Published : Jul 15, 2025, 06:38 AM ISTUpdated : Jul 15, 2025, 10:48 PM IST

India latest news live: ಮಾಸ್ಕೋ ಮೇಲೆ ದಾಳಿ ಮಾಡ್ತೀರಾ? ರಷ್ಯಾ ರಾಜಧಾನಿ ಮೇಲೆ ಕ್ಷಿಪಣಿ ಹಾರಿಸುವಂತೆ ಝೆಲೆನ್ಸ್ಕಿಗೆ ತಿಳಿಸಿದ ಟ್ರಂಪ್‌ - ವರದಿ

ಸಾರಾಂಶ

ಪ್ರಸ್ತುತ ಬಿಹಾರದಲ್ಲಿ ನಡೆಯುತ್ತಿರುವ ಮತದಾರ ಪಟ್ಟಿ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ವೇಳೆ ಈಗಾಗಲೇ 35 ಲಕ್ಷ ಅನರ್ಹ ಮತದಾರರನ್ನು ಗುರುತಿಸಲಾಗಿದ್ದು, ಆ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ದಾಖಲೆ ಸಲ್ಲಿಕೆಗೆ ಜು. 25ರ ತನಕ ಸಮಯ ಇರುವ ಕಾರಣ, ಈ ಸಂಖ್ಯೆ ಇನ್ನೂ ಹೆಚ್ಚಲಿದೆ. ಚುನಾವಣಾ ಆಯೋಗ ನೀಡಿರುವ ಮಾಹಿತಿಯ ಪ್ರಕಾರ, ಈ ವರೆಗೆ ಒಟ್ಟು 6.6 ಕೋಟಿ(ರಾಜ್ಯದ ಒಟ್ಟು ಮತದಾರರಲ್ಲಿ ಶೇ.88.18ರಷ್ಟು) ಮಂದಿ ದಾಖಲೆಗಳನ್ನು ಸಲ್ಲಿಸಿದ್ದಾರೆ. ಇವರಲ್ಲಿ ಶೇ.1.59ರಷ್ಟು (12.5 ಲಕ್ಷ) ಜನ ಮೃತಪಟ್ಟಿದ್ದಾರೆ. ಶೇ.2.2ರಷ್ಟು(17.5 ಲಕ್ಷ) ಜನ ರಾಜ್ಯ ಬಿಟ್ಟಿದ್ದಾರೆ. ಇನ್ನು ಶೇ.0.73ರಷ್ಟು (5.5 ಲಕ್ಷ) ಮಂದಿ ಎರಡು ಬಾರಿ ನೋಂದಾಯಿಸಿಕೊಂಡಿದ್ದರು. ಈ ಎಲ್ಲರನ್ನೂ ಸೇರಿ 35 ಲಕ್ಷ ಜನರನ್ನು ಮತಪಟ್ಟಿಯಿಂದ ಕೈಬಿಡಲಾಗಿದೆ. ಇದು ಮುಂಬರುವ ಚುನಾವಣೆಗಳ ಮೇಲೆಯೂ ಪ್ರಭಾವ ಬೀರುವ ನಿರೀಕ್ಷೆಯಿದೆ.

Volodymyr Zelenskyy and Donald Trump

10:48 PM (IST) Jul 15

ಮಾಸ್ಕೋ ಮೇಲೆ ದಾಳಿ ಮಾಡ್ತೀರಾ? ರಷ್ಯಾ ರಾಜಧಾನಿ ಮೇಲೆ ಕ್ಷಿಪಣಿ ಹಾರಿಸುವಂತೆ ಝೆಲೆನ್ಸ್ಕಿಗೆ ತಿಳಿಸಿದ ಟ್ರಂಪ್‌ - ವರದಿ

ಅಮೆರಿಕ ಪೂರೈಸುವ ದೀರ್ಘ-ಶ್ರೇಣಿಯ ಕ್ಷಿಪಣಿಗಳಿಂದ ಮಾಸ್ಕೋ ಮೇಲೆ ದಾಳಿ ಮಾಡಬಹುದೇ ಎಂದು ಡೊನಾಲ್ಡ್ ಟ್ರಂಪ್ ಉಕ್ರೇನ್‌ ಅಧ್ಯಕ್ಷ ಝೆಲೆನ್ಸ್ಕಿ ಅವರನ್ನು ಕೇಳಿದ್ದಾರೆ. ಜುಲೈ 4 ರಂದು ಟ್ರಂಪ್ ರಷ್ಯಾದ ಅಧ್ಯಕ್ಷ ಪುಟಿನ್ ಅವರೊಂದಿಗೆ ಮಾತನಾಡಿದ ಒಂದು ದಿನದ ನಂತರ, ಈ ಪ್ರಶ್ನೆ ಕೇಳಿದ್ದಾರೆ ಎನ್ನಲಾಗಿದೆ.

 

Read Full Story

10:13 PM (IST) Jul 15

ಹೆಂಡ್ತಿಗೆ ಕರೆ ಮಾಡಿ ಆಕ್ಸಿಡೆಂಟ್‌ ಆಗಿದೆ ಎಂದಿದ್ದ ICICI Lombard ಮ್ಯಾನೇಜರ್ ಶವ ಬಾವಿಯಲ್ಲಿ ಪತ್ತೆ

ನಿಗೂಢ ಘಟನೆಯೊಂದರಲ್ಲಿ ಐಸಿಐಸಿಐ ಲೊಂಬಾರ್ಡ್ ಮ್ಯಾನೇಜರ್ ಶವ ಬಾವಿಯಲ್ಲಿ ಪತ್ತೆಯಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇನ್ಶ್ಯುರೆನ್ಸ್ ಕಂಪನಿ ಐಸಿಐಸಿಐ ಲೊಂಬಾರ್ಡ್‌ನ ಬ್ರಾಂಚ್ ಮ್ಯಾನೇಜರ್ ಅಭಿಷೇಕ್ ವರುಣ್ ಎಂಬುವವರು ಭಾನುವಾರ ರಾತ್ರಿಯಿಂದ ನಿಗೂಢವಾಗಿ ನಾಪತ್ತೆಯಾಗಿದ್ದರು.

Read Full Story

08:17 PM (IST) Jul 15

ಮುಖೇಶ್‌ ಅಂಬಾನಿ ಬೀಗರಾದ ದಿಲೀಪ್‌ ಪಿರಾಮಲ್‌ ತೆಕ್ಕೆಯಿಂದ ಜಾರಿದ ವಿಐಪಿ ಇಂಡಸ್ಟ್ರೀಸ್‌!

ಖಾಸಗಿ ಷೇರು ಹೂಡಿಕೆದಾರರು ವಿಐಪಿ ಇಂಡಸ್ಟ್ರೀಸ್‌ನಲ್ಲಿ ದಿಲೀಪ್ ಪಿರಾಮಲ್ ಅವರ ಪಾಲನ್ನು ಸ್ವಾಧೀನಪಡಿಸಿಕೊಳ್ಳಲಿದ್ದಾರೆ. ಮುಖೇಶ್ ಅಂಬಾನಿ ಬೀಗರಾದ ಅಜಯ್ ಪಿರಾಮಲ್ ಅವರ ಸಹೋದರ ದಿಲೀಪ್ ಪಿರಾಮಲ್ ಅವರಿಂದ ಈ ಪಾಲನ್ನು ಖರೀದಿಸಲಾಗುತ್ತಿದೆ.

Read Full Story

07:27 PM (IST) Jul 15

2500 ಕೋಟಿಗೆ ಮಾರಾಟವಾಗ್ತಿದೆ ಪ್ರಸಿದ್ಧ ಬೇಕರಿ; ಸಾಲ ಪಡೆದು ಅಕ್ಕ-ತಂಗಿ ಆರಂಭಿಸಿದ್ದ ಕೇಕ್ ಅಂಗಡಿ

ಜನಪ್ರಿಯ ಬೇಕರಿಯನ್ನು 2,410 ಕೋಟಿ ರೂ.ಗಳಿಗೆ ಖರೀದಿಸಿದೆ. ಸ್ಥಾಪಕರ ಕುಟುಂಬವು ಶೇ.10ರಷ್ಟು ಪಾಲುದಾರಿಕೆಯನ್ನು ಉಳಿಸಿಕೊಂಡಿದೆ. ಈ ಒಪ್ಪಂದವು ಆಹಾರ ಉದ್ಯಮದಲ್ಲಿ ಚೇತರಿಕೆಯ ಸಂಕೇತವಾಗಿದೆ.

Read Full Story

07:16 PM (IST) Jul 15

ಭಾರತದ ಚಹಾಕ್ಕೆ ಬೇಡಿಕೆ ಇರುವ ಟಾಪ್‌ 5 ರಾಷ್ಟ್ರಗಳು, 64,756 ಕೋಟಿ ಆದಾಯ!

ಭಾರತವು FY25 ರಲ್ಲಿ $776 ಮಿಲಿಯನ್ ಚಹಾ ರಫ್ತು ಮಾಡಿದೆ. ಯುಎಇ, ಯುಎಸ್ ಮತ್ತು ಯುಕೆಗಿಂತ ಮುಂದೆ, ಭಾರತೀಯ ಚಹಾ ಆಮದುಗಳಲ್ಲಿ ಅಗ್ರಸ್ಥಾನದಲ್ಲಿದೆ. ಇದು ಮಧ್ಯಪ್ರಾಚ್ಯದಲ್ಲಿ ಭಾರತೀಯ ಚಹಾದ ಬೇಡಿಕೆ ಹೆಚ್ಚುತ್ತಿರುವುದನ್ನು ಸೂಚಿಸುತ್ತದೆ.
Read Full Story

06:18 PM (IST) Jul 15

ಡಿಮಾರ್ಟ್‌ನಲ್ಲಿ ಸರ್ಪ್ರೈಸ್ ಆಫರ್; ಹಲವು ರೀತಿಯ ಆಫರ್, ಗೃಹಿಣಿಯರು ಫುಲ್ ಖುಷ್!

ಡಿಮಾರ್ಟ್ ತನ್ನ ಗ್ರಾಹಕರಿಗೆ, ವಿಶೇಷವಾಗಿ ಗೃಹಿಣಿಯರಿಗೆ ಸರ್ಪ್ರೈಸ್ ಆಫರ್‌ಗಳನ್ನು ನೀಡುತ್ತಿದೆ. ಕಿರಾಣಿ, ಬಟ್ಟೆ ಸೇರಿದಂತೆ ಹಲವು ವಸ್ತುಗಳ ಮೇಲೆ ರಿಯಾಯಿತಿ ಮತ್ತು ಉಚಿತ ಕೊಡುಗೆಗಳನ್ನು ಒಳಗೊಂಡ ಈ ಆಫರ್‌ಗಳು ವಾರಾಂತ್ಯದಲ್ಲಿ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸುತ್ತಿವೆ.
Read Full Story

04:24 PM (IST) Jul 15

ವೇಗವಾಗಿ ಚಲಿಸುವ ದೋಣಿ ಮೇಲೆ ಡಾನ್ಸ್ - ವರ್ಲ್ಡ್‌ ಫೇಮಸ್‌ ಆದ ಪುಟ್ಟ ಹಳ್ಳಿಯ ಬಾಲಕ

ಇಂಡೋನೇಷ್ಯಾದ ರಯ್ಯನ್ ಅರ್ಕನ್ ಧಿಕಾ ಎಂಬ ಬಾಲಕ ದೋಣಿ ಸ್ಪರ್ಧೆಯ ವೇಳೆ ಬೋಟ್‌ನ ತುದಿಯಲ್ಲಿ ಮಾಡಿದ ಬ್ಯಾಲೆನ್ಸ್‌ ಡಾನ್ಸ್‌ ವೀಡಿಯೋ ಈಗ ವೈರಲ್ ಆಗಿದೆ

Read Full Story

04:17 PM (IST) Jul 15

3 ಗೋರಿ ವಿವಾದ; ಮಹಾರಾಣಿ ಕಾಲೇಜು ಆವರಣದಲ್ಲಿ 1 ಗಂಟೆ ಹನುಮಾನ್ ಚಾಲೀಸ ಪಠಣ

ಮಹಾರಾಣಿ ಕಾಲೇಜಿನ ಆವರಣದಲ್ಲಿರುವ ಮೂರು ಸಮಾಧಿಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿ ಧರೋಹರ್ ಬಚಾವೊ ಸಮಿತಿ ಹನುಮಾನ್ ಚಾಲೀಸ ಪಠಣ ಮಾಡಿದೆ. 

Read Full Story

03:28 PM (IST) Jul 15

ರಷ್ಯಾದಿಂದ ವೈಟ್ ಗೋಲ್ಡ್ ಪಡೆಯುವ ಮಾರ್ಗದಲ್ಲಿ ಭಾರತ; ಇನ್ಮುಂದೆ ಚೀನಾದ ಅವಶ್ಯಕತೆ ಇಲ್ಲ!

