ಆದರೆ ಯಾರ ಎದುರೂ ಆ ಗೊಂಬೆಯ ರಹಸ್ಯವನ್ನು ಹೇಳುವುದು ಕರ್ಣನಿಗೂ ಸಾಧ್ಯವಿಲ್ಲ, ನಿಧಿಗೂ ಸಾಧ್ಯವಿಲ್ಲ. ನಿತ್ಯಾಗೆ ಇನ್ನೂ ಕರ್ಣ ಮತ್ತು ನಿಧಿಯ ಪ್ರೀತಿಯ ಬಗ್ಗೆಯೂ ತಿಳಿದಿಲ್ಲ. ಆದರೆ, ತಂಗಿಯ ಪರವಾಗಿ ನಿಂತಿರೋ ನಿತ್ಯ ಮಾತ್ರ ಏನೇ ಬಂದರೂ ಅವಳು ಇಷ್ಟಪಟ್ಟಿದ್ದು, ಅವಳಿಗೆ ಕೊಡುತ್ತೇನೆ ಎಂದಿದ್ದಾಳೆ. ಮುಂದೇನಾಗುತ್ತೆ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.