ಕೊತ್ತಂಬರಿ, ಹಸಿಮೆಣಸಿನಕಾಯಿ, ಕರಿಬೇವು ಹೆಚ್ಚು ದಿನ ಉಳಿಯಬೇಕಂದ್ರೆ ಅವುಗಳ ಕಾಂಡಗಳನ್ನು ತೆಗೆದು ಹತ್ತಿ ಚೀಲದಲ್ಲಿಡಿ. ಅವು ಹೆಚ್ಚು ಕಾಲ ತಾಜಾವಾಗಿರುತ್ತವೆ. ಅವುಗಳ ಘಮ ಕೂಡ ಹೋಗುವುದಿಲ್ಲ. ಶುಂಠಿಯಲ್ಲಿ ಮಣ್ಣಿರುತ್ತೆ, ಅದನ್ನು ನೀರಿನಿಂದ ಚೆನ್ನಾಗಿ ತೊಳೆದು ತೆರೆದಿಡಿ. ಮುಚ್ಚಿಟ್ಟರೆ ಅದರ ಮೇಲೆ ಶಿಲೀಂಧ್ರ ಬೆಳೆಯುತ್ತೆ. ತೆಂಗಿನಕಾಯಿಯನ್ನು ಫ್ರಿಡ್ಜ್ನಲ್ಲಿ ಹಾಗೆಯೇ ಇಟ್ಟರೆ ಹಾಳಾಗುತ್ತೆ. ಹಾಗಾಗಿ ತೆಂಗಿನಕಾಯಿ ತುರಿದು ಒಂದು ಡಬ್ಬದಲ್ಲಿ ಹಾಕಿ ಮುಚ್ಚಳ ಮುಚ್ಚಿ. ಅಡುಗೆ ಮಾಡುವಾಗ ತುರ್ತು ಸಮಯದಲ್ಲೂ ಇದನ್ನು ಉಪಯೋಗಿಸಬಹುದು. ಚೀಸ್, ಬೆಣ್ಣೆ ಮುಂತಾದ ಹಾಲಿನ ಉತ್ಪನ್ನಗಳನ್ನು ಹಾಗೆಯೇ ಫ್ರಿಡ್ಜ್ನಲ್ಲಿಡಬಾರದು. ಇವುಗಳನ್ನು ಅಲ್ಯೂಮಿನಿಯಂ ಫಾಯಿಲ್ನಲ್ಲಿ ಸುತ್ತಿ ಒಂದು ಡಬ್ಬದಲ್ಲಿಡಿ.
ಇಡ್ಲಿ, ದೋಸೆ ಹಿಟ್ಟನ್ನು ಫ್ರಿಡ್ಜ್ನಲ್ಲಿಡುವಾಗ ಮುಚ್ಚಳವಿಲ್ಲದೆ ಇಡಬೇಡಿ. ಅದಕ್ಕೆ ಸಂಬಂಧಿಸಿದ ಡಬ್ಬದಲ್ಲಿ ಹಾಕಿ ಚೆನ್ನಾಗಿ ಮುಚ್ಚಳ ಮುಚ್ಚಿ. ಫ್ರಿಡ್ಜ್ನಲ್ಲಿ ಉಳಿದ ಆಹಾರವನ್ನು ಇಡುವಾಗ ಮುಚ್ಚಳ ಮುಚ್ಚಿಡುವುದನ್ನು ರೂಢಿಸಿಕೊಳ್ಳಿ. ಮರುದಿನವೇ ಅದನ್ನು ಉಪಯೋಗಿಸುವಂತೆ ಮಾಡಿ.