Life Lessons From Chanakya: ಈ ಸಂದರ್ಭಗಳಲ್ಲಿ ವ್ಯಕ್ತಿಯು ಸ್ವಯಂ ನಿಯಂತ್ರಣವನ್ನು ಕಾಪಾಡಿಕೊಳ್ಳಲು ವಿಫಲವಾದರೆ, ಅವರು ತೀವ್ರ ಅವಮಾನ ಎದುರಿಸಬೇಕಾಗುತ್ತದೆ ಎಂದು ಚಾಣಕ್ಯರು ಹೇಳುತ್ತಾರೆ.
ಆಚಾರ್ಯ ಚಾಣಕ್ಯರ ಬಗ್ಗೆ ಹೇಳುವುದಾದರೆ, ಅವರು ತಮ್ಮ ಕಾಲದ ಅತ್ಯಂತ ಜ್ಞಾನವುಳ್ಳ ಮತ್ತು ಬುದ್ಧಿವಂತ ವ್ಯಕ್ತಿಗಳಲ್ಲಿ ಒಬ್ಬರು ಎಂದು ಪ್ರಸಿದ್ಧರಾಗಿದ್ದಾರೆ. ತಮ್ಮ ಜೀವಿತಾವಧಿಯಲ್ಲಿ, ಆಚಾರ್ಯ ಚಾಣಕ್ಯರು ಮಾನವೀಯತೆಯ ಕಲ್ಯಾಣಕ್ಕಾಗಿ ಹಲವಾರು ನೀತಿಗಳನ್ನು ರೂಪಿಸಿದರು. ಅದು ನಂತರ ಚಾಣಕ್ಯ ನೀತಿ ಎಂದು ಕರೆಯಲ್ಪಟ್ಟಿತು. ಮಾನವೀಯತೆಯ ಕಲ್ಯಾಣಕ್ಕಾಗಿ, ಚಾಣಕ್ಯರು ತಮ್ಮ ನೀತಿಗಳಲ್ಲಿ "ಒಬ್ಬ ವ್ಯಕ್ತಿಯು ಯಾವ ಸಂದರ್ಭದಲ್ಲಿ ಸ್ವಯಂ ನಿಯಂತ್ರಣ ಅಥವಾ ಸಂಯಮವನ್ನು ಅಭ್ಯಾಸ ಮಾಡಿಕೊಳ್ಳಬೇಕು" ಎಂದು ಸಹ ವಿವರಿಸಿದ್ದಾರೆ.
25
ಮುಂದಿನ ಪರಿಣಾಮ ಹೇಗಿರುತ್ತದೆ?
ಈ ಸಂದರ್ಭಗಳಲ್ಲಿ ವ್ಯಕ್ತಿಯು ಸ್ವಯಂ ನಿಯಂತ್ರಣವನ್ನು ಕಾಪಾಡಿಕೊಳ್ಳಲು ವಿಫಲವಾದರೆ, ಅವರು ತೀವ್ರ ಅವಮಾನ ಎದುರಿಸಬೇಕಾಗುತ್ತದೆ ಎಂದು ಚಾಣಕ್ಯರು ಹೇಳುತ್ತಾರೆ. ಇಲ್ಲಿ ಒಬ್ಬ ವ್ಯಕ್ತಿಯು ಯಾವ ಸಂದರ್ಭಗಳಲ್ಲಿ ಸ್ವಯಂ ನಿಯಂತ್ರಣವನ್ನು ಕಾಯ್ದುಕೊಳ್ಳಬೇಕು?. ಹಾಗೆ ಮಾಡದಿದ್ದರೆ ಮುಂದಿನ ಪರಿಣಾಮಗಳು ಹೇಗಿರುತ್ತದೆ ಎಂದು ನೋಡೋಣ..
35
ಕೆಟ್ಟ ಭಾಷೆ, ಮಾತು
ಚಾಣಕ್ಯರ ಪ್ರಕಾರ, ನಿಮ್ಮ ಮಾತು ಅಥವಾ ಭಾಷೆ ಕೂಡ ನಿಮ್ಮ ಹಣೆಬರಹದ ಮೇಲೆ ನೇರ ಪರಿಣಾಮ ಬೀರುತ್ತದೆ. ಒಳ್ಳೆಯ ಮಾತು ಅದೃಷ್ಟಕ್ಕೆ ಹೇಗೆ ಕಾರಣವಾಗುತ್ತದೆಯೋ, ಅದೇ ಕೆಟ್ಟ ಭಾಷೆ ನಿಮ್ಮ ಅದೃಷ್ಟದ ಮೇಲೂ ಪರಿಣಾಮ ಬೀರುತ್ತದೆ. ಸಾರ್ವಜನಿಕವಾಗಿ ಮಾತನಾಡುವಾಗ ಎಚ್ಚರಿಕೆಯಿಂದ ಯೋಚಿಸಬೇಕೆಂದು ಚಾಣಕ್ಯ ಶಿಫಾರಸು ಮಾಡಲು ಇದು ಒಂದು ಪ್ರಮುಖ ಕಾರಣವಾಗಿದೆ. ತಪ್ಪು ಪದಗಳನ್ನು ಮಾತನಾಡುವುದರಿಂದ ಸಮಾಜದಲ್ಲಿ ಗೌರವ ನಷ್ಟ ಮತ್ತು ವ್ಯಾಪಕ ಅವಮಾನಕ್ಕೆ ಕಾರಣವಾಗಬಹುದು.
45
ಕೋಪ ಬಂದಾಗ
ಚಾಣಕ್ಯ ನೀತಿಯ ಪ್ರಕಾರ, ನಿಮಗೆ ಕೋಪ ಬಂದಾಗ ನಿಮ್ಮ ಮಾತುಗಳನ್ನು ಎಚ್ಚರಿಕೆಯಿಂದ ಪರಿಗಣಿಸಬೇಕು. ಸಾಮಾನ್ಯವಾಗಿ ಜನರಿಗೆ ಕೋಪ ಬಂದಾಗ ಅವರು ಯೋಚಿಸದೆ ಮಾತನಾಡುತ್ತಾರೆ. ನೀವು ಕೋಪದ ಭರದಲ್ಲಿ ಏನನ್ನಾದರೂ ಹೇಳಿದರೆ ಅದು ಜನರು ನಂಬಿಕೆಯನ್ನು ಕಳೆದುಕೊಳ್ಳಲು ಕಾರಣವಾಗಬಹುದು. ಕೊನೆಗೆ ಇದೇ ನಿಮ್ಮ ನಡವಳಿಕೆಯು ಕುಟುಂಬದಲ್ಲಿ ಅಥವಾ ಹೊರಗೆ ಸಂಬಂಧಗಳನ್ನು ಗಂಭೀರವಾಗಿ ಡ್ಯಾಮೇಜ್ ಮಾಡುತ್ತದೆ. ಈ ರೀತಿಯ ಜನರನ್ನು ಯಾರೂ ಗೌರವಿಸಲ್ಲ ಮತ್ತು ಅಂತರವನ್ನು ಕಾಯ್ದುಕೊಳ್ಳಲು ಬಯಸುತ್ತಾರೆ.
55
ಹಣ ಬಳಸುವಾಗ
ಚಾಣಕ್ಯರ ಪ್ರಕಾರ, ನೀವು ಯಾವಾಗಲೂ ನಿಮ್ಮ ಹಣವನ್ನು ಬುದ್ಧಿವಂತಿಕೆಯಿಂದ ಬಳಸಬೇಕು. ಹಾಗೆ ಮಾಡದಿದ್ದರೆ ನಿಮ್ಮ ಎಲ್ಲಾ ಹಣವನ್ನು ಕಳೆದುಕೊಳ್ಳಬಹುದು ಮತ್ತು ಸಮಾಜದಲ್ಲಿ ನಿಮ್ಮ ಖ್ಯಾತಿ ಹಾಳಾಗಬಹುದು. ನೀವು ಇದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು: ಎಷ್ಟೇ ಸಣ್ಣ ಖರೀದಿಯಾಗಿದ್ದರೂ, ವಿತ್ತೀಯ ವಹಿವಾಟಿನ ಸಮಯದಲ್ಲಿ ನೀವು ಸ್ವಯಂ ನಿಯಂತ್ರಣವನ್ನು ಕಾಯ್ದುಕೊಳ್ಳಬೇಕು.