ಉತ್ತರ ಭಾರತದ ಉರಿ ಬಿಸಿಲಿನ ಮೈದಾನಗಳಲ್ಲಿ ಯೋಧರು ಮತ್ತು ಪ್ರಯಾಣಿಕರಿಗೆ ಹೊತ್ತೊಯ್ಯಲು ಹಗುರವಾಗಿದ್ದ, ದೀರ್ಘ ಕಾಲ ಶಕ್ತಿ ನೀಡುವ ಆಹಾರ ಬೇಕಾಗಿತ್ತು. ಆ ಸಮಯದಲ್ಲಿ ಸಟ್ಟು ಅತ್ಯುತ್ತಮ ಆಹಾರವಾಗಿತ್ತು. ಹುರಿದ ಕಡಲೆ ಹಿಟ್ಟಿನಿಂದ ತಯಾರಾಗುವ ಸಟ್ಟನ್ನು ನೀರು, ಉಪ್ಪು, ಬೆಲ್ಲ ಅಥವಾ ಮಸಾಲೆ ಸೇರಿಸಿ ತಕ್ಷಣ ಕುಡಿಯುವ ಪಾನೀಯವಾಗಿ ಮಾಡಿಕೊಳ್ಳಬಹುದು. ಇದು ಸರಳವಾಗಿದ್ದರೂ ದೇಹಕ್ಕೆ ತಕ್ಷಣ ಶಕ್ತಿಯನ್ನು ನೀಡುತ್ತಿತ್ತು.ಸಟ್ಟಿನ ದೊಡ್ಡ ಲಾಭ ಎಂದರೆ ತಯಾರಿಸೋದು ಸುಲಭ. ಪ್ರಯಾಣದಲ್ಲಿದ್ದಾಗಲೂ ಕೆಲವೇ ನಿಮಿಷಗಳಲ್ಲಿ ಪಾನೀಯ ಅಥವಾ ಮುದ್ದೆ ಮಾಡಿಕೊಂಡು ತಿನ್ನಬಹುದು. ಹುರಿದ ಕಡಲೆ ಪ್ರೋಟೀನ್, ಫೈಬರ್ ಹಾಗೂ ಐರನ್, ಮ್ಯಾಗ್ನೀಷಿಯಂ ಮೊದಲಾದ ಖನಿಜಗಳಿಂದ ಸಮೃದ್ಧವಾಗಿದೆ. ಇದರಿಂದ ದೇಹಕ್ಕೆ ನಿಧಾನವಾಗಿ ಶಕ್ತಿ ದೊರೆಯುತ್ತದೆ ಮತ್ತು ದಣಿವು ಕಡಿಮೆಯಾಗುತ್ತದೆ.