ಕಲ್ಯಾಣ ಕರ್ನಾಟಕ ಉತ್ಸವದಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲೇ ಮೊದಲ ಬಾರಿಗೆ ಕಲಬುರಗಿಯಲ್ಲಿ ಸ್ಮಾರ್ಟ್ ಹೆಲ್ತ್ ಕಿಯೋಸ್ಕ್ ಅನ್ನು ಉದ್ಘಾಟಿಸಿದರು. ಇದರಿಂದ ಆರೋಗ್ಯ ಸಮಸ್ಯೆಗಳಿಗೆ ಸಾರ್ವಜನಿಕರು ಆಸ್ಪತ್ರೆಗೆ ಅಲೆಯುವುದು ತಪ್ಪಲಿದೆ. ಮುಖ್ಯವಾಗಿ ಬಡವರಿಗೆ ಸದುಪಯೋಗವಾಗಲಿದೆ.
'ಆರೋಗ್ಯ ಮಿತ್ರ' ಯೋಜನೆಯಡಿ ಆರಂಭಿಸಿರುವ ಈ ಯೋಜನೆಗೆ ಹೆಚ್.ಪಿ.ಎಂಟರ್ಪ್ರೈಸಸ್ನಿಂದ 25 ಹೆಲ್ತ್ ಎಟಿಎಂ ಘಟಕಗಳನ್ನು ಕಲಬುರಗಿಗೆ ನೀಡಿದೆ. CSR ಅನುದಾನದ ಅಡಿ ಪಡೆದ ಎಟಿಎಂ ಘಟಕಗಳನ್ನು ಕಲ್ಯಾಣ ಕರ್ನಾಟಕ ದಿನದಿಂದೇ ಕಲಬುರಗಿ ಜನತೆಗೆ ಬಂಪರ್ ಗಿಫ್ಟ್ ಕೊಟ್ಟಿರುವ ಸಿದ್ದರಾಮಯ್ಯ.