ಈ ಒಪ್ಪಂದ ಭಾರತದ ಕ್ಲೀನ್ ಎನರ್ಜಿ ಗುರಿ ಸಾಧನೆಗೆ ಹಾಗೂ ಚೀನಾದ ಮೇಲಿನ ಅವಲಂಬನೆ ಕಡಿಮೆ ಮಾಡಲು ಸಹಾಯಕವಾಗಲಿದೆ. ಇತ್ತೀಚೆಗೆ ವೈಟ್ ಗೋಲ್ಡ್‌ಗೆ ಬೇಡಿಕೆ ಹೆಚ್ಚಾಗಿದೆ.

Read Full Story

03:09 PM (IST) Jul 15

ಡ್ರ್ಯಾಗನ್ ನೌಕೆಯಲ್ಲಿ ಬಂದಿಳಿದ ಶುಭಾಂಶು ಸೇರಿದಂತೆ ನಾಲ್ವರು ಗಗನಯಾತ್ರಿಗಳು

ಕ್ಯಾಲಿಫೋರ್ನಿಯಾ ಸಮೀಪ ಪೆಸಿಫಿಕ್‌ ಸಮುದ್ರದಲ್ಲಿ ನೌಕೆ ಲ್ಯಾಂಡ್‌ ಆಗಿದೆ. ಸ್ಪೇಸ್‌ಎಕ್ಸ್‌ ತಂಡ ತಕ್ಷಣ ದೌಡಾಯಿಸಿ ಗಗನಯಾತ್ರಿಗಳನ್ನು ಹೊರತೆಗೆಯಲಾಗಿದೆ.

Read Full Story

02:32 PM (IST) Jul 15

ಕ್ರಿಕೆಟ್ ಬಾಲ್ ಹುಡುಕಿ ಹೋದ ಯುವಕನಿಗೆ ಪಾಳು ಮನೆಯಲ್ಲಿ ಸಿಕ್ಕಿದ್ದೇನು?

ಇಲ್ಲೊಂದು ಕಡೆ ಕ್ರಿಕೆಟ್ ಆಡುವ ವೇಳೆ ಯುವಕರು ಹೊಡೆದ ಚೆಂಡು ಪಾಳು ಬಿದ್ದ ಮನೆಯೊಂದಕ್ಕೆ ಹೋಗಿ ಬಿದ್ದಿದೆ. ಇದನ್ನು ಅರಸುತ್ತಾ ಯುವಕರು ಮನೆಯೊಳಗೆ ಹೋಗಿದ್ದು, ಅಲ್ಲಿ ಕಂಡ ಸ್ಥಿತಿ ನೋಡಿ ಯುವಕರು ಆಘಾತಗೊಂಡಿದ್ದಾರೆ. ಹಾಗಾದರೆ ಅವರಿಗೆ ಅಲ್ಲಿ ಸಿಕ್ಕಿದ್ದೇನು?

Read Full Story

02:12 PM (IST) Jul 15

ನಿರೀಕ್ಷೆಗಿಂತಲೂ ಉತ್ತಮ ಸಾಧನೆ; ವ್ಯಾಪಾರ ಸಂಘರ್ಷದ ನಡುವೆಯೂ GDP ವೇಗ ಹೆಚ್ಚಿಸಿಕೊಂಡ ಚೀನಾ

ಟ್ರಂಪ್ ಜೊತೆಗಿನ ವ್ಯಾಪಾರ ಸಂಘರ್ಷದ ನಡುವೆಯೂ ಚೀನಾ ಎರಡನೇ ತ್ರೈಮಾಸಿಕದಲ್ಲಿ ಶೇ.5.2ರಷ್ಟು ಜಿಡಿಪಿ ಬೆಳವಣಿಗೆ ದಾಖಲಿಸಿದೆ. ಅರ್ಥಶಾಸ್ತ್ರಜ್ಞರ ಲೆಕ್ಕಾಚಾರಗಳನ್ನು ಸುಳ್ಳಾಗಿಸಿದೆ.

Read Full Story

01:03 PM (IST) Jul 15

ಗುಲಾಬಿ ಹೂವು ಮಾರುವ ಬಾಲಕಿ ಕೆನ್ನೆಗೆ ಹೊಡೆದು ಕುಚೋದ್ಯ ಮರೆದ ಆಟೋ ಚಾಲಕ!

ರಸ್ತೆ ಬದಿಯಲ್ಲಿ ಹೂವು ಮಾರುತ್ತಿದ್ದ ಬಾಲಕಿಯ ಕೆನ್ನೆಗೆ ಆಟೋ ಚಾಲಕನೊಬ್ಬ ಹೊಡೆದು ಹೋಗಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆಟೋ ಚಾಲಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಆಗ್ರಹಿಸಿದ್ದಾರೆ. ಬಾಲಕಿಗೆ ನೆರವು ನೀಡಲು ಹೋದ ಬೈಕ್ ಸವಾರನಿಂದಲೂ ಆಕೆ ಸಹಾಯ ಸ್ವೀಕರಿಸಲಿಲ್ಲ.

Read Full Story

12:31 PM (IST) Jul 15

ಬೈಕ್‌ಗೆ ಉದ್ದೇಶಪೂರ್ವಕವಾಗಿ ತಾಗಿಸಿ ಸರಿಯಾಗಿ ಇಕ್ಕಿಸಿಕೊಂಡ ಕಾರು ಚಾಲಕ

ಹರ್ಯಾಣದಲ್ಲಿ ಬ್ರೀಜಾ ಕಾರು ಚಾಲಕ ಮತ್ತು ಬೈಕ್ ಸವಾರನ ನಡುವೆ ನಡೆದ ಜಗಳದ ವೀಡಿಯೊ ವೈರಲ್ ಆಗಿದೆ. ಕಾರು ಚಾಲಕ ಬೈಕ್‌ಗೆ ಕಾರನ್ನು ತಾಗಿಸಿ ಬೀಳಿಸಿದ್ದಕ್ಕೆ ಬೈಕ್ ಸವಾರ ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ.

Read Full Story

11:23 AM (IST) Jul 15

ಅಸಹ್ಯ ವೀಡಿಯೋ ಮಾಡಿ ಅಸಭ್ಯ ವರ್ತನೆ - ಇಬ್ಬರು ಯುವತಿಯರ ವಿರುದ್ಧ ಕೇಸ್

ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗಲು ಹುಡುಗಿಯರಿಬ್ಬರು ಅಶ್ಲೀಲ ಹಾಗೂ ನಿಂದನಾತ್ಮಕ ರೀಲ್ಸ್ ಹಂಚಿಕೊಂಡಿದ್ದು, ಈ ವೀಡಿಯೋ ಭಾರಿ ವೈರಲ್ ಆದ ನಂತರ ನೋಡುಗರು ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಇಬ್ಬರು ಹುಡುಗಿಯರ ವಿರುದ್ಧ ಕೇಸ್ ದಾಖಲಾಗಿದೆ.

Read Full Story

08:46 AM (IST) Jul 15

ನೆರೆಮನೆಯವರಿಂದ ಜೀವ ಬೆದರಿಕೆ - ಹೆಲ್ಮೆಟ್‌ಗೆ ಸಿಸಿಟಿವಿ ಅಳವಡಿಸಿದ ಭೂಪ

ನೆರೆಮನೆಯವರಿಂದ ಜೀವ ಭಯ ಎದುರಿಸುತ್ತಿರುವ ವ್ಯಕ್ತಿಯೊಬ್ಬ ತನ್ನ ಹೆಲ್ಮೆಟ್‌ಗೆ ಸಿಸಿಟಿವಿ ಅಳವಡಿಸಿಕೊಂಡಿರುವ ಅಚ್ಚರಿಯ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದ್ದು, ಈ ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Read Full Story

07:16 AM (IST) Jul 15

ಗಂಡನ ಕೊಲೆ ಮಾಡಿ ಮನೆಯೊಳಗೆ ಹೂತುಹಾಕಿ ಕೇರಳಕ್ಕೆ ಕೆಲಸಕ್ಕೆ ಹೋಗಿದ್ದಾರೆ ಎಂದ ಪತ್ನಿ ಅಂದರ್

ಗುವಾಹಟಿಯಲ್ಲಿ ಪತ್ನಿಯೊಬ್ಬಳು ಗಂಡನನ್ನು ಕೊಲೆ ಮಾಡಿ ಮನೆಯಲ್ಲೇ ಹೂತಿಟ್ಟ ಘಟನೆ ಬೆಳಕಿಗೆ ಬಂದಿದೆ. 

Read Full Story

More Trending News