Water birthing: ಭಾರತದಲ್ಲಿ ಜನಪ್ರಿಯವಾಗುತ್ತಿರುವ ನವೀನ ಹೆರಿಗೆ ವಿಧಾನ, ವಾಟರ್ ಬರ್ತಿಂಗ್ ಅನುಕೂಲ, ಅಪಾಯಗಳೇನು?

Published : Mar 08, 2025, 04:56 AM ISTUpdated : Mar 08, 2025, 12:53 PM IST
Water birthing:  ಭಾರತದಲ್ಲಿ ಜನಪ್ರಿಯವಾಗುತ್ತಿರುವ ನವೀನ ಹೆರಿಗೆ ವಿಧಾನ, ವಾಟರ್ ಬರ್ತಿಂಗ್ ಅನುಕೂಲ, ಅಪಾಯಗಳೇನು?

ಸಾರಾಂಶ

ಭಾರತದಲ್ಲಿ ವಾಟರ್ ಬರ್ತಿಂಗ್ ವಿಧಾನವು ಜನಪ್ರಿಯವಾಗುತ್ತಿದೆ, ಇದು 1800ರಷ್ಟು ಹಿಂದಿನದು. ಈ ವಿಧಾನವು ತಾಯಂದಿರಿಗೆ ದೈಹಿಕ ಮತ್ತು ಭಾವನಾತ್ಮಕ ಬೆಂಬಲವನ್ನು ನೀಡುತ್ತದೆ, ನೋವನ್ನು ಕಡಿಮೆ ಮಾಡುತ್ತದೆ ಮತ್ತು ವೈದ್ಯಕೀಯ ಸೇವೆಗಳ ಅಗತ್ಯವನ್ನು ಕಡಿಮೆ ಮಾಡುತ್ತದೆ.

ಕಾಲ ವೇಗವಾಗಿದೆ. ಆಧುನಿಕವಾಗಿದೆ. ಹೊಸ ತಂತ್ರಜ್ಞಾನಗಳು ಬಂದು ಜಗತ್ತೇ ಹೊಸತಾಗಿದೆ. ಇದೀಗ ಹೆರಿಗೆ ಕ್ಷೇತ್ರದಲ್ಲಿಯೂ ಬದಲಾವಣೆ ಉಂಟಾಗುತ್ತಿದೆ. ಅದರಲ್ಲೂ ವಿಶೇಷವಾಗಿ ಭಾರತದಲ್ಲಿ ನೀರಿನಲ್ಲಿ ಹೆರಿಗೆ ಮಾಡಿಸುವ ವಾಟರ್‌ ಬರ್ತಿಂಗ್ ವಿಧಾನ ಬಹು ಜನಪ್ರಿಯಾಗುತ್ತಿದೆ. ಹಾಗಂತ ಇದು ಬಹಳ ಹೊಸ ವಿಧಾನ ಅಂದುಕೊಳ್ಳುವ ಅಗತ್ಯವೇನೂ ಇಲ್ಲ. ಈ ಹೆರಿಗೆ ವಿಧಾನವು 1800ರಲ್ಲಿಯೇ ಚಾಲ್ತಿಯಲ್ಲಿತ್ತು ಎನ್ನಲಾಗಿದೆ. ಜೊತೆಗೆ 1970ರ ದಶಕದಲ್ಲಿ ಈ ಹೆರಿಗೆ ವಿಧಾನಕ್ಕೆ ಜಾಗತಿಕ ಮನ್ನಣೆ ದೊರಕಿದೆ. ಈ ವಿಧಾನವು ತಾಯಂದಿರಿಗೆ ದೈಹಿಕ ಮತ್ತು ಭಾವನಾತ್ಮಕ ಬೆಂಬಲ ನೀಡುವುದಲ್ಲದೆ ವೈದ್ಯಕೀಯ ಸೇವೆ ಪಡೆಯುವ ಅವಶ್ಯಕತೆಯನ್ನು ಕಡಿಮೆ ಮಾಡುತ್ತದೆ.

ಏನಿದು ವಾಟರ್ ಬರ್ತಿಂಗ್?

ಜಲ ಪ್ರಸವ ವಿಧಾನವು ಪ್ರಸವ ಸಂದರ್ಭದಲ್ಲಿ ನೋವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಮತ್ತು ಆ ಮೂಲಕ ಹೆರಿಗೆ ಪ್ರಕ್ರಿಯೆಯು ಸುಸೂತ್ರವಾಗಿ ನಡೆಯಲು ಅನುವು ಮಾಡಿಕೊಡುತ್ತದೆ ಎಂದು ತಿಳಿದಿರುವವರು ಹೇಳುತ್ತಾರೆ. ಅಲ್ಲದೇ ಹೆಚ್ಚುವರಿ ನೋವು ನಿವಾರಕಗಳನ್ನು ಬಳಸುವ ಅಗತ್ಯ ಇರುವುದಿಲ್ಲ. ತಾಯಂದಿರು ಸಾಮಾನ್ಯವಾಗಿ ಬೆಚ್ಚಗಿನ ನೀರು ನರಗಳನ್ನು ಶಾಂತಗೊಳಿಸಿ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ದೇಹ ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ ಎಂದು ಹೇಳುತ್ತಾರೆ.

ವೈದ್ಯರು ಹೇಳೋದೇನು?

ಈ ಕುರಿತು ಮಾತನಾಡುವ ಬೆಂಗಳೂರು ಹೆಬ್ಬಾಳದ ಮದರ್ ಹುಡ್ ಹಾಸ್ಪಿಟಲ್ಸ್‌ನ ಹಿರಿಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ಸಿರೀಷಾ ರೆಡ್ಡಿ ಅವರು, ‘ಜೀವನಶೈಲಿಯ ಬದಲಾವಣೆಗಳಿಂದ, ಅರಿವಿನ ಕೊರತೆಯಿಂದ ಮತ್ತು ವೈದ್ಯಕೀಯ ಕ್ಷೇತ್ರ ಬಹಳ ಬೆಳವಣಿಗೆ ಹೊಂದಿರುವುದರಿಂದ ಸಿಸೇರಿಯನ್ ಹೆರಿಗೆ ಪ್ರಮಾಣವೂ ಹೆಚ್ಚಾಗಿದೆ. ಹಿಂದೆ ಸಂಕೀರ್ಣ ಪ್ರಕರಣಗಳಲ್ಲಿ ಜೀವಗಳನ್ನು ಉಳಿಸುವ ಉದ್ದೇಶದಿಂದ ಸಿಸೇರಿಯನ್ ವಿಧಾನವನ್ನು ಪರಿಚಯಿಸಲಾಗಿತ್ತು. ಆದರೆ ಈಗ ವೈದ್ಯಕೀಯವಾಗಿ ಅಗತ್ಯವಿಲ್ಲದಿದ್ದರೂ ಸಿಸೇರಿಯನ್‌ ವಿಧಾನಗಳನ್ನು ಅತಿಯಾಗಿ ಬಳಸುತ್ತಿರುವುದು ಆತಂಕಕಾರಿಯಾಗಿದೆ’ ಎನ್ನುತ್ತಾರೆ.

ಯಾರಿಗೆ ವಾಟರ್ ಬರ್ತಿಂಗ್?

ಯಾರಾರು ಜಲ ಪ್ರಸವಕ್ಕೆ ಸಿದ್ಧರಾಗಬಹುದು ಎಂದು ಹೇಳುವ ಡಾ. ಸಿರೀಷಾ ರೆಡ್ಡಿ ಅವರು, ‘ಸಾಮಾನ್ಯವಾಗಿ ಪ್ರತೀ 100 ಮಹಿಳೆಯರಲ್ಲಿ 70 ರಿಂದ 80 ಗರ್ಭಿಣಿಯರು ಉತ್ತಮ ತಯಾರಿ ಮತ್ತು ಬೆಂಬಲ ದೊರೆತರೆ ಸಹಜ ಹೆರಿಗೆಗೆ ಒಳಗಾಗುವ ಸಾಮರ್ಥ್ಯ ಹೊಂದಿರುತ್ತಾರೆ. ಕೇವಲ ಶೇ.20 ರಿಂದ ಶೇ.30ರಷ್ಟು ಗರ್ಭಿಣಿಯರು ಮಾತ್ರ ಸಿಸೇರಿಯನ್ ಅಗತ್ಯವಿರುವ ವರ್ಗಕ್ಕೆ ಸೇರಿಸಬಹುದಾಗಿದೆ’ ಎಂದು ಹೇಳುತ್ತಾರೆ.

ಮಧುಮೇಹ ಇರೋರು ಮಾಡಬಹುದೇ?

ಅತಿಯಾದ ಮಧುಮೇಹ ಸಮಸ್ಯೆ ಮತ್ತು ಅಧಿಕ ರಕ್ತದೊತ್ತಡ ಸಮಸ್ಯೆ ಹೊಂದಿರುವ ಮಹಿಳೆಯರು ಜಲ ಪ್ರಸವ ವಿಧಾನವನ್ನು ಆರಿಸಿಕೊಳ್ಳುವುದು ಸಾಧ್ಯವಿಲ್ಲ. ಯಾಕೆಂದರೆ ಅವರಿಗೆ ವೈದ್ಯಕೀಯ ನೆರವಿನ ಅವಶ್ಯಕತೆ ಇರುತ್ತದೆ. ಈ ಹಿಂದೆ ನಾರ್ಮಲ್ ಡೆಲಿವರಿ ಅಥವಾ ಸಹಜ ಹೆರಿಗೆ ಹೊಂದಿದ್ದ ಮಹಿಳೆಯರು ವೈದ್ಯಕೀಯ ವೃತ್ತಿಪರರ ನೆರವನ್ನು ಪಡೆಯುವ ಮೂಲಕ ಸಹಜ ಪ್ರಸವ ಪ್ರಕ್ರಿಯೆಯನ್ನು ಆಯ್ಕೆ ಮಾಡಬಹುದು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮಹಿಳೆಯರೇ ಎಚ್ಚರ.. ದೇಹ ತೋರಿಸುವ ಈ ಲಕ್ಷಣಗಳು ಕ್ಯಾನ್ಸರ್‌ನ ಆರಂಭಿಕ ಸೂಚನೆಗಳು!
ಒಂದು ಗ್ಲಾಸ್ ನೀರಿನ ಜೊತೆ ಇದನ್ನ ಬೆರೆಸಿದ್ರೆ ಅದೆಷ್ಟೋ ಸಮಸ್ಯೆ ನಿವಾರಣೆಯಾಗುತ್ತೆ