ಬಿಗ್ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿ ಚೈತ್ರಾ ಕುಂದಾಪುರ, ಅಶ್ವಿನಿ ಗೌಡ ಜೊತೆಗಿನ ಜಗಳದ ಬಗ್ಗೆ ಮತ್ತೆ ಮಾತನಾಡಿದ್ದಾರೆ. ಆಟದ ವೇಳೆ ತನಗೂ ಗಾಯವಾಗಿತ್ತು ಎಂದು ಗುರುತು ತೋರಿಸಿರುವ ಚೈತ್ರಾ, ತನಗೆ ಪಿಆರ್ ಟೀಂ ಇರಲಿಲ್ಲವೆಂದು ಅಸಮಾಧಾನ ಹೊರಹಾಕಿದ್ದಾರೆ.
ಬಿಗ್ಬಾಸ್ ಕನ್ನಡ ಸೀಸನ್ 12 ಮುಗಿದು ತಿಂಗಳು ಸಮೀಪಿಸುತ್ತಿದ್ರೂ ಸ್ಪರ್ಧಿಗಳು ಮಾತ್ರ ಇನ್ನು ಆಟದಿಂದ ಹೊರ ಬಂದಂತೆ ಕಾಣಿಸುತ್ತಿಲ್ಲ. ಈ ಬಾರಿ ಬಿಗ್ಬಾಸ್ ಮನೆಗೆ ವಿಶೇಷ ಅತಿಥಿಗಳಾಗಿ ತೆರಳಿದ್ದ ಚೈತ್ರಾ ಕುಂದಾಪುರ ಮತ್ತು ರಜತ್ ಕಿಶನ್ ನಿಜವಾದ ಸ್ಪರ್ಧಿಗಳಂತೆಯೇ ಆಟವಾಡಿದ್ದರು. ಈ ವೇಳೆ ಚೈತ್ರಾ ಮತ್ತು ಅಶ್ವಿನಿ ಗೌಡ ನಡುವಿನ ಆಟ ಭಯಂಕರವಾಗಿಯೇ ಇತ್ತು.
25
ಚೈತ್ರಾ ಕುಂದಾಪುರ
ಟಾಸ್ಕ್ ಸಂದರ್ಭದಲ್ಲಿ ಚೈತ್ರಾ ಕುಂದಾಪುರ ಅವರನ್ನು ಅಶ್ವಿನಿ ಗೌಡ ತಡೆದು ನಿಲ್ಲಿಸಬೇಕಿತ್ತು. ಈ ಆಟದಲ್ಲಿ ಚೈತ್ರಾ ಕುಂದಾಪುರ ನನ್ನ ಕೈಗಳಿಗೆ ಪರಚಿ ಚಿವುಟಿದ್ದಾರೆ ಎಂದು ಅಶ್ವಿನಿ ಗೌಡ ಆರೋಪಿಸಿದ್ದರು. ಆಟದಲ್ಲಿ ನಾನೇನು ಮಾಡಿಲ್ಲ ಎಂದು ವಾದಿಸಿದ ಚೈತ್ರಾ, ನಂತರ ಅಶ್ವಿನಿ ಗೌಡ ಬಳಿ ಕ್ಷಮೆಯನ್ನು ಸಹ ಕೇಳಿದ್ದರು. ಅಶ್ವಿನಿ ಗೌಡ ಸಹ ಕ್ಷಮಿಸಿರೋದಾಗಿ ಹೇಳಿ ಜಗಳಕ್ಕೆ ಪೂರ್ಣವಿರಾಮ ಇರಿಸಿದ್ದರು.
35
ಪಿಆರ್ ಟೀಂ ಇರಲಿಲ್ಲ
ಇದೀಗ ಬಿಗ್ಬಾಸ್ ಮುಗಿದಿದ್ದು, ಸಂದರ್ಶನವೊಂದರಲ್ಲಿ ಅಶ್ವಿನಿ ಗೌಡ ಜೊತೆಗಿನ ಜಗಳದ ಬಗ್ಗೆ ಮಾತನಾಡಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿಯೂ ನನ್ನ ಬಳಿ ಪಿಆರ್ ಟೀಂ ಇರಲಿಲ್ಲ ಎಂಬ ಕಾರಣ ನೀಡುವ ಮೂಲಕ ಅಶ್ವಿನಿ ಗೌಡ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.
ನಾನು ಆಟವಾಡಿದ್ದೆ. ಆಟದ ಸಂದರ್ಭದಲ್ಲಿ ನಮ್ಮಿಬ್ಬರ ಮಧ್ಯೆ ಜಗಳ ನಡೆದಿತ್ತು. ಆಟದ ಕಿತ್ತಾಟದ ವೇಳೆ ನಾನು ಅವರಿಗೆ ಪರಚಿದ್ದೆ. ನನಗೂ ಸಹ ಅಶ್ವಿನಿ ಗೌಡ ಪರಚಿದ್ದರು ಎಂದು ತಮ್ಮ ಕೈ ಮೇಲಿರುವ ಗಾಯಗಳನ್ನು ಚೈತ್ರಾ ಕುಂದಾಪುರ ತೋರಿಸಿದ್ದಾರೆ. ನಾನು ಆಟವನ್ನು ಆಟವಾಗಿಯೇ ನೋಡಿದ್ದೆ ಎಂದು ಹೇಳಿಕೊಂಡಿದ್ದಾರೆ.
ಅಂದು ಅಶ್ವಿನಿ ಗೌಡ ಉದ್ದೇಶಪೂರ್ವಕವಾಗಿ ಮಾಡಿದ್ರು ಅಂತ ಹೇಳಲು ಆಗಲ್ಲ. ಅದು ಆಟದ ವೇಳೆ ಆಗಿದೆ. ಆಟವನ್ನು ಆಟವಾಗಿ ನೋಡಿದ್ದೇನೆ. ಹೊರಗೆ ಬಂದ ಮೇಲೆ ನಮ್ಮ ನಮ್ಮ ಬದುಕಿನಲ್ಲಿ ನಾವು ಬ್ಯುಸಿ ಆಗಿದ್ದೇವೆ. ಆಟ ಮುಗಿದ ಮೇಲೆ ಅದರ ಬಗ್ಗೆ ಚರ್ಚಿಸುವುದಿಲ್ಲ. ಅದನ್ನು ನಾವು "maturity " ಅಂತೀವಿ ಎಂದು ಚೈತ್ರಾ ಕುಂದಾಪುರ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.