Muddu Sose Serial: ಸುಳ್ಳು ಹೇಳಿದ ವಿನಂತಿ; ತಕ್ಕ ಪಾಠ ಕಲಿಸಿದ ದೇವರು; ರಣರೋಚಕ ಎಪಿಸೋಡ್‌ ಇದು!

Published : Mar 14, 2026, 12:13 PM IST

Muddu Sose Kannada Serial Episode Update: ಮುದ್ದುಸೊಸೆ ಧಾರಾವಾಹಿಯಲ್ಲಿ ಶಿವರಾಮೇಗೌಡ ಜೈಲಿಗೆ ಹೋಗಿದ್ದ ವಿಷಯದಲ್ಲಿ ವಿದ್ಯಾ ಪಾಲು ಇಲ್ಲ ಎಂದು ಎಲ್ಲರಿಗೂ ಗೊತ್ತಿದೆ. ಆದರೆ ಭದ್ರೇಗೌಡ, ವಿನಂತಿಯನ್ನು ಬಳಸಿಕೊಂಡಿಲ್ಲ ಎಂದು ಸಾಬೀತಾಗಬೇಕಿದೆ. ಈಗ ದೈವ ಲೀಲೆಯ ಪರಾಕಾಷ್ಠೆ ಆಗಬೇಕಿದೆ. 

PREV
14
ವಿನಂತಿ, ಭದ್ರೇಗೌಡ ಮಧ್ಯೆ ಏನು ನಡೀತು?

ಭದ್ರೇಗೌಡನ ಜನ್ಮದಿನದಂದು ವಿನಂತಿ ಅಮಲು ಬರಿಸುವ ವಸ್ತು ಹಾಕಿದ ಕೇಕ್‌ ತಂದಿದ್ದಳು. ಅದನ್ನು ತಿಂದ ಭದ್ರೇಗೌಡ ನಿದ್ದೆ ಮಾಡಿದ್ದನು. ಆಮೇಲೆ ವಿನಂತಿ ಅವನ ಬೆಡ್‌ನಲ್ಲಿ ಅಶ್ಲೀಲ ರೀತಿಯಲ್ಲಿ ಕಂಡಿದ್ದಳು. ಇದನ್ನು ನೋಡಿದ ಮನೆಯವರು ಇವರಿಬ್ಬರ ಮಧ್ಯೆ ಏನೋ ನಡೆದಿದೆ ಎಂದು ಭಾವಿಸಿದ್ದರು.

24
ವಿನಂತಿಯನ್ನು ಮನೆಯಿಂದ ಹೊರಹಾಕಿದ ಶಿವರಾಮೇಗೌಡ

ವಿನಂತಿ ಜೀವನ ಹಾಳಾಗಬಾರದು ಎಂದು ಭದ್ರನ ಜೊತೆ ಅವಳ ಮದುವೆ ಮಾಡಲು ರೆಡಿಯಾಗಿದ್ದರು. ಅದೇ ಟೈಮ್‌ಗೆ ಶಿವರಾಮೇಗೌಡ ಜೈಲಿಗೆ ಹೋಗಲು ವಿನಂತಿ ಕಾರಣ ಎನ್ನೋದು ರಿವೀಲ್‌ ಆಯ್ತು. ಹೀಗಾಗಿ ಅವಳನ್ನು ಮನೆಯಿಂದ ಹೊರಹಾಕಿದರು. ಆದರೆ ವಿನಂತಿ ಮಾತ್ರ ಭದ್ರನನ್ನು ಮದುವೆ ಆಗಲು ಮತ್ತೆ ಸುಳ್ಳಿನ ಕೋಟೆ ಕಟ್ಟಿದ್ದಾರೆ.

34
ಶಿವರಾಮೇಗೌಡನ ಮೈಮೇಲೆ ದೇವರು

ನಾನು ನನ್ನ ಹೆಂಡ್ತಿಗೆ ಮೋಸ ಮಾಡಿಲ್ಲ ಎಂದು ಭದ್ರೇಗೌಡ ಹೇಳಿದ್ದಾನೆ. ನನ್ನ ಗಂಡ ಎಂದೂ ಈ ಥರ ಮಾಡೋನಲ್ಲ ಎಂದು ವಿದ್ಯಾ ಕೂಡ ಹೇಳಿದ್ದಾಳೆ. ಇವರಿಬ್ಬರು ದೇವರ ಮುಂದೆ ಪ್ರಮಾಣ ಮಾಡಿ, ಕೆಂಡ ಹಾಯ್ದಿದ್ದಾರೆ. ಅತ್ತ ಶಿವರಾಮೇಗೌಡನ ಮೈಮೇಲೆ ದೇವರು ಬಂದಿದ್ದಾರೆ.

44
ವಿನಂತಿ ಸತ್ಯ ಹೇಳ್ತಾಳಾ?

ಶಿವರಾಮೇಗೌಡನ ಮೈಮೇಲೆ ಬಂದ ದೇವರು, “ಸತ್ಯ ಹೇಳಿದ್ರೆ ಬದುಕಿಕೊಳ್ತೀಯಾ, ಇಲ್ಲ ಅಂದ್ರೆ ಸಾಯ್ತೀಯಾ” ಎಂದು ಹೇಳಿದ್ದಾನೆ. ಆಗ ವಿನಂತಿ ಸತ್ಯ ಹೇಳಬಹುದು, ದೇವರ ಪರಾಕಾಷ್ಠೆ ಮೇಲೆ ವಿನಂತಿ ಮೋಸ ಬಯಲಾಗುವ ಸಾಧ್ಯತೆ ಇದೆ. ಇದು ನಿಜಕ್ಕೂ ರೋಚಕ ಎಪಿಸೋಡ್‌ ಎನ್ನಬಹುದು. ಮುಂದಿನ ದಿನಗಳಲ್ಲಿ ಏನಾಗಲಿದೆ ಎಂದು ಕಾದು ನೋಡಬೇಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories