ಇಬ್ರನ್ನೂ ಮದ್ವೆ ಆಗ್ತಾನಾ ಕರ್ಣ? ಮುಂದೇನಾಗತ್ತೆ? ನೇರಪ್ರಸಾರದಲ್ಲಿ Karna Serial ನಟರು ಹೇಳಿದ್ದೇನು ಕೇಳಿ

Published : Oct 16, 2025, 08:55 PM IST

ಕರ್ಣ ಸೀರಿಯಲ್ ರೋಚಕ ತಿರುವು ಪಡೆದಿದ್ದು, ನಿಧಿಯ ಬದಲು ನಿತ್ಯಾಳಿಗೆ ಕರ್ಣ ತಾಳಿ ಕಟ್ಟಿದ್ದಾನೆ. ಮದುವೆ ವೇಳೆ ನಿತ್ಯಾ ಗರ್ಭಿಣಿ ಎಂಬ ಸತ್ಯವೂ ಬಹಿರಂಗವಾಗಿದೆ. ಈ ಟ್ವಿಸ್ಟ್‌ಗಳ ಬಗ್ಗೆ ಕರ್ಣ, ನಿತ್ಯಾ ಮತ್ತು ನಿಧಿ ಪಾತ್ರಧಾರಿಗಳು ಲೈವ್ ಬಂದು ಮಾತನಾಡಿದ್ದಾರೆ.

PREV
17
ರೋಚಕ ಟ್ವಿಸ್ಟ್​ನಲ್ಲಿ ಕರ್ಣ ಸೀರಿಯಲ್​

ಸದ್ಯ ಕರ್ಣ ಸೀರಿಯಲ್​ (Karna Serial) ರೋಚಕ ಟ್ವಿಸ್ಟ್​ ಪಡೆದುಕೊಂಡಿದೆ. ನಿಧಿಯನ್ನು ಮದ್ವೆಯಾಗಬೇಕಿದ್ದ ಕರ್ಣ ನಿತ್ಯಾಳಿಗೆ ತಾಳಿ ಕಟ್ಟಿದ್ದಾನೆ. ಇದೇ ವೇಳೆ ಸಪ್ತಪದಿ ತುಳಿಯುವ ಸಂದರ್ಭದಲ್ಲಿ ಆಕೆ ಗರ್ಭಿಣಿ ಎನ್ನುವುದು ತಿಳಿದಿದೆ. ಇವೆಲ್ಲಾ ಟ್ವಿಸ್ಟ್​ ಮೇಲೆ ಟ್ವಿಸ್ಟ್​ ನಡುವೆಯೇ ಕರ್ಣ ಸೀರಿಯಲ್​ ಪಾತ್ರಧಾರಿಗಳಾಗಿರುವ ಕರ್ಣ, ನಿತ್ಯಾ ಮತ್ತು ನಿಧಿ ನೇರಪ್ರಸಾರದಲ್ಲಿ ಬಂದು ವೀಕ್ಷಕರ ಜೊತೆ ಮಾತನಾಡಿದ್ದಾರೆ.

27
ಕರ್ಣ ಸೀರಿಯಲ್​ ನಟ-ನಟಿಯರು ಲೈವ್​

ಕರ್ಣ ಉರ್ಫ್​ ಕಿರಣ್​ ರಾಜ್​ (Kiran Raj), ನಿತ್ಯ ಪಾತ್ರಧಾರಿ ನಮ್ರತಾ ಗೌಡ (Namrutha Gowda) ಮತ್ತು ನಿಧಿ ಪಾತ್ರಧಾರಿ ಭವ್ಯ ಗೌಡ (Bhavya Gowda) ನೇರಪ್ರಸಾರದಲ್ಲಿ ಬಂದು ಮಾತನಾಡಿದ್ದಾರೆ. ನಾವೆಲ್ಲಾ ಗ್ಲಿಸರಿನ್​ ಇಲ್ಲದೆಯೇ ತುಂಬಾ ಅತ್ತಿದ್ದೇವೆ. ತುಂಬಾ ಎಮೋಷನ್​ ಆಗಿದ್ವಿ ಶೂಟಿಂಗ್​ನಲ್ಲಿ ಎಂದಿದ್ದಾರೆ ನಟಿ ನಮ್ರತಾ ಗೌಡ. ನನ್ನನ್ನು ನೋಡಿಕೊಂಡು ತುಂಬಾ ಬೈದುಕೊಂಡಿದ್ದೀರಿ ಎನ್ನೋದು ಗೊತ್ತು. ಆದರೆ ಫುಲ್​ ಸೀರಿಯಲ್​ ನೋಡಿದಾಗ ನಿತ್ಯಾ ಹೀಗೆ ಏಕೆ ಮಾಡಿದಳು ಎನ್ನುವುದು ತಿಳಿಯುತ್ತದೆ ಎಂದಿದ್ದಾರೆ.

37
ನಿಜ ಜೀವನಕ್ಕೆ ಹತ್ತಿರ

ಕರ್ಣ ಯಾರನ್ನು ಮದ್ವೆ ಆಗ್ತಾನೆ, ಮುಂದೇನಾಗತ್ತೆ ಎನ್ನೋದನ್ನು ನೀವು ಸೀರಿಯಲ್​ ನೋಡಿಯೇ ತಿಳಿಯಬೇಕು ಎಂದಿದ್ದಾರೆ ಈ ನಟರು. ಲೈಫ್​ ಕೂಡ ಇದೇ ರೀತಿ. ನಾವು ಅಂದುಕೊಂಡದ್ದೇ ಒಂದು, ಆಗೋದೇ ಇನ್ನೊಂದು, ಅದನ್ನೇ ಸೀರಿಯಲ್​ನಲ್ಲಿಯೂ ತೋರಿಸಲಾಗಿದೆ ಎಂದಿದ್ದಾರೆ ಕಿರಣ್​ ರಾಜ್​.

47
ರಿಯಲ್​ ಲೈಫ್​ಗೂ ಅಪ್ಲೈ

ನಮ್ಮ ಮೂರು ಕ್ಯಾರೆಕ್ಟರ್​ ಅನ್ನು ಪರ್ಸನಲ್​ ಆಗಿ ತೆಗೆದುಕೊಂಡಿರುವುದು ನಿಮ್ಮ ಕಮೆಂಟ್ಸ್​ ನೋಡಿ ತಿಳಿಯುತ್ತದೆ. ಇದು ರಿಯಲ್​ ಲೈಫ್​ಗೂ ಅಪ್ಲೈ ಆಗುತ್ತದೆ. ಸಂದರ್ಭಕ್ಕೆ ತಕ್ಕಂತೆ ನಡೆದುಕೊಂಡು ಹೋಗುವ ಕ್ಯಾರೆಕ್ಟರ್​ ಕೂಡ ಇದೆ. ಇದೊಂದು ಬರೀ ಸೀರಿಯಲ್​ ಆಗಿರದೇ ನಿಜ ಜೀವನಕ್ಕೆ ಹತ್ತಿರವಾಗಿದೆ ಎಂದಿದ್ದಾರೆ ಕಿರಣ ರಾಜ್​.

57
ನೆಗೆಟಿವ್​ ಕಮೆಂಟ್ಸ್​ಗೆ ಬೇಸರ

ಬ್ರೇಕ್​ ಇಲ್ಲದೇ ಶೂಟಿಂಗ್​ ಮಾಡುತ್ತಿದ್ದೇವೆ ಎಂದಿರೋ ನಮ್ರತಾ ಗೌಡ, ತಮಗೆ ಬರ್ತಿರೋ ನೆಗೆಟಿವ್​ ಕಮೆಂಟ್ಸ್​ ಬಗ್ಗೆ ಬೇಸರ ಆಗುತ್ತದೆ ಎಂದಿದ್ದಾರೆ. ಈ ಸೀರಿಯಲ್ ಬಿಟ್ಟುಬಿಡು ಎಂದು ತುಂಬಾ ಜನ ಮೆಸೇಜ್​ ಮಾಡ್ತೀರಾ. ಆದರೆ ಮುಂದೆ ನೋಡಿ ಏನಾಗುತ್ತದೆಯೆಂದು. ಇದು ತುಂಬಾ ವಿಭಿನ್ನ ಕ್ಯಾರೆಕ್ಟರ್​. ಅದಕ್ಕಾಗಿಯೇ ಒಪ್ಪಿಕೊಂಡೆ. ಆದರೆ ಕೆಲವೊಮ್ಮೆ ಮೆಸೇಜ್​ ಬರೋದನ್ನು ನೋಡಿ ಸೀರಿಯಲ್​ ಬಿಟ್​ಬಿಡೋಣ ಎನ್ನಿಸಿದ್ದೂ ಉಂಟು ಎಂದಿದ್ದಾರೆ.

67
ನಿಧಿ ಕರ್ಣನನ್ನು ಬಿಟ್ಟು ಕೊಡ್ತಾಳಾ?

ಕರ್ಣನ ಬಿಟ್ಟುಕೊಡುತ್ತೀರಾ ಎಂದು ನಿಧಿಗೆ ಕೇಳಿದ ಪ್ರಶ್ನೆಗೆ, ನಟಿ ಭವ್ಯಾ ಗೌಡ ನನ್ನ ಅಕ್ಕ ನಿತ್ಯನಿಗೆ ನಮ್ಮ ಲವ್​ ವಿಷ್ಯ ಗೊತ್ತಾಗಿದ್ದರೆ ಆಕೆ ಮದುವೆ ಆಗ್ತಾ ಇರಲಿಲ್ಲ. ಕರ್ಣ ಕೂಡ ಸನ್ನಿವೇಶಕ್ಕೆ ತಕ್ಕಂತೆ ಮದ್ವೆಯಾಗಬೇಕಾಯಿತು ಎಂದ್ರೆ, ಕಿರಣ್​ ರಾಜ್​ ಅವರು ಇದು ಸ್ಟೋರಿ ಎಂಡ್​ ಅಲ್ಲ. ಇದು ಶುರು ಮಾತ್ರ. ಇದು ಕನ್​ಕ್ಲೂಸನ್​ ಅಲ್ಲ. ಟ್ವಿಸ್ಟ್​ ಇದ್ದೇ ಇರುತ್ತದೆ. ಅದನ್ನು ಫುಲ್​ ನೋಡಿ ಎನ್ನೋ ಮೂಲಕ ಕರ್ಣ ಮತ್ತು ನಿಧಿ ಒಂದಾಗೋ ಸೂಚನೆ ಕೊಟ್ಟಿದ್ದಾರೆ.

77
ಇಬ್ಬರನ್ನೂ ಮದ್ವೆಯಾಗಿ

ಕರ್ಣ ಇಬ್ಬರನ್ನೂ ಮದ್ವೆಯಾಗ್ತೀರಾ ಎನ್ನುವ ಪ್ರಶ್ನೆಗೆ ಏನೂ ಉತ್ತರಿಸಿಲ್ಲ ನಟರು. ಆದರೆ ಬೈ ಒನ್​ ಗೆಟ್​ ಒನ್​ ಫ್ರೀ ಆಗತ್ತೆ ಎಂದು ನಕ್ಕಿದ್ದಾರೆ ಅಷ್ಟೇ. ಇಬ್ಬರನ್ನೂ ಮದ್ವೆಯಾಗಿಬಿಡಿ ಎಂದು ಕರ್ಣನಿಗೆ ವೀಕ್ಷಕರು ಟಿಪ್ಸ್​ ಕೂಡ ಕೊಟ್ಟಿದ್ದಾರೆ. ಅದಕ್ಕೇ ನಗುವೇ ಉತ್ತರವಾಗಿದೆ ಈ ನಟರದ್ದು.

Read more Photos on
click me!

Recommended Stories