ದುರಾಸೆಯ ಅಣ್ಣ ಸಂತೋಷ್ನಿಂದಾಗಿ ಭಾವನಾ ಸಂಸಾರದಲ್ಲಿ ಬಿರುಕು ಮೂಡಿದೆ. ಅಣ್ಣನ ಮನೆಯಲ್ಲಿ ಆಶ್ರಯ ಪಡೆದಿದ್ದ ಭಾವನಾಗೆ, ಸಂತೋಷ್ ಬಾಡಿಗೆ ಕೇಳುವ ಮೂಲಕ ಮತ್ತಷ್ಟು ಆಘಾತ ನೀಡಿದ್ದಾನೆ. ಇದರಿಂದ ನೊಂದ ಭಾವನಾ ಅಣ್ಣನ ಮನೆ ಬಿಟ್ಟು ಹೋಗಲು ನಿರ್ಧರಿಸಿದ್ದಾಳೆ.
ಅಣ್ಣ ಸಂತೋಷ್ನ ದುರಾಸೆ ಮತ್ತು ಅತ್ತೆ-ಮಾವ, ಓರಗಿತ್ತಿಯ ಕುತಂತ್ರದಿಂದಾಗಿ ಭಾವನಾ ಸಂಸಾರದಲ್ಲಿ ಬಿರುಕು ಮೂಡಿದೆ. ಭಾವನಾ ಸದ್ಯ ಅಣ್ಣನ ಮನೆಯಲ್ಲಿದ್ದು, ಯಾವ ಮೋಸವೂ ತಿಳಿಯದೇ ಒಂಟಿಯಾಗಿ ಕಣ್ಣೀರು ಹಾಕುತ್ತಿದ್ದಾರೆ. ತಂಗಿಯ ಸಂಸಾರ ಹಾಳು ಮಾಡಿರುವ ಸಂತೋಷ್, ಇದೀಗ ಆಕೆಯ ಮಾವನಿಂದ ಹಣ ಕೀಳುತ್ತಿದ್ದಾನೆ. ಇತ್ತ ಕೆಲಸಕ್ಕೆ ಸೇರಿರುವ ಭಾವನಾಳ ಸಂಬಳದ ಮೇಲೆಯೂ ಸಂತೋಷ್ ಕಣ್ಣು ಹಾಕಿದ್ದಾನೆ.
25
ಜವರೇಗೌಡನಿಂದಲೂ ಹಣ ಪಡೆದ ಸಂತೋಷ್
ಜವರೇಗೌಡನಿಂದ ಸಂತೋಷ್ 90 ಸಾವಿರ ರೂಪಾಯಿ ಹಣ ಪಡೆದುಕೊಳ್ಳುತ್ತಿರೋದನ್ನು ಮರಿಗೌಡರು ನೋಡಿದ್ದಾರೆ. ಇವರಿಬ್ಬರ ಸಂಚಿನಿಂದ ಸಿದ್ದೇಗೌಡ-ಭಾವನಾ ಸಂಸಾರ ಹಾಳಾಗ್ತಿದೆ ಎಂಬ ರಹಸ್ಯ ಬಯಲಾಗಿದೆ. ಜವರೇಗೌಡರಿಂದ ಹಣ ಪಡೆದ ಸಂತೋಷ್, ತಂಗಿ ಭಾವನಾಳ ಬಳಿ ತಿಂಗಳಿಗೆ ಇಂತಿಷ್ಟು ದುಡ್ಡು ನೀಡುವಂತೆ ಕೇಳಿದ್ದಾನೆ.
35
ತಂಗಿಗೆ ಬಾಡಿಗೆ ಕೇಳಿದ ಸಂತೋಷ್
ನಿನಗೆ ಪ್ರೈವೇಸಿ ಬೇಕಾಗಬಹುದು, ಹಾಗಾಗಿ ಮೇಲಿರುವ ರೂಮ್ಗೆ ಶಿಫ್ಟ್ ಆಗು. ನಿನಗೆ ಬೇಕಾಗಿರುವ ಎಲ್ಲಾ ಸೌಲಭ್ಯ ಕಲ್ಪಿಸಿ ಕೊಡುತ್ತೇನೆ. ಈ ಏರಿಯಾದಲ್ಲಿ ಬಾಡಿಗೆ 10 ಸಾವಿರ ರೂಪಾಯಿ ಇದೆ. ನೀನು ನನ್ನ ತಂಗಿ ಅಲ್ಲವಾ ಐದರಿಂದ ಆರು ಸಾವಿರ ರೂಪಾಯಿ ಕೊಟ್ಟರೆ ಸಾಕು. ವಿದ್ಯುತ್, ವಾಟರ್ ಬಿಲ್ ಸೇರಿದ್ರೆ ತಿಂಗಳಿಗೆ 7 ಸಾವಿರ ರೂಪಾಯಿ ಕೊಡುವಂತೆ ಸಂತೋಷ್ ಕೇಳುತ್ತಾನೆ.
ಬಾಡಿಗೆ ಮನೆಯಲ್ಲಿರಬೇಕಾದ್ರೆ ಎಲ್ಲಾದ್ರು ಇರಬಹುದು. ಸ್ವಂತ ಅಣ್ಣನ ಮನೆಯಲ್ಲಿ ಬಾಡಿಗೆ ಇರೋದು ಬೇಕಿಲ್ಲ. ನನ್ನನ್ನು ಕರೆದುಕೊಂಡು ಬಂದಾಗ ನೀನು ಬದಲಾಗಿದ್ದೀಯಾ? ಪ್ರೀತಿ ಮತ್ತು ಸಂಬಂಧಗಳಿಗೆ ಬೆಲೆ ಕೊಡ್ತಿದ್ದೀಯಾ ಅಂತ ಅಂದುಕೊಂಡಿದ್ದೆ. ಆದ್ರೆ ಈ ಪ್ರೀತಿ ಹಿಂದೆ ಹಣವಿರೋದು ಗೊತ್ತಿರಲಿಲ್ಲ. ನಿನ್ನ ಖಾಲಿ ಇರೋ ಮನೆಗೆ ಬಾಡಿಗೆದಾರರನ್ನು ಕರೆದುಕೊಂಡು ಬಂದಿದ್ದೀಯಾ ಎಂದು ಸಂತೋಷ್ಗೆ ಭಾವನಾ ಉಗಿದಿದ್ದಾಳೆ.
ಸಂಬಳ ಆಗುತ್ತಿದ್ದಂತೆ ಮನೆ ಖರ್ಚಿಗೆ ಒಂದಿಷ್ಟು ಹಣ ಕೊಡುತ್ತಿದ್ದೆ. ನೊಂದಿರುವ ತಂಗಿ ಬಳಿ ಹೀಗೆಲ್ಲಾ ಕೇಳಿದ್ರೆ ನನಗೆ ಎಷ್ಟು ನೋವು ಆಗುತ್ತೆ ಅಂತ ಯೋಚಿಸಬೇಕಲ್ಲವಾ? ಇದು ನಿನ್ನ ಸ್ವಾರ್ಥ ಅಲ್ಲವಾ ಎಂದು ಭಾವನಾ ಪ್ರಶ್ನೆ ಮಾಡಿದ್ದಾಳೆ. ಅಣ್ಣನ ಮನೆಯಲ್ಲಿಯೇ ಬಾಡಿಕೆ ಕೊಟ್ಟು ಇರುವಷ್ಟು ಗತಿ ನನಗೆ ಬಂದಿಲ್ಲ. ಬಾಡಿಗೆ ಮನೆಯಲ್ಲಿರಬೇಕಾದ್ರೆ ಎಲ್ಲಾದ್ರು ಇರಬಹುದು, ನಾನು ಇವತ್ತೇ ಮನೆಬಿಟ್ಟು ಹೋಗ್ತೀನಿ ಎಂದು ಭಾವನಾ ಹೇಳಿದ್ದಾಳೆ.