ಕೊತ್ತಂಬರಿ ಪುಡಿಯೂ ನಮ್ಮ ಆರೋಗ್ಯಕ್ಕೆ ಸಿಕ್ಕಾಪಟ್ಟೆ ಹೆಲ್ಪ್‌ಫುಲ್!

Suvarna News   | Asianet News
Published : May 21, 2021, 07:04 PM IST

ವಿವಿಧ ಆರೋಗ್ಯ ಸಮಸ್ಯೆಗಳನ್ನು ನಾವು ಇಂದು ಕಾಣುತ್ತಿದ್ದೇವೆ. ಪ್ರತಿಯೊಂದು ಆರೋಗ್ಯ ಸಮಸ್ಯೆಗಳಿಗೂ ಈಗ ಹೊರಗಡೆ ಔಷಧಿ ಲಭ್ಯವಿದೆ. ಹಾಗೆಂದು ಪ್ರತಿ ದಿನ ಎದುರಾಗುವ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳಿಗೆಲ್ಲಾ ಔಷಧಿಯನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಅದರ ಬದಲು ಕೆಲವೊಂದು ಮನೆ ಮದ್ದುಗಳನ್ನು ಟ್ರೈ ಮಾಡುವುದರಿಂದ ಆರೋಗ್ಯದ ಲಾಭಗಳನ್ನು ನಮ್ಮದಾಗಿಸಿಕೊಳ್ಳಬಹುದು. ಕೊತ್ತಂಬರಿ ಸೊಪ್ಪನ್ನು ನಾವು ಸರಾಗವಾಗಿ ನಮ್ಮ ಅಡುಗೆಗಳಲ್ಲಿ ಉಪಯೋಗಿಸುತ್ತೇವೆ.  

PREV
112
ಕೊತ್ತಂಬರಿ ಪುಡಿಯೂ ನಮ್ಮ ಆರೋಗ್ಯಕ್ಕೆ ಸಿಕ್ಕಾಪಟ್ಟೆ ಹೆಲ್ಪ್‌ಫುಲ್!

ಆದರೆ ದಿನನಿತ್ಯದ ಆರೋಗ್ಯ ಪದ್ದತಿಯಲ್ಲಿ ಕೊತ್ತಂಬರಿ ಪೌಡರ್ ಅ‪ನ್ನು ಬಳಸುವುದರಿಂದ ಉಂಟಾಗುವ ಆರೋಗ್ಯ ಪ್ರಯೋಜನಗಳನ್ನು ನಾವು ಮರೆತಿರುತ್ತೇವೆ. ಬನ್ನಿ ಈ ಲೇಖನದಲ್ಲಿ ಕೊತ್ತಂಬರಿ ಬೀಜಗಳನ್ನು ಹುರಿದು ಪುಡಿ ಮಾಡಿಕೊಂಡು ಸೇವಿಸುವುದರಿಂದ ಉಂಟಾಗುವ ಆರೋಗ್ಯ ಲಾಭಗಳನ್ನು ಹೇಗೆ ನಮ್ಮದಾಗಿಸಿಕೊಳ್ಳಬಹುದು ಎಂದು ತಿಳಿದುಕೊಳ್ಳೋಣ.‬

ಆದರೆ ದಿನನಿತ್ಯದ ಆರೋಗ್ಯ ಪದ್ದತಿಯಲ್ಲಿ ಕೊತ್ತಂಬರಿ ಪೌಡರ್ ಅ‪ನ್ನು ಬಳಸುವುದರಿಂದ ಉಂಟಾಗುವ ಆರೋಗ್ಯ ಪ್ರಯೋಜನಗಳನ್ನು ನಾವು ಮರೆತಿರುತ್ತೇವೆ. ಬನ್ನಿ ಈ ಲೇಖನದಲ್ಲಿ ಕೊತ್ತಂಬರಿ ಬೀಜಗಳನ್ನು ಹುರಿದು ಪುಡಿ ಮಾಡಿಕೊಂಡು ಸೇವಿಸುವುದರಿಂದ ಉಂಟಾಗುವ ಆರೋಗ್ಯ ಲಾಭಗಳನ್ನು ಹೇಗೆ ನಮ್ಮದಾಗಿಸಿಕೊಳ್ಳಬಹುದು ಎಂದು ತಿಳಿದುಕೊಳ್ಳೋಣ.‬

212

ಶುಗರ್ ನಿಯಂತ್ರಣಕ್ಕೆ ಬರುತ್ತದೆ
ಕೊತ್ತಂಬರಿ ಬೀಜಗಳ ಪುಡಿಯಲ್ಲಿ  ದೇಹದಲ್ಲಿ ಮಧುಮೇಹವನ್ನು ನಿಯಂತ್ರಣ ಮಾಡುವ ಗುಣವಿದೆ. ಹಾಗಾಗಿ ರಕ್ತದಲ್ಲಿ ಸಕ್ಕರೆ ಅಂಶ ಏರಿಕೆಯಾಗಿದ್ದರೂ ಅದನ್ನು ಮತ್ತೆ ಸಹಜ ಸ್ಥಿತಿಗೆ ತರುವಲ್ಲಿ ಧನಿಯಾ ಬೀಜಗಳ ಪಾತ್ರವನ್ನು ಮರೆಯುವಂತಿಲ್ಲ.

ಶುಗರ್ ನಿಯಂತ್ರಣಕ್ಕೆ ಬರುತ್ತದೆ
ಕೊತ್ತಂಬರಿ ಬೀಜಗಳ ಪುಡಿಯಲ್ಲಿ  ದೇಹದಲ್ಲಿ ಮಧುಮೇಹವನ್ನು ನಿಯಂತ್ರಣ ಮಾಡುವ ಗುಣವಿದೆ. ಹಾಗಾಗಿ ರಕ್ತದಲ್ಲಿ ಸಕ್ಕರೆ ಅಂಶ ಏರಿಕೆಯಾಗಿದ್ದರೂ ಅದನ್ನು ಮತ್ತೆ ಸಹಜ ಸ್ಥಿತಿಗೆ ತರುವಲ್ಲಿ ಧನಿಯಾ ಬೀಜಗಳ ಪಾತ್ರವನ್ನು ಮರೆಯುವಂತಿಲ್ಲ.

312

ಕೆಲವೊಂದು ವಿಶೇಷ ಬಗೆಯ ಎಣ್ಣೆಯ ಅಂಶಗಳು ಕೊತ್ತಂಬರಿ ಬೀಜಗಳಲ್ಲಿ ಇರುವುದರಿಂದ ರಕ್ತದಲ್ಲಿ ಇನ್ಸುಲಿನ್ ಪ್ರಮಾಣ ಹೆಚ್ಚಿಸುವ ಗುಣವನ್ನು ಇದು ಪಡೆದುಕೊಂಡಿದೆ. ಹಾಗಾಗಿ ದೇಹದಲ್ಲಿ ಕಂಡುಬರುವ ಸ್ಟಾರ್ಚ್ ಅಂಶವನ್ನು ಶಕ್ತಿಯ ರೂಪಕ್ಕೆ ಬದಲಿಸಿ ಮಧುಮೇಹ ರೋಗ ಲಕ್ಷಣಗಳು ಕಂಡುಬರುವ ವ್ಯಕ್ತಿಯಲ್ಲಿ ಸಾಕಷ್ಟು ಉತ್ತಮ ಬದಲಾವಣೆಗಳನ್ನು ತಂದು ಕೊಡುತ್ತದೆ. ಉದಾಹರಣೆಗೆ ಆಗಾಗ ಮೂತ್ರ ವಿಸರ್ಜನೆ ಮಾಡುವುದು, ದೇಹಕ್ಕೆ ವಿಪರೀತ ಸುಸ್ತು ಎದುರಾಗುವುದು, ಇದ್ದಕ್ಕಿದ್ದಂತೆ ಹಸಿವು ಜಾಸ್ತಿಯಾಗುವುದು ಇಂತಹ ಸಾಧ್ಯತೆಯನ್ನು ಇದು ತಪ್ಪಿಸುತ್ತದೆ.
 

ಕೆಲವೊಂದು ವಿಶೇಷ ಬಗೆಯ ಎಣ್ಣೆಯ ಅಂಶಗಳು ಕೊತ್ತಂಬರಿ ಬೀಜಗಳಲ್ಲಿ ಇರುವುದರಿಂದ ರಕ್ತದಲ್ಲಿ ಇನ್ಸುಲಿನ್ ಪ್ರಮಾಣ ಹೆಚ್ಚಿಸುವ ಗುಣವನ್ನು ಇದು ಪಡೆದುಕೊಂಡಿದೆ. ಹಾಗಾಗಿ ದೇಹದಲ್ಲಿ ಕಂಡುಬರುವ ಸ್ಟಾರ್ಚ್ ಅಂಶವನ್ನು ಶಕ್ತಿಯ ರೂಪಕ್ಕೆ ಬದಲಿಸಿ ಮಧುಮೇಹ ರೋಗ ಲಕ್ಷಣಗಳು ಕಂಡುಬರುವ ವ್ಯಕ್ತಿಯಲ್ಲಿ ಸಾಕಷ್ಟು ಉತ್ತಮ ಬದಲಾವಣೆಗಳನ್ನು ತಂದು ಕೊಡುತ್ತದೆ. ಉದಾಹರಣೆಗೆ ಆಗಾಗ ಮೂತ್ರ ವಿಸರ್ಜನೆ ಮಾಡುವುದು, ದೇಹಕ್ಕೆ ವಿಪರೀತ ಸುಸ್ತು ಎದುರಾಗುವುದು, ಇದ್ದಕ್ಕಿದ್ದಂತೆ ಹಸಿವು ಜಾಸ್ತಿಯಾಗುವುದು ಇಂತಹ ಸಾಧ್ಯತೆಯನ್ನು ಇದು ತಪ್ಪಿಸುತ್ತದೆ.
 

412

ಸೋಂಕು ನಿಯಂತ್ರಣ ಆಗುತ್ತದೆ
ಕೊತ್ತಂಬರಿ ಬೀಜಗಳಲ್ಲಿ ಆಂಟಿ ಬ್ಯಾಕ್ಟೀರಿಯಲ್, ಆಂಟಿಸೆಪ್ಟಿಕ್, ಆಂಟಿ ಮೈಕ್ರೋಬಿಯಲ್ ಗುಣಲಕ್ಷಣಗಳು ಇರುವುದರಿಂದ ಬೇರೆ ಯಾವುದೇ ಬಗೆಯ ಆಹಾರ ಪದಾರ್ಥಗಳಿಗೆ ಹೋಲಿಸಿದರೆ ದೇಹಕ್ಕೆ ಸಾಕಷ್ಟು ಆರೋಗ್ಯಕರ ಪ್ರಭಾವವನ್ನುಂಟು ಮಾಡುವ ಗುಣಲಕ್ಷಣಗಳು ಇವುಗಳಲ್ಲಿ ಕಂಡು ಬರುತ್ತವೆ. ಮುಖ್ಯವಾಗಿ ವಿಟಮಿನ್ ಎ ಅಂಶ, ವಿಟಮಿನ್ ಸಿ ಅಂಶ, ಪೋಲಿಕ್ ಆಮ್ಲ, ಬೀಟಾ-ಕ್ಯಾರೋಟಿನ್ ಇತ್ಯಾದಿಗಳ ಪ್ರಮಾಣ ಇದರಲ್ಲಿ ಹೆಚ್ಚಾಗಿದೆ.

ಸೋಂಕು ನಿಯಂತ್ರಣ ಆಗುತ್ತದೆ
ಕೊತ್ತಂಬರಿ ಬೀಜಗಳಲ್ಲಿ ಆಂಟಿ ಬ್ಯಾಕ್ಟೀರಿಯಲ್, ಆಂಟಿಸೆಪ್ಟಿಕ್, ಆಂಟಿ ಮೈಕ್ರೋಬಿಯಲ್ ಗುಣಲಕ್ಷಣಗಳು ಇರುವುದರಿಂದ ಬೇರೆ ಯಾವುದೇ ಬಗೆಯ ಆಹಾರ ಪದಾರ್ಥಗಳಿಗೆ ಹೋಲಿಸಿದರೆ ದೇಹಕ್ಕೆ ಸಾಕಷ್ಟು ಆರೋಗ್ಯಕರ ಪ್ರಭಾವವನ್ನುಂಟು ಮಾಡುವ ಗುಣಲಕ್ಷಣಗಳು ಇವುಗಳಲ್ಲಿ ಕಂಡು ಬರುತ್ತವೆ. ಮುಖ್ಯವಾಗಿ ವಿಟಮಿನ್ ಎ ಅಂಶ, ವಿಟಮಿನ್ ಸಿ ಅಂಶ, ಪೋಲಿಕ್ ಆಮ್ಲ, ಬೀಟಾ-ಕ್ಯಾರೋಟಿನ್ ಇತ್ಯಾದಿಗಳ ಪ್ರಮಾಣ ಇದರಲ್ಲಿ ಹೆಚ್ಚಾಗಿದೆ.

512


ಶೀತ, ಕೆಮ್ಮು, ನೆಗಡಿ ಇತ್ಯಾದಿ ಸಮಸ್ಯೆಗಳು ಕಂಡು ಬಂದ ಸಂದರ್ಭದಲ್ಲಿ ಒಂದು ಲೋಟ ಕೊತ್ತಂಬರಿ ಬೀಜ ಹಾಕಿ ತಯಾರು ಮಾಡಿದ ಚಹಾ ಕುಡಿಯುವುದರಿಂದ ಆರೋಗ್ಯಕ್ಕೆ ಸಾಕಷ್ಟು ಅನುಕೂಲ ಇರುತ್ತದೆ. ಬಹಳ ಬೇಗನೆ ಚೇತರಿಕೆ ಕಂಡುಕೊಳ್ಳುವಂತೆ ಇದು ಮಾಡುತ್ತದೆ.


ಶೀತ, ಕೆಮ್ಮು, ನೆಗಡಿ ಇತ್ಯಾದಿ ಸಮಸ್ಯೆಗಳು ಕಂಡು ಬಂದ ಸಂದರ್ಭದಲ್ಲಿ ಒಂದು ಲೋಟ ಕೊತ್ತಂಬರಿ ಬೀಜ ಹಾಕಿ ತಯಾರು ಮಾಡಿದ ಚಹಾ ಕುಡಿಯುವುದರಿಂದ ಆರೋಗ್ಯಕ್ಕೆ ಸಾಕಷ್ಟು ಅನುಕೂಲ ಇರುತ್ತದೆ. ಬಹಳ ಬೇಗನೆ ಚೇತರಿಕೆ ಕಂಡುಕೊಳ್ಳುವಂತೆ ಇದು ಮಾಡುತ್ತದೆ.

612

ಜೀರ್ಣಶಕ್ತಿ ಹೆಚ್ಚಾಗಿಸುತ್ತದೆ
ಕೊತ್ತಂಬರಿ ಬೀಜಗಳಲ್ಲಿ ನಾರಿನ ಅಂಶ ಹೆಚ್ಚಾಗಿ ಸಿಗುತ್ತದೆ. ಕೊತ್ತಂಬರಿ ಬೀಜಗಳನ್ನು ಹುರಿದರೆ ಅದ್ಭುತ ಸುವಾಸನೆ ಬರುತ್ತದೆ. ಹಾಗಾಗಿ ಇದರಿಂದ ತಯಾರು ಮಾಡುವ ಚಹಾ ಬಹಳಷ್ಟು ಜನರಿಗೆ ಇಷ್ಟವಾಗುತ್ತದೆ. ಮಲಬದ್ಧತೆ, ಹೊಟ್ಟೆ ನೋವು, ವಾಕರಿಕೆ, ವಾಂತಿ ಭೇದಿ, ಇರಿಟೇಬಲ್ ಬೋವಲ್ ಸಿಂಡ್ರೋಮ್, ಇತ್ಯಾದಿ ಸಮಸ್ಯೆಗಳನ್ನು ಸರಿಪಡಿಸಿ ಲಿವರ್ ಭಾಗದ ಆರೋಗ್ಯವನ್ನು ಕಾಪಾಡುತ್ತದೆ.

ಜೀರ್ಣಶಕ್ತಿ ಹೆಚ್ಚಾಗಿಸುತ್ತದೆ
ಕೊತ್ತಂಬರಿ ಬೀಜಗಳಲ್ಲಿ ನಾರಿನ ಅಂಶ ಹೆಚ್ಚಾಗಿ ಸಿಗುತ್ತದೆ. ಕೊತ್ತಂಬರಿ ಬೀಜಗಳನ್ನು ಹುರಿದರೆ ಅದ್ಭುತ ಸುವಾಸನೆ ಬರುತ್ತದೆ. ಹಾಗಾಗಿ ಇದರಿಂದ ತಯಾರು ಮಾಡುವ ಚಹಾ ಬಹಳಷ್ಟು ಜನರಿಗೆ ಇಷ್ಟವಾಗುತ್ತದೆ. ಮಲಬದ್ಧತೆ, ಹೊಟ್ಟೆ ನೋವು, ವಾಕರಿಕೆ, ವಾಂತಿ ಭೇದಿ, ಇರಿಟೇಬಲ್ ಬೋವಲ್ ಸಿಂಡ್ರೋಮ್, ಇತ್ಯಾದಿ ಸಮಸ್ಯೆಗಳನ್ನು ಸರಿಪಡಿಸಿ ಲಿವರ್ ಭಾಗದ ಆರೋಗ್ಯವನ್ನು ಕಾಪಾಡುತ್ತದೆ.

712

ಆಹಾರ ಪದ್ಧತಿಯಲ್ಲಿ ಬೇರೆ ಬಗೆಯ ಆಹಾರಗಳ ಜೊತೆಗೆ ಮಿಶ್ರಣ ಮಾಡಿಕೊಂಡು ಯಾವುದಾದರೂ ಒಂದು ರೂಪದಲ್ಲಿ ಕೊತ್ತಂಬರಿ ಬೀಜಗಳ ಪುಡಿಯನ್ನು ಸೇವನೆ ಮಾಡುವುದರಿಂದ ದೇಹದಿಂದ ವಿಷಕಾರಿ ತ್ಯಾಜ್ಯಗಳು ಹೊರ ಹೋಗಿ  ದೇಹ ಆಂತರಿಕವಾಗಿ ಸ್ವಚ್ಛವಾಗುತ್ತದೆ.

ಆಹಾರ ಪದ್ಧತಿಯಲ್ಲಿ ಬೇರೆ ಬಗೆಯ ಆಹಾರಗಳ ಜೊತೆಗೆ ಮಿಶ್ರಣ ಮಾಡಿಕೊಂಡು ಯಾವುದಾದರೂ ಒಂದು ರೂಪದಲ್ಲಿ ಕೊತ್ತಂಬರಿ ಬೀಜಗಳ ಪುಡಿಯನ್ನು ಸೇವನೆ ಮಾಡುವುದರಿಂದ ದೇಹದಿಂದ ವಿಷಕಾರಿ ತ್ಯಾಜ್ಯಗಳು ಹೊರ ಹೋಗಿ  ದೇಹ ಆಂತರಿಕವಾಗಿ ಸ್ವಚ್ಛವಾಗುತ್ತದೆ.

812

ಹೃದಯದ ಆರೋಗ್ಯ ಅಭಿವೃದ್ಧಿಯಾಗುತ್ತದೆ
ಆಂಟಿಆಕ್ಸಿಡೆಂಟ್ ಅಂಶಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುವ ಕೊತ್ತಂಬರಿ ಬೀಜದ ಪುಡಿ ಹೃದಯದ ಆರೋಗ್ಯ ಹೆಚ್ಚಿಸಿ, ಹೃದಯ ರಕ್ತ ನಾಳದ ಕಾಯಿಲೆಗಳಿಗೆ ಗುಡ್ ಬೈ ಹೇಳುತ್ತದೆ. ಪ್ರಮುಖವಾಗಿ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟದಂತೆ ನೋಡಿಕೊಂಡು ,ಇಡೀ ದೇಹದ ತುಂಬಾ ಅಚ್ಚುಕಟ್ಟಾದ ರಕ್ತ ಸಂಚಾರ ಉಂಟಾಗುವಂತೆ ಮಾಡುತ್ತದೆ.

ಹೃದಯದ ಆರೋಗ್ಯ ಅಭಿವೃದ್ಧಿಯಾಗುತ್ತದೆ
ಆಂಟಿಆಕ್ಸಿಡೆಂಟ್ ಅಂಶಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುವ ಕೊತ್ತಂಬರಿ ಬೀಜದ ಪುಡಿ ಹೃದಯದ ಆರೋಗ್ಯ ಹೆಚ್ಚಿಸಿ, ಹೃದಯ ರಕ್ತ ನಾಳದ ಕಾಯಿಲೆಗಳಿಗೆ ಗುಡ್ ಬೈ ಹೇಳುತ್ತದೆ. ಪ್ರಮುಖವಾಗಿ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟದಂತೆ ನೋಡಿಕೊಂಡು ,ಇಡೀ ದೇಹದ ತುಂಬಾ ಅಚ್ಚುಕಟ್ಟಾದ ರಕ್ತ ಸಂಚಾರ ಉಂಟಾಗುವಂತೆ ಮಾಡುತ್ತದೆ.

912

ನೈಸರ್ಗಿಕವಾದ ಮೂತ್ರ ವರ್ಧಕ ಗುಣಲಕ್ಷಣಗಳನ್ನು ಸಹ ಇದು ಪಡೆದುಕೊಂಡಿರುವುದರಿಂದ ರಕ್ತನಾಳಗಳ ಸ್ವಚ್ಛತೆಯನ್ನು ಸಹ ಕಾಯ್ದುಕೊಳ್ಳುತ್ತದೆ. ಹಾಗಾಗಿ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ಅತ್ಯುತ್ತಮವಾದ ಕೊಲೆಸ್ಟ್ರಾಲ್ ಅಂಶಗಳು ದೇಹಕ್ಕೆ ಸಿಗುವಂತೆ ಮಾಡುತ್ತದೆ.

ನೈಸರ್ಗಿಕವಾದ ಮೂತ್ರ ವರ್ಧಕ ಗುಣಲಕ್ಷಣಗಳನ್ನು ಸಹ ಇದು ಪಡೆದುಕೊಂಡಿರುವುದರಿಂದ ರಕ್ತನಾಳಗಳ ಸ್ವಚ್ಛತೆಯನ್ನು ಸಹ ಕಾಯ್ದುಕೊಳ್ಳುತ್ತದೆ. ಹಾಗಾಗಿ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ಅತ್ಯುತ್ತಮವಾದ ಕೊಲೆಸ್ಟ್ರಾಲ್ ಅಂಶಗಳು ದೇಹಕ್ಕೆ ಸಿಗುವಂತೆ ಮಾಡುತ್ತದೆ.

1012

ನಮ್ಮ ತಲೆಕೂದಲು ಮತ್ತು ಚರ್ಮಕ್ಕೆ ಬಲು ಪ್ರಯೋಜನಕಾರಿ
ಆಂಟಿ ಬ್ಯಾಕ್ಟೀರಿಯಲ್ ಮತ್ತು ಆಂಟಿ ಆಕ್ಸಿಡೇಟಿವ್ ಪ್ರಭಾವ ಧನಿಯಾ ಬೀಜಗಳಲ್ಲಿ ಹೆಚ್ಚು ಸಿಗುವ ಕಾರಣದಿಂದ  ತ್ವಚೆಯ ಆರೋಗ್ಯ ಅತ್ಯುತ್ತಮವಾಗಿ ಬದಲಾಗುತ್ತದೆ.
ಚರ್ಮದ ಬಹಳಷ್ಟು ಸೋಂಕುಗಳು ಇದರಿಂದ ನಿವಾರಣೆ ಆದ ಬಗ್ಗೆ ಮಾಹಿತಿ ಸಿಕ್ಕಿದೆ. ಮುಖ್ಯವಾಗಿ ತ್ವಚೆಯಲ್ಲಿ ಕಂಡುಬರುವ ಮೊಡವೆಗಳು, ಗುಳ್ಳೆಗಳು, ಚರ್ಮದ ದದ್ದುಗಳು ಇಲ್ಲವಾಗುತ್ತವೆ ಎಂದು ಹೇಳಬಹುದು. ಮುಖದ ಮೇಲೆ ಉಂಟಾಗಿರುವ ಮೊಡವೆ ಗುಳ್ಳೆಗಳಿಗೆ ಕೊತ್ತಂಬರಿ ಬೀಜದ ಪೇಸ್ಟ್ ಅನ್ವಯಿಸುವುದರಿಂದ ಬಹಳ ಬೇಗ ವಾಸಿಯಾಗುತ್ತವೆ.

ನಮ್ಮ ತಲೆಕೂದಲು ಮತ್ತು ಚರ್ಮಕ್ಕೆ ಬಲು ಪ್ರಯೋಜನಕಾರಿ
ಆಂಟಿ ಬ್ಯಾಕ್ಟೀರಿಯಲ್ ಮತ್ತು ಆಂಟಿ ಆಕ್ಸಿಡೇಟಿವ್ ಪ್ರಭಾವ ಧನಿಯಾ ಬೀಜಗಳಲ್ಲಿ ಹೆಚ್ಚು ಸಿಗುವ ಕಾರಣದಿಂದ  ತ್ವಚೆಯ ಆರೋಗ್ಯ ಅತ್ಯುತ್ತಮವಾಗಿ ಬದಲಾಗುತ್ತದೆ.
ಚರ್ಮದ ಬಹಳಷ್ಟು ಸೋಂಕುಗಳು ಇದರಿಂದ ನಿವಾರಣೆ ಆದ ಬಗ್ಗೆ ಮಾಹಿತಿ ಸಿಕ್ಕಿದೆ. ಮುಖ್ಯವಾಗಿ ತ್ವಚೆಯಲ್ಲಿ ಕಂಡುಬರುವ ಮೊಡವೆಗಳು, ಗುಳ್ಳೆಗಳು, ಚರ್ಮದ ದದ್ದುಗಳು ಇಲ್ಲವಾಗುತ್ತವೆ ಎಂದು ಹೇಳಬಹುದು. ಮುಖದ ಮೇಲೆ ಉಂಟಾಗಿರುವ ಮೊಡವೆ ಗುಳ್ಳೆಗಳಿಗೆ ಕೊತ್ತಂಬರಿ ಬೀಜದ ಪೇಸ್ಟ್ ಅನ್ವಯಿಸುವುದರಿಂದ ಬಹಳ ಬೇಗ ವಾಸಿಯಾಗುತ್ತವೆ.

1112

ಇನ್ನು ತಲೆ ಕೂದಲಿನ ವಿಷಯಕ್ಕೆ ಬರುವುದಾದರೆ ನೆತ್ತಿಯ ಭಾಗದಲ್ಲಿ ಸೋಂಕು ಉಂಟಾಗಿರುವುದು, ತಲೆಹೊಟ್ಟು, ಕೂದಲು ಉದುರುವಿಕೆ ಇತ್ಯಾದಿ ಸಮಸ್ಯೆಗಳಿಗೆ ಇದು ರಾಮಬಾಣವಾಗಿ ಕೆಲಸ ಮಾಡುತ್ತದೆ. ಸಾಕಷ್ಟು ಅತ್ಯುತ್ತಮವಾದ ವಿಟಮಿನ್ ಅಂಶಗಳು ಕೊತ್ತಂಬರಿ ಬೀಜಗಳಲ್ಲಿ ಕಂಡುಬರುವುದರಿಂದ ಚಿಕ್ಕ ವಯಸ್ಸಿಗೆ ತಲೆ ಕೂದಲು ಬೆಳ್ಳಗಾಗುವ ಸಾಧ್ಯತೆಯನ್ನು ಇದು ತಪ್ಪಿಸುತ್ತದೆ.ತಲೆ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಿ ಉತ್ತಮವಾದ ಪ್ರಭಾವವನ್ನು ಬೀರುತ್ತದೆ. 

ಇನ್ನು ತಲೆ ಕೂದಲಿನ ವಿಷಯಕ್ಕೆ ಬರುವುದಾದರೆ ನೆತ್ತಿಯ ಭಾಗದಲ್ಲಿ ಸೋಂಕು ಉಂಟಾಗಿರುವುದು, ತಲೆಹೊಟ್ಟು, ಕೂದಲು ಉದುರುವಿಕೆ ಇತ್ಯಾದಿ ಸಮಸ್ಯೆಗಳಿಗೆ ಇದು ರಾಮಬಾಣವಾಗಿ ಕೆಲಸ ಮಾಡುತ್ತದೆ. ಸಾಕಷ್ಟು ಅತ್ಯುತ್ತಮವಾದ ವಿಟಮಿನ್ ಅಂಶಗಳು ಕೊತ್ತಂಬರಿ ಬೀಜಗಳಲ್ಲಿ ಕಂಡುಬರುವುದರಿಂದ ಚಿಕ್ಕ ವಯಸ್ಸಿಗೆ ತಲೆ ಕೂದಲು ಬೆಳ್ಳಗಾಗುವ ಸಾಧ್ಯತೆಯನ್ನು ಇದು ತಪ್ಪಿಸುತ್ತದೆ.ತಲೆ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಿ ಉತ್ತಮವಾದ ಪ್ರಭಾವವನ್ನು ಬೀರುತ್ತದೆ. 

1212

ಕೊತ್ತಂಬರಿ ಬೀಜಗಳ ಪುಡಿ ಕೇವಲ ಸಾಂಬಾರ್ ಅಥವಾ ಇನ್ನಿತರ ಪದಾರ್ಥಗಳಿಗೆ ಮಾತ್ರ ಸೀಮಿತವಲ್ಲ. ಜನರ ಆರೋಗ್ಯ ದೃಷ್ಟಿಯಲ್ಲಿ ಬಗೆಬಗೆಯ ಆರೋಗ್ಯ ಸಮಸ್ಯೆಗಳಿಗೆ ಇದರಿಂದ ಪರಿಹಾರ ಸಿಗುತ್ತದೆ. ಮೇಲೆ ಹೇಳಿದ ಎಲ್ಲಾ ಸಮಸ್ಯೆಗಳಿಗೂ ಸಹ ಕೊತ್ತಂಬರಿ ಬೀಜಗಳ ಪುಡಿ ಅನುಕೂಲಕರವಾಗಿರುತ್ತದೆ. ಯಾವುದೇ ಅಡ್ಡ ಪರಿಣಾಮಗಳನ್ನು ಉಂಟು ಮಾಡದೆ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ.

ಕೊತ್ತಂಬರಿ ಬೀಜಗಳ ಪುಡಿ ಕೇವಲ ಸಾಂಬಾರ್ ಅಥವಾ ಇನ್ನಿತರ ಪದಾರ್ಥಗಳಿಗೆ ಮಾತ್ರ ಸೀಮಿತವಲ್ಲ. ಜನರ ಆರೋಗ್ಯ ದೃಷ್ಟಿಯಲ್ಲಿ ಬಗೆಬಗೆಯ ಆರೋಗ್ಯ ಸಮಸ್ಯೆಗಳಿಗೆ ಇದರಿಂದ ಪರಿಹಾರ ಸಿಗುತ್ತದೆ. ಮೇಲೆ ಹೇಳಿದ ಎಲ್ಲಾ ಸಮಸ್ಯೆಗಳಿಗೂ ಸಹ ಕೊತ್ತಂಬರಿ ಬೀಜಗಳ ಪುಡಿ ಅನುಕೂಲಕರವಾಗಿರುತ್ತದೆ. ಯಾವುದೇ ಅಡ್ಡ ಪರಿಣಾಮಗಳನ್ನು ಉಂಟು ಮಾಡದೆ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ.

click me!

Recommended Stories