ಸಾಮಾನ್ಯ ಮನುಷ್ಯ ಕನಸು ಕಾಣುವ ಎಲ್ಲಾ ಸುಖಭೋಗಗಳು ಸಿಜೆ ರೇ (CJ Roy) ಅವರ ಬಳಿ ಇತ್ತು. ಆದರೆ, ಇಷ್ಟೆಲ್ಲಾ ಇದ್ದರೂ ಅವರು ಸಾವಿನ ಹಾದಿ ಹಿಡಿದಿದ್ದು ಯಾಕೆ? ಇದಕ್ಕೆ ಉತ್ತರವನ್ನು ಹಲವರು ಕಂಡುಕೊಂಡಿದ್ದಾರೆ. ಈ ಸ್ಟೋರಿ ನೋಡಿದರೆ ನೀವೂ ಹೌದು ಅಂತೀರೇನೋ!
ಹಣ, ಅಂತಸ್ತು, ಕೋಟಿ ಕೋಟಿ ರೂಪಾಯಿ ಬೆಲೆಬಾಳುವ ಆಸ್ತಿ, ಹೀಗೆ ಒಬ್ಬ ಸಾಮಾನ್ಯ ಮನುಷ್ಯ ಕನಸು ಕಾಣುವ ಎಲ್ಲಾ ಸುಖಭೋಗಗಳು ಸಿಜೆ ರೇ (CJ Roy) ಅವರ ಬಳಿ ಇತ್ತು. ಆದರೆ, ಇಷ್ಟೆಲ್ಲಾ ಇದ್ದರೂ ಅವರು ಸಾವಿನ ಹಾದಿ ಹಿಡಿದಿದ್ದು ಯಾಕೆ? ಜೀವನದಲ್ಲಿ ಎಲ್ಲವೂ ಇದ್ದ ಮೇಲೆ ಇನ್ನೇನು ಬೇಕು? ಆದರೂ ಅವರ ಈ ದಾರುಣ ಅಂತ್ಯದ ಹಿಂದೆ ಯಾವುದೋ ನಿಗೂಢ ರಹಸ್ಯ ಅಡಗಿದೆಯೇ? ಈಗ ಸಾಮಾಜಿಕ ಜಾಲತಾಣಗಳಲ್ಲಿ ಒಂದು ದೊಡ್ಡ ಚರ್ಚೆ ಶುರುವಾಗಿದೆ.
26
ಹಣವಿದ್ದರೂ ಮಾನಸಿಕ ಸಂಘರ್ಷ ಕಾಡಿತ್ತಾ?
ನಮಗೆಲ್ಲಾ ತಿಳಿದಿರುವಂತೆ ಹಣದಿಂದ ಸುಖವನ್ನು ಕೊಳ್ಳಬಹುದು, ಆದರೆ ನೆಮ್ಮದಿಯನ್ನಲ್ಲ. ಸಿಜೆ ರೇ ಅವರ ವಿಷಯದಲ್ಲಿ ಇದೇ ನಿಜವಾಯಿತೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಹಗಲಿರುಳು ಕಷ್ಟಪಟ್ಟು ಸಂಪಾದಿಸಿದ ಆಸ್ತಿ ಅವರ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಹೊರಜಗತ್ತಿಗೆ ಅವರು ಅತ್ಯಂತ ಯಶಸ್ವಿ ವ್ಯಕ್ತಿಯಾಗಿ ಕಂಡರೂ, ಅಂತರಂಗದಲ್ಲಿ ಯಾವುದೋ ಒಂದು ದೊಡ್ಡ ನೋವು ಅಥವಾ ಆತಂಕ ಅವರನ್ನು ಕಾಡುತ್ತಿತ್ತು ಎಂಬುದು ಈಗ ಬಯಲಾಗುತ್ತಿದೆ.
36
ಕರ್ಮದ ಲೆಕ್ಕಾಚಾರ?
ಸಿಜೆ ರಾಯ್ ಸಾವಿನ ನಂತರ ಅನೇಕರು ಚರ್ಚಿಸುತ್ತಿರುವ ವಿಷಯವೆಂದರೆ 'ಕರ್ಮ ಫಲ'. ನಾವು ಮಾಡುವ ಪ್ರತಿಯೊಂದು ಕಾರ್ಯಕ್ಕೂ ಒಂದು ಪ್ರತಿಕ್ರಿಯೆ (Principle of Karma) ಇರುತ್ತದೆ ಎನ್ನುವುದೇ ಈ ಸಿದ್ಧಾಂತದ ಸಾರ. ಸಿಜೆ ರೇ ಅವರ ಬದುಕಿನ ಯಾವುದೋ ಒಂದು ಹಂತದಲ್ಲಿ ನಡೆದ ಘಟನೆಗಳು ಅಥವಾ ಅವರು ಅನುಸರಿಸಿದ ಹಾದಿ ಅವರ ಈ ಅಂತ್ಯಕ್ಕೆ ಕಾರಣವಾಯಿತೇ? "ಬಿತ್ತಿದಂತೆ ಬೆಳೆ" ಎನ್ನುವ ಗಾದೆಯಂತೆ, ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರೂ ತನ್ನ ಕರ್ಮದ ಫಲದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಅದಕ್ಕೆ ಕೇಳಿ ಬರುತ್ತಿರುವ ಒಂದೇ ಉತ್ತರ 'ಕರ್ಮ ಸಿದ್ಧಾಂತ'!
ಇಂದಿನ ಗ್ಲಾಮರ್ ಜಗತ್ತಿನಲ್ಲಿ ಎಲ್ಲವನ್ನೂ ಹಣದಿಂದಲೇ ಅಳೆಯಲಾಗುತ್ತದೆ. ಆದರೆ ಸಿಜೆ ರೇ ಪ್ರಕರಣವು ಒಂದು ಎಚ್ಚರಿಕೆಯ ಗಂಟೆಯಾಗಿದೆ. ಕಣ್ಣಿಗೆ ಕಾಣುವ ಕೋಟಿ ಕೋಟಿ ಆಸ್ತಿಗಿಂತ, ಕಣ್ಣಿಗೆ ಕಾಣದ ಮನಸ್ಸಿನ ಶಾಂತಿ ಅತೀ ಮುಖ್ಯ. ಜೀವನದ ಸಂಕೀರ್ಣತೆಗಳು ಮತ್ತು ವ್ಯವಹಾರದ ಒತ್ತಡಗಳ ನಡುವೆ ಅವರು ತಮ್ಮ ಅಸ್ಮಿತೆಯನ್ನು ಕಳೆದುಕೊಂಡರೇ? ಅಥವಾ ವಿಧಿಯ ಆಟದ ಮುಂದೆ ಅಸಹಾಯಕರಾದರೇ?
56
ಸಿಜೆ ರೇ ಸಾವಿನ ಹಿಂದಿದೆಯಾ 'ಈ' ಸಿದ್ಧಾಂತ?
ಒಟ್ಟಿನಲ್ಲಿ, ಸಿಜೆ ರೇ ಅವರ ಸಾವು ಕೇವಲ ಒಂದು ಸುದ್ದಿಯಾಗಿ ಉಳಿದಿಲ್ಲ. ಇದು ಮನುಷ್ಯನ ಅತಿ ಆಸೆ, ಕರ್ಮದ ಫಲ ಮತ್ತು ಜೀವನದ ನಶ್ವರತೆಯ ಬಗ್ಗೆ ದೊಡ್ಡ ಪಾಠವನ್ನು ಕಲಿಸಿದೆ. ಆಸ್ತಿ-ಅಂತಸ್ತು ಮಣ್ಣು ಪಾಲಾದರೂ, ನಾವು ಮಾಡಿದ ಕರ್ಮ ಮಾತ್ರ ನಮ್ಮನ್ನು ಹಿಂಬಾಲಿಸುತ್ತದೆ ಎಂಬ ಕಹಿ ಸತ್ಯ ಈ ಘಟನೆಯಿಂದ ಮತ್ತೊಮ್ಮೆ ಸಾಬೀತಾಗಿದೆ. ಈ ನಿಗೂಢ ಸಾವಿನ ಹಿಂದಿನ ಅಸಲಿ ಸತ್ಯ ಏನೇ ಇರಲಿ, ಕರ್ಮದ ಲೆಕ್ಕಾಚಾರ ಮಾತ್ರ ಎಂದಿಗೂ ತಪ್ಪುವುದಿಲ್ಲ ಎಂಬುದು ಜನರ ನಂಬಿಕೆ.
66
ಆದರೆ, ಇದು ಸಾರ್ವಜನಿಕರಲ್ಲಿ ಸದ್ಯಕ್ಕೆ ನಡೆಯುತ್ತಿರುವ ಸದ್ಯದ ಚರ್ಚೆ. ಸಾವಿನ ನಿಗೂಢ ರಹಸ್ಯವು ತನಿಖೆಯ ಬಳಿಕ ಕ
'ಕಾರಣ'ದ ರೂಪದಲ್ಲಿ ಹೊರಬರಲಿದೆ. ಆದರೆ, ಅದಕ್ಕೆ ಕಾರಣ ಕರ್ಮ ಎನ್ನವುದು ಹಲವರ ನಂಬಿಕೆ. ನಮ್ಮ ಸಮಾಜದಲ್ಲಿ ಸಹಜವಾಗಿಯೇ ಕರ್ಮ ಸಿದ್ಧಾಂತದ ಬಗ್ಗೆ ನಂಬಿಕೆಯಿದೆ. ಅನಿರೀಕ್ಷಿತವಾಗಿ ಹೀಗೆ ಯಾವುದೋ ದುರಂತದ ಘಟನೆಯಾದಾಗ, ಅದಕ್ಕೆ ಸಮಾಧಾನಕರ ಉತ್ತರ ಎಂದರೆ ಅದು ಕರ್ಮ ಸಿದ್ಧಾಂತ ಎನ್ನಬಹುದು. ಹಲವರು ಈ ಕರ್ಮ ಸಿದ್ಧಾಂತದ ಮೂಲಕ ಉತ್ತರ ಕಂಡುಕೊಳ್ಳುತ್ತಾರೆ. ಸಿಜೆ ರಾಯ್ ಸಾವಿನ ವಿಷ್ಯದಲ್ಲೂ ಇದೇ ಆಗಿದೆ. ತನಿಖೆ ನಡೆಯುತ್ತಿದೆ, ಕಾರಣ ಬಹಿರಂಗ ಆಗಬಹುದು. ಆದರೆ ಪರಣಾಮ ಈಗಾಗಲೇ ಕಣ್ಣಮುಂದೆ ಇದೆ!
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.