸ್ ಆಂಟನಿ ನಿರ್ದೇಶನದ 'ಪಲ್ಲಿಚಟ್ಟಂಬಿ' ಸಿನಿಮಾ ಥಿಯೇಟರ್ಗೆ ಬಂದಿದೆ. 1950-60ರ ದಶಕದ ವಲಸೆ ರೈತರ ಬದುಕಿನ ಕಥೆ ಹೇಳುವ ಪೀರಿಯಡ್ ಡ್ರಾಮಾ ಇದಾಗಿದೆ.
04:36 PM (IST) Apr 16
03:50 PM (IST) Apr 16
02:49 PM (IST) Apr 16
ಪೋಲೆಂಡ್ನ ವಾರ್ಸಾದಲ್ಲಿ, ಎಡ್ವರ್ಡ್ ವಾರ್ಚೋಕಿ ಎಂಬ ಮಾನವ ರೂಪದ ರೋಬೋಟ್ ನಗರಕ್ಕೆ ಬಂದ ಕಾಡು ಹಂದಿಗಳನ್ನು ಓಡಿಸುತ್ತಿರುವ ದೃಶ್ಯ ವೈರಲ್ ಆಗಿದೆ. ಈ ಘಟನೆಯು ಕೃಷಿ ಕ್ಷೇತ್ರದಲ್ಲಿ ಕಾಡು ಪ್ರಾಣಿಗಳ ಹಾವಳಿಯನ್ನು ತಡೆಯಲು ಹೊಸ ಭರವಸೆಯನ್ನು ಮೂಡಿಸಿದೆ.
01:45 PM (IST) Apr 16
ಮುಂಬೈ: ಐದು ಬಾರಿಯ ಚಾಂಪಿಯನ್ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವು ಇಂದು ತವರಿನಲ್ಲಿ ಬಲಿಷ್ಠ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಇಂದಿನ ಮ್ಯಾಚ್ ಮುಂಬೈ ಪಾಲಿಗೆ ಸಾಕಷ್ಟು ಮಹತ್ವದ್ದೆನಿಸಿದೆ. ಇಂದಿನ ಮ್ಯಾಚ್ ಮುಂಬೈ ಸೋತರೇ ಮುಂದೇನು ಎನ್ನುವುದನ್ನು ನೋಡೋಣ ಬನ್ನಿ.
12:58 PM (IST) Apr 16
ಮಧ್ಯಪ್ರದೇಶದ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕಿಯೊಬ್ಬರು ವಿದ್ಯಾರ್ಥಿಯ ಕೈಯಲ್ಲಿ ಗಾಳಿ ಹಾಕಿಸಿಕೊಳ್ಳುತ್ತಿರುವ ವೀಡಿಯೋ ವೈರಲ್ ಆಗಿದೆ. ಈ ಘಟನೆಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಶಿಕ್ಷಕಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
11:51 AM (IST) Apr 16
ಇಷ್ಟೆಲ್ಲಾ ಬೇಸರದ ನಡುವೆಯೂ ಮೃಣಾಲ್ ವೃತ್ತಿಪರತೆಯನ್ನು ಮೆರೆದಿದ್ದಾರೆ. ಚಿತ್ರತಂಡದೊಂದಿಗೆ ವೈಯಕ್ತಿಕವಾಗಿ ಯಾವುದೇ ದ್ವೇಷವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಸದ್ಯ ಅವರು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
11:29 AM (IST) Apr 16
19ನೇ ಸೀಸನ್ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಅಗ್ರಸ್ಥಾನಕ್ಕೇರಲು ಮುಂಬೈ ಇಂಡಿಯನ್ಸ್ ತಂಡವು ಹರಾಜಿನಲ್ಲಿ ಮಾಡಿದ ನಾಲ್ಕು ಪ್ರಮುಖ ತಪ್ಪುಗಳೇ ಕಾರಣವಾಗಿವೆ. ಟಿಮ್ ಡೇವಿಡ್, ರೊಮ್ಯಾರಿಯೋ ಶೆಫರ್ಡ್ರಂತಹ ಆಟಗಾರರನ್ನು ಕೈಬಿಟ್ಟು, ದುಬಾರಿ ಮತ್ತು ವಿಫಲ ಬೌಲರ್ಗಳನ್ನು ಖರೀದಿಸಿದ ಮುಂಬೈನ ಎಡವಟ್ಟುಗಳು ಆರ್ಸಿಬಿ ತಂಡವನ್ನು ಬಲಿಷ್ಠಗೊಳಿಸಿವೆ.
10:02 AM (IST) Apr 16
09:34 AM (IST) Apr 16
07:45 AM (IST) Apr 16
ಕೇಂದ್ರ ಸರ್ಕಾರವು ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡುವ 'ನಾರಿ ಶಕ್ತಿ ವಂದನ ಅಧಿನಿಯಮ' ಹಾಗೂ ಲೋಕಸಭಾ ಕ್ಷೇತ್ರಗಳನ್ನು 850ಕ್ಕೆ ಹೆಚ್ಚಿಸುವ ಮಸೂದೆಯನ್ನು ಮಂಡಿಸಲಿದೆ. ಆದರೆ, ಸರ್ಕಾರದ ಈ ನಡೆಯು ರಾಜಕೀಯ ಪ್ರೇರಿತವಾಗಿದೆಎಂದು ವಿಪಕ್ಷಗಳು ಪ್ರತಿಭಟನೆ.