ಪಿರಿಯಡ್ಸ್ ಸಮಯದಲ್ಲಿ ಹೆಣ್ಮಕ್ಕಳು ಉಪ್ಪಿನಕಾಯಿ ಮುಟ್ಟಬಾರದು ಅನ್ನೋದು ಯಾಕೆ ಗೊತ್ತ?

Published : Jan 22, 2025, 05:38 PM ISTUpdated : Jan 22, 2025, 05:50 PM IST

ಮುಟ್ಟಿನ ಸಮಯದಲ್ಲಿ,  ಉಪ್ಪಿನಕಾಯಿಯನ್ನು ಮುಟ್ಟಬಾರದು ಅಂತ ನಮ್ಮ ಅಜ್ಜಿಯರು ಹೇಳಿರೋದನ್ನು ನೀವು ಕೇಳಿರಬೇಕು ಅಲ್ವಾ?. ಮುಟ್ಟಿನ ಸಮಯದಲ್ಲಿ ಉಪ್ಪಿನಕಾಯಿಯನ್ನು ಸ್ಪರ್ಶಿಸೋದ್ರಿಂದ ಅದು ಬೇಗನೆ ಹಾಳಾಗುತ್ತದೆ ಅಂತೆ, ಅದು ನಿಜಾನ? ನೋಡೋಣ.   

PREV
15
ಪಿರಿಯಡ್ಸ್ ಸಮಯದಲ್ಲಿ ಹೆಣ್ಮಕ್ಕಳು ಉಪ್ಪಿನಕಾಯಿ ಮುಟ್ಟಬಾರದು ಅನ್ನೋದು ಯಾಕೆ ಗೊತ್ತ?

ಮಹಿಳೆಯರಲ್ಲಿ ಮುಟ್ಟಿನ ಬಗ್ಗೆ ಅಥವಾ ಋತುಚಕ್ರದ (periods) ಬಗ್ಗೆ ಇಂದಿನ ಸಮಯದಲ್ಲಿ ಸಾಕಷ್ಟು ಜಾಗೃತಿ ಇದೆ. ಆದರೆ ಇಂದಿಗೂ, ಅನೇಕ ಮನೆಗಳಲ್ಲಿ, ಅಜ್ಜಿಯರು ಹೇಳಿದ ಕೆಲವು ವಿಷಯಗಳನ್ನು ಪಾಲಿಸಿಕೊಂಡು ಬರ್ತಿದ್ದಾರೆ. ಉದಾಹರಣೆಗೆ ಯಾವುದೇ ವಸ್ತುಗಳನ್ನು ಮುಟ್ಟದಿರೋದು, ಮುಖ್ಯವಾಗಿ ಉಪ್ಪಿನಕಾಯಿಯನ್ನು ಮುಟ್ಟದಿರುವುದು (do not touch pickle on periods) ಇತ್ಯಾದಿ. ಅನೇಕ ಜನರು ಇದನ್ನು ಮೂಢನಂಬಿಕೆ ಎಂದು ಕರೆಯುತ್ತಾರೆ, ಇನ್ನೂ ಕೆಲವರು ಅದನ್ನು ಅನುಸರಿಸೋದು ಸರಿ ಎನ್ನುತ್ತಾರೆ. ನಿಜವಾಗಿಯೂ ಪಿರಿಯಡ್ಸ್ ಸಮಯದಲ್ಲಿ ಉಪ್ಪಿನಕಾಯಿ ಮುಟ್ಟಿದ್ರೆ ಏನಾಗುತ್ತೆ?
 

25

ಋತುಚಕ್ರದ ಕುರಿತು ನಂಬಿಕೆಗಳು : 
ಮುಟ್ಟಿನ ಸಮಯದಲ್ಲಿ, ಉಪ್ಪಿನಕಾಯಿ ಮುಟ್ಟುವುದು, ಕೂದಲು ತೊಳೆಯುವುದು, ಕುಟುಂಬದೊಂದಿಗೆ ಮಲಗುವುದು, ದೇವಾಲಯಕ್ಕೆ ಹೋಗುವುದು (going to temple), ಅಡುಗೆಮನೆಗೆ ಹೋಗುವುದು, ಸಸ್ಯಗಳಿಗೆ ನೀರು ಹಾಕುವುದು ಎಲ್ಲವನ್ನೂ ನಿಷೇಧಿಸಲಾಗಿದೆ ಎಂದು ಅಜ್ಜಿಯರು ಅಥವಾ ನಮ್ಮ ಹಿರಿಯರು ನಂಬುತ್ತಾರೆ. ಮುಟ್ಟಿನ ಸಮಯದಲ್ಲಿ, ಮಹಿಳೆಯರನ್ನು ಹೆಚ್ಚಿನ ಎಲ್ಲಾ ಕೆಲಸಗಳಿಂದ ದೂರವಿರಿಸಲಾಗುತ್ತಿತ್ತು. ಈ ನಂಬಿಕೆಗಳನ್ನು ಇನ್ನೂ ಅನೇಕ ಮನೆಗಳಲ್ಲಿ ಆಚರಣೆ ಮಾಡುತ್ತಾ ಬಂದಿದ್ದಾರೆ. 

35

ಉಪ್ಪಿನಕಾಯಿ ಮುಟ್ಟುವುದನ್ನು ಏಕೆ ನಿಷೇಧಿಸಲಾಗಿದೆ?
ಮುಟ್ಟಿನ ಸಮಯದಲ್ಲಿ ಉಪ್ಪಿನಕಾಯಿಯನ್ನು ಮುಟ್ಟಬಾರದು ಎನ್ನುತ್ತಾರೆ ಅಜ್ಜಿಯಂದಿರು. ಮುಟ್ಟಿನ ಸಮಯದಲ್ಲಿ ಮಹಿಳೆ ಉಪ್ಪಿನಕಾಯಿಯನ್ನು ಮುಟ್ಟಿದರೆ, ಅದು ಬೇಗನೆ ಹಾಳಾಗುತ್ತದೆ ಎನ್ನುವ ನಂಬಿಕೆ ಅವರದ್ದು. ಆದಾಗ್ಯೂ, ಇದರ ಹಿಂದೆ ಯಾವುದೇ ವೈಜ್ಞಾನಿಕ ಸತ್ಯವಿಲ್ಲ. ಮುಟ್ಟಿನ ಸಮಯದಲ್ಲಿ ಉಪ್ಪಿನಕಾಯಿ ತಿನ್ನುವುದು ಆರೋಗ್ಯಕ್ಕೆ ಹಾನಿಕಾರಕ (effects on health) ಅಂತ ಕೆಲವು ತಜ್ಞರು ಹೇಳುತ್ತಾರೆ. ಹಾಗಾಗಿ ಮಹಿಳೆಯರಿಗೆ ಯಾವುದೇ ರೀತಿಯ ತೊಂದರೆ ಬಾರದಿರಲು, ಪಿರಿಯಡ್ಸ್ ಸಮಯದಲ್ಲಿ ಉಪ್ಪಿನಕಾಯಿ ಮುಟ್ಟಿದರೆ, ಅದು ಹಾಳಾಗುತ್ತೆ, ಹಾಗಾಗಿ ಉಪ್ಪಿನಕಾಯಿ ಹತ್ತಿರವೂ ಸುಳಿಯಬಾರದು ಎಂದು ಹೇಳಲಾಗುತ್ತಿತ್ತು. 

45

ಇತರ ನಂಬಿಕೆಗಳು : 
ಮುಟ್ಟಿನ ಸಮಯದಲ್ಲಿ ಮಹಿಳೆಯರಿಗೆ ಹಾನಿ ಮಾಡುವ ವಿಷಯಗಳಿಂದ ಮಹಿಳೆಯರನ್ನು ದೂರವಿಡಲಾಗುತ್ತದೆ. ಉದಾಹರಣೆಗೆ, ಮುಟ್ಟಿನ ಸಮಯದಲ್ಲಿ (periods time) ಅವರು ಅಶುದ್ಧರಾಗಿದ್ದಾರೆ ಎಂದು ಮಹಿಳೆಯರಿಗೆ ಹೇಳಲಾಗುತ್ತದೆ, ಈ ಕಾರಣದಿಂದಾಗಿ ಅವರನ್ನು ಅಡುಗೆಮನೆಗೆ ಪ್ರವೇಶಿಸಲು ಅನುಮತಿಸಲಾಗುವುದಿಲ್ಲ. ಆದರೆ ಇದರ ಹಿಂದಿನ ಕಾರಣವೆಂದರೆ ಮುಟ್ಟಿನ ಸಮಯದಲ್ಲಿ ಮಹಿಳೆಯ ದೇಹವು ದುರ್ಬಲವಾಗಿರುತ್ತದೆ. ಆ ಸಮಯದಲ್ಲಿ, ಅವರಿಗೆ ಸಂಪೂರ್ಣ ವಿಶ್ರಾಂತಿ ನೀಡಲು ಅಡುಗೆಮನೆಗೆ ಪ್ರವೇಶಿಸದಂತೆ ನಿರ್ಬಂಧಿಸಲಾಯಿತು.

55

ಮುಟ್ಟಿನ ಸಮಯದಲ್ಲಿ ಮಹಿಳೆಯ ದೇಹದಿಂದ ಕೊಳಕು ರಕ್ತ ಹೊರಬರುತ್ತದೆ. ಇದಲ್ಲದೆ, ಆ ಸಮಯದಲ್ಲಿ ಮಹಿಳೆ ದೈಹಿಕವಾಗಿ ಮತ್ತು ಮಾನಸಿಕವಾಗಿ (mentally week) ತುಂಬಾ ದುರ್ಬಲಳಾಗಿದ್ದಾಳೆ. ಅಂತಹ ಪರಿಸ್ಥಿತಿಯಲ್ಲಿ, ಎಲ್ಲಾ ಮನೆಕೆಲಸಗಳಿಂದ ಆಕೆಗೆ ವಿಶ್ರಾಂತಿಯನ್ನು ನೀಡಲು , ಆಕೆಯನ್ನು ದೂರವಿಡುವ ಕ್ರಮಗಳನ್ನು ಅನುಸರಿಸಲಾಯಿತು, ಅದರ ನಂತರ ಮಹಿಳೆಯ ದೇಹವು ಸಂಪೂರ್ಣ ವಿಶ್ರಾಂತಿ ಪಡೆಯಬಹುದು. ಆದರೆ ನಂತರ ದಿನಗಳಲ್ಲಿ ಅದನ್ನು ನಂಬಿಕೆಯಂತೆ ಆಚರಿಸುತ್ತಾ ಬಂದಿದ್ದಾರೆ. 

Read more Photos on
click me!

Recommended Stories