ಜಂಟಿ ಟೀಂನಲ್ಲಿರುವ ಕರಿಬಸಪ್ಪ ಆಟ ಆಡಲು ಮುಂದಾಗಿದ್ದರು. ಈ ವೇಳೆ ಮಧ್ಯ ಪ್ರವೇಶಿಸಿದ ಅಭಿಷೇಕ್, ಡ್ರಮ್ ಮೇಲೆ ನಿಂತು ಅದನ್ನು ಉರುಳಿಸುತ್ತಾ ಹೋಗಬೇಕಾಗುತ್ತದೆ. ಆದ್ದರಿಂದ ತೂಕ ಕಡಿಮೆಯುಳ್ಳವರು ಆಡಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕೊನೆಗೆ ಗಿಲ್ಲಿನಟ-ಕಾವ್ಯ ಮತ್ತು ಮಾಳು-ಸ್ಪಂದನಾ ಜಂಟಿ ತಂಡದ ಪರವಾಗಿ ಆಡಿದರು.