Annayya Serial : ಅಣ್ಣಯ್ಯ ಧಾರಾವಾಹಿಯಲ್ಲಿ ಇದೀಗ ಪಾರು ಮುಂದೆ ಮಾಸ್ತಿಕೊಪ್ಪಲಿನ ರಾಜ ಅಂದ್ರೆ ರಾಣಿ ಗಂಡನಿಎ ಕೊಡುತ್ತಿದ್ದ ಮದ್ದಿನ ರಹಸ್ಯ ಬಯಲಾಗಿದೆ. ಇನ್ನೊಂದೆಡೆ ವೀರಭದ್ರನ ಕೋಪದಿಂದಾಗಿ ರತ್ನ ಮತ್ತು ಪರಶು ಮದುವೆ ಮಾತುಕತೆ ಮುರಿದು ಬಿದ್ದಿದೆ. ಮುಂದೇನಾಗುತ್ತೆ?
ರತ್ನನ ನಿಶ್ಚಿತಾರ್ಥಕ್ಕಾಗಿ ಊರಿಗೆ ಆಗಮಿಸಿರುವ ರಾಣಿಗೆ ಇದೀಗ ತನ್ನ ಗಂಡನ ಕುರಿತಾದ ಸತ್ಯ ಅರಿವಾಗುವ ಸಮಯ ಬಂದಿದೆ. ಇಲ್ಲಿವರೆಗೂ ತನ್ನ ಗಂಡನಿಗೆ ನಿಜಕ್ಕೂ ಆರೋಗ್ಯ ಸಮಸ್ಯೆ ಇದೆ, ಎಂದು ಕಾಳಜಿಯಿಂದ ಆತನಿಗೆ ನೀಡುತ್ತಿದ್ದ ಮಾತ್ರೆಯಲ್ಲಿಯೇ ವಿಷ ಇದೆ ಎನ್ನುವ ಸತ್ಯ ಅತ್ತಿಗೆ ಪಾರುನಿಂದ ರಾಣಿ ಮುಂದೆ ಬಯಲಾಗಿದೆ.
26
ಪಾರು ಮುಂದೆ ಬಯಲಾಯ್ತು ರಹಸ್ಯ
ರಾಣಿ ಪ್ರತಿದಿನ ತನ್ನ ಗಂಡನಿಗೆ ಕೊಡುತ್ತಿದ್ದ ಮಾತ್ರೆಯನ್ನು ಪಾರು ಕಣ್ಣಾರೆ ಕಂಡಾಗ ಆಕೆಗೆ ಶಾಕ್ ಆಗಿದೆ. ಇದು ಸ್ಲೋ ಪಾಯ್ಸನ್ ಹಾಗೇ ಇರುವ ಔಷಧಿ ಅನ್ನೋದನ್ನು ಕೇಳಿ ರಾಣಿಗೆ ದಿಗ್ಬ್ರಮೆಗೊಂಡಿದ್ದಾಳೆ. ಮುಂದೆ ರಾಣಿ ಈ ಸೇಡನ್ನು ಯಾವ ರೀತಿ ತೀರಿಸಿಕೊಳ್ಳುತ್ತಾಳೆ ಅನ್ನೋದನ್ನು ಕಾದು ನೋಡಬೇಕಾಗಿದೆ.
36
ಮತ್ತೊಂದೆಡೆ ರತ್ನ ಜೀವನ ಸಂಕಷ್ಟದಲ್ಲಿ
ರತ್ನ ಮತ್ತು ಪರಶು ನಿಶ್ಚಿತಾರ್ಥ ಮನೆಮಂದಿ ಮುಂದೆ ನಡೆದಿದೆ. ಆದರೆ ಶಿವು ತಾಯಿ ಶಾರದಮ್ಮನ ಆಗಮದಿಂದ ಕೋಪಗೊಂಡ ವೀರಭದ್ರ ಮನೆಬಿಟ್ಟು ಹೊರನಡೆದಿದ್ದಾರೆ. ಮಾವನನ್ನು ತಡೆಯಲು ಶಿವು ಪ್ರಯತ್ನ ಪಟ್ಟರೂ ಸಾಧ್ಯವೇ ಆಗಲಿಲ್ಲ. ಇದರಿಂದ ತಾಯಿ ಮೇಲೆ ಶಿವು ಸಿಕ್ಕಾಪಟ್ಟೆ ಕೋಪಗೊಂಡು ಮನೆಬಿಟ್ಟು ತೆರಳುವಂತೆ ತಿಳಿಸಿದ್ದಾನೆ.
ರತ್ನ ಮದುವೆ ಬಗ್ಗೆ ಭಾರಿ ಕನಸು ಕಂಡಿದ್ದ ಶಿವಣ್ಣನಿಗೆ ಇದೀಗ ಮಾವ ಮದುವೆಗೆ ಒಪ್ಪಲು ಸಾಧ್ಯವೇ ಇಲ್ಲ ಅನ್ನೋದು ತಿಳಿದು, ನೆಲವೇ ಕುಸಿದಂತಾಗಿದೆ. ರತ್ನ ಜೀವನ ಹಾಳಾಯ್ತು ಎನ್ನುವ ಕೊರಗಿನಲ್ಲಿ ಮತ್ತೆ ತನ್ನ ತಾಯಿ ಮೇಲೆ ರೌದ್ರ ರೂಪ ತೋರೋದಕ್ಕೂ ಹಿಂಜರಿಯೋದಿಲ್ಲ ಶಿವು. ಯಾಕಂದ್ರೆ ಮಾವ ವೀರಭದ್ರ ಅದೇ ದ್ವೇಷವನ್ನು ಶಿವು ತಲೆಯಲ್ಲಿ ಬಾಲ್ಯದಲ್ಲಿಯೇ ತುಂಬಿಸಿಕೊಂಡು ಬಂದಿದ್ದಾನೆ.
56
ಮೂವರು ತಂಗಿಯರ ಬಾಳು ನಾಶ
ತಾನು ಎಲ್ಲರಿಗೂ ಒಳ್ಳೆಯದನ್ನೇ ಮಾಡುತ್ತಿದ್ದೇನೆ ಎಂದುಕೊಂಡಿರುವ ಶಿವು, ತನ್ನಿಂದಾಗಿ ತನ್ನ ತಂಗಿಯರ ಬಾಳಿಯಲ್ಲಿ ಬಿರುಗಾಳಿ ಎದ್ದಿದೆ ಅನ್ನೋದು ಮಾತ್ರ ಗೊತ್ತೆ ಇಲ್ಲ. ರಶ್ಮಿಯನ್ನು ಸೀನನಿಗೆ ಮದುವೆ ಮಾಡಿಸಿ ಅಲ್ಲೂ ತಪ್ಪು ಮಾಡಿದ, ಸೀನಾ ಮತ್ತು ರಶ್ಮಿ ಸಂಸಾರಾನೆ ನಡೆಸುತ್ತಿಲ್ಲ. ಇನ್ನೊಂದೆಡೆ ರಾಣಿಯನ್ನು ಮಾಸ್ತಿಕೊಪ್ಪಲದ ರಾಜನಿಗೆ ಮದುವೆ ಮಾಡಿ, ಅಲ್ಲೂ ಎಡವಿದ. ಇದೀಗ ಪರಶು ಜೊತೆ ರತ್ನ ಮದುವೆ ಮಾಡುವ ನಿರ್ಧಾರ ಮಾಡಿ ಮತ್ತೆ ತಪ್ಪು ಮಾಡುತ್ತಿದ್ದಾನೆ ಶಿವು. ಮುಂದೇನಾಗುತ್ತೆ ಕಾದು ನೋಡಬೇಕು.
66
ಯಾರೆಲ್ಲಾ ನಟಿಸುತ್ತಿದ್ದಾರೆ?
ಅಣ್ಣಯ್ಯ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರತಿದಿನ ರಾತ್ರಿ 7.30ಕ್ಕೆ ಪ್ರಸಾರವಾಗುತ್ತಿದೆ. ಈ ಧಾರಾವಾಹಿಯಲ್ಲಿ ವಿಕಾಸ್ ಉತ್ತಯ್ಯ, ನಿಶಾ ರವಿಕಿರಣ್, ನಾಗೇಂದ್ರ ಶಾ, ನಾಗರತ್ನ, ರಾಘವಿ, ಪ್ರತೀಕ್ಷಾ ಸೇರಿ ಹಲವಾರು ಹಿರಿ ಕಿರಿಯ ಕಲಾವಿದರು ನಟಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.