ಗಂಡ ನಿಮ್ಮ ಮಾತು ಕೇಳದೇ ಬೇಡಿಕೆ ಈಡೇರಿಸಬೇಕಾ? ಬೆಸ್ಟ್​ ಟೈಂ ಇದಂತೆ ನೋಡಿ: ಸುಧಾ ಮೂರ್ತಿ ಟಿಪ್ಸ್​

Published : Apr 25, 2026, 07:00 PM IST

ಇನ್ಫೋಸಿಸ್ ಸುಧಾ ಮೂರ್ತಿ ಮತ್ತು ನಾರಾಯಣ ಮೂರ್ತಿ ತಮ್ಮ ಸರಳ ಜೀವನಕ್ಕೆ ಹೆಸರುವಾಸಿ. ಪತಿ ಪೇಪರ್ ಓದುವಾಗ ಪತ್ನಿಯ ಮಾತನ್ನು ಕೇಳದೆ 'ಓಕೆ' ಎನ್ನುವ ಬಗ್ಗೆ ಸುಧಾ ಮೂರ್ತಿ ತಮಾಷೆಯ ಪ್ರಸಂಗವೊಂದನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಸುಖಮಯ ದಾಂಪತ್ಯಕ್ಕೆ ಕಿವಿಮಾತನ್ನೂ ನೀಡಿದ್ದಾರೆ.

PREV
16
ಸಿಂಪಲ್ ಸುಧಾ ಮೂರ್ತಿ ದಂಪತಿ

ಇನ್​ಫೋಸಿಸ್​ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಅವರು ಸದಾ ಸಿಂಪ್ಲಿಸಿಟಿಗೆ ಹೆಸರಾದವರು. ದಂಪತಿ ಹಾಗೂ ಅವರ ಮಕ್ಕಳು ಸೇರಿದಂತೆ ಇನ್ಫೋಸಿಸ್‌ನಲ್ಲಿ ಸುಮಾರು 30 ಸಾವಿರ ಕೋಟಿಯವರೆಗಿನ ಒಟ್ಟು ಪಾಲನ್ನು ಹೊಂದಿದ್ದಾರೆ. ಆದರೆ ಅವರು ಸದಾ ಸರಳವಾಗಿ ಬದುಕುತ್ತಿದ್ದಾರೆ. ಸಿಂಪಲ್ ಸೀರೆ ಹಾಕುವ ಅವರು ಯಾವುದೇ ಚಿನ್ನಾಭರಣಗಳನ್ನು ಧರಿಸುವುದೇ ಇಲ್ಲ.

26
ಸರಳ ಜೀವನದಿಂದ ಮಾದರಿ

ಎಷ್ಟೇ ಹಣ ಆಸ್ತಿ ಅಂತಸ್ತು ಸುಖ ಸಂಪತ್ತು ಇದ್ದರೂ ಕೂಡ ಎಂದೂ ಅದನ್ನು ಹೊರಗಡೆ ತೋರಿಸದೆ ಎಲ್ಲರೊಡನೆ ಬೆರೆತು ತನ್ನ ಸರಳ ಜೀವನದಲ್ಲಿಯೇ ಖುಷಿಯನ್ನು ಹುಡುಕುತ್ತಾ, ಎಲ್ಲರಿಗೂ ಮಾದರಿಯಾಗುವ ರೀತಿಯಲ್ಲಿ ಜೀವನ ಸಾಗಿಸುತ್ತಾ ಬರುತ್ತಿದ್ದಾರೆ ಇವರು. ಮನಸ್ಸು ಮಾಡಿದ್ದರೆ ಕೋಟಿ ಕೋಟಿಯ ವಜ್ರಾಭರಣಗಳನ್ನೂ ಇವರು ಧರಿಸಬಹುದು. ಆದರೆ ಆಡಂಬರವಿಲ್ಲದ ಜೀವನ ಇವರದ್ದು.

36
ಗಂಡಸರ ಗುಟ್ಟು

ಇದೀಗ ಅವರು, ತಮಾಷೆಯಾಗಿ ಒಂದು ವಿಷಯವನ್ನು ಹೇಳಿದ್ದಾರೆ. ಅದರಲ್ಲಿ ಗಂಡಸರು, ತಮ್ಮ ಪತ್ನಿಯ ಮಾತನ್ನು ಆಲಿಸದೇ ಅದಕ್ಕೆ ಓಕೆ ಎನ್ನುವುದು ಯಾವಾಗ ಎನ್ನುವ ಮಾತನ್ನು ಹೇಳಿದ್ದಾರೆ.

46
ಯಾವುದು ಆ ಸಮಯ?

ಸುಧಾ ಮೂರ್ತಿ ಅವರ ಪ್ರಕಾರ, ಗಂಡ ಪೇಪರ್​ ಓದುವಾಗಿ ಪತ್ನಿ ಏನಾದ್ರೂ ಕೇಳಿದ್ರೆ, ಅದನ್ನು ಗಂಡನಾದವ ಕೇಳಿಸಿಕೊಳ್ಳುವುದಿಲ್ಲವಂತೆ. ಪೇಪರ್​ ಓದುವುದರಲ್ಲಿ ಬಿಜಿ ಇರ್ತಾನೆ. ಆದರೆ ಪತ್ನಿ ಏನಾದ್ರೂ ಕೇಳಿದ್ರೆ ಓಕೆ ಅಂದುಬಿಡುತ್ತಾನಂತೆ. ನಾನೂ ಹಾಗೆಯೇ ಮಾಡಿದ್ದೆ ಎಂದು ಒಂದು ಪ್ರಸಂಗವನ್ನು ನೆನಪಿಸಿಕೊಂಡಿದ್ದಾರೆ.

56
ಮಾತು ಕೇಳದೇ ಓಕೆ ಎನ್ನೋ ಪತಿ

ಒಮ್ಮೆ ಮೂರ್ತಿ ಅವರು ಪೇಪರ್​ ಓದುತ್ತಿರುವಾಗ ನಾನು ಅವರು ಓಕೆ ಎನ್ನುತ್ತಾರೆ ಎನ್ನುವ ಕಾರಣಕ್ಕೆ ಮೂರು ಕೋಟಿಯ ಆಭರಣ ಖರೀದಿ ಮಾಡ್ತೇನೆ ಎಂದೆ. ಅದಕ್ಕೆ ನಾನು ಎಂದುಕೊಂಡಂತೆ ಆಗಲಿಲ್ಲ. ಮೂರ್ತಿ ಅವರು ಪೇಪರ್​ ಪಕ್ಕಕ್ಕಿಟ್ಟು ನೀನು ವಿಲೇಜ್​ ಅಕೌಂಟೆಂಟ್​ ಕುಟುಂಬದವಳು, ಇಷ್ಟು ದುಡ್ಡು ಕೊಟ್ಟು ಖರೀದಿ ಮಾಡಿದ್ರೆ ಏನೂ ಲಾಸ್​ ಆಗಲ್ಲ, ಆದರೆ ನೀನು 30 ರೂಪಾಯಿಯದ್ದನ್ನೇ ಖರೀದಿ ಮಾಡುವವಳಲ್ಲ, ಇನ್ನು ಮೂರು ಕೋಟಿ ರೂಪಾಯಿದ್ದು ಖರೀದಿ ಮಾಡೋದೇ ಇಲ್ಲ ಬಿಡು ಎಂದರು ಎಂದಿದ್ದಾರೆ. ಇದಕ್ಕೆ ಹಲವರು ಪೇಪರ್​ ವಿಷ್ಯವನ್ನು ಮಾತ್ರ ನಿಜ ನಿಜ ಎಂದಿದ್ದು, ತಮ್ಮ ಮನೆಯಲ್ಲಿಯೂ ಹಾಗೆಯೇ ಎಂದು ಕಮೆಂಟ್​ ಹಾಕುತ್ತಿದ್ದಾರೆ.

66
ಸುಖಮಯ ದಾಂಪತ್ಯಕ್ಕೆ

ಈ ಹಿಂದೆ ದಾಂಪತ್ಯದ ಬಗ್ಗೆ ಕಿವಿಮಾತು ಹೇಳಿದ್ದ ಸುಧಾ ಮೂರ್ತಿ ಅವರು, ಗಂಡ ಹೆಂಡತಿಯ ಜಗಳದಲ್ಲಿ, ಒಬ್ಬ ವ್ಯಕ್ತಿ ಕೋಪಗೊಂಡರೆ, ಇನ್ನೊಬ್ಬರು ಶಾಂತವಾಗಿರ ಬೇಕು. ಅವರು ಬಾಯಿ ತೆರೆಯಬಾರದು. ಮೂರ್ತಿ (ನಾರಾಯಣ್) ಕೋಪಗೊಂಡಾಗ, ನಾನು ಸುಮ್ಮನಿರುತ್ತೇನೆ. ಅವರು ಏನು ಹೇಳಬೇಕೋ ಹೇಳಲಿ ಎಂದು ನಾನು ಸುಮ್ಮನೆ ಇರುತ್ತೇನೆ. ನಾನು ಮಾತನಾಡುವುದಿಲ್ಲ ಎಂದಿದ್ದರು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories