ಪತ್ನಿ: ಪಾಪ ಅಂತ ಬಾಯಲ್ಲಿ ಹೇಳಿದರೆ ಸಾಕಾ?
ರಮೇಶ್: ದೊಡ್ಡದು ಏನಾದರೂ ಆಗಬೇಕು ಅಂತಿದ್ರೆ ಜೀವನದಲ್ಲಿ ದೊಡ್ಡ ಕಷ್ಟವನ್ನೇ ಎದುರಿಸಬೇಕು. ರಾಮಾಯಣದಲ್ಲಿ ರಾವಣ, ಮಹಾಭಾರತದಲ್ಲಿ ದೂರ್ಯೋಧನ, ಸಿನಿಮಾದಲ್ಲಿ ವಿಲನ್ಗಳು, ಹಾಗೆ ಇಲ್ಲಿ. ಕರ್ಣನ ಹೃದಯವನ್ನು ಒಡೆದು, ಅವನ ಹೃದಯವನ್ನು ಎಲ್ಲರೂ ನೆನಪಿಟ್ಟುಕೊಳ್ಳುವ ಹಾಗೆ ಮಾಡೋದು ನಾನು. ಜನರು ಯಾವಾಗಲೂ ದುರಂತ ಕಥೆಯನ್ನು ನೆನಪಿಟ್ಟುಕೊಳ್ತಾರೆ. ಸುಮಾರು ಜನರು ದೇವರನ್ನು ನೆನಪಿಟ್ಟುಕೊಳ್ಳದಿದ್ರೂ, ದೇವದಾಸ್ನನ್ನು ನೆನಪಿಟ್ಟುಕೊಂಡಿದ್ದಾರೆ. ಇಲ್ಲಿ ಕರ್ಣ ನಿಧಿ ಪ್ರೀತಿ ನೆನಪಿಟ್ಟುಕೊಳ್ಳಿ, ಹಾಗೆ ಅವರ ಪ್ರೀತಿಯನ್ನು ಚಿವುಟುವೆ.