LIVE NOW
Published : Mar 01, 2026, 06:29 AM ISTUpdated : Mar 01, 2026, 11:05 PM IST

India Latest News Live: ಪಾಕಿಸ್ತಾನ, ವೆನಿಜುವೆಲಾ ಬಳಿಕ ಚೀನಾ ಶಸ್ತ್ರಾಸ್ತ್ರ ನಂಬಿ ಕೆಟ್ಟ ಇರಾನ್

ಸಾರಾಂಶ

ದುಬೈ: ಇರಾನ್‌ ಮೇಲೆ ಅಮೆರಿಕ ದಾಳಿ ಹಿನ್ನೆಲೆ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ನಿಂದ ತವರಿಗೆ ಮರಳುವ ಆಟಗಾರರಿಗೆ ಪರ್ಯಾಯ ವಿಮಾನ ಮಾರ್ಗಗಳನ್ನು ಯೋಜಿಸುವ ಬಗ್ಗೆ ನಿರ್ಧರಿಸಲಾಗುವುದು ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ತಿಳಿಸಿದೆ.

ಈ ಬಗ್ಗೆ ಐಸಿಸಿ ವಕ್ತಾರರು ಹೇಳಿಕೆ ಬಿಡುಗಡೆ ಮಾಡಿದ್ದು, ‘ಪ್ರತಿಯೊಬ್ಬರ ಸುರಕ್ಷತೆ ನಮ್ಮ ಆದ್ಯತೆ. ಈಗಾಗಲೇ ನಮ್ಮ ಪ್ರಯಾಣ, ಲಾಜಿಸ್ಟಿಕ್ಸ್ ಮತ್ತು ಭದ್ರತಾ ತಂಡಗಳನ್ನು ಸಜ್ಜುಗೊಳಿಸಿದ್ದೇವೆ. ಎಲ್ಲರೂ ಸುರಕ್ಷಿತವಾಗಿ ಮನೆಗೆ ಮರಳಬಹುದು ಎಂದು ಖಚಿತಪಡಿಸಿಕೊಳ್ಳಲು 24 ಗಂಟೆಯೂ ಕೆಲಸ ಮಾಡುತ್ತಿದ್ದೇವೆ’ ಎಂದಿದೆ. ಅಲ್ಲದೆ ಪಂದ್ಯ ವೀಕ್ಷಣೆಗಾಗಿ ಬೇರೆ ದೇಶಗಳಿಂದ ಪ್ರಯಾಣ ಬೆಳೆಸುವ ಅಭಿಮಾನಿಗಳು ಮುಂಜಾಗೃತಾ ಕ್ರಮಗಳನ್ನು ಅನುಸರಿಸುವಂತೆ ಮನವಿ ಮಾಡಿದೆ.

11:05 PM (IST) Mar 01

ಪಾಕಿಸ್ತಾನ, ವೆನಿಜುವೆಲಾ ಬಳಿಕ ಚೀನಾ ಶಸ್ತ್ರಾಸ್ತ್ರ ನಂಬಿ ಕೆಟ್ಟ ಇರಾನ್

ಆಪರೇಷನ್ ಸಿಂದೂರ್ ಸಮಯದಲ್ಲಿ ಭಾರತದ ಮೇಲೆ ಪ್ರತೀಕಾರಕ್ಕೆ ಪಾಕಿಸ್ತಾನ ಬಳಸಿದ ಚೀನಾ ಶಸ್ತ್ರಾಸ್ತ್ರಗಳು ವಿಫಲಗೊಂಡ ಬಗ್ಗೆ ಸಾಕಷ್ಟು ಸುದ್ದಿಯಾಗಿದ್ದವು. ಈಗ ಇರಾನ್‌ ಕೂಡ ಚೀನಾದ ಶಸ್ತ್ರಾಸ್ತ್ರ ನಂಬಿ ಇಸ್ರೇಲ್ ಅಮೆರಿಕ ವಿರುದ್ಧದ ಯುದ್ಧದಲ್ಲಿ ಹಾನಿ ಮಾಡಿಕೊಂಡಿದೆ ಎಂದು ವರದಿಯಾಗಿದೆ.

Read Full Story

11:04 PM (IST) Mar 01

ಅಮೆರಿಕ ವಿರುದ್ದ ಕೆರಳಿದ ಇರಾನ್, ಪ್ರತಿದಾಳಿಯಲ್ಲಿ ಯುಎಸ್ ಮೂವರು ಯೋಧರು ಹತ, ಹಲವರಿಗೆ ಗಾಯ

ಅಮೆರಿಕ ವಿರುದ್ದ ಕೆರಳಿದ ಇರಾನ್, ಪ್ರತಿದಾಳಿಯಲ್ಲಿ ಯುಎಸ್ ಮೂವರು ಯೋಧರು ಹತ, ಹಲವರಿಗೆ ಗಾಯ, ದಾಳಿ ಮಾಡುತ್ತಿರುವ ಅಮರಿಕ ಬಾಂಬರ್ 2 ಸೇರಿದಂತೆ ಹಲವು ಯುದ್ಧವಿಮಾನಗಳನ್ನೇ ಇರಾನ್ ಟಾರ್ಗೆಟ್ ಮಾಡಿದೆ.

Read Full Story

10:53 PM (IST) Mar 01

ಸ್ಯಾಮ್ಸನ್ ಪವರ್‌ಗೆ ವಿಂಡೀಸ್ ಉಡೀಸ್, ಸೆಮಿಫೈನಲ್ ಪ್ರವೇಶಿಸಿದ ಭಾರತಕ್ಕೆ ಇಂಗ್ಲೆಂಡ್ ಎದುರಾಳಿ

ಸ್ಯಾಮ್ಸನ್ ಪವರ್‌ಗೆ ವಿಂಡೀಸ್ ಉಡೀಸ್, ಸೆಮಿಫೈನಲ್ ಪ್ರವೇಶಿಸಿದ ಭಾರತಕ್ಕೆ ಇಂಗ್ಲೆಂಡ್ ಎದುರಾಳಿ, ಗೆಲ್ಲಬೇಕಾದ ಪಂದ್ಯದಲ್ಲಿ ಭಾರತ ಅದ್ಬುತ ಪ್ರದರ್ಶನ ಮೂಲಕ ಗೆಲುವು ಸಾಧಿಸಿದೆ. ಸೆಮೀಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಹೋರಾಟ.

 

Read Full Story

09:27 PM (IST) Mar 01

ಇಸ್ರೇಲ್ ನಾಯಕ ಖಮೇನಿ ಹತ್ಯೆಗೆ ರಷ್ಯಾ, ಚೀನಾ, ಉತ್ತರ ಕೊರಿಯಾದ ಪ್ರತಿಕ್ರಿಯೆ ಏನು?

ಇಸ್ರೇಲ್-ಅಮೆರಿಕಾ ಜಂಟಿ ದಾಳಿಯಲ್ಲಿ ಇರಾನ್‌ನ ಸರ್ವೋಚ್ಛ ನಾಯಕ ಆಯತೊಲ್ಲಾ ಅಲಿ ಖಮೇನಿ ಹತ್ಯೆಯಾಗಿದೆ. ಈ ಘಟನೆಗೆ ಚೀನಾ, ರಷ್ಯಾದಂತಹ ದೇಶಗಳು ತೀವ್ರ ಖಂಡನೆ ವ್ಯಕ್ತಪಡಿಸಿದರೆ, ಸೌದಿ ಅರೇಬಿಯಾ ಮತ್ತು ಪಶ್ಚಿಮದ ರಾಷ್ಟ್ರಗಳು ವಿಭಿನ್ನ ನಿಲುವುಗಳನ್ನು ಪ್ರಕಟಿಸಿವೆ.
Read Full Story

09:08 PM (IST) Mar 01

ಥಿಯೇಟರ್‌ಗೆ ಬಂದು ಸಿನಿಮಾ ನೋಡೋದು ಬಿಟ್ಟು ಉಳಿದಿದ್ದೆನ್ನೆಲ್ಲಾ ಮಾಡಿದ ಕಾರ್ನರ್ ಸೀಟ್ ಜೋಡಿ

ಚಿತ್ರಮಂದಿರದ ಕತ್ತಲಲ್ಲಿ ಎರಡು ಜೋಡಿಗಳು ನಡೆಸಿದ ರೊಮ್ಯಾನ್ಸ್, ಐಆರ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, 10 ಮಿಲಿಯನ್‌ಗೂ ಅಧಿಕ ವೀಕ್ಷಣೆ ಪಡೆದು ನೆಟ್ಟಿಗರಿಂದ ಚರ್ಚೆಗೆ ಕಾರಣವಾಗಿದೆ.
Read Full Story

08:54 PM (IST) Mar 01

ಗೆಲ್ಲಲೇಬೇಕಾದ ಪಂದ್ಯದಲ್ಲಿ ಭಾರತಕ್ಕೆ 196 ರನ್ ಟಾರ್ಗೆಟ್, ಕೋಲ್ಕತಾ ಚೇಸ್ ರೆಕಾರ್ಡ್ ಏನು?

ಗೆಲ್ಲಲೇಬೇಕಾದ ಪಂದ್ಯದಲ್ಲಿ ಭಾರತಕ್ಕೆ 196 ರನ್ ಟಾರ್ಗೆಟ್, ಕೋಲ್ಕತಾ ಚೇಸ್ ರೆಕಾರ್ಡ್ ಏನು? ಈ ಪಂದ್ಯ ಗೆದ್ದ ತಂಡ ಸೆಮಿಫೈನಲ್ ಎಂಟ್ರಿಕೊಡಲಿದೆ. ಈ ಟಾರ್ಗೆಟ್ ಭಾರತ ಚೇಸ್ ಮಾಡುತ್ತಾ?

 

Read Full Story

08:22 PM (IST) Mar 01

ಮದುವೆಯಂತೆ ವಿಶೇಷ ರೀತಿಯಲ್ಲಿ ವಿರೋಶ್ ರೆಸೆಪ್ಶನ್ ಆಯೋಜನೆ, ಅಭಿಮಾನಿಗಳಲ್ಲಿ ವಿಶೇಷ ಮನವಿ

ಮದುವೆಯಂತೆ ವಿಶೇಷ ರೀತಿಯಲ್ಲಿ ವಿರೋಶ್ ರೆಸೆಪ್ಶನ್ ಆಯೋಜನೆ, ಅಭಿಮಾನಿಗಳಲ್ಲಿ ವಿಶೇಷ ಮನವಿ, ಮಾರ್ಚ್ 4 ರಂದು ಹೈದರಾಬಾದ್‌ನಲ್ಲಿ ನಡೆಯಲಿದೆ. ವಿಜಯ್ ರಶ್ಮಿಕಾ ಜೋಡಿ ಅಭಿಮಾನಿಗಳಿಗೆ ಮಾಡಿದ ಮನವಿಯೇನು?

 

Read Full Story

07:54 PM (IST) Mar 01

ಖಮೇನಿ ಸಾವಿಗೆ ಇರಾನ್ ಪ್ರತೀಕಾರದ ಕಿಡಿ - ಇಸ್ರೇಲ್‌ನ ಬೀಟ್ ಶೆಮೇಶ್‌ ಮೇಲೆ ದಾಳಿಗೆ 8 ಬಲಿ

ಅಯತೊಲ್ಲಾ ಅಲಿ ಖಮೇನಿ ಹತ್ಯೆಯ ಪ್ರತೀಕಾರವಾಗಿ ಇರಾನ್, ಇಸ್ರೇಲ್‌ನ ಬೀಟ್ ಶೆಮೆಶ್ ಮೇಲೆ ದಾಳಿ ನಡೆಸಿದ್ದು, ಹಲವರು ಸಾವನ್ನಪ್ಪಿದ್ದಾರೆ. ಇರಾನ್ ವಿರುದ್ಧ ದಾಳಿ ಮುಂದುವರಿಸುವುದಾಗಿ ಇಸ್ರೇಲ್ ಪ್ರಧಾನಿ ನೆತನ್ಯಾಹು ಹೇಳಿದ್ದು, ವಿಶ್ವ ನಾಯಕರು ಶಾಂತಿಗಾಗಿ ಮನವಿ ಮಾಡಿದ್ದಾರೆ.
Read Full Story

07:42 PM (IST) Mar 01

ಕ್ಯೂ ನಿಲ್ಲುತ್ತಿದ್ದ ಬಿರಿಯಾನಿ ಶಾಪ್ ಫ್ರೀಜರ್‌ನಲ್ಲಿ ಯುವಕನ ಶವ ಪತ್ತೆ, ವೆಜ್ ಒಳಗಡೆ ನಾನ್‌ವೆಜ್?

ಕ್ಯೂ ನಿಲ್ಲುತ್ತಿದ್ದ ಬಿರಿಯಾನಿ ಶಾಪ್ ಫ್ರೀಜರ್‌ನಲ್ಲಿ ಯುವಕನ ಶವ ಪತ್ತೆ, ವೆಜ್ ಒಳಗಡೆ ನಾನ್‌ವೆಜ್? ಇಲ್ಲಿನ ಕಬಾಬ್ ಸವಿಯಲು ಹಲವರು ದೂರದೂರದಿಂದ ಆಗಮಿಸತ್ತಿದ್ದರು. ಆದರೆ ಈ ಮಾಹಿತಿ ಹೊರಬೀಳುತ್ತಿದ್ದಂತೆ ಹೊಟ್ಟೆಯಲ್ಲಿ ತಳಮಳ ಶುರುವಾಗಿದೆ.

Read Full Story

07:20 PM (IST) Mar 01

ಹೇರ್​ ಡೈ ಬಳಸ್ತಿದ್ದೀರಾ? ಹಾಗಿದ್ರೆ ಬೆಂಗಳೂರಿನ ಕ್ಯಾನ್ಸರ್​ ಸರ್ಜನ್​ ಮಾತು ಕೇಳಿ, ಮುಂದಿನ ಹೆಜ್ಜೆ ಇಡಿ

ಇಂದಿನ ದಿನಗಳಲ್ಲಿ ಅಕಾಲಿಕವಾಗಿ ಕೂದಲು ಬೆಳ್ಳಗಾಗುವುದು ಸಾಮಾನ್ಯವಾಗಿದ್ದು, ಹೇರ್ ಡೈ ಬಳಕೆ ಹೆಚ್ಚಾಗಿದೆ. ಆದರೆ, ಹೇರ್ ಡೈಗಳಲ್ಲಿರುವ ರಾಸಾಯನಿಕಗಳು ರಕ್ತ ಸೇರಿ ಮೂತ್ರಕೋಶದ ಕ್ಯಾನ್ಸರ್ ಸೇರಿದಂತೆ ಹಲವು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಕ್ಯಾನ್ಸರ್ ತಜ್ಞರು ಎಚ್ಚರಿಸಿದ್ದಾರೆ.
Read Full Story

06:58 PM (IST) Mar 01

ಡಾನ್ಸ್​ ಮಾಡಿ ಮಾಡಿ ಸೊಂಟ ಬಿದ್ದೋಗಿದೆ - ಮದುವೆ ಬೆನ್ನಲ್ಲೇ Rashmika Mandanna ವಿಡಿಯೋ ವೈರಲ್​!

'ಪುಷ್ಪಾ' ಚಿತ್ರದ 'ಸಾಮಿ ಸಾಮಿ' ಹಾಡು ದಾಖಲೆ ಬರೆದಿತ್ತು. ಆದರೆ, ಈ ಹಾಡಿಗೆ ಅದೆಷ್ಟು ಬಾರಿ ಕುಣಿದಿದ್ದೇನೆಂದರೆ ಸೊಂಟ ಬಿದ್ದು ಹೋಗಿದೆ, ಇನ್ನು ಮುಂದೆ ಕುಣಿಯಲಾರೆ ಎಂದು ರಶ್ಮಿಕಾ ಹಿಂದೆ ಹೇಳಿದ್ದರು. ಇದೀಗ ಅವರ ಮದುವೆ ಸುದ್ದಿಯ ಹಿನ್ನೆಲೆಯಲ್ಲಿ ಈ ಹಳೆಯ ಹೇಳಿಕೆ ಮತ್ತೆ ವೈರಲ್ ಆಗಿದೆ.
Read Full Story

06:50 PM (IST) Mar 01

ಸಿಕ್ಕ ಸಿಕ್ಕವರ ಮೇಲೆ ಇರಾನ್ ದಾಳಿ, 15 ಭಾರತೀಯರಿದ್ದ ತೈಲ ಹಡಗಿನ ಮೇಲೆ ಮಿಸೈಲ್ ಆ್ಯಟಾಕ್

ಸಿಕ್ಕ ಸಿಕ್ಕವರ ಮೇಲೆ ಇರಾನ್ ದಾಳಿ, 15 ಭಾರತೀಯರಿದ್ದ ತೈಲ ಹಡಗಿನ ಮೇಲೆ ಮಿಸೈಲ್ ಆ್ಯಟಾಕ್, ಅಲ್ ಖಮೇನಿ ಹತ್ಯೆಯಿಂದ ಇರಾನ್ ಕೆರಳಿ ಕೆಂಡವಾಗಿದೆ. ಆದರೆ ಅಮೆರಿಕ ಹಾಗೂ ಇಸ್ರೇಲ್ ಮೇಲೆ ತಿರುಗೇಟು ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಿಕ್ಕ ಸಿಕ್ಕರವರ ಮೇಲೆ ದಾಳಿ ಮಾಡುತ್ತಿದೆ.

Read Full Story

06:39 PM (IST) Mar 01

ಡಿವೋರ್ಸ್‌ ಆಗಿ 13 ವರ್ಷಗಳೇ ಕಳೆದರೂ ನಿಲ್ಲದ ಟ್ರೋಲ್ - ಕಾನೂನು ಕ್ರಮದ ಎಚ್ಚರಿಕೆ ನೀಡಿದ ಪವನ್ ಕಲ್ಯಾಣ್ ಮಾಜಿ ಪತ್ನಿ

ನಟ ಪವನ್ ಕಲ್ಯಾಣ್ ಅವರಿಂದ ವಿಚ್ಛೇದನ ಪಡೆದ 13 ವರ್ಷಗಳೇ  ಕಳೆದರೂ ನಿರಂತರ ಟ್ರೋಲಿಂಗ್ ಎದುರಿಸುತ್ತಿರುವ ನಟಿ ರೇಣು ದೇಸಾಯಿ, ಇದೀಗ ಕಿಡಿಗೇಡಿಗಳ ವಿರುದ್ಧ ಸಿಡಿದೆದ್ದಿದ್ದಾರೆ. ತಮ್ಮ ವೈಯಕ್ತಿಕ ಜೀವನವನ್ನು ಗುರಿಯಾಗಿಸಿ ಅವಾಚ್ಯವಾಗಿ ನಿಂದಿಸುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದ್ದಾರೆ.

Read Full Story

06:19 PM (IST) Mar 01

VIROSH - ಏನೇ ಕೇಳಿ, ಈ ವಿಡಿಯೋ ನೋಡಿದ್ಮೇಲೆ ನಿಮ್ಮ ಮೇಲಿರೋ ಸಿಟ್ಟು ಕರಗಿಹೋಯ್ತು ಎಂದ ನೆಟ್ಟಿಗರು!

ವಿಜಯ ದೇವರಕೊಂಡ ಜೊತೆಗಿನ ಮದುವೆಯ ನಂತರ ರಶ್ಮಿಕಾ ಮಂದಣ್ಣ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಮೈತುಂಬಾ ಸೀರೆ, ಮಲ್ಲಿಗೆ ಹೂವು ಹಾಗೂ ಮಂಗಳಸೂತ್ರ ಧರಿಸಿ ಸಾಂಪ್ರದಾಯಿಕವಾಗಿ ಕಾಣಿಸಿಕೊಂಡಿದ್ದು, ಅವರ ಈ ನಡೆ ಎಲ್ಲರ ಗಮನ ಸೆಳೆದಿದೆ.
Read Full Story

06:07 PM (IST) Mar 01

ದುಬೈಗೆ ಸ್ಥಳಾಂತರಗೊಂಡಿರುವ ನಟ ಅಜಿತ್ ದಾಳಿಗೂ ಕೆಲವೇ ಗಂಟೆ ಮುನ್ನ ಏರ್‌ಪೋರ್ಟ್‌ನಿಂದ ವಾಪಸ್

ದುಬೈಗೆ ಸ್ಥಳಾಂತರಗೊಂಡಿರುವ ನಟ ಅಜಿತ್ ದಾಳಿಗೂ ಕೆಲವೇ ಗಂಟೆ ಮುನ್ನ ಏರ್‌ಪೋರ್ಟ್‌ನಿಂದ ವಾಪಸ್, ಸದ್ಯ ನಟ ಅಜಿತ್ ದುಬೈನಲ್ಲೇ ಉಳಿದುಕೊಂಡಿದ್ದಾರೆ. ನಟ ಅಜಿತ್ ಹೇಗಿದ್ದಾರೆ? ಉಳಿದುಕೊಂಡಿರುವ ಸ್ಥಳ ಸುರಕ್ಷಿತವೇ?

 

Read Full Story

05:26 PM (IST) Mar 01

ಭಾರತ ವೆಸ್ಟ್ ಇಂಡೀಸ್ ಪಂದ್ಯದಲ್ಲಿ ಗೆಲ್ಲೋದು ಯಾರು? ಭವಿಷ್ಯ ಹೇಳಿದ ಖ್ಯಾತ ಜ್ಯೋತಿಷಿ ಲೋಬೋ

ಭಾರತ ವೆಸ್ಟ್ ಇಂಡೀಸ್ ಪಂದ್ಯದಲ್ಲಿ ಗೆಲ್ಲೋದು ಯಾರು? ಭವಿಷ್ಯ ಹೇಳಿದ ಖ್ಯಾತ ಜ್ಯೋತಿಷಿ ಲೋಬೋ, ಗೆದ್ದವರು ಸೆಮಿಫೈನಲ್ ಟಿಕೆಟ್ ಗಿಟ್ಟಿಸಿದರೆ, ಸೋತವರು ಟೂರ್ನಿಯಿಂದ ಔಟ್. ಹಾಗಾದರೆ ಜ್ಯೋತಿಷಿ ಹೇಳಿದ ಭವಿಷ್ಯವೇನು?

 

Read Full Story

05:15 PM (IST) Mar 01

ಭೂಮಿಯಿಂದ ದೂರ ಸರೀತಿರೋ ಚಂದ್ರ - ಇನ್ನಾಗಲಿದೆ ದಿನಕ್ಕೆ 25 ಗಂಟೆ- ನಾಸಾದಿಂದ ಅಚ್ಚರಿ ಮಾಹಿತಿ

ಚಂದ್ರನು ಪ್ರತಿ ವರ್ಷ ಭೂಮಿಯಿಂದ ನಿಧಾನವಾಗಿ ದೂರ ಸರಿಯುತ್ತಿದ್ದಾನೆ ಎಂದಿದೆ  ನಾಸಾ. ಚಂದ್ರನ ಹಿಂಜರಿತವು ಭೂಮಿಯ ತಿರುಗುವಿಕೆಯನ್ನು ನಿಧಾನಗೊಳಿಸುತ್ತಿದ್ದು, ಇದು ನಮ್ಮ ದಿನಗಳ ಅವಧಿಯನ್ನು ಕ್ರಮೇಣವಾಗಿ ಹೆಚ್ಚಿಸುತ್ತಿದೆ. ಭವಿಷ್ಯದಲ್ಲಿ ಒಂದು ದಿನ 25 ಗಂಟೆಗಳಾಗುವ ಸಾಧ್ಯತೆಯಿದೆ ಎಂದಿದ್ದಾರೆ.

Read Full Story

05:01 PM (IST) Mar 01

ಇರಾನ್ ಗುರಿ ಮರೆತಿದೆ - ದುಬೈ , ದೋಹಾ ಬಹ್ರೈನ್‌ನಲ್ಲಿ ಸ್ಫೋಟದ ಬಳಿಕ ಯುಎಇ ಇರಾನ್‌ಗೆ ಹೇಳಿದ್ದೇನು?

ಇರಾನ್ ಸರ್ವೋಚ್ಚ ನಾಯಕನ ಹತ್ಯೆಯ ನಂತರ, ಇರಾನ್ ಯುಎಇಯ ಹಲವು ಪ್ರದೇಶಗಳ ಮೇಲೆ ಪ್ರತೀಕಾರದ ದಾಳಿ ನಡೆಸಿದೆ. ಇದಕ್ಕೆ ಪ್ರತಿಕ್ರಿಯಿಸಿದ ಯುಎಇ, ನಿಮ್ಮ ಯುದ್ಧ ನೆರೆಹೊರೆಯವರೊಂದಿಗಲ್ಲ, ಈ ಮೂಲಕ ನೀವು ಗುರಿ ಮರೆತಿದ್ದೀರಿ ಎಂದು ಯುಎಇ ಇರಾನ್‌ಗೆ ತೀವ್ರ ಎಚ್ಚರಿಕೆ ನೀಡಿದೆ.

Read Full Story

04:48 PM (IST) Mar 01

ರೆಸೆಪ್ಶನ್‌ಗೂ ಮುನ್ನ ಮ್ಯಾಚಿಂಗ್ ಡ್ರೆಸ್‌ಗಾಗಿ ಜಟಾಪಟಿ, ರಶ್ಮಿಕಾ ವಿಜಯ್ ಕ್ಯೂಟ್ ವಿಡಿಯೋ ಬಹಿರಂಗ

ರೆಸೆಪ್ಶನ್‌ಗೂ ಮುನ್ನ ಮ್ಯಾಚಿಂಗ್ ಡ್ರೆಸ್‌ಗಾಗಿ ಜಟಾಪಟಿ, ರಶ್ಮಿಕಾ ವಿಜಯ್ ಕ್ಯೂಟ್ ವಿಡಿಯೋ ಬಹಿರಂಗ, ರೆಸೆಪ್ಶೆನ್ ತಯಾರಿ ನಡುವೆ ಈ ಜೋಡಿಯ ವಿಡಿಯೋ ಒಂದು ಭಾರಿ ಸದ್ದು ಮಾಡುತ್ತಿದೆ. ರಶ್ಮಿಕಾ ಮ್ಯಾಚಿಂಗ್ ಡ್ರೆಸ್ ಹೇಳಿದ್ದರೆ, ವಿಜಯ್ ಡ್ರೆಸ್ ಕಲರ್ ಬಣ್ಣವೇ ಬೇರೆ.

 

Read Full Story

03:34 PM (IST) Mar 01

ಇರಾನ್ ಮೇಲೆ ದಾಳಿ ವಿರೋಧಿಸಿ ಅಮೆರಿಕಾದ ದೂತವಾಸದ ಮುಂದೆ ಪ್ರತಿಭಟನೆ - ಪ್ರತಿಭಟನಾಕಾರರ ಮೇಲೆ ಪಾಕಿಸ್ತಾನ ಗುಂಡಿನ ದಾಳಿಗೆ 10 ಬಲಿ

ಇರಾನ್‌ನ ಉನ್ನತ ನಾಯಕರನ್ನು ಹತ್ಯೆಗೈದ ಇಸ್ರೇಲ್ ಅಮೆರಿಕದ ಜಂಟಿ ದಾಳಿಯನ್ನು ಖಂಡಿಸಿ ಪಾಕಿಸ್ತಾನದ ಕರಾಚಿಯಲ್ಲಿ ನಡೆದ ಪ್ರತಿಭಟನೆ ಹಿಂಸೆಗೆ ತಿರುಗಿದ್ದು, ಈ ವೇಳೆ ಪ್ರತಿಭಟನಾಕಾರರ ಮೇಲೆ ಭದ್ರತಾ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ 10 ಮಂದಿ  ಸಾವನ್ನಪ್ಪಿದ್ದಾರೆ. 

Read Full Story

03:24 PM (IST) Mar 01

ಟ್ರಂಪ್ ಹತ್ಯೆಗೆ ಇರಾನ್ ಮಾಡಿತ್ತು ಸಂಚು, ಬಯಲಾಗುತ್ತಿದ್ದಂತೆ ಖಮೇನಿ ಕತೆ ಮುಗಿಸಿದ ಅಮೆರಿಕ ಇಸ್ರೇಲ್

ಟ್ರಂಪ್ ಹತ್ಯೆಗೆ ಇರಾನ್ ಮಾಡಿತ್ತು ಸಂಚು, ಬಯಲಾಗುತ್ತಿದ್ದಂತೆ ಖಮೇನಿ ಕತೆ ಮುಗಿಸಿದ ಅಮೆರಿಕ ಇಸ್ರೇಲ್, ಇರಾನ್ ಮೇಲೆ ದಾಳಿ ಎಚ್ಚರಿಕೆ ನೀಡಿದ ಬೆನ್ನಲ್ಲೇ ಟ್ರಂಪ್ ಹತ್ಯೆಗೆ ಸಂಚು ರೂಪಿಸಲಾಗಿತ್ತು. ಆದರೆ ಈ ಮಾಹಿತಿ ಸಿಕ್ಕ ಬೆನ್ನಲ್ಲೇ ಖಮೇನಿಯನ್ನೇ ಹತ್ಯೆ ಮಾಡಲಾಗಿದೆ.

 

Read Full Story

02:57 PM (IST) Mar 01

ಯುದ್ಧದ ಭೀತಿ ಹಿನ್ನೆಲೆ - ಇಲ್ಲೆಲ್ಲ 10, 12 ನೇ ತರಗತಿ ಪರೀಕ್ಷೆ ಮುಂದೂಡಿಕೆ, ಅಧಿಕೃತ ಪ್ರಕಟಣೆ

ಮಧ್ಯಪ್ರಾಚ್ಯದಲ್ಲಿನ ಯುದ್ಧ ಭೀತಿ ಮತ್ತು ಭದ್ರತಾ ಅಸ್ಥಿರತೆಯಿಂದಾಗಿ, ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (CBSE) 10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳನ್ನು ತಾತ್ಕಾಲಿಕವಾಗಿ ಮುಂದೂಡಿದೆ. ವಿದ್ಯಾರ್ಥಿಗಳ ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗಿದೆ.

Read Full Story

02:53 PM (IST) Mar 01

ಖಮೇನಿ ಹತ್ಯೆಗೆ ಪಾಕಿಸ್ತಾನಿಯರ ಪ್ರತೀಕಾರ, ಅಮೆರಿಕ ರಾಯಭಾರ ಕಚೇರಿ ಮೇಲೆ ದಾಲಿಗೆ 8 ಸಾವು

ಖಮೇನಿ ಹತ್ಯೆಗೆ ಪಾಕಿಸ್ತಾನಿಯರ ಪ್ರತೀಕಾರ, ಅಮೆರಿಕ ರಾಯಭಾರ ಕಚೇರಿ ಪುಡಿ ಪುಡಿಯಾಗಿದೆ. ಕರಾಚಿಯಲ್ಲಿರುವ ಅಮೆರಿಕ ಕಚೇರಿಗೆ ನುಗ್ಗಿದ ಪ್ರತಿಭಟನಕಾರರು ದಾಂಧಲೆ ನಡೆಸಿದ್ದಾರೆ. ಗುಂಡಿನ ದಾಳಿಯಲ್ಲಿ ಓರ್ವ ಸಿಬ್ಬಂದಿ ಗಾಯಗೊಂಡಿದ್ದಾರೆ.

 

Read Full Story

02:32 PM (IST) Mar 01

ಕೆಎಲ್ ರಾಹುಲ್ ಬ್ಯಾಟಿಂಗ್ ಮಾಡುವಾಗ ಪಂದ್ಯ ನೋಡುವುದಿಲ್ಲ, ಸುನಿಲ್ ಶೆಟ್ಟಿ ನಿರ್ಧಾರಕ್ಕೆ ಕಾರಣವೇನು?

ಕೆಎಲ್ ರಾಹುಲ್ ಬ್ಯಾಟಿಂಗ್ ಮಾಡುವಾಗ ಪಂದ್ಯ ನೋಡುವುದಿಲ್ಲ, ಹಲವು ಕ್ರಿಕೆಟಿಗರು ಯಶಸ್ಸಿಗಾಗಿ ಕೆಲ ಪದ್ಧತಿಗಳನ್ನು ಪಾಲಿಸುತ್ತಾರೆ, ಕೆಲವೊಮ್ಮೆ ಮೂಡನಂಬಿಕೆ ಎಂದೆನಿಸಿದರೂ ಕ್ರಿಕೆಟಿಗರು ತಮ್ಮ ಪದ್ಧತಿಯಿಂದ ಹಿಂದೆ ಸರಿದಿಲ್ಲ. ಇದೀಗ ಸುನಿಲ್ ಶೆಟ್ಟಿಯ ಈ ನಿರ್ಧಾರ ಹಿಂದಿನ ಕಾರಣವೇನು?

Read Full Story

02:29 PM (IST) Mar 01

ದುಬೈ ಏರ್​ಪೋರ್ಟ್​ ಮೇಲೂ ದಾಳಿ- ಸಾವು, ನೋವು - Bigg Boss Drone Pratap ಇನ್ನೊಂದು ವಿಡಿಯೋ

ದುಬೈನಲ್ಲಿ ಕ್ಷಿಪಣಿ ದಾಳಿಯ ವದಂತಿಗಳ ನಡುವೆ, ಬಿಗ್‌ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್ ಮತ್ತು ಕ್ರೀಡಾಪಟು ಪಿವಿ ಸಿಂಧು ವಿಮಾನ ನಿಲ್ದಾಣದಲ್ಲಿ ಸಿಲುಕಿದ್ದಾರೆ. ಬುರ್ಜ್ ಖಲೀಫಾಗೆ ಹಾನಿಯಾಗಿಲ್ಲ ಎಂದು ಪ್ರತಾಪ್ ವಿಡಿಯೋ ಮೂಲಕ ಸ್ಪಷ್ಟಪಡಿಸಿದ್ದು, ಎಲ್ಲರೂ ಸುರಕ್ಷಿತವಾಗಿದ್ದೇವೆ ಎಂದು ತಿಳಿಸಿದ್ದಾರೆ.
Read Full Story

02:05 PM (IST) Mar 01

ನಾಗ್ಪುರದ ಸ್ಫೋಟಕ ಡಿಟೋನೇಟರ್ ತಯಾರಿಕಾ ಘಟಕದಲ್ಲಿ ಪ್ರಬಲ ಸ್ಫೋಟ - 17 ಸಾವು

ನಾಗ್ಪುರದ ಕಟೋಲ್ ತಾಲೂಕಿನಲ್ಲಿರುವ ಸ್ಫೋಟಕ ತಯಾರಿಕಾ ಘಟಕದಲ್ಲಿ ಸಂಭವಿಸಿದ ಭಾರಿ ಸ್ಫೋಟದಲ್ಲಿ 17 ಜನರು ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಡಿಟೋನೇಟರ್ ಪ್ಯಾಕಿಂಗ್ ಘಟಕದಲ್ಲಿ ಈ ದುರಂತ ಸಂಭವಿಸಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.

Read Full Story

01:40 PM (IST) Mar 01

ಖತರ್ನಾಕ್ ಸ್ಕೆಚ್ ಹಾಕಿ ಖಮೇನಿಯನ್ನು ಮುಗಿಸಿದ ಇಸ್ರೇಲ್! ದಾಳಿಗೆ ಶನಿವಾರವನ್ನೇ ಯಾಕೆ ಆಯ್ಕೆ ಮಾಡ್ಕೊಂಡಿದ್ಯಾಕೆ?

ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ಇರಾನ್ ಸರ್ವೋಚ್ಚ ನಾಯಕ ಅಲಿ ಖಮೇನಿ ವಿರುದ್ಧ ಮಿಲಿಟರಿ ಕಾರ್ಯಾಚರಣೆ ನಡೆಸಿವೆ. ಶನಿವಾರ ಟೆಹ್ರಾನ್‌ನಲ್ಲಿದ್ದ ಖಮೇನಿ ನಿವಾಸದ ಮೇಲೆ ದಾಳಿ ನಡೆಸಿ, ಅವರನ್ನು ಹತ್ಯೆ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ. ಈ ದಾಳಿಯಿಂದ ಖಮೇನಿ ಯುಗ ಅಂತ್ಯಗೊಂಡಿದೆ.
Read Full Story

01:26 PM (IST) Mar 01

ಇರಾನ್ ಸಂಘರ್ಷ - ದುಬೈ ವಿಮಾನ ನಿಲ್ದಾಣದಲ್ಲಿ ಸಿಲುಕಿದ ಪಿವಿ ಸಿಂಧು, ಸಮೀಪದಲ್ಲೇ ಸ್ಫೋಟ ಬ್ಯಾಡ್ಮಿಂಟನ್ ತಾರೆ ಆತಂಕ!

ಇರಾನ್-ಇಸ್ರೇಲ್ ಸಂಘರ್ಷದ ಕಾರಣ, ಆಲ್ ಇಂಗ್ಲೆಂಡ್ ಓಪನ್ ಟೂರ್ನಿಗೆ ತೆರಳುತ್ತಿದ್ದ ಭಾರತದ ಸ್ಟಾರ್ ಶಟ್ಲರ್ ಪಿ.ವಿ. ಸಿಂಧು ದುಬೈ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾರೆ. ವಿಮಾನ ನಿಲ್ದಾಣದ ಬಳಿ ಸ್ಪೋಟದ ಸದ್ದು ಕೇಳಿದ್ದು,  ಸದ್ಯ ಭಾರತೀಯ ರಾಯಭಾರಿ ಕಚೇರಿಯ ನೆರವಿನಿಂದ ಸುರಕ್ಷಿತ ಸ್ಥಳದಲ್ಲಿದ್ದಾರೆ.

Read Full Story

01:07 PM (IST) Mar 01

ಇರಾನ್ ಮೇಲೆ ಇಸ್ರೇಲ್ ಅಮೆರಿಕಾ ದಾಳಿ - ಬುರ್ಜ್‌ ಖಲೀಫಾ ಬಳಿಯೂ ಸ್ಫೋಟ - ದುಬೈ ಮೇಲೇಕೆ ಇರಾನ್ ಸಿಟ್ಟು?

ಇರಾನ್‌ನ ಸರ್ವೋಚ್ಚ ನಾಯಕನ ಹತ್ಯೆಗೆ ಪ್ರತೀಕಾರವಾಗಿ, ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಬುರ್ಜ್ ಖಲೀಫಾ ಬಳಿ ಸ್ಫೋಟಗಳು ಸಂಭವಿಸಿವೆ. ಅಮೆರಿಕದ ಸೇನಾ ನೆಲೆಗಳಿಗೆ ಆಶ್ರಯ ನೀಡಿರುವ ಯುಎಇ ಮೇಲೆ ಇರಾನ್ ದಾಳಿ ನಡೆಸಿರುವುದು ಮಧ್ಯಪ್ರಾಚ್ಯ ಸಂಘರ್ಷವನ್ನು ಮತ್ತಷ್ಟು ತೀವ್ರಗೊಳಿಸಿದೆ.

Read Full Story

12:45 PM (IST) Mar 01

ಕಟ್ಟಡಗಳ ಅವಶೇಷಗಳಡಿ ಸಿಲುಕಿರುವ ಅಯಾತುಲ್ಲಾ ಅಲಿ ಖಮೇನಿ ಮೃತದೇಹದ ಫೋಟೋ ರಿವೀಲ್

ಇಸ್ರೇಲಿ ವೈಮಾನಿಕ ದಾಳಿಯ ನಂತರ ಕಟ್ಟಡದ ಅವಶೇಷಗಳಡಿ ಇರಾನ್ ಸರ್ವೋಚ್ಚ ನಾಯಕ ಅಯಾತುಲ್ಲಾ ಅಲಿ ಖಮೇನಿ ಅವರ ಮೃತದೇಹ ಪತ್ತೆಯಾಗಿದೆ ಎನ್ನಲಾದ ಫೋಟೋ ವೈರಲ್ ಆಗಿದೆ. ಈ ಫೋಟೋವನ್ನು ಅಮೆರಿಕ ಮತ್ತು ಇಸ್ರೇಲ್ ನಾಯಕರು ನೋಡಿದ್ದಾರೆ ಎಂದು ವರದಿಯಾಗಿದೆ.

Read Full Story

12:18 PM (IST) Mar 01

Ayatollah Khamenei successor - ಇರಾನ್‌ ಮುಂದಿನ ಸರ್ವೋಚ್ಚ ನಾಯಕ ಇವರೇನಾ? ಯಾರು ಈ ಮುಜ್ತಬಾ ಖಮೇನಿ?

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾಗಿದ್ದಾರೆ ಎನ್ನಲಾಗಿದ್ದು, ಅವರ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆ ಎದ್ದಿದೆ. ಈ ರೇಸ್‌ನಲ್ಲಿ ಖಮೇನಿ ಅವರ ಎರಡನೇ ಮಗ, ಧಾರ್ಮಿಕ ವಿದ್ವಾಂಸ ಮತ್ತು IRGC ಜೊತೆ ಉತ್ತಮ ಸಂಬಂಧ ಹೊಂದಿರುವ ಮುಜ್ತಬಾ ಖಮೇನಿ ಹೆಸರು ಮುಂಚೂಣಿಯಲ್ಲಿದೆ.

Read Full Story

12:17 PM (IST) Mar 01

ಮಧ್ಯಪ್ರಾಚ್ಯ ಬಿಕ್ಕಟ್ಟು, ಖಮೇನಿ ಹತ್ಯೆ - ವಾಯುಯಾನ ಸಂಪೂರ್ಣ ಬಂದ್, ಭಾರತ ಸೇರಿ ಹಲವು ದೇಶಗಳ ವಿಮಾನ ಸೇವೆ ರದ್ದು

ಅಮೆರಿಕ-ಇಸ್ರೇಲ್ ದಾಳಿಯಲ್ಲಿ ಇರಾನ್‌ನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತನಾಗಿದ್ದು, ಮಧ್ಯಪ್ರಾಚ್ಯದಲ್ಲಿ ಪ್ರಾದೇಶಿಕ ಯುದ್ಧದ ಭೀತಿ ಎದುರಾಗಿದೆ.  ಅನೇಕ ದೇಶಗಳು ತಮ್ಮ ವಾಯುಪ್ರದೇಶವನ್ನು ಮುಚ್ಚಿದ್ದು, ಏರ್ ಇಂಡಿಯಾ ಸೇರಿದಂತೆ ಜಾಗತಿಕ ವಿಮಾನಯಾನ ಸಂಸ್ಥೆಗಳು ತಮ್ಮ ಸೇವೆಗಳನ್ನು ರದ್ದುಗೊಳಿಸಿವೆ.

Read Full Story

09:32 AM (IST) Mar 01

ಇರಾನ್‌ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆ ದೃಢ; 40 ದಿನ ಶೋಕಾಚರಣೆ, 7 ದಿನ ರಜೆ

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಇಸ್ರೇಲ್ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಹತ್ಯೆಯಾಗಿದ್ದಾರೆ. ಈ ದಾಳಿಯಲ್ಲಿ ಅವರ ಕುಟುಂಬ ಮತ್ತು ಹಿರಿಯ ಸೇನಾಧಿಕಾರಿಗಳು ಕೂಡ ಸಾವನ್ನಪ್ಪಿದ್ದು, ದೇಶದಲ್ಲಿ 40 ದಿನಗಳ ಶೋಕಾಚರಣೆ ಘೋಷಿಸಲಾಗಿದೆ. 

Read Full Story

08:50 AM (IST) Mar 01

ಸೇತುವೆಗಳೂ ಉಸಿರಾಡುತ್ತವೆ; ಮೇಘಾಲಯದ ಲಿವಿಂಗ್ ರೂಟ್ಸ್ ಬ್ರಿಡ್ಜ್ ಹಿಂದಿನ ಅಚ್ಚರಿಗಳು

ಮೇಘಾಲಯದ ಖಾಸಿ ಮತ್ತು ಜೈಂತಿಯಾ ಬುಡಕಟ್ಟು ಜನಾಂಗದವರು ಜೀವಂತ ಮರದ ಬೇರುಗಳನ್ನು ಬಳಸಿ ಸೇತುವೆಗಳನ್ನು ನಿರ್ಮಿಸುವ ವಿಶಿಷ್ಟ ಪರಂಪರೆಯನ್ನು ಹೊಂದಿದ್ದಾರೆ. ಈ ಜೈವಿಕ ಎಂಜಿನಿಯರಿಂಗ್ ಕಲೆಗೆ ದಶಕಗಳ ಕಾಲ ಶ್ರಮಿಸಿದ ಹ್ಯಾಲಿ ವಾರ್ ಅವರು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Read Full Story

08:41 AM (IST) Mar 01

ಇಂದು ಭಾರತ vs ವಿಂಡೀಸ್‌ ‘ಕ್ವಾರ್ಟರ್‌’ - ಚಿಂತೆ ನಡುವೆಯೂ ಆಟಕ್ಕೆ ಸಜ್ಜಾದ ಟೀಂ ಇಂಡಿಯಾ

ಟಿ20 ವಿಶ್ವಕಪ್‌ನ ನಿರ್ಣಾಯಕ ಪಂದ್ಯದಲ್ಲಿ ಭಾರತ ಮತ್ತು ವೆಸ್ಟ್‌ಇಂಡೀಸ್‌ ಸೆಣಸಾಡಲಿದ್ದು, ಇದು ವರ್ಚುವಲ್‌ ಕ್ವಾರ್ಟರ್‌ ಫೈನಲ್‌ ಆಗಿದೆ. ಈ ಪಂದ್ಯದಲ್ಲಿ ಗೆದ್ದ ತಂಡ ಸೆಮಿಫೈನಲ್‌ ಪ್ರವೇಶಿಸಲಿದ್ದು, ಸೋತ ತಂಡ ಟೂರ್ನಿಯಿಂದ ಹೊರಬೀಳಲಿದೆ. 

Read Full Story

08:02 AM (IST) Mar 01

‘ಭಾರತದ ಮುಕುಟ’ಕ್ಕೆ ಚೊಚ್ಚಲ ರಣಜಿ ಕಿರೀಟ; ಅನುಭವಿಗಳಿದ್ದರೂ ರಾಜ್ಯಕ್ಕೆ ತವರಲ್ಲೇ ಹೀನಾಯ ಸೋಲು

ದೇಸಿ ಕ್ರಿಕೆಟ್‌ನ ರಣಜಿ ಟ್ರೋಫಿ ಫೈನಲ್‌ನಲ್ಲಿ, ಜಮ್ಮು ಮತ್ತು ಕಾಶ್ಮೀರ ತಂಡವು ಕರ್ನಾಟಕವನ್ನು ಸೋಲಿಸಿ ಚೊಚ್ಚಲ ಬಾರಿಗೆ ಚಾಂಪಿಯನ್ ಆಗಿ ಇತಿಹಾಸ ನಿರ್ಮಿಸಿದೆ. ಹುಬ್ಬಳ್ಳಿಯಲ್ಲಿ ನಡೆದ ಪಂದ್ಯ ಡ್ರಾಗೊಂಡರೂ, ಮೊದಲ ಇನ್ನಿಂಗ್ಸ್‌ನ ಬೃಹತ್ ಮುನ್ನಡೆಯ ಆಧಾರದ ಮೇಲೆ ಜಮ್ಮು-ಕಾಶ್ಮೀರ ತಂಡ ವಿಜಯಶಾಲಿಯಾಯಿತು.
Read Full Story

07:27 AM (IST) Mar 01

ಇರಾನ್-ಇಸ್ರೇಲ್ ಯುದ್ಧದ ನಡುವೆಯೂ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಅಚ್ಚರಿಯ ಇಳಿಕೆ!

ತೈಲ ಕಂಪನಿಗಳು ವಾಣಿಜ್ಯ ಬಳಕೆಯ 19 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಇಳಿಕೆ ಮಾಡಿವೆ. ದೆಹಲಿ, ಕೋಲ್ಕತ್ತಾ, ಮುಂಬೈ, ಮತ್ತು ಚೆನ್ನೈನಂತಹ ಪ್ರಮುಖ ನಗರಗಳಲ್ಲಿ ದರಗಳು ಕಡಿಮೆಯಾಗಿದ್ದು, ಹೊಸ ದರಗಳು ಇಂದಿನಿಂದಲೇ ಜಾರಿಗೆ ಬಂದಿವೆ. 

Read Full Story

06:51 AM (IST) Mar 01

ಅಯತೊಲ್ಲಾ ಅಲಿ ಖಮೇನಿ ಹತ್ಯೆ? ಡೊನಾಲ್ಡ್ ಟ್ರಂಪ್‌ಗೆ X ಮೂಲಕ ತಿರುಗೇಟು ಕೊಟ್ಟ ಇರಾನ್!

ಇರಾನ್‌ನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾಗಿದ್ದಾರೆ ಎಂಬ ವದಂತಿಯನ್ನು ಇರಾನ್ ಅಲ್ಲಗಳೆದಿದೆ. ಖಮೇನಿ ಅವರ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ಈ ಸುದ್ದಿಗೆ ತಿರುಗೇಟು ನೀಡಿದೆ.

Read Full Story

More Trending News