ಕರುಣೆ (Mercy)
ಸೀತೆಯನ್ನು ದಯೆ ಮತ್ತು ಔದಾರ್ಯದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅಶೋಕ ವಾಟಿಕಾದಲ್ಲಿ, ಸೀತಾ ಮಾತೆಯು ಹನುಮಂತನಿಗೆ ಹೇಳುತ್ತಾಳೆ, "ಈ ರಾಕ್ಷಸರು ರಾವಣನ ಆದೇಶವನ್ನು ಮಾತ್ರ ಅನುಸರಿಸುತ್ತಿದ್ದರು. ಅವರ ತಪ್ಪೇನೂ ಇಲ್ಲ. ಅಷ್ಟೆಲ್ಲಾ ಕಷ್ಟ ಅನುಭವಿಸಿದರೂ ಸಹ ಶತ್ರುಗಳಿಗಾಗಿ ಮಿಡಿಯಲು ಕರುಣಾಮಯಿಗೆ ಮಾತ್ರ ಸಾಧ್ಯ. ಇದಲ್ಲದೆ, ರಾವಣನು ಭಿಕ್ಷುಕನಾಗಿ ಬೇಡಲು ಬಂದಾಗ, ತನ್ನ ರಕ್ಷಣೆಗಾಗಿ ಹಾಕಿದ ರೇಖೆಯನ್ನೇ ದಾಟಿ ಬಂದ ಸೀತೆ, ಹಸಿದವನಿಗೆ ಊಟ ನೀಡಲು ಬಯಸಿದಳು. ಈ ಕರುಣಾಮಯ ಗುಣವನ್ನು ಹೆಚ್ಚಿನ ಗಂಡಸರು ಬಯಸುತ್ತಾರೆ.