Amruthadhaare: ವಠಾರದ ಕರೆಂಟ್​ ತೆಗೆದ ಮಲ್ಲಿ: ಕತ್ತಲಲ್ಲಿ ಕುಚ್​ ಕುಚ್​ ಆಗೋಯ್ತು- ಹೃದಯ ಬಡಿತನೂ ಜೋರಾಯ್ತು

Published : Oct 18, 2025, 12:38 PM IST

ಅಮೃತಧಾರೆ ಧಾರಾವಾಹಿಯಲ್ಲಿ, ಗೌತಮ್ ಮತ್ತು ಭೂಮಿಕಾಳನ್ನು ಒಂದು ಮಾಡಲು ಮಲ್ಲಿ ಹೊಸ ಪ್ಲ್ಯಾನ್ ಮಾಡಿದ್ದಾಳೆ. ಗೌತಮ್ ಇರುವ ವಠಾರಕ್ಕೆ ಭೂಮಿಕಾಳನ್ನು ಕರೆತಂದು, ಕತ್ತಲಲ್ಲಿ ಇಬ್ಬರೂ ಅನಿರೀಕ್ಷಿತವಾಗಿ ಭೇಟಿಯಾಗಿ ತಬ್ಬಿಕೊಳ್ಳುವಂತೆ ಮಾಡಿದ್ದಾಳೆ.  

PREV
17
ಟ್ರ್ಯಾಕ್​ಗೆ ಬಂದ ಅಮೃತಧಾರೆ

ಅಮೃತಧಾರೆ (Amruthadhaare) ಸೀರಿಯಲ್​ ಮತ್ತು ಟ್ರ್ಯಾಕ್​ಗೆ ಬಂದಿದೆ. ಮಲ್ಲಿಯ ಪ್ಲ್ಯಾನ್​ ಸಕ್ಸಸ್​ ಆಗೋ ಥರ ಕಾಣಿಸ್ತಿದೆ. ಗೌತಮ್​ ಇರೋ ವಠಾರಕ್ಕೇನೇ ಭೂಮಿಕಾಳನ್ನು ಕರೆದುಕೊಂಡು ಬಂದಿದ್ದಾಳೆ. ಆದರೆ ಭೂಮಿಕಾಗೆ ಇದೆಲ್ಲಾ ಗೊತ್ತೇ ಇಲ್ಲ.

27
ಮತ್ತೊಂದು ಹಂತಕ್ಕೆ ಮಲ್ಲಿ ಪ್ಲ್ಯಾನ್​

ಇದೀಗ ಮಲ್ಲಿಯ ಪ್ಲ್ಯಾನ್​ ಇನ್ನೊಂದು ಹಂತಕ್ಕೆ ಹೋಗಿದೆ. ಆಕೆಗೆ ಗೌತಮ್​ಗೆ ಕತ್ತಲು ಎನ್ನುವ ವಿಷ್ಯ ಗೊತ್ತು. ಅದನ್ನೇ ಬಂಡವಾಳ ಮಾಡಿಕೊಂಡಿದ್ದಾಳೆ ಮಲ್ಲಿ. ಭೂಮಿಕಾಳ ಸ್ನೇಹಿತೆಯ ಜೊತೆಗೂಡಿ ವಠಾರದ ಕರೆಂಟ್​ ತೆಗೆದಿದ್ದಾಳೆ.

37
ಕ್ಯಾಂಡಲ್​ಗಾಗಿ ಹುಡುಕಾಟ

ಅತ್ತ, ಭೂಮಿಕಾ ಕ್ಯಾಂಡಲ್​ಗಾಗಿ ಹುಡುಕಾಟ ನಡೆಸಿರುವಾಗ ಗೌತಮ್​ ಕ್ಯಾಂಡಲ್​ ತೆಗೆದುಕೊಂಡು ಬಂದಿದ್ದಾನೆ. ಕತ್ತಲಲ್ಲಿ ಇಬ್ಬರೂ ಡ್ಯಾಷ್​ ಆಗಿಬಿಟ್ಟಿದ್ದಾರೆ. ಭಯದಲ್ಲಿದ್ದ ಭೂಮಿಕಾ, ಗೌತಮ್​ನನ್ನು ತಬ್ಬಿಕೊಂಡಿದ್ದಾಳೆ. ಅಲ್ಲಿಗೆ ಗಂಡ-ಹೆಂಡತಿಯ ಹೃದಯ ಬಡಿತ ಜೋರಾಗಿದೆ.

47
ಮಲ್ಲಿ ಪ್ಲ್ಯಾನ್​ ಸಕ್ಸಸ್​

ಅಂತೂ ಈ ಪ್ಲ್ಯಾನ್ ಸಕ್ಸಸ್​ ಆಗಿದೆ. ಇದರ ಮೂಲಕ ಆದ್ರೂ ಭೂಮಿಕಾ ಮತ್ತು ಗೌತಮ್​ ಒಂದಾಗ್ತಾರಾ ಎನ್ನುವುದನ್ನು ನೋಡಬೇಕಿದೆ. ಅದೇ ಇನ್ನೊಂದೆಡೆ, ಈ ಸೀನ್​ ನೋಡಬಾರದು ಎನ್ನೋ ಕಾರಣಕ್ಕೆ, ಆಕಾಶ್​ನ ಕಣ್ಣನ್ನು ಮುಚ್ಚಿದ್ದಾಳೆ ಮಲ್ಲಿ. ಒಟ್ಟಿನಲ್ಲಿ ಮಲ್ಲಿಯ ತಲೆಗೆ ವೀಕ್ಷಕರು ಹ್ಯಾಟ್ಸ್​ಆಫ್​ ಹೇಳುತ್ತಿದ್ದಾರೆ. ​ಕಿಚ್ಚನ ಚಪ್ಪಾಳೆ ಮಲ್ಲಿಗೆ ಎನ್ನುತ್ತಿದ್ದಾರೆ. 

57
ಕಾಫಿಯಲ್ಲಿ ಭೇಟಿ

ಅದೇ ಇನ್ನೊಂದೆಡೆ, ಇದಾಗಲೇ ನೆರೆಮನೆಗೆ ಯಾರೋ ಹೊಸಬರು ಬಂದರು ಎಂದು ಗೌತಮ್​ ಕಾಫಿ ತೆಗೆದುಕೊಂಡು ಹೋಗಿ ಕೊಟ್ಟು ಬಾಗಿಲು ಓಪನ್​ ಮಾಡಿದ್ರೆ ಎದುರಿಗೆ ಭೂಮಿಕಾ! ಇಬ್ಬರಿಗೂ ಖುಷಿ, ನೋವು, ದುಃಖ ಎಲ್ಲವೂ ಒಟ್ಟಿಗೇ ಆದರೂ ಅಕ್ಕ-ಪಕ್ಕದ ಮನೆಯವರು ನೋಡುತ್ತಿದ್ದಾರೆ ಎನ್ನೋ ಕಾರಣಕ್ಕೆ ಏನೂ ಆಗದವರ ರೀತಿ ಇದ್ದರು.

67
ಚಿಪ್ಸ್ ತಿನ್ನುತ್ತಿದ್ದ ಆಕಾಶ್​

ಅಪ್ಪು ಒಬ್ಬನೇ ಕುಳಿತು ಚಿಪ್ಸ್​ ತಿನ್ನೋದನ್ನು ನೋಡಿದ ಗೌತಮ್​ ಓಡಿ ಹೋಗಿ ಅವನನ್ನು ಅಪ್ಪಿಕೊಳ್ಳಲು ಮುಂದಾಗಿದ್ದಾನೆ. ಆಗ ಆಕಾಶ್​, ಅವನನ್ನು ನೋಡಿ ಆಶ್ಚರ್ಯಗೊಂಡಿದ್ದಾನೆ. ಫ್ರೆಂಡ್ ಅಂತ ಕರಿಯೋಕೆ ಹೋದೋನು ಕಡೆಗೆ ಸರ್​ ಅಂತ ಕರೆದಿದ್ದ. ಆಕಾಶ್​, ಅಪ್ಪನ ಎದುರು ತನ್ನ ಕಷ್ಟ ಹೇಳಿಕೊಂಡಿದ್ದ. ನಿಮ್ಮ ಸಹವಾಸ ಮಾಡಿ ಊರು ಬಿಟ್ಟು ಬರಬೇಕಾಯಿತು. ಫ್ರೆಂಡ್ಸ್​ ಎಲ್ಲಾ ದೂರವಾದ್ರು. ಈಗ ನೋಡಿದ್ರೆ ಇಲ್ಲಿ ಮತ್ತೆ ಇದ್ದೀರಾ. ಅಮ್ಮ ನೋಡಿದ್ರೆ ಇಲ್ಲಿಂದಲೂ ಜಾಗ ಖಾಲಿ ಮಾಡ್​ತಾಳೆ ಎಂದಿದ್ದ.

77
ಗೌತಮ್​ಗೆ ಖುಷಿಯೋ ಖುಷಿ

ಆದರೂ ನಿಮ್ಮನ್ನು ನೋಡಿದ್ರೆ ನನಗೆ ತುಂಬಾ ಖುಷಿಯಾಗುತ್ತದೆ ಎಂದಾಗ ಗೌತಮ್​ ಮುಖದಲ್ಲಿ ನಗು ಅರಳಿದೆ. ಆಕಾಶ್​, ನನಗೆ ನೀವೂ ಬೇಕು, ಅಮ್ಮನೂ ಬೇಕು. ಅದಕ್ಕಾಗಿ ಇಬ್ಬರೂ ನಮ್ಮ ಪಾಡಿಗೆ ನಾವು ಇದ್ದು ಬಿಡೋಣ. ಮಾತನಾಡುವುದು ಬೇಡ ಎಂದು ಹೇಳಿ ಹೊರಟು ಹೋಗಿದ್ದಾನೆ. ಮಗ ಹೋಗಿದ್ದು ನೋಡಿ ಗೌತಮ್​ಗೆ ಬೇಸರವಾಗಿದೆ.

Read more Photos on
click me!

Recommended Stories