'Dr Rajkumar​ ಸಾಕ್ಷಾತ್​ ದೇವರು' ಎನ್ನುತ್ತಲೇ ಸಾವಿನ ಹಾದಿಯಲ್ಲಿದ್ದಾಗ ಪ್ರಾರ್ಥನೆ ಮಾಡಿದ್ದನ್ನು ನೆನಪಿಸಿದ ಅಮಿತಾಭ್

Published : Oct 26, 2025, 03:26 PM IST

ಕೌನ್​ ಬನೇಗಾ ಕರೋಡ್​ಪತಿ ಕಾರ್ಯಕ್ರಮದಲ್ಲಿ ಬಾಲಿವುಡ್​ ನಟ ಅಮಿತಾಭ್ ಬಚ್ಚನ್, ಡಾ.ರಾಜ್​ಕುಮಾರ್ ಅವರನ್ನು 'ಕನ್ನಡದ ದೇವರು' ಎಂದು ಬಣ್ಣಿಸಿದ್ದಾರೆ. ರಾಜ್‌ಕುಮಾರ್ ಅವರ ಸರಳ ವ್ಯಕ್ತಿತ್ವವನ್ನು ಕೊಂಡಾಡಿದ ಅವರು, 'ಕೂಲಿ' ಚಿತ್ರದ ಅಪಘಾತದ ಸಮಯದಲ್ಲಿ ರಾಜ್‌ಕುಮಾರ್ ಪ್ರಾರ್ಥಿಸಿದ್ದನ್ನು ಸ್ಮರಿಸಿಕೊಂಡರು.

PREV
16
ಮೇರುನಟ ಡಾ.ರಾಜ್​ಕುಮಾರ್​

ಕರ್ನಾಟಕ ಕಂಡ ಅಪರೂಪದ ನಟ, ಡಾ.ರಾಜ್​ಕುಮಾರ್​ ಎನ್ನುವಲ್ಲಿ ಎರಡು ಮಾತೇ ಇಲ್ಲ. ನಟನೆಯಿಂದ ಮಾತ್ರವಲ್ಲದೇ ತಮ್ಮ ವ್ಯಕ್ತಿತ್ವದಿಂದಲೂ ಅವರು ಹೆಸರುವಾಸಿಯಾದವರು. ಕನ್ನಡ ಬಿಟ್ಟು ಬೇರೆ ಭಾಷೆಗಳ ಸಿನಿಮಾಗಳಿಗೂ ಹೋಗದೇ, ರಾಜಕೀಯಕ್ಕೂ ಎಂಟ್ರಿ ಕೊಡದೇ ಸೀದಾ ಸಾದಾ ಜೀವನ ಮಾಡುತ್ತಲೇ ಕೋಟ್ಯಂತರ ಮಂದಿಯ ಅಭಿಮಾನಗಳಿಸಿದವರು ಡಾ.ರಾಜ್​. ಇದೇ ಕಾರಣಕ್ಕೆ ಅವರ ದಶಕಗಳ ಹಿಂದಿನ ಚಿತ್ರಗಳು ಆ ಚಿತ್ರಗಳ ಹಾಡುಗಳು ಇಂದಿಗೂ ಜನಮಾನಸದಲ್ಲಿ ನೆಲೆಯೂರಿ ನಿಂತಿವೆ.

26
ರಾಜ್​ಕುಮಾರ್​ರನ್ನು ಹೊಗಳಿದ ಬಿಗ್​-ಬಿ

ಇಂಥ ಡಾ.ರಾಜ್​ಕುಮಾರ್​ ಅವರನ್ನು ಬಾಲಿವುಡ್​ ಬಿಗ್​ ಬಿ ಅಮಿತಾಭ್ ಬಚ್ಚನ್​ ಅವರು ಹಾಡಿ ಕೊಂಡಾಡಿದ್ದಾರೆ. ಕೌನ್​ ಬನೇಗಾ ಕರೋಡ್​ಪತಿ ಸಂದರ್ಭದಲ್ಲಿ ರಿಷಬ್​ ಶೆಟ್ಟಿ (Rishab Shetty) ಅವರು ಹಾಟ್​ ಸೀಟ್​ನಲ್ಲಿ ಕುಳಿತ ಸಂದರ್ಭದಲ್ಲಿ ಅಮಿತಾಭ್​ ಅವರು ಡಾ.ರಾಜ್​ ಅವರನ್ನು ಸ್ಮರಿಸುತ್ತಲೇ ಅವರ ಕನ್ನಡದ ದೇವರು ಎಂದು ಹೇಳಿದ್ದಾರೆ.

36
ಡಾ.ರಾಜ್​ ದೇವರು ಇದ್ದಂತೆ

​​ರಾಜಕುಮಾರ್ ಅವರನ್ನು ಭೇಟಿಯಾದಾಗಲೆಲ್ಲಾ ಅವರ ಆಶೀರ್ವಾದ ಪಡೆಯುತ್ತಿದ್ದೆ. ಅವರು ನೀಡಿಹೋಗಿರುವ ಕೊಡುಗೆ ಅಪಾರವಾದದ್ದು. ಅವರ ನಟನೆಗೆ ಮತ್ತೊಬ್ಬರು ಸರಿಸಾಟಿಯಾಗಿರಲು ಸಾಧ್ಯವೇ ಇಲ್ಲ. ಅವರೊಬ್ಬ ದೇವರು ಇದ್ದಂತೆ. ತುಂಬಾ ಸಿಂಪಲ್ ವ್ಯಕ್ತಿ. ಅವರನ್ನು ಕಂಡಾಗಲೆಲ್ಲ ನಾನು ಆಶ್ಚರ್ಯ ಪಡುತ್ತಿದ್ದೆ ಎಂದಿದ್ದಾರೆ ಅಮಿತಾಭ್​ ಬಚ್ಚನ್​

46
ಜೀವನ ಶೈಲಿಗೆ ಮೆಚ್ಚುಗೆ

ಸದಾ ಅವರು ಸರಳ ಬಟ್ಟೆ ಧರಿಸುತ್ತಿದ್ದರು. ಅವರ ಜೀವನ ಶೈಲಿ ನೋಡಿದರೆ ಅಂಥ ದೊಡ್ಡ ನಟನಾ ಎಂದು ಹೇಳಲು ಸಾಧ್ಯವೇ ಇರಲಿಲ್ಲ. ರಾಜ್​ಕುಮಾರ್ ಅವರಂಥ ಮೇರುನಟನ ಆಶೀರ್ವಾದ ಪಡೆದ ನಾವೇ ಧನ್ಯ’ ಎಂದು ಭಾವುಕರಾದರು ಅಮಿತಾಭ್​.

56
ಸಾವು-ಬದುಕಿನ ನಡುವೆ ಹೋರಾಟ

ಇದೇ ವೇಳೆ, 1983ರಲ್ಲಿ ಕೂಲಿ ಚಿತ್ರೀಕರಣದ ಸಮಯದಲ್ಲಿ, ಅಮಿತಾಭ್​ ಬಚ್ಚನ್ ಸಹನಟ ಪುನೀತ್ ಇಸ್ಸಾರ್ ಅವರೊಂದಿಗೆ ಸಾಹಸ ದೃಶ್ಯವನ್ನು ಚಿತ್ರೀಕರಿಸುವಾಗ ಚಾಕು ಇರಿತಕ್ಕೆ ಒಳಗಾಗಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದರು. ಅವರಿಗೆ ತೀವ್ರ ಆಂತರಿಕ ರಕ್ತಸ್ರಾವ ಮತ್ತು ವಾರಗಳವರೆಗೆ ಗಂಭೀರ ಸ್ಥಿತಿಯಲ್ಲಿದ್ದರು. ಅಂಥ ಸಂದರ್ಭದಲ್ಲಿ ಡಾ.ರಾಜ್​ಕುಮಾರ್​ ಕೂಡ ಅಮಿತಾಭ್​ ಅವರಿಗಾಗಿ ಹಲವಾರು ರೀತಿಯಲ್ಲಿ ಪ್ರಾರ್ಥನೆ ಸಲ್ಲಿಸಿರುವುದಾಗಿ ನಟ ತಿಳಿಸಿದ್ದಾರೆ.

66
ಕೊನೆ ಕ್ಷಣದವರೆಗೂ...

"ಅಂದಿನಿಂದ, ಅವರು ನಿಧನರಾಗುವ ದಿನದವರೆಗೂ, ನಾವು ಸಂಪರ್ಕದಲ್ಲಿದ್ದೆವು. ನಾನು ಅವರ ಮಕ್ಕಳೊಂದಿಗೂ ಆತ್ಮೀಯನಾಗಿದ್ದೆ, ಅವರು ಈಗ ತಮ್ಮದೇ ಆದ ರೀತಿಯಲ್ಲಿ ಸ್ಟಾರ್ ಗಳಾಗಿದ್ದಾರೆ ಎಂದು ಅಮಿತಾಭ್​ ತಿಳಿಸಿದ್ದಾರೆ.

Read more Photos on
click me!

Recommended Stories