ಅಡುಗೆ ಸೀದು ಹೋಗಿದ್ಯಾ? ಟೆನ್ಶನ್ ಬಿಡಿ ಈ ಒಂದು ಎಲೆ ಹಾಕಿ, ಸುಟ್ಟ ವಾಸನೆ, ರುಚಿ ಎರಡೂ ಇರಲ್ಲ

Published : Jul 06, 2026, 05:12 PM IST

Cooking Tips: ಅಡುಗೆ ಮಾಡುವಾಗ ತರಕಾರಿಗಳು ಅಥವಾ ಬೇಳೆಕಾಳುಗಳು ಸುಟ್ಟುಹೋದರೆ, ಅವುಗಳನ್ನು ಎಸೆಯುವ ಅಗತ್ಯವಿಲ್ಲ. ಸರಳವಾದ ಹೋಮ್ ರೆಮೆಡೀಸ್ ಸಹಾಯದಿಂದ, ಸುಟ್ಟ ವಾಸನೆಯನ್ನು ಬಹಳ ಮಟ್ಟಿಗೆ ಕಡಿಮೆ ಮಾಡಬಹುದು ಮತ್ತು ರುಚಿಯನ್ನು ಸಹ ಸುಧಾರಿಸಬಹುದು. ಹೇಗೆ ಅನ್ನೋದನ್ನು ನೋಡೋಣ. ಹೇಗೆ ಅನ್ನೋದನ್ನ ನೋಡೋಣ.

PREV
16
ಅಡುಗೆ ಸೀದು ಹೋಗಿದ್ಯಾ?

ಕೆಲವೊಮ್ಮೆ, ನಾವು ಬಹಳ ಇಷ್ಟ ಪಟ್ಟು ಅಡುಗೆ ಮಾಡುತ್ತೇವೆ, ಆದರೆ ಸ್ವಲ್ಪ ಗಮನ ಬೇರೆಡೆ ಬೇರೆಡೆಗೆ ಹೋಗಿದೆ ತಡ, ಅಡುಗೆ ಸೀದು ಹೋಗಿ ಬಿಡುತ್ತೆಆಸಕ್ತಿಯಿಂದ ಹೋಗಿದ್ದೆ ತಡ ಸೀದು ಹೋಗಲು ಶುರುವಾಗುತ್ತದೆ. ಕೆಲವೊಮ್ಮೆ, ಸಾರು, ಸಾಂಬಾರ್, ಪಲ್ಯ ಮಾಡಿ ಒಲೆ ಮೇಲೆ ಇಟ್ಟು ಮರೆತು ಬಿಡುತ್ತೇವೆ ಇದರಿಂದ ಸೀದು ಹೋಗಿ ಸುಡುವ ವಾಸನೆ ಮನೆಯಾದ್ಯಂತ ಹರಡಲು ಶುರು ಮಾಡಿದ ಮೇಲೆ ನಮಗೆ ತಿಳಿಯುತ್ತೆ. ಅಡುಗೆ ಸುಟ್ಟರೆ ಅದನ್ನ ತಿನ್ನೋದಕ್ಕೆ ಆಗುತ್ತಾ ಖಂಡಿತಾ ಇಲ್ಲ. ಹಾಗಿದ್ರೆ ಏನು ಮಾಡೋದು? ಅದನ್ನ ಚೆಲ್ಲುವ ಮುನ್ನ ಈ ಟಿಪ್ಸ್ ತಿಳಿದಿರಲಿ

26
ಈ ರೆಮಿಡಿ ಟ್ರೈ ಮಾಡಿ

ಆಹಾರ ಸುಟ್ಟುಹೋದಾಗ, ಅದನ್ನು ಎಸೆಯದೆ ಬೇರೆ ದಾರಿಯಿಲ್ಲ. ಇದು ಯೋಚನೆಯನ್ನುಂಟುಮಾಡುವುದಲ್ಲದೆ, ಕಷ್ಟ ಪಟ್ಟು ಮಾಡಿದ ಆಹಾರ ವ್ಯರ್ಥವೂ ಆಗುತ್ತದೆ. ಆದರೆ ಸಿಂಪಲ್ ಟ್ರಿಕ್ಸ್ ಬಳಸಿ ನೀವು ಸೀದು ಹೋಗಿರುವ ಆಹಾರವನ್ನು ಮತ್ತೆ ಸರಿ ಮಾಡಬಹುದು. ಹೇಗೆ ಅನ್ನೋದನ್ನು ನೋಡೋಣ.

36
ವೀಳ್ಯದ ಎಲೆ ಬಳಸಿ

ಸೀದು ಹೋದ ಅಡುಗೆ ಅಥವಾ ಆಹಾರವನ್ನು ಸರಿಪಡಿಸಲು ಅದ್ಭುತವಾದ ಟ್ರಿಕ್ಸ್ ಇಲ್ಲಿದೆ.. ನಿಮಗೆ ಬೇಕಾಗಿರುವುದು ಒಂದು ಸಣ್ಣ ವೀಳ್ಯದ ಎಲೆ. ಈ ಟ್ರಿಕ್ಸ್ ಮಾಡೋದು ತುಂಬಾನೇ ಸುಲಭ, ಕಡಿಮೆ ದುಡ್ಡಿನಲ್ಲೂ ಇದನ್ನ ಮಾಡಬಹುದು.

46
ಅದನ್ನು ಹೇಗೆ ಬಳಸುವುದು?

ಈಗ ನೀವು ಮಾಡಿದ ಅಡುಗೆ ಸೀದು ಹೋಗಿದ್ದರೆ ಕೂಡಲೇ ಗ್ಯಾಸ್ ಆಫ್ ಮಾಡಿ. ಸುಟ್ಟ ವಾಸನೆಯನ್ನು ದೂರ ಮಾಡಲು ವೀಳ್ಯದ ಎಲೆಯನ್ನು ಚೆನ್ನಾಗಿ ತೊಳೆದು, ಎಲೆಯನ್ನು ಮಧ್ಯದಲ್ಲಿ ಸ್ವಲ್ಪ ಹರಿದು ಅಥವಾ ಮಡಿಸಿ. ಸೀದು ಹೋಗಿರುವ ಅಡುಗೆಯ ಪಾತ್ರೆಯಲ್ಲಿ ಇರಿಸಿ. ಪಾತ್ರೆಯನ್ನು 5 ರಿಂದ 10 ನಿಮಿಷಗಳ ಕಾಲ ಮುಚ್ಚಿಡಿ. 10 ನಿಮಿಷಗಳ ನಂತರ, ವೀಳ್ಯದ ಎಲೆಯನ್ನು ತೆಗೆದುಹಾಕಿ. ವೀಳ್ಯದ ಎಲೆಯು ತರಕಾರಿಗಳ ಸುಟ್ಟ ವಾಸನೆಯನ್ನು ಹೀರಿಕೊಳ್ಳುತ್ತದೆ.

56
ವೀಳ್ಯದೆಲೆ ಹೇಗೆ ಕೆಲಸ ಮಾಡುತ್ತದೆ?

ಇದರೊಂದಿಗೆ ಅಡುಗೆಯ ರುಚಿ ಕೂಡ ಬಹುತೇಕ ಸಾಮಾನ್ಯವಾಗುತ್ತದೆ. ಯಾಕೆ ಹೀಗಾಗುತ್ತದೆ ಅಂದರೆ , ವೀಳ್ಯದೆಲೆಗಳು ನೈಸರ್ಗಿಕ ಸುವಾಸನೆ ಮತ್ತು ಕೆಟ್ಟ ವಾಸನೆಯನ್ನು ತ್ವರಿತವಾಗಿ ನಿವಾರಿಸುವ ಅಂಶಗಳನ್ನು ಒಳಗೊಂಡಿರುತ್ತವೆ, ಇದು ಸರಳ ಮತ್ತು ಸುರಕ್ಷಿತ ವಿಧಾನವಾಗಿದೆ. ಒಂದು ವೇಳೆ ಅಡುಗೆ ಹೆಚ್ಚು ಸೀದು ಹೋಗಿದ್ದರೆ, ಅಂತಹ ಸಂದರ್ಭದಲ್ಲಿ ನೀವು ಎರಡು ವೀಳ್ಯದೆಲೆ ಬಳಕೆ ಮಾಡಬಹುದು.

66
ಈ ವಿಷಯಗಳಿಗೆ ಗಮನ ಕೊಡಿ

ವೀಳ್ಯದ ಎಲೆಗಳನ್ನು ಸೇರಿಸಿದ ನಂತರ ಸ್ವಲ್ಪ ಉಪ್ಪು ಅಥವಾ ನಿಂಬೆ ಸೇರಿಸುವ ಮೂಲಕ ನೀವು ರುಚಿಯನ್ನು ಇನ್ನಷ್ಟು ಸುಧಾರಿಸಬಹುದು. ತರಕಾರಿ ಹೆಚ್ಚು ಸುಟ್ಟಿದ್ದರೆ ಮೇಲಿನ ಪದರವನ್ನು ತೆಗೆದುಹಾಕಿ ನಂತರ ವೀಳ್ಯದೆಲೆ ಬಳಸಿ. ದ್ವಿದಳ ಧಾನ್ಯಗಳು, ಬೆಂಡೆಕಾಯಿ, ಆಲೂಗಡ್ಡೆ, ಎಲೆಕೋಸು ಮುಂತಾದ ತರಕಾರಿಗಳಲ್ಲಿ ಈ ಟ್ರಿಕ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories