Amruthadhaare Serial: ಮಲ್ಲಿ ಕಿತಾಪತಿ- ಅಪ್ಪನ ಬಳಿ ಹೋಗಿ ಅಮ್ಮನ ಕೈಯಲ್ಲಿ ತಗ್ಲಾಕ್ಕೊಂಡ ಆಕಾಶ್​! ಮನೆ ಶಿಫ್ಟ್​​?

Published : Oct 23, 2025, 08:04 PM IST

ಗೌತಮ್ ಮನೆಯ ಬಗ್ಗೆ ತಿಳಿಯುವ ಕುತೂಹಲದಿಂದ ಮಲ್ಲಿ, ಆಕಾಶ್‌ನನ್ನು ಅವರ ಮನೆಗೆ ಕಳುಹಿಸುತ್ತಾಳೆ. ಆದರೆ ಈ ವಿಷಯ ಭೂಮಿಕಾ ಮುಂದೆ ಬಾಯಿ ತಪ್ಪಿ ಹೇಳಿದಾಗ, ಗೌತಮ್ ಮತ್ತು ಭೂಮಿಕಾ ನಡುವಿನ ಸಂಬಂಧದಲ್ಲಿ ಹೊಸ ಬಿಕ್ಕಟ್ಟು ಶುರುವಾಗುತ್ತದೆ, ಇದರಿಂದ ಭೂಮಿಕಾ ಮುಂದಿನ ನಿರ್ಧಾರದ ಬಗ್ಗೆ ಕುತೂಹಲ ಮೂಡಿದೆ.

PREV
16
ಅಮೃತಧಾರೆಗೆ ಟ್ವಿಸ್ಟ್​

ಅಮೃತಧಾರೆ (Amruthadhaare) ಸೀರಿಯಲ್​ನಲ್ಲಿ ಸದ್ಯ ಭಾರಿ ಟ್ವಿಸ್ಟ್​ ಸಿಕ್ಕಿದ್ದು, ಗೌತಮ್​ ಮನೆಯಲ್ಲಿ ಎಷ್ಟು ಮಂದಿ ಇದ್ದಾರೆ ಎಂದು ನೋಡುವ ಕುತೂಹಲದಿಂದ ಮಲ್ಲಿ ಆಕಾಶ್​ನನ್ನು ಗೌತಮ್​ ಮನೆಗೆ ಕಳುಹಿಸಿದ್ದಳು. ಅವರ ಮನೆಗೆ ಹೋಗುವುದು ಬೇಡ ಎಂದು ಭೂಮಿಕಾ ಮಲ್ಲಿಗೆ ಹೇಳಿದ್ದರಿಂದ ಅವಳು ಆಕಾಶ್​ನನ್ನು ಕಳುಹಿಸಿದ್ದಳು.

26
ಆಕಾಶ್​ನನ್ನು ಕಳುಹಿಸಿದ ಮಲ್ಲಿ

ಬೇಡ ಬೇಡ ಎಂದರೂ ಕೇಳದೇ ಆಕಾಶ್​ನಿಗೆ ಒತ್ತಾಯ ಮಾಡಿ ಕಳುಹಿಸಿದ್ದಳು ಮಲ್ಲಿ. ಅಲ್ಲಿ ಗೌತಮ್​ ಬಿಸಿಬೇಳೆ ಬಾತ್​ ಮಾಡಿದ್ದ. ಇದನ್ನು ನೋಡಿ ಆಕಾಶ್​ ಬಾಯಲ್ಲಿ ನೀರೂರಿತು. ಸುಮ್ನೆ ಬಿಡ್ತಾನಾ ಡುಮ್ಮ ಸರ್​ ಮಗ? ಚೆನ್ನಾಗಿ ಬಾರಿಸಿದ.

36
ಬಿಸಿಬೇಳೆ ಬಾತ್​

ಮನೆಗೆ ಬಂದು ನೋಡಿದ್ರೆ ಭೂಮಿಕಾನೂ ಬಿಸಿಬೇಳೆ ಬಾತ್​ನ್ನೇ ಮಾಡಿದ್ದಳು. ಅಲ್ಲಿ ಹೋಗಿದ್ದನ್ನು ಕೇಳಿಕೊಳ್ಳಲಾಗದೇ ಸಂಕಟ ಪಟ್ಟ ಆಕಾಶ್​. ವಿಷ್ಯ ಗೊತ್ತಾಗತ್ತೆ ಎಂದು ಅದನ್ನೂ ತಿಂದ.

46
ಬಾಯ್ತಪ್ಪಿ ಸತ್ಯ ಕೇಳಿದ ಮಲ್ಲಿ

ಕೊನೆಗೆ ಮಾತು ಮಾತಿನ ನಡುವೆ ಮಲ್ಲಿ ಗೌತಮ್​ ಮನೆಯಲ್ಲಿ ಇಬ್ಬರೇ ಇರೋದು ಅಂತ ಭೂಮಿಕಾ ಎದುರು ಬಾಯಿ ತಪ್ಪಿ ಹೇಳಿದಳು. ಹೇಳಿ ಕೇಳಿ ಹೆಡ್​ ಮಿಸ್ಸು ಭೂಮಿ ಮಿಸ್ಸು, ಕೇಳ್ಬೇಕಾ? ಅದು ಹೇಗೆ ಗೊತ್ತಾಯ್ತು ಅಂತ ಪ್ರಶ್ನಿಸಿದಳು.

56
ವಿಷ್ಯ ತಿಳಿದೇ ಹೋಯ್ತು

ಆಗ ಮಲ್ಲಿ, ಆಕಾಶ್​ ಗೌತಮ್​ ಮನೆಗೆ ಹೋಗಿದ್ದ ವಿಷ್ಯ ಹೇಳೇಬಿಟ್ಟಳು. ಆಕಾಶ್​ನನ್ನು ಭೂಮಿಕಾ ಕೇಳಿದಾಗ, ಚಿಕ್ಕಿನೇ ಫೋರ್ಸ್​ ಮಾಡಿ ಕಳಿಸಿರೋ ವಿಷ್ಯ ಹೇಳಿದ.

66
ಮುಂದೇನ್​ ಮಾಡ್ತಾಳೆ ಭೂಮಿಕಾ?

ಕೊನೆಯಲ್ಲಿ ಗೌತಮ್​ ಸರ್​ಗೆ ಬೇಸರ ಆಗಬಾರದು ಎಂದು ಬಿಸಿಬೇಳೆ ಬಾತ್​ ತಿಂದೆ, ಇಲ್ಲಿ ನಿಂಗೆ ಬೇಸರ ಆಗ್ಬಾರ್ದು ಎಂದು ಇಲ್ಲೂ ತಿಂದೆ ಎಂದ. ಮುಂದೆ ಭೂಮಿಕಾ ಏನು ಮಾಡ್ತಾಳೋ ನೋಡಬೇಕಿದೆ. ಮನೆ ಚೇಂಜ್​ ಮಾಡ್ತಾಳಾ ಎನ್ನೋದು ಇನ್ನಷ್ಟೇ ಕಾದು ನೋಡಬೇಕಿದೆ.

ಇದರ ಪ್ರೊಮೋ ನೋಡಲು ಇಲ್ಲಿ ಕ್ಲಿಕ್​ ಮಾಡಿ

Read more Photos on
click me!

Recommended Stories