ಕುಬೇರನ ನಿಧಿ
ರತ್ಲಂನ ಮಹಾಲಕ್ಷ್ಮಿ ದೇವಾಲಯ ಕುಬೇರನ ನಿಧಿಯಾಗಿ ಪ್ರಸಿದ್ಧವಾಗಿದೆ. ದೀಪಾವಳಿಯ ಐದು ದಿನಗಳವರೆಗೆ, ಇಲ್ಲಿ ಕುಬೇರನ ನಿಧಿ ಇಡಲಾಗುತ್ತೆ. ಈ ಸಮಯದಲ್ಲಿ ದೇಗುಲವನ್ನು ಹೂವುಗಳಿಂದ ಅಥವಾ ಹೂಮಾಲೆಗಳಿಂದ ಅಲಂಕರಿಸುವುದಿಲ್ಲ. ಬದಲಾಗಿ, ನೋಟುಗಳ ಕಟ್ಟುಗಳ ಮಾಲೆ ಮಾಡಲಾಗುತ್ತೆ. ಅಷ್ಟೇ ಅಲ್ಲ ದೇವಿಗೆ ಅಲಂಕಾರವನ್ನು ಚಿನ್ನ ಮತ್ತು ಬೆಳ್ಳಿ ಆಭರಣಗಳಿಂದ (gold and silver ornaments) ಮಾಡಲಾಗುತ್ತದೆ. ಸ್ಥಳೀಯರು ಮಾತ್ರವಲ್ಲದೆ ಇತರ ರಾಜ್ಯಗಳ ಭಕ್ತರು ಸಹ ಇಲ್ಲಿಗೆ ತಮ್ಮ ಚಿನ್ನ, ಹಣ ನೀಡುತ್ತಾರೆ. ಈ ಸಂಪ್ರದಾಯದಿಂದಾಗಿ, ರತ್ಲಂನ ಮಹಾಲಕ್ಷ್ಮಿ ದೇವಾಲಯವನ್ನು ಕುಬೇರನ ನಿಧಿ ಎಂದು ಕರೆಯಲಾಗುತ್ತದೆ.