ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ಬಾಲ್ಯವಿವಾಹಕ್ಕೆ ಬಲಿಯಾಗಿ ಹಲವು ದಿನಗಳ ಕಾಲ ಗರ್ಭದಲ್ಲಿ ಸತ್ತ ಭ್ರೂಣವನ್ನು ಹೊತ್ತಿದ್ದ 16 ವರ್ಷದ ಬಾಲಕಿಯನ್ನು ಆರೋಗ್ಯ ಇಲಾಖೆ ಕಳೆದ ಮಂಗಳವಾರ ಕೃಷ್ಣಗಿರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ (ಎಂಸಿಎಚ್) ದಾಖಲಿಸಿದೆ. ಈ ಪ್ರಕರಣವು ಬಾಲ್ಯವಿವಾಹ, ಆಧಾರ್ ಕಾರ್ಡ್ಗಳ ತಿರುಚುವಿಕೆ ಮತ್ತು ಆರೋಗ್ಯ ಸೇವೆಗಳ ಪ್ರವೇಶದಲ್ಲಿನ ವಿಳಂಬದಂತಹ ಗಂಭೀರ ಸಮಸ್ಯೆಗಳನ್ನು ಎತ್ತಿ ತೋರಿಸಿದೆ.