ಅಮೃತಧಾರೆ ಧಾರಾವಾಹಿಯಲ್ಲಿ, ಗೌತಮ್ ಮತ್ತು ಭೂಮಿಕಾಳನ್ನು ಒಂದು ಮಾಡಲು ಮಲ್ಲಿ ಹೊಸ ಪ್ಲ್ಯಾನ್ ಮಾಡಿದ್ದಾಳೆ. ಗೌತಮ್ ಇರುವ ವಠಾರಕ್ಕೆ ಭೂಮಿಕಾಳನ್ನು ಕರೆತಂದು, ಕತ್ತಲಲ್ಲಿ ಇಬ್ಬರೂ ಅನಿರೀಕ್ಷಿತವಾಗಿ ಭೇಟಿಯಾಗಿ ತಬ್ಬಿಕೊಳ್ಳುವಂತೆ ಮಾಡಿದ್ದಾಳೆ.
ಅಮೃತಧಾರೆ (Amruthadhaare) ಸೀರಿಯಲ್ ಮತ್ತು ಟ್ರ್ಯಾಕ್ಗೆ ಬಂದಿದೆ. ಮಲ್ಲಿಯ ಪ್ಲ್ಯಾನ್ ಸಕ್ಸಸ್ ಆಗೋ ಥರ ಕಾಣಿಸ್ತಿದೆ. ಗೌತಮ್ ಇರೋ ವಠಾರಕ್ಕೇನೇ ಭೂಮಿಕಾಳನ್ನು ಕರೆದುಕೊಂಡು ಬಂದಿದ್ದಾಳೆ. ಆದರೆ ಭೂಮಿಕಾಗೆ ಇದೆಲ್ಲಾ ಗೊತ್ತೇ ಇಲ್ಲ.
27
ಮತ್ತೊಂದು ಹಂತಕ್ಕೆ ಮಲ್ಲಿ ಪ್ಲ್ಯಾನ್
ಇದೀಗ ಮಲ್ಲಿಯ ಪ್ಲ್ಯಾನ್ ಇನ್ನೊಂದು ಹಂತಕ್ಕೆ ಹೋಗಿದೆ. ಆಕೆಗೆ ಗೌತಮ್ಗೆ ಕತ್ತಲು ಎನ್ನುವ ವಿಷ್ಯ ಗೊತ್ತು. ಅದನ್ನೇ ಬಂಡವಾಳ ಮಾಡಿಕೊಂಡಿದ್ದಾಳೆ ಮಲ್ಲಿ. ಭೂಮಿಕಾಳ ಸ್ನೇಹಿತೆಯ ಜೊತೆಗೂಡಿ ವಠಾರದ ಕರೆಂಟ್ ತೆಗೆದಿದ್ದಾಳೆ.
37
ಕ್ಯಾಂಡಲ್ಗಾಗಿ ಹುಡುಕಾಟ
ಅತ್ತ, ಭೂಮಿಕಾ ಕ್ಯಾಂಡಲ್ಗಾಗಿ ಹುಡುಕಾಟ ನಡೆಸಿರುವಾಗ ಗೌತಮ್ ಕ್ಯಾಂಡಲ್ ತೆಗೆದುಕೊಂಡು ಬಂದಿದ್ದಾನೆ. ಕತ್ತಲಲ್ಲಿ ಇಬ್ಬರೂ ಡ್ಯಾಷ್ ಆಗಿಬಿಟ್ಟಿದ್ದಾರೆ. ಭಯದಲ್ಲಿದ್ದ ಭೂಮಿಕಾ, ಗೌತಮ್ನನ್ನು ತಬ್ಬಿಕೊಂಡಿದ್ದಾಳೆ. ಅಲ್ಲಿಗೆ ಗಂಡ-ಹೆಂಡತಿಯ ಹೃದಯ ಬಡಿತ ಜೋರಾಗಿದೆ.
ಅಂತೂ ಈ ಪ್ಲ್ಯಾನ್ ಸಕ್ಸಸ್ ಆಗಿದೆ. ಇದರ ಮೂಲಕ ಆದ್ರೂ ಭೂಮಿಕಾ ಮತ್ತು ಗೌತಮ್ ಒಂದಾಗ್ತಾರಾ ಎನ್ನುವುದನ್ನು ನೋಡಬೇಕಿದೆ. ಅದೇ ಇನ್ನೊಂದೆಡೆ, ಈ ಸೀನ್ ನೋಡಬಾರದು ಎನ್ನೋ ಕಾರಣಕ್ಕೆ, ಆಕಾಶ್ನ ಕಣ್ಣನ್ನು ಮುಚ್ಚಿದ್ದಾಳೆ ಮಲ್ಲಿ. ಒಟ್ಟಿನಲ್ಲಿ ಮಲ್ಲಿಯ ತಲೆಗೆ ವೀಕ್ಷಕರು ಹ್ಯಾಟ್ಸ್ಆಫ್ ಹೇಳುತ್ತಿದ್ದಾರೆ. ಕಿಚ್ಚನ ಚಪ್ಪಾಳೆ ಮಲ್ಲಿಗೆ ಎನ್ನುತ್ತಿದ್ದಾರೆ.
57
ಕಾಫಿಯಲ್ಲಿ ಭೇಟಿ
ಅದೇ ಇನ್ನೊಂದೆಡೆ, ಇದಾಗಲೇ ನೆರೆಮನೆಗೆ ಯಾರೋ ಹೊಸಬರು ಬಂದರು ಎಂದು ಗೌತಮ್ ಕಾಫಿ ತೆಗೆದುಕೊಂಡು ಹೋಗಿ ಕೊಟ್ಟು ಬಾಗಿಲು ಓಪನ್ ಮಾಡಿದ್ರೆ ಎದುರಿಗೆ ಭೂಮಿಕಾ! ಇಬ್ಬರಿಗೂ ಖುಷಿ, ನೋವು, ದುಃಖ ಎಲ್ಲವೂ ಒಟ್ಟಿಗೇ ಆದರೂ ಅಕ್ಕ-ಪಕ್ಕದ ಮನೆಯವರು ನೋಡುತ್ತಿದ್ದಾರೆ ಎನ್ನೋ ಕಾರಣಕ್ಕೆ ಏನೂ ಆಗದವರ ರೀತಿ ಇದ್ದರು.
67
ಚಿಪ್ಸ್ ತಿನ್ನುತ್ತಿದ್ದ ಆಕಾಶ್
ಅಪ್ಪು ಒಬ್ಬನೇ ಕುಳಿತು ಚಿಪ್ಸ್ ತಿನ್ನೋದನ್ನು ನೋಡಿದ ಗೌತಮ್ ಓಡಿ ಹೋಗಿ ಅವನನ್ನು ಅಪ್ಪಿಕೊಳ್ಳಲು ಮುಂದಾಗಿದ್ದಾನೆ. ಆಗ ಆಕಾಶ್, ಅವನನ್ನು ನೋಡಿ ಆಶ್ಚರ್ಯಗೊಂಡಿದ್ದಾನೆ. ಫ್ರೆಂಡ್ ಅಂತ ಕರಿಯೋಕೆ ಹೋದೋನು ಕಡೆಗೆ ಸರ್ ಅಂತ ಕರೆದಿದ್ದ. ಆಕಾಶ್, ಅಪ್ಪನ ಎದುರು ತನ್ನ ಕಷ್ಟ ಹೇಳಿಕೊಂಡಿದ್ದ. ನಿಮ್ಮ ಸಹವಾಸ ಮಾಡಿ ಊರು ಬಿಟ್ಟು ಬರಬೇಕಾಯಿತು. ಫ್ರೆಂಡ್ಸ್ ಎಲ್ಲಾ ದೂರವಾದ್ರು. ಈಗ ನೋಡಿದ್ರೆ ಇಲ್ಲಿ ಮತ್ತೆ ಇದ್ದೀರಾ. ಅಮ್ಮ ನೋಡಿದ್ರೆ ಇಲ್ಲಿಂದಲೂ ಜಾಗ ಖಾಲಿ ಮಾಡ್ತಾಳೆ ಎಂದಿದ್ದ.
77
ಗೌತಮ್ಗೆ ಖುಷಿಯೋ ಖುಷಿ
ಆದರೂ ನಿಮ್ಮನ್ನು ನೋಡಿದ್ರೆ ನನಗೆ ತುಂಬಾ ಖುಷಿಯಾಗುತ್ತದೆ ಎಂದಾಗ ಗೌತಮ್ ಮುಖದಲ್ಲಿ ನಗು ಅರಳಿದೆ. ಆಕಾಶ್, ನನಗೆ ನೀವೂ ಬೇಕು, ಅಮ್ಮನೂ ಬೇಕು. ಅದಕ್ಕಾಗಿ ಇಬ್ಬರೂ ನಮ್ಮ ಪಾಡಿಗೆ ನಾವು ಇದ್ದು ಬಿಡೋಣ. ಮಾತನಾಡುವುದು ಬೇಡ ಎಂದು ಹೇಳಿ ಹೊರಟು ಹೋಗಿದ್ದಾನೆ. ಮಗ ಹೋಗಿದ್ದು ನೋಡಿ ಗೌತಮ್ಗೆ ಬೇಸರವಾಗಿದೆ.