ಅಣ್ಣಂಗೆ ಹುಷಾರಿಲ್ಲ ನೀವು ಮಜಾ ಮಾಡ್ತಿದ್ದೀರಾ?; ವಿಜಯಲಕ್ಷ್ಮಿ ದರ್ಶನ್ ಕಾಲೆಳೆದ ನೆಟ್ಟಿಗರು

First Published Apr 22, 2024, 4:51 PM IST

ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ದರ್ಶನ್ ತೂಗ್ ದೀಪ್ ಪತ್ನಿ ವಿಜಯಲಕ್ಷ್ಮೀ ಇದೀಗ ವೀಕೆಂಡ್ ಎಂಜಾಯ್ ಮಾಡುವ ಫೋಟೋಗಳನ್ನು ಶೇರ್ ಮಾಡಿದ್ದು, ದರ್ಶನ್ ಫ್ಯಾನ್ಸ್ ಮಾತ್ರ ದರ್ಶನ್ ಆರೋಗ್ಯದ ಬಗ್ಗೆ ಮಾತನಾಡ್ತಿದ್ದಾರೆ. 
 

ಸ್ಯಾಂಡಲ್ ವುಡ್ ನಟ ದರ್ಶನ್ ತೂಗ್ ದೀಪ್ ಶ್ರೀನಿವಾಸ (Darshan Toogudeepa) ಅವರ ಪತ್ನಿ ವಿಜಯಲಕ್ಷ್ಮಿ ಸದಾ ಒಂದಲ್ಲ ಒಂದು ವಿಷ್ಯಕ್ಕೆ ಸುದ್ದಿಯಾಗುತ್ತಲೇ ಇರುತ್ತಾರೆ. ಅದು ಕಾಂಟ್ರವರ್ಸಿ ಆಗಿರಲಿ, ಪರ್ಸನಲ್ ವಿಷಯಗಳೇ ಆಗಿರಲಿ ವಿಜಯಲಕ್ಷ್ಮೀ ಹೆಸರು ಹೆಚ್ಚಾಗಿ ಕೇಳಿ ಬರುತ್ತೆ. 
 

ಸೋಶಿಯಲ್ ಮಿಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ವಿಜಯಲಕ್ಷ್ಮೀ (Vijayalakshmi) ತಾವು ಈ ಭಾನುವಾರವನ್ನು ಹೇಗೆ ಎಂಜಾಯ್ ಮಾಡಿದ್ರು ಅನ್ನೋದನ್ನು ಫೋಟೋ ಸಮೇತ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಹ್ಯಾಪಿ ಸಂಡೆ ಎಂದು ಬರೆದುಕೊಂಡಿದ್ದಾರೆ. 
 

ಕಪ್ಪು ಬಣ್ಣದ ಡ್ರೆಸ್ ಧರಿಸಿ, ದೊಡ್ಡದಾದ ಗಾಗಲ್ಸ್ ಹಾಕಿ ಎದುರಲ್ಲಿ ಬಕೆಟ್ ನಂತಹ ದೊಡ್ಡದಾದ ಕಪ್ ನಲ್ಲಿ ಕಾಫಿ ಮತ್ತು ದೈತ್ಯ ಗಾತ್ರ ಕ್ರೊಸೆಂಟನ್ನು (croissant)ಕೈಯಲ್ಲಿ ಹಿಡಿದು ವಿಜಯಲಕ್ಷ್ಮೀ ಪೋಸ್ ನೀಡಿದ್ದು How much coffee is tooo much coffee ಎಂದು ಬರೆದುಕೊಂಡಿದ್ದಾರೆ. ಫೋಟೋ ಎಲ್ಲೋ ವಿದೇಶದಲ್ಲಿ ತೆಗೆಸಿ ಕೊಂಡಿರುವಂತಿದೆ. 
 

ವಿಜಯಲಕ್ಷ್ಮೀ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಂತೆ ಪೋಸ್ಟ್ ಗೆ ಭಾರಿ ಕಾಮೆಂಟ್ ಗಳು ಬಂದಿವೆ. ಕೆಲವು ವಿಜಯಲಕ್ಷ್ಮಿ ಪರವಾಗಿ ಬಂದಿದ್ದರೆ, ಇನ್ನೂ ಕೆಲವು ನಟನ ಅಭಿಮಾನಿಗಳು ವಿಜಯಲಕ್ಷ್ಮೀ ವಿರುದ್ಧವಾಗಿ ಏನೇನೋ ಕಾಮೆಂಟ್ (comment) ಮಾಡುವ ಮೂಲಕ, ಕಾಮೆಂಟ್ ಗಳಲ್ಲೇ ಸಮರ ಸಾರಿದ್ದಾರೆ. 
 

ದರ್ಶನ್ ಅಭಿಮಾನಿಯೊಬ್ಬರು ಅಲ್ಲಿ ಅಣ್ಣಂಗೆ ಹುಶಾರಿಲ್ಲ, ನೀವು ಇಲ್ಲಿ ಖುಷಿಯಾಗಿದ್ದೀರಲ್ಲ ಅತ್ತಿಗೆ? ಇದು ನ್ಯಾಯಾನಾ ಎಂದು ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಮತ್ತೊಬ್ಬ ಅಭಿಮಾನಿ ಇಲ್ಲ ಇದೆಲ್ಲಾ ಹಳೆಯ ಫೋಟೋಗಳು, ಅದನ್ನು ಇವರು ಈವಾಗ ಅಪ್ ಲೋಡ್ ಮಾಡಿದ್ದಾರೆ ಅಷ್ಟೇ ಎಂದು ಉತ್ತರವನ್ನು ಸಹ ನೀಡಿದ್ದಾರೆ. 
 

ಇನ್ನು ಹೆಚ್ಚಿನ ಅಭಿಮಾನಿಗಳು ಇಷ್ಟು ದೊಡ್ಡ ಕಾಫಿ, ತಿಂಡಿ ಎಲ್ಲ ಒಬ್ರೆ ತಿಂತೀರಾ? ಅಣ್ಣಂಗೂ ಸ್ವಲ್ಪ ಉಳಿಸಿ ಎಂದಿದ್ದಾರೆ. ಮತ್ತೆ ಕೆಲವರು ಯಾವಾಗಲೂ ಹೀಗೆ ಖುಷಿಯಾಗಿರಿ ಎಂದು ಆಶೀರ್ವಾದವನ್ನು ಸಹ ಮಾಡಿದ್ದಾರೆ. 
 

ಡೆವಿಲ್ ಸಿನಿಮಾ ಶೂಟಿಂಗ್ ವೇಳೆ ದರ್ಶನ್ ಕೈಗೆ ಪೆಟ್ಟಾಗಿದ್ದು, ಇತ್ತೀಚೆಗಷ್ಟೇ ಆಪರೇಶನ್ ಮಾಡಿಸಿಕೊಂಡಿದ್ದರು. ಅದಾದ ಬಳಿಕವು ಅವರಿಗೆ ಕೈನೋವು ಕಾಣಿಸಿಕೊಂಡಿತ್ತು, ನಂತರ ಅವರು ಮತಪ್ರಚಾರ ಕಾರ್ಯಗಳಲ್ಲೂ ತೊಡಗಿಕೊಂಡಿದ್ದರು. ಹಾಗಾಗಿ ದರ್ಶನ್ ಅಭಿಮಾನಿಗಳು ದರ್ಶನ್ ಅವರಿಗೆ ಆರಾಮ ಇಲ್ಲದಿದ್ದಾಗ ನೀವು ಎಂಜಾಯ್ ಮಾಡ್ತಿದ್ದೀರಾ ಎಂದು ವಿಜಯಲಕ್ಷ್ಮೀಯವರನ್ನು ಪ್ರಶ್ನಿಸಿದ್ದಾರೆ. 
 

click me!