ಗಿಡದ ತುಂಬಾ ಬದನೆಕಾಯಿ ಬಿಡ್ಬೇಕೆಂದ್ರೆ ನೆಟ್ಟ ತಕ್ಷಣ ಇದೊಂದು ಕೆಲ್ಸ ಮಾಡಿ

Published : Jun 22, 2026, 03:57 PM IST

ಟೆರೆಸ್ ಮೇಲೆ ನಮ್ದೆ ಪುಟ್ಟ ಗಾರ್ಡನ್ ಮಾಡಿದ್ರೆ ಅದರ ಖುಷಿಯೇ ಬೇರೆ. ನೆಟ್ಟ ಗಿಡವೆಲ್ಲ ಹೂ, ಹಣ್ಣು ಬಿಟ್ಟಾಗ ಸಂತೋಷಕ್ಕೆ ಪಾರ ಇರೋದಿಲ್ಲ. ನಿಮ್ಮ ಪುಟ್ಟ ಗಾರ್ಡನ್ ನಲ್ಲಿಯೇ ನೀವು ಬದನೆಕಾಯಿ ಬೆಳೀಬಹುದು.

PREV
16
ಮೊದಲು ಈ ಕೆಲ್ಸ ಮಾಡಿ

ಬದನೆಕಾಯಿ ಗಿಡ ಸುಲಭವಾಗಿ ಬೆಳೆಯುತ್ತೆ. ಆದ್ರೆ ಹೂ, ಕಾಯಿ ಬಿಡೋದಿಲ್ಲ ಎನ್ನುವ ಆರೋಪ ಅನೇಕರದ್ದು. ಈ ಸಮಸ್ಯೆಯನ್ನು ನೀವು ಸುಲಭವಾಗಿ ಬಗೆ ಹರಿಸಬಹುದು. ಮೊದಲನೇಯದಾಗಿ ನಾವು ಮಾಡ್ಬೇಕಾದ ಕೆಲ್ಸ ಅಂದ್ರೆ ಬಿಳಿಬದನೆ ಸಸ್ಯವನ್ನು ಮಡಕೆ ಅಥವಾ ಗ್ರೋ ಬ್ಯಾಗ್ನಲ್ಲಿ ನೆಟ್ಟ ತಕ್ಷಣ ಹ್ಯೂಮಿಕ್ ಆಮ್ಲದ ದ್ರಾವಣವನ್ನು ಮಣ್ಣಿಗೆ ಹಾಕ್ಬೇಕು. ಇದು ಮಣ್ಣಿನ ರಚನೆಯನ್ನು ಸುಧಾರಿಸುತ್ತೆ. ಇದು ಹೊಸ ಸಸ್ಯಗಳ ಬೇರಿನ ಬೆಳವಣಿಗೆಯನ್ನು ವೇಗಗೊಳಿಸುತ್ತದೆ. ಬೇರುಗಳು ಮಣ್ಣಿನಲ್ಲಿ ಬಲವಾದ ನೆಲೆಯೂರಲು ಸಹಾಯ ಮಾಡುತ್ತೆ. ಹವಾಮಾನದ ಏರಿಳಿತವನ್ನು ಸಸ್ಯ ಸುಲಭವಾಗಿ ಸಹಿಸಬಲ್ಲದು. ಪೋಷಕಾಂಶ ಹೀರಿಕೊಳ್ಳುವ ಸಾಮರ್ಥ್ಯ ಕೂಡ ಹೆಚ್ಚಾಗುತ್ತೆ.

26
ಗೊಬ್ಬರ ಯಾವಾಗ ಹಾಕ್ಬೇಕು?

ಗಿಡ ನೆಟ್ಟ 15 ದಿನಗಳಲ್ಲಿ ಬೇರುಗಳು ನೆಲೆಗೊಳ್ಳುತ್ತವೆ. ಇದಾದ ತಕ್ಷಣ, ಸಸ್ಯ ತನ್ನ ಎಲೆಗಳು ಮತ್ತು ಚಿಗುರುಗಳನ್ನು ಅಭಿವೃದ್ಧಿಪಡಿಸಲು ಸಾರಜನಕದ ಅಗತ್ಯವಿರುತ್ತದೆ. ಗಿಡ ನೆಟ್ಟ 15 ನೇ ದಿನಕ್ಕೆ ನೀವು ಸಸ್ಯಕ್ಕೆ ಸಾರಜನಕ ಸಮೃದ್ಧ ರಸಗೊಬ್ಬರವನ್ನು ಹಾಕಬೇಕು. ಸಾರಜನಕ, ಸಸ್ಯ ಕ್ಲೋರೊಫಿಲ್ ಉತ್ಪಾದಿಸಲು ಸಹಾಯ ಮಾಡುತ್ತದೆ.

36
ಮನೆಯಲ್ಲೇ ಇದೆ ಸಾರಜನಕ

ನೀವು ಮನೆಯಲ್ಲೇ ಸಾರಜನಕ ಗೊಬ್ಬರ ತಯಾರಿಸಬಹುದು. ಟೀ ಮಾಡಿದ ನಂತ್ರ ಆ ಪುಡಿಯನ್ನು ಚೆನ್ನಾಗಿ ತೊಳೆದು ಒಣಗಿಸಿ. ನಂತ್ರ ಈ ಪುಡಿಯನ್ನು ತಿಂಗಳಿಗೆ ಎರಡು ಬಾರಿ ಬದನೆಕಾಯಿ ಸಸ್ಯದ ಮಣ್ಣಿನಲ್ಲಿ ಸೇರಿಸಿ. ಇದು ಸಾರಜನಕದ ಸಮೃದ್ಧ ಮೂಲವಾಗಿದೆ. ಇದಲ್ಲದೆ ನೀವು ಸಾಸಿವೆ ಕೇಕ್ ಬಳಸಬಹುದು. ಸಾಸಿವೆ ಕೇಕನ್ನು 3-4 ದಿನಗಳವರೆಗೆ ನೀರಿನಲ್ಲಿ ನೆನೆಸಿಡಬೇಕು. ನಂತ್ರ ಅದನ್ನು ಗಿಡಕ್ಕೆ ಹಾಕಬೇಕು. ಕಾಫಿ ಪುಡಿ ಕೂಡ ಸಾರಜನಕವಾಗಿ ಕೆಲಸ ಮಾಡುತ್ತದೆ. ಅರ್ಧ ಟೀಚಮಚ ಕಾಫಿ ಪುಡಿಯನ್ನು ಒಂದು ಲೀಟರ್ ನೀರಿನಲ್ಲಿ ಕರಗಿಸಿ ಸಸ್ಯಕ್ಕೆ ಹಚ್ಚುವುದರಿಂದ ಸಾರಜನಕದ ಕೊರತೆಗೆ ಪರಿಹಾರ ಸಿಗುತ್ತದೆ.

46
ಮಡಿಕೆ ಆಯ್ಕೆ

ಬದನೆ ಗಿಡಗಳು ಆರಾಮವಾಗಿ ಹರಡಿ ಬೆಳೆಯಬೇಕೆಂದ್ರೆ ನೀವು ಆಳವಾದ ಹಾಗೂ ದೊಡ್ಡ ಮಡಿಕೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಕನಿಷ್ಠ 12 ರಿಂದ 14 ಇಂಚು ಆಳವಿರುವ ಮಡಕೆ ಅಥವಾ ಬೆಳೆಯುವ ಚೀಲವನ್ನು ಆರಿಸಿ. ಮಣ್ಣನ್ನು ಸಿದ್ಧಪಡಿಸುವಾಗ, ಶೇಕಡಾ 30 ರಷ್ಟು ಹಸುವಿನ ಗೊಬ್ಬರ ಅಥವಾ ವರ್ಮಿಕಾಂಪೋಸ್ಟ್ ಅನ್ನು ಸಾಮಾನ್ಯ ತೋಟದ ಮಣ್ಣು ಮತ್ತು ಸ್ವಲ್ಪ ಮರಳಿನೊಂದಿಗೆ ಬೆರೆಸಿ. ನೀರು ಹಾಕಿದ ತಕ್ಷಣ ಮಡಕೆಯ ಕೆಳಭಾಗದಲ್ಲಿರುವ ರಂಧ್ರಗಳ ಮೂಲಕ ಹೆಚ್ಚುವರಿ ನೀರು ಹೊರಹೋಗುವಂತೆ ಮಣ್ಣು ಸಾಕಷ್ಟು ಸಡಿಲವಾಗಿರಬೇಕು.

56
ಬೆಳಕು

ಬದನೆ ಗಿಡಕ್ಕೆ ಸೂರ್ಯನ ಬೆಳಕು ಅಗತ್ಯ. ಪ್ರತಿದಿನ ಕನಿಷ್ಠ 5 ರಿಂದ 6 ಗಂಟೆಗಳ ಕಾಲ ನೇರ, ಪ್ರಕಾಶಮಾನವಾದ ಸೂರ್ಯನ ಬೆಳಕು ಅದಕ್ಕೆ ಬೀಳಬೇಕು. ಸೂರ್ಯನ ಬೆಳಕಿನ ಕೊರತೆಯು ಸಸ್ಯದ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ಮೇಲ್ಮಣ್ಣು ಒಣಗಿದಾಗ ಮಾತ್ರ ನೀರು ಹಾಕಿ. ಮಣ್ಣು ಯಾವಾಗಲೂ ಸ್ವಲ್ಪ ತೇವವಾಗಿರಬೇಕು.

66
ಇದು ಮುಖ್ಯ

ಸಸ್ಯ 1 ಅಡಿ ಎತ್ತರಕ್ಕೆ ಬೆಳೆದಾಗ ಮೇಲಿನ ಕೊಂಬೆಯನ್ನು ಸ್ವಲ್ಪ ಕತ್ತರಿಸಿ. ಇದು ಹೊಸ ಕೊಂಬೆ ಬೆಳೆಯಲು ನೆರವಾಗುತ್ತದೆ. ಬದನೆಕಾಯಿ ಹೂಬಿಡಲು ಪ್ರಾರಂಭಿಸಿದಾಗ ನೀರಿನ ಪ್ರಮಾಣವನ್ನು ಕಡಿಮೆ ಮಾಡಿ. ಅತಿಯಾಗಿ ನೀರುಹಾಕುವುದು ಹೂವುಗಳು ಉದುರಲು ಕಾರಣವಾಗಬಹುದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories