ಮಾನಸಿಕ ಸ್ಥಿತಿ ಸುಧಾರಿಸುತ್ತದೆ
ತಣ್ಣೀರು ನಮ್ಮ ಮಾನಸಿಕ ಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ತಣ್ಣೀರು ನಮ್ಮ ದೇಹದಲ್ಲಿ ಡೋಪಮೈನ್, ಸಿರೊಟೋನಿನ್ ಮಟ್ಟವನ್ನು ಸುಧಾರಿಸುತ್ತದೆ. ಇದರಿಂದ ಒತ್ತಡ, ಆತಂಕ ಮುಂತಾದ ಮಾನಸಿಕ ಸಮಸ್ಯೆಗಳು ಕಡಿಮೆಯಾಗುತ್ತವೆ. ಇದು ನಿಮಗೆ ಉಲ್ಲಾಸದ ಅನುಭವ ನೀಡುತ್ತದೆ.
ಇವುಗಳನ್ನು ನೆನಪಿನಲ್ಲಿಡಿ
ತಣ್ಣೀರಿನ ಸ್ನಾನವು ನಿಮ್ಮ ದೇಹದಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ ತಣ್ಣೀರನ್ನು ದೇಹದ ಮೇಲೆ ಸುರಿಯುವುದರಿಂದ ಹೃದಯಾಘಾತದ ಅಪಾಯವಿರುತ್ತದೆ. ಆದ್ದರಿಂದ ತಣ್ಣೀರನ್ನು ನೇರವಾಗಿ ತಲೆಯ ಮೇಲೆ ಸುರಿಯದೆ, ಮೊದಲು ಪಾದಗಳಿಂದ ದೇಹವನ್ನು ತಣ್ಣೀರಿನಿಂದ ತೊಳೆಯಲು ಪ್ರಾರಂಭಿಸಬೇಕು. ಕೆಮ್ಮು, ಜ್ವರ, ನೆಗಡಿ, ಹೃದ್ರೋಗ, ಹೃದಯ ಸಮಸ್ಯೆ ಇರುವವರು ಯಾವುದೇ ಕಾರಣಕ್ಕೂ ತಣ್ಣೀರಿನಿಂದ ಸ್ನಾನ ಮಾಡಬಾರದು.