
ಭಾರತದಲ್ಲಿ ಪ್ರತಿ ವರ್ಷ ಹಾವು ಕಡಿತದಿಂದ ಅನೇಕ ಜೀವಗಳು ಬಲಿಯಾಗುತ್ತಿವೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಿದರೆ ಬದುಕಿಸಬಹುದು. ಆದರೆ ಹಾವು ಕಚ್ಚಿದ ಸಮಯದಲ್ಲಿ ರೋಗಿಗೆ ತಿನ್ನಲು ಅಥವಾ ಕುಡಿಯಲು ಏನನ್ನೂ ಕೊಡಬಾರದು. ಇದೇನು ಸಂಪ್ರದಾಯ ಅಲ್ಲ, ಬದಲಾಗಿ ವೈಜ್ಞಾನಿಕ ಮಹತ್ವವನ್ನು ಹೊಂದಿದೆ. ಖ್ಯಾತ ವೈದ್ಯರು ತಿಳಿಸುವಂತೆ ರೋಗಿಯು ಸಂಪೂರ್ಣವಾಗಿ ಪ್ರಜ್ಞೆ ಹೊಂದಿದ್ದರೆ, ನುಂಗುವಲ್ಲಿ ಯಾವುದೇ ತೊಂದರೆ ಇಲ್ಲದಿದ್ದರೆ ಮತ್ತು ವಾಂತಿ ಮಾಡದಿದ್ದರೆ, ಅವನನ್ನು ಸಂಪೂರ್ಣವಾಗಿ ಹಸಿವಿನಿಂದ ಅಥವಾ ಬಾಯಾರಿಕೆಯಿಂದ ಇಡುವ ಅಗತ್ಯವಿಲ್ಲ. ಆದರೆ ಆಸ್ಪತ್ರೆ ತಲುಪುವವರೆಗೆ ಕೆಲವು ವಿಶೇಷ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ತುಂಬಾನೆ ಮುಖ್ಯ.
ರೋಗಿಗೆ ಆಹಾರವನ್ನು ನೀಡದಿರುವ ಹಿಂದಿನ ಮೊದಲ ಕಾರಣವೆಂದರೆ ವಾಂತಿ ಮಾಡುವ ಅಪಾಯ. ಕೆಲವು ವಿಷಕಾರಿ ಹಾವುಗಳ ವಿಷವು ದೇಹದ ಜೀರ್ಣಾಂಗ ವ್ಯವಸ್ಥೆ ಮತ್ತು ಮೆದುಳಿನ ಮೇಲೆ ಪರಿಣಾಮ ಬೀರಬಹುದು, ಇದರಿಂದಾಗಿ ರೋಗಿಗೆ ಪದೇ ಪದೇ ವಾಂತಿ ಅಥವಾ ತಲೆತಿರುಗುವಿಕೆ ಮುಂತಾದ ಸಮಸ್ಯೆಗಳು ಉಂಟಾಗಬಹುದು. ರೋಗಿಯು ಭಾರೀ ಊಟವನ್ನು ಸೇವಿಸಿ ಇದ್ದಕ್ಕಿದ್ದಂತೆ ವಾಂತಿ ಮಾಡಿದರೆ, ಶ್ವಾಸಕೋಶಕ್ಕೆ ವಾಂತಿ ಬರುವ ಅಪಾಯ ಹೆಚ್ಚಾಗುತ್ತದೆ, ಇದು ಮಾರಕವಾಗಬಹುದು.
ಎರಡನೆಯದಾಗಿ, ನುಂಗಲು ತೊಂದರೆ. ನಾಗರಹಾವು ಮತ್ತು ಕ್ರೈಟ್ನಂತಹ ಕೆಲವು ವಿಷಕಾರಿ ಹಾವುಗಳ ವಿಷವು ನರಗಳ ಮೇಲೆ ಪರಿಣಾಮ ಬೀರುತ್ತದೆ, ಇದರಿಂದಾಗಿ ರೋಗಿಯು ಮಾತನಾಡಲು ತೊಂದರೆ, ಕರ್ಕಶ ಧ್ವನಿ, ಕಣ್ಣುರೆಪ್ಪೆಗಳು ಜೋತುಬೀಳುವುದು, ನುಂಗಲು ತೊಂದರೆ, ಉಸಿರಾಟದ ತೊಂದರೆ ಮುಂತಾದ ಸಮಸ್ಯೆಗಳನ್ನು ಅನುಭವಿಸಬಹುದು. ಅಂತಹ ಪರಿಸ್ಥಿತಿಯಲ್ಲಿ, ರೋಗಿಯು ನೀರು ಕುಡಿಯಲು ಅಥವಾ ತಿನ್ನಲು ಪ್ರಯತ್ನಿಸಿದರೆ, ಅದು ಶ್ವಾಸನಾಳಕ್ಕೆ ಹೋಗಬಹುದು ಮತ್ತು ಉಸಿರುಗಟ್ಟುವಿಕೆಯ ಅಪಾಯ ಹೆಚ್ಚಾಗಬಹುದು. ಅಷ್ಟೇ ಅಲ್ಲ, ರೋಗಿಯ ಹೊಟ್ಟೆ ತುಂಬಿದ್ದರೆ ಶಸ್ತ್ರ ಚಿಕಿತ್ಸೆ ನೀಡಲು, ಅರಿವಳಿಕೆ ನೀಡಲು ತೊಂದರೆಯಾಗುತ್ತದೆ. ಈ ಸಮಯದಲ್ಲಿ ವಾಂತಿ ಬಂದರೆ ಅದು ಶ್ವಾಸಕೋಶಕ್ಕೆ ಸೇರುವ ಅಪಾಯ ಕೂಡ ಇದೆ. ಅದಕ್ಕಾಗಿ ರೋಗಿಗಳಿಗೆ ಆಹಾರವನ್ನು ಕೆಲವು ಸಮಯಗಳವರೆಗೆ ನೀಡಲಾಗುವುದಿಲ್ಲ.
ಇವುಗಳಲ್ಲಿ ಯಾವುದೂ ಹಾವಿನ ವಿಷವನ್ನು ತಟಸ್ಥಗೊಳಿಸುವುದಿಲ್ಲ. ವೈದ್ಯರ ಪರೀಕ್ಷೆಯ ನಂತರ ರೋಗಿಯ ಸ್ಥಿತಿ ಸಾಮಾನ್ಯವಾಗಿದ್ದರೆ ಮತ್ತು ಯಾವುದೇ ಗಂಭೀರ ಲಕ್ಷಣಗಳಿಲ್ಲದಿದ್ದರೆ, ನಂತರ ಲಘು ಆಹಾರವನ್ನು ನೀಡಬಹುದು. ಆದರೆ ನೆನಪಿಡಿ ಹಾವು ಕಚ್ಚಿದ ತಕ್ಷಣ, ತಡ ಮಾಡದೆ ಆಸ್ಪತ್ರೆಗೆ ಸೇರಿಸಲು ಮರಿಬೇಡಿ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.