Scariest Place: ದೆಹಲಿಯ ದಂಗೆ ಮನೆ, ಸೈನಿಕರ ಆತ್ಮ ಜನರಿಗೆ ಕಾಟ ಕೊಟ್ತಿರೋದ್ಯಾಕೆ?

First Published Mar 29, 2023, 12:13 PM IST

ಹೊಸ ಹೊಸ ಸ್ಥಳ ನೋಡ್ಬೇಕೆಂಬ ಆತುರ, ಕಾತುರ ಅನೇಕರಿಗಿರುತ್ತದೆ. ಆದ್ರೆ ದೇಶದಲ್ಲಿ ಅದೆಷ್ಟೋ ತಾಣಗಳು ಪ್ರವಾಸಿ ತಾಣವಾಗಿ ಮಾತ್ರವಲ್ಲದೆ ನಿಗೂಢ ಸ್ಥಳವಾಗಿಯೂ ಹೆಸರು ಮಾಡಿವೆ. ಅಂಥಾ ಸ್ಥಳಗಳಲ್ಲೊಂದು ದೆಹಲಿಯ ದಂಗೆ ಮನೆ. ಇಲ್ಲಿ ಸತ್ತ ಸೈನಿಕರ ಆತ್ಮ ಜನರಿಗೆ ಕಾಟ ಕೊಡ್ತಿದೆಯಂತೆ.

ರಾಷ್ಟ್ರ ರಾಜಧಾನಿ ದೆಹಲಿ ಅನೇಕ ವಿಷಯಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿ ಹಲವಾರು ಪ್ರವಾಸಿ ತಾಣಗಳಿವೆ. ಇದರಲ್ಲಿ ಕೆಂಪು ಕೋಟೆ, ಇಂಡಿಯಾ ಗೇಟ್, ಜಾಮಾ ಮಸೀದಿ, ಲೋಟಸ್ ಟೆಂಪಲ್ ಮುಂತಾದ ಅನೇಕ ಪ್ರಸಿದ್ಧ ಸ್ಥಳಗಳು ಸೇರಿವೆ. ಹಾಗೆಯೇ ಬೆಚ್ಚಿಬೀಳಿಸೋ ಭಯಾನಕ ತಾಣಗಳೂ ಇಲ್ಲಿವೆ. ಅದರಲ್ಲೊಂದು ದೆಹಲಿಯ ಹಾಂಟೆಡ್ ದಂಗೆ ಮನೆ.

ರಾಜಧಾನಿಯಲ್ಲಿ ಇಂತಹ ಅನೇಕ ಸ್ಥಳಗಳು ಕೆಲವು ಕಾರಣಗಳಿಗಾಗಿ ಅಥವಾ ಇನ್ನೊಂದು ಭಯಾನಕ ಕಥೆಗಳಿಗೆ ಪ್ರಸಿದ್ಧವಾಗಿವೆ. ಉದಾಹರಣೆಗೆ, ಅಗ್ರಸೇನ್‌ನ ಬಾವೊಲಿ ಅಥವಾ ಭುಲಿ ಭಟಿಯಾರಿಯ ಅರಮನೆ. ಅದೇ ರೀತಿ, ದೆಹಲಿಯಲ್ಲಿರುವ ದಂಗೆ ಹೌಸ್ ಅನ್ನು ಸಹ ಭಯಾನಕ ಸ್ಥಳವೆಂದು ಪರಿಗಣಿಸಲಾಗಿದೆ. ಈ ಮನೆಯನ್ನು ಸುಮಾರು 1863 ರಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಈ ಮನೆಯು ಭಾರತದ ಮೊದಲ ಸ್ವಾತಂತ್ರ್ಯ ಹೋರಾಟಕ್ಕೂ ಸಂಬಂಧಿಸಿದೆ.

Latest Videos


ಸೈನಿಕರ ನೆನಪಿಗಾಗಿ ದಂಗೆಕೋರರ ಮನೆ ನಿರ್ಮಾಣ
1857ರ ದಂಗೆಗೆ ದೆಹಲಿಯ ಹಲವು ಕಟ್ಟಡಗಳು ಇಂದಿಗೂ ಸಾಕ್ಷಿಯಾಗಿವೆ. ದೇಶದ ಸ್ವಾತಂತ್ರ್ಯದ ಗುರುತು ಇಂದಿಗೂ ಈ ಕಟ್ಟಡಗಳಲ್ಲಿ ಕಾಣಸಿಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ 1857ರಲ್ಲಿ ಮೊದಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹತರಾದ ಬ್ರಿಟಿಷರ ಸ್ಮರಣಾರ್ಥ ದಂಗೆ ಭವನವನ್ನು ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ.

ಅಜಿತ್‌ಗಢ್ ಎಂಬ ಹೆಸರಿನಿಂದಲೂ ಅನೇಕ ಜನರು ಈ ಮನೆಯನ್ನು ತಿಳಿದಿದ್ದಾರೆ. ದಂಗೆ ಮನೆ ಯಾಕೆ ಅಷ್ಟು ಭಯಾನಕವಾಗಿದೆ. ಜನರು ಯಾಕೆ ಇದರ ಬಗ್ಗೆ ಮಾತನಾಡಲು, ಇಲ್ಲಿಗೆ ಹೋಗಲು ಹೆದರುತ್ತಾರೆ ಅನ್ನೋ ಮಾಹಿತಿ ಇಲ್ಲಿದೆ.

ದಂಗೆಯ ಮನೆಯ ದೆವ್ವದ ಕಥೆ
1857ರ ದಂಗೆಯಲ್ಲಿ ಪ್ರಾಣ ಕಳೆದುಕೊಂಡ ಬ್ರಿಟಿಷ್ ಸೈನಿಕರ ಜೊತೆಗೆ ಭಾರತೀಯ ಸೈನಿಕರ ದೇಹವನ್ನೂ ಇಲ್ಲಿ ಹೂಳಲಾಗಿದೆ ಎಂದು ಈ ಮನೆಯ ಬಗ್ಗೆ ಹೇಳಲಾಗುತ್ತದೆ. ಇಂದಿಗೂ ಬ್ರಿಟಿಷ್ ಸೈನಿಕರ ಆತ್ಮ ಇಲ್ಲಿ ಅಲೆದಾಡುತ್ತಿದೆ ಎಂದು ಹಲವರು ಈ ಮನೆಯ ಬಗ್ಗೆ ನಂಬುತ್ತಾರೆ. ಮಧ್ಯರಾತ್ರಿ ಈ ಮನೆಯಿಂದ ನಗು, ಕೂಗು, ಅಳುವ ಸದ್ದು ಬರುತ್ತಲೇ ಇರುತ್ತದೆ ಎಂಬ ನಂಬಿಕೆಯೂ ಹಲವರದ್ದು. 

ಹಲವು ಬಾರಿ ರಾತ್ರಿ ವೇಳೆಯೂ ಇಲ್ಲಿ ವಿಚಿತ್ರ ಘಟನೆಗಳು ನಡೆದಿವೆ ಎಂದು ಹಲವರು ಹೇಳುತ್ತಾರೆ. ದಂಗೆ ಮನೆಯು ದಟ್ಟವಾದ ಅರಣ್ಯ ಮತ್ತು ಒಂಟಿಯಾಗಿರುವ ಕಾರಣ, ಇದನ್ನು ದೆಹಲಿಯ ಅತ್ಯಂತ ಭಯಾನಕ ಸ್ಥಳ ಎಂದೂ ಕರೆಯುತ್ತಾರೆ. ಹಾಗಾಗಿಯೇ ಸೂರ್ಯ ಮುಳುಗಿದ ತಕ್ಷಣ ಈ ಮನೆಯ ಸುತ್ತ ಯಾರೂ ಬರುವುದಿಲ್ಲ.
 

ಹಲವು ಬಾರಿ ರಾತ್ರಿ ವೇಳೆಯೂ ಇಲ್ಲಿ ವಿಚಿತ್ರ ಘಟನೆಗಳು ನಡೆದಿವೆ ಎಂದು ಹಲವರು ಹೇಳುತ್ತಾರೆ. ದಂಗೆ ಮನೆಯು ದಟ್ಟವಾದ ಅರಣ್ಯ ಮತ್ತು ಒಂಟಿಯಾಗಿರುವ ಕಾರಣ, ಇದನ್ನು ದೆಹಲಿಯ ಅತ್ಯಂತ ಭಯಾನಕ ಸ್ಥಳ ಎಂದೂ ಕರೆಯುತ್ತಾರೆ. ಹಾಗಾಗಿಯೇ ಸೂರ್ಯ ಮುಳುಗಿದ ತಕ್ಷಣ ಈ ಮನೆಯ ಸುತ್ತ ಯಾರೂ ಬರುವುದಿಲ್ಲ.

click me!