ಹೆಚ್ಚುತ್ತಿದೆ ಅಂಗಾಂಗ ದಾನ; ಹೆಚ್ಚು ಜನರು ಈ ಅಂಗ ದಾನ ಮಾಡಲು ಬಯಸುತ್ತಾರೆ..

By Suvarna NewsFirst Published Jan 31, 2024, 4:17 PM IST
Highlights

ಸರ್ಕಾರದ ಅಂಗಾಂಗ ದಾನ ಯೋಜನೆಗೆ ಭಾರಿ ಉತ್ತೇಜನ ಸಿಕ್ಕಿದೆ. ಈ ಅಂಗಾಂಗ ದಾನ ಯೋಜನೆಯಲ್ಲಿ ಅಚ್ಚರಿ ಮೂಡಿಸುವಷ್ಟು ಜನ ಇದುವರೆಗೆ ದಾನದ ಪ್ರತಿಜ್ಞೆ ಮಾಡಿದ್ದಾರೆ.

ಅಂಗಾಂಗ ದಾನ ಈಗಿನ ವೈದ್ಯಕೀಯ ರಂಗದಲ್ಲಿ ಅತ್ಯುತ್ತಮ ಬೆಳವಣಿಗೆ. ಸಾಕಷ್ಟು ಜನರ ಜೀವ ಉಳಿಸುವ, ಆರೋಗ್ಯದಿಂದ ಬದುಕುವಂತೆ ಮಾಡುವ ತಾಕತ್ತು ಅಂಗಾಂಗ ದಾನಕ್ಕಿದೆ. 

ದೇಹದಲ್ಲಿನ ಯಾವುದೇ ಅಂಗದ ಅಸಮರ್ಪಕ ಕಾರ್ಯದಿಂದ ವ್ಯಕ್ತಿಯ ಜೀವಕ್ಕೆ ಅಪಾಯವಿದ್ದರೆ, ಆರೋಗ್ಯವಂತ ವ್ಯಕ್ತಿಯು ಮರಣ ಬಳಿಕ ತನ್ನ ಅಂಗಗಳನ್ನು ದಾನ ಮಾಡುವ ಮೂಲಕ ಅವನ ಜೀವವನ್ನು ಉಳಿಸಬಹುದು. ದೇಶದಲ್ಲಿ ಅಂಗಾಂಗ ದಾನವನ್ನು ಉತ್ತೇಜಿಸಲು, ಕೇಂದ್ರ ಸರ್ಕಾರವು ಆಯುಷ್ಮಾನ್ ಭವ ಎಂಬ ಅಂಗಾಂಗ ದಾನ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಗೆ ಭಾರಿ ಉತ್ತೇಜನ ಸಿಕ್ಕಿದೆ. ಇದರ ಅಡಿಯಲ್ಲಿ ಇದುವರೆಗೆ ಲಕ್ಷಾಂತರ ಜನರು ಅಂಗಾಂಗ ದಾನ ಮಾಡುವ ಪ್ರತಿಜ್ಞೆಯನ್ನು ತೆಗೆದುಕೊಂಡಿದ್ದಾರೆ.

ದೇಶದ ಪ್ರತಿಯೊಂದು ರಾಜ್ಯದಲ್ಲೂ ಈ ಯೋಜನೆ ಫಲಪ್ರದವಾಗಲು ಸರ್ಕಾರ ಮತ್ತು ಆಡಳಿತವು ಅನೇಕ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಇದರಿಂದಾಗಿ ಜನರು ಅಂಗಾಂಗ ದಾನದ ಪ್ರತಿಜ್ಞೆಯನ್ನು ತೆಗೆದುಕೊಳ್ಳುವ ಮೂಲಕ ಅಗತ್ಯವಿರುವವರಿಗೆ ಸಹಾಯ ಮಾಡಲು ಮುಂದೆ ಬಂದಿದ್ದಾರೆ. 

ಸಲ್ಮಾನ್ ಖಾನ್‌ಗಿದ್ದ ಈ 'ಸೂಸೈಡ್ ಡಿಸೀಸ್' ಏನು?

ಏನೆಲ್ಲ ಅಂಗ ದಾನ ಮಾಡಬಹುದು?
ಅಂಗಾಂಗ ದಾನದ ಅಡಿಯಲ್ಲಿ, ಹೃದಯ, ಯಕೃತ್ತು, ಮೇದೋಜ್ಜೀರಕ ಗ್ರಂಥಿ, ಸಣ್ಣ ಮತ್ತು ದೊಡ್ಡ ಕರುಳು, ಕಾರ್ನಿಯಾ ಮತ್ತು ಚರ್ಮದ ಅಂಗಾಂಶಗಳನ್ನು ದಾನ ಮಾಡಬಹುದು. ಅಂಗಾಂಗ ದಾನದ ಪ್ರತಿಜ್ಞೆಯನ್ನು ಪೂರೈಸಲು, ಸರ್ಕಾರವು ಕೇಂದ್ರೀಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ (NOTTO) ಪೋರ್ಟಲ್ ಅನ್ನು ಸಹ ರಚಿಸಿದೆ, ಅದರ ಮೂಲಕ ಜನರು ಅಂಗಾಂಗ ದಾನ ಅಭಿಯಾನದಲ್ಲಿ ಭಾಗವಹಿಸಬಹುದು.
 
ಕಳೆದ ವರ್ಷ ಅಭಿಯಾನ ಆರಂಭ
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಅಂಗಾಂಗ ದಾನ ಅಭಿಯಾನವನ್ನು ಅಧಿಕೃತವಾಗಿ ಪ್ರಾರಂಭಿಸಿದರು ಮತ್ತು ಇದುವರೆಗೆ 13,80,599 ಜನರು ಅಂಗಾಂಗ ದಾನ ಮಾಡಲು ವಾಗ್ದಾನ ಮಾಡಿದ್ದಾರೆ. ಅಂಗಾಂಗ ದಾನ ಅಭಿಯಾನ ಅಂದರೆ ಆಯುಷ್ಮಾನ್ ಭವ ಯೋಜನೆಯ ಅಂಕಿಅಂಶಗಳು ಇಲ್ಲಿಯವರೆಗೆ ಏನು ಹೇಳುತ್ತಿವೆ ನೋಡೋಣ. 
ಈ ಜನರಲ್ಲಿ 66155 ಪುರುಷರು ಮತ್ತು 72245 ಮಹಿಳೆಯರು ಇದ್ದಾರೆ. ವಯಸ್ಸಿನ ಬಗ್ಗೆ ಮಾತನಾಡಿದರೆ, ಅಂಗಾಂಗ ದಾನದ ಪ್ರತಿಜ್ಞೆಯನ್ನು ತೆಗೆದುಕೊಂಡವರಲ್ಲಿ, 35709 ಜನರು 18ರಿಂದ 30 ವರ್ಷದೊಳಗಿನವರು. 30 ರಿಂದ 45 ವರ್ಷದೊಳಗಿನ 65865 ಜನರಿದ್ದಾರೆ. 60 ವರ್ಷಕ್ಕಿಂತ ಮೇಲ್ಪಟ್ಟ ಜನರು ಸಹ ಈ ಪ್ರತಿಜ್ಞೆಯನ್ನು ತೆಗೆದುಕೊಂಡಿದ್ದಾರೆ ಮತ್ತು ಈ ಅಂಕಿಅಂಶಗಳಲ್ಲಿ ಅವರ ಸಂಖ್ಯೆ 6463 ಆಗಿದೆ.

ಮಾತು ಮಾತಿಗೂ ಸಿಡುಕುವ ಮಧ್ಯ ವಯಸ್ಕ ಮಹಿಳೆ; ಕಾರಣವೇನು?
 
ಈ ಅಂಗಾಂಗಗಳ ದಾನಕ್ಕೆ ನಿರ್ಧಾರ
ಅಂಗಾಂಗ ದಾನದ ಪ್ರತಿಜ್ಞೆ ಪ್ರಕಾರ ಹೃದಯದಾನ ಮಾಡಿದವರ ಸಂಖ್ಯೆ 93480. 98918 ಮಂದಿ ಕಿಡ್ನಿ ದಾನಕ್ಕೆ ವಾಗ್ದಾನ ಮಾಡಿದ್ದಾರೆ. 93950 ಜನರು ಲಿವರ್ ದಾನ ಮಾಡುವುದಾಗಿ ಹೇಳಿದ್ದಾರೆ. 85278 ಜನರು ಶ್ವಾಸಕೋಶ ದಾನ ಮಾಡುವ ವಾಗ್ದಾನ ಮಾಡಿದ್ದಾರೆ. 

ಕರ್ನಾಟಕ 4ನೇ ಸ್ಥಾನದಲ್ಲಿ
ರಾಜ್ಯಮಟ್ಟದಲ್ಲಿ ಮಾತನಾಡಿದರೆ ಅಂಗಾಂಗ ದಾನಿಗಳ ಅಭಿಯಾನದಲ್ಲಿ ರಾಜಸ್ಥಾನ ಮುಂಚೂಣಿಯಲ್ಲಿದೆ. ಇಲ್ಲಿ 34564 ಮಂದಿ ಅಂಗಾಂಗ ದಾನದ ಪ್ರತಿಜ್ಞೆ ಸ್ವೀಕರಿಸಿದ್ದಾರೆ. ಮಹಾರಾಷ್ಟ್ರದ 25060 ಮಂದಿ ಅಂಗಾಂಗ ದಾನದ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಮಧ್ಯಪ್ರದೇಶ ಮೂರನೇ ಸ್ಥಾನದಲ್ಲಿದ್ದು, ಕರ್ನಾಟಕ ರಾಜ್ಯ ನಾಲ್ಕನೇ ಸ್ಥಾನದಲ್ಲಿದೆ. ಉತ್ತರ ಪ್ರದೇಶದಲ್ಲಿ 2568 ಜನರು ಈ ಅಭಿಯಾನದಲ್ಲಿ ನೋಂದಾಯಿಸಿಕೊಂಡಿದ್ದರೆ, ಉತ್ತರಾಖಂಡದಲ್ಲಿ 3367 ಜನರು ಈ ಯೋಜನೆಯಲ್ಲಿ ಭಾಗವಹಿಸಿದ್ದಾರೆ. ಆಯುಷ್ಮಾನ್ ಭವ ಯೋಜನೆಯಡಿ, 18 ವರ್ಷಕ್ಕಿಂತ ಮೇಲ್ಪಟ್ಟ ಯಾವುದೇ ಆರೋಗ್ಯವಂತ ವ್ಯಕ್ತಿ ಅಂಗಾಂಗಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿದ್ದರೆ ಅಂಗಾಂಗಗಳನ್ನು ದಾನ ಮಾಡಬಹುದಾಗಿದೆ.

click me!