ರಿಲೀಫ್ ಆಗುತ್ತೆ ಅಂತ ಆಗಾಗ ಕುತ್ತಿಗೆ ನಟಿಗೆ ತೆಗೆದ್ರೆ ಅಷ್ಟೇ, ಅನಾಹುತ ತಪ್ಪಿದ್ದಲ್ಲ

Published : Mar 29, 2025, 06:25 PM ISTUpdated : Mar 29, 2025, 07:22 PM IST
ರಿಲೀಫ್ ಆಗುತ್ತೆ ಅಂತ ಆಗಾಗ ಕುತ್ತಿಗೆ ನಟಿಗೆ ತೆಗೆದ್ರೆ ಅಷ್ಟೇ, ಅನಾಹುತ ತಪ್ಪಿದ್ದಲ್ಲ

ಸಾರಾಂಶ

ಕಂಪ್ಯೂಟರ್ ಮುಂದೆ ಹೆಚ್ಚು ಹೊತ್ತು ಕುಳಿತುಕೊಳ್ಳುವುದರಿಂದ ಕುತ್ತಿಗೆ ನೋವು ಬರುವುದು ಸಾಮಾನ್ಯ. ಪದೇ ಪದೇ ಕುತ್ತಿಗೆ ನಟಿಗೆ ಮುರಿಯುವುದರಿಂದ ಅಸ್ಥಿರತೆ, ನರಗಳ ಹಾನಿ, ರಕ್ತನಾಳದ ಗಾಯ ಮತ್ತು ದೀರ್ಘಕಾಲದ ನೋವು ಉಂಟಾಗಬಹುದು. ನೋವು ನಿರಂತರವಾಗಿದ್ದರೆ, ಚಲನಶೀಲತೆ ಕಡಿಮೆಯಾದರೆ ಅಥವಾ ನರ ದೌರ್ಬಲ್ಯ ಕಂಡುಬಂದರೆ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.

ಕಂಪ್ಯೂಟರ್ (Computer) ಮುಂದೆ ಗಂಟೆಗಟ್ಟಲೆ ಕುಳಿತಾಗ ಇಲ್ವೇ ದೀರ್ಘ ಸಮಯ ಮೊಬೈಲ್ ನೋಡೋದ್ರಿಂದ ಕುತ್ತಿಗೆ ನೋವು (neck pain) ಬರೋದು ಸಾಮಾನ್ಯ. ಒಂದೇ ಭಂಗಿಯಲ್ಲಿ ತುಂಬಾ ಸಮಯ ಕುಳಿತುಕೊಳ್ಳುವ ಅಥವಾ ನಿಂತಿರುವ ಜನರು ಕತ್ತಿಗೆಯನ್ನು ಅತ್ತಿತ್ತ ಹೊರಳಿಸಿ ನಟಿಗೆ ಮುರಿಯುತ್ತಾರೆ. ಇದು ನಿಮಗೆ ಸ್ವಲ್ಪ ರಿಲೀಫ್ ನೀಡುತ್ತದೆ. ನಿಮ್ಮ ಕತ್ತಿನ ಭಾಗದಲ್ಲಿರುವ ನೋವು ಕಡಿಮೆಯಾದಂತೆ ಭಾಸವಾಗುತ್ತದೆ.  ಸಲೂನ್ ಗೆ ಹೋದಾಗ ಕೂಡ ಅಲ್ಲಿನ ಸಿಬ್ಬಂದಿ ನಿಧಾನವಾಗಿ ಕತ್ತಿನ ಮಸಾಜ್ ಮಾಡಿ ನಟಿಗೆ ಮುರಿಯುತ್ತಾರೆ.  ಬೇರೆ ಭಾಗದಲ್ಲಿ ನಟಿಗೆ ಮುರಿದಾಗ ಸ್ವಲ್ಪ ನೋವು ಕಾಣಿಸಿಕೊಳ್ಳುತ್ತದೆ. ಆದ್ರೆ ಕತ್ತಿನ ಭಾಗದಲ್ಲಿ ನಟಿಗೆ ಮುರಿದಾಗ ರಿಲೀಫ್ ಸಿಗುತ್ತದೆ. ಜೊತೆಗೆ ಒತ್ತಡ ಕಡಿಮೆಯಾದ ಅನುಭವವಾಗುತ್ತದೆ. ಕುತ್ತಿಗೆ ನೋವು ಕಾಣಿಸಿಕೊಳ್ತಿದೆ ಎನ್ನುವ ಕಾರಣಕ್ಕೆ ಪದೇ ಪದೇ ಲಟಿಗೆ ಮುರಿಯೋದು ಸೂಕ್ತವಲ್ಲ. ಇದ್ರಿಂದ ಲಾಭದ ಜೊತೆ ನಷ್ಟವೂ ಇದೆ. 

ಪದೇ ಪದೇ ಕುತ್ತಿಗೆ ನಟಿಗೆ ಮುರಿಯೋದ್ರಿಂದ ಆಗುವ ನಷ್ಟ :  

ಅಸ್ಥಿರತೆ : ಕುತ್ತಿಗೆ ನಟಿಗೆ ತೆಗೆದ್ರೆ ನಿಮ್ಮ ಗರ್ಭಕಂಠದ ಬೆನ್ನುಮೂಳೆಯನ್ನು ಬೆಂಬಲಿಸುವ ಅಸ್ಥಿರಜ್ಜುಗಳು ಮತ್ತು ಸ್ನಾಯುರಜ್ಜುಗಳು ಅತಿಯಾಗಿ ಹಿಗ್ಗುತ್ತವೆ, ದುರ್ಬಲಗೊಳ್ಳುತ್ತವೆ. ಈ ಅಭ್ಯಾಸವು ಕೀಲುಗಳ ಅಸ್ಥಿರತೆಗೆ ಕಾರಣವಾಗಬಹುದು. ಇದರಿಂದಾಗಿ ನಿಮ್ಮ ಕುತ್ತಿಗೆ ಗಾಯ ಮತ್ತು ದೀರ್ಘಕಾಲದ ನೋವು ಹೆಚ್ಚಾಗುತ್ತದೆ. 

ಪ್ರತಿದಿನ ದಾಳಿಂಬೆ ಜ್ಯೂಸ್ ಕುಡಿಯಿರಿ.. ತೂಕ ಇಳಿಕೆಗೂ ಸೈ, ಆರೋಗ್ಯಕ್ಕೂ ಸೈ!

ನರ ಹಾನಿ : ಗರ್ಭಕಂಠದ ಬೆನ್ನುಹುರಿಯು ವಿವಿಧ ದೈಹಿಕ ಕಾರ್ಯಗಳನ್ನು ನಿಯಂತ್ರಿಸುವ ನರಗಳ ಸಂಕೀರ್ಣ ಜಾಲವನ್ನು ಹೊಂದಿರುತ್ತದೆ. ಕುತ್ತಿಗೆಯನ್ನು ಬಲವಂತವಾಗಿ ಅಥವಾ ಅನುಚಿತವಾಗಿ ಬಳಸುವುದರಿಂದ ಈ ನರಗಳನ್ನು ಸಂಕುಚಿತಗೊಳಿಸಬಹುದು. ಇದರಿಂದಾಗಿ ನಿಮ್ಮ ತೋಳುಗಳು, ಕೈಗಳು ಅಥವಾ ಬೆರಳುಗಳಲ್ಲಿ ಮರಗಟ್ಟುವಿಕೆ, ದೌರ್ಬಲ್ಯ ಉಂಟಾಗುತ್ತದೆ. ಕೆಲವು ಸಂದರ್ಭಗಳಲ್ಲಿ, ಚಿಕಿತ್ಸೆ ಸಿಗದೆ ಹೋದ್ರೆ ಶಾಶ್ವತ ನರ ಹಾನಿಯಾಗಬಹುದು. 

ರಕ್ತನಾಳದ ಗಾಯ :  ನೀವು ಅತಿಯಾಗಿ ಹಾಗೂ ಬಲವಾಗಿ ಕುತ್ತಿಗೆ ನಟಿಗೆ ತೆಗೆದ್ರೆ ಕುತ್ತಿಗೆಯಲ್ಲಿರುವ ರಕ್ತನಾಳಗಳಿಗೆ, ವಿಶೇಷವಾಗಿ ಕಶೇರುಕ ಅಪಧಮನಿಗೆ ಹಾನಿಯಾಗಬಹುದು. ಈ ಪ್ರಮುಖ ಅಪಧಮನಿಯು ನಿಮ್ಮ ಮೆದುಳಿಗೆ ರಕ್ತವನ್ನು ಪೂರೈಸುತ್ತದೆ. ಕತ್ತಿನ ಮೇಲಾಗುವ ಗಾಯ ಪಾರ್ಶ್ವವಾಯು ಸೇರಿದಂತೆ ಗಂಭೀರ ತೊಡಕುಗಳಿಗೆ ಕಾರಣವಾಗಬಹುದು. ಇದು ಅಪರೂಪವಾದ್ರೂ ಪ್ರಾಣಕ್ಕೆ ಅಪಾಯ.

ದೀರ್ಘಕಾಲದ ಕುತ್ತಿಗೆ ನೋವು : ನೋವು ನಿವಾರಿಸಲು ಕುತ್ತಿಗೆಯ ನಟಿಗೆ ತೆಗೆಯುವುದ್ರಿಂದ ಕುತ್ತಿಗೆಯಲ್ಲಿ ನೋವು ಮತ್ತು ಬಿಗಿತ ಉಂಟಾಗುತ್ತದೆ. ಕುತ್ತಿಗೆ ನಟಿಗೆ ನಿಮಗೆ ತಾತ್ಕಾಲಿಕ ರಿಲೀಫ್ ನೀಡಬಹುದು. ಆದ್ರೆ ದೀರ್ಘಕಾಲೀನ ಸಮಸ್ಯೆಗೆ ಕಾರಣವಾಗುತ್ತದೆ. ನೋವು ಕಾಣಿಸಿಕೊಂಡಾಗೆಲ್ಲ ನೀವು ನಟಿಗೆ ತೆಗೆಯುತ್ತಿದ್ದರೆ ಅದು ಮುಂದೆ ಕಡಿಮೆಯಾಗದ ಕುತ್ತಿಗೆ ನೋವಿಗೆ ದಾರಿಯಾಗುತ್ತದೆ. 

ಸೂಜಿ ಚುಚ್ಚದೆ ಶುಗರ್‌ ಟೆಸ್ಟ್‌: ಫೋಟೋ ಅಕೂಸ್ಟಿಕ್ಸ್ ಸೆನ್ಸಿಂಗ್ ಮೂಲಕ ಸಕ್ಕರೆ ಪ್ರಮಾಣ

ವೈದ್ಯರನ್ನು ಯಾವಾಗ ಭೇಟಿ ಆಗ್ಬೇಕು? :  
ನಿರಂತರ ನೋವು : ನಿಮ್ಮ ಕುತ್ತಿಗೆ ನೋವು ಕೆಲವು ದಿನಗಳಿಗಿಂತ ಹೆಚ್ಚು ಕಾಲ ಇದ್ದರೆ ಅಥವಾ ಅದು ನಿಮ್ಮ ದೈನಂದಿನ ಚಟುವಟಿಕೆಗಳಿಗೆ ಅಡ್ಡಿಯುಂಟುಮಾಡಿದರೆ, ವೈದ್ಯರ ಸಹಾಯ ಪಡೆಯುವುದು ಅಗತ್ಯ.  

ಸೀಮಿತ ಚಲನಶೀಲತೆ : ನಿಮ್ಮ ತಲೆಯನ್ನು ನಿರ್ದಿಷ್ಟ ದಿಕ್ಕುಗಳಲ್ಲಿ ತಿರುಗಿಸಲು ಕಷ್ಟವಾಗಿದ್ದರೆ ಅದನ್ನು ಮೌಲ್ಯಮಾಪನ ಮಾಡುವುದು ಮುಖ್ಯ. ಸೀಮಿತ ಚಲನಶೀಲತೆಯು ಕೀಲುಗಳ ಅಪಸಾಮಾನ್ಯ ಕ್ರಿಯೆ, ಸ್ನಾಯುಗಳ ಒತ್ತಡ ಅಥವಾ ನರಗಳ ಆಘಾತದ ಸಂಕೇತವಾಗಿರಬಹುದು. 

ನರವೈಜ್ಞಾನಿಕ ಲಕ್ಷಣ :  ತೋಳುಗಳು, ಕೈಗಳು ಅಥವಾ ಬೆರಳುಗಳಲ್ಲಿ ಮರಗಟ್ಟುವಿಕೆ, ದೌರ್ಬಲ್ಯ ಕಂಡುಬಂದರೆ ಅದು ನಿಮ್ಮ ಗರ್ಭಕಂಠದ ಬೆನ್ನುಮೂಳೆಯಲ್ಲಿರುವ ನರಗಳ ಸಮಸ್ಯೆಯ ಸಂಕೇತ. ಈ ಸಮಯದಲ್ಲಿ ನೀವು ವೈದ್ಯರನ್ನು ಭೇಟಿಯಾಗಬೇಕು. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೆಲ್ಸ ಮಾಡೋವಾಗ ಮಾತ್ರವಲ್ಲ ರಜೆಯಲ್ಲೂ ಕಾಡುತ್ತೆ ಖಿನ್ನತೆ, ಹಾಲಿಡೇ ಡಿಪ್ರೆಷನ್ ಅಂದ್ರೇನು?
Heart Problemಗೆ ಎಲ್ಲರೂ ಹೇಳೋ ಕಾರಣವಲ್ಲವೇ ಅಲ್ಲ, ಪೌಷ್ಟಿಕ ತಜ್ಞರ ಮಹಾವಂಚನೆ ಬಯಲಿಗೆ