'ಲಕ್ಷ್ಮೀನಿವಾಸ' ಧಾರಾವಾಹಿಯಲ್ಲಿ ಜಯಂತ್-ಜಾಹ್ನವಿ, ಸಿದ್ದೇಗೌಡ್ರು-ಭಾವನಾ, ಮಗ ಸಂತೋಷ್-ಅಪ್ಪ ಶ್ರೀನಿವಾಸ ಇವರ ಬಗ್ಗೆ ತೋರಿಸುವಾಗ ವೀಕ್ಷಕರು ಅದೇನು ತೋರಿಸಿದ್ದೇ ತೋರಿಸುತ್ತೀರಾ?. ಭಾವನಾ ನೋಡಿದ್ರೆ ಅಳುಮುಂಜಿ, ಇನ್ನು ಸಂತೋಷ್ ಜಿಪುಣ, ಅಮ್ಮ-ಅಪ್ಪನನ್ನೇ ಮನೆಯಿಂದ ಆಚೆ ಹಾಕುವಷ್ಟು ನೀಚ. ಇನ್ನು ಆ ಚಿನ್ನುಮರಿ ಜಾಹ್ನವಿ-ಜಯಂತ್ ಈ ಜನ್ಮಕ್ಕೆ ಒಬ್ಬರ ಮುಖವನ್ನ ಇನ್ನೊಬ್ಬರು ನೋಡಲ್ಲ ಬಿಡಿ ಎಂದು ಕಾಮೆಂಟ್ಸ್ ಮಾಡಿದ್ದೇ ಮಾಡಿದ್ದು, ಇದೀಗ ವೀಕ್ಷಕರ ಆಸೆಯನ್ನ ನಿರಾಸೆ ಮಾಡಬಾರದು ಎಂಬ ಕಾರಣಕ್ಕಾಗಿಯೋ, ಅಥವಾ ಕಥೆಯೋ ಹಾಗೆ ಹೋಗುತ್ತಿದೆಯೋ ಗೊತ್ತಿಲ್ಲ. ಒಟ್ಟಿನಲ್ಲಿ ಧಾರಾವಾಹಿಯಲ್ಲಿ ಈ ಮೂವರ ಮೂಲಕ ನಿರ್ದೇಶಕರು ಮಹತ್ವದ ಸಂದೇಶ ಸಾರಿದ್ದಾರೆ. ಅದೇನು?, ಯಾರ ಮೂಲಕ? ಒಂದೊಂದಾಗಿ ನೋಡೋಣ ಬನ್ನಿ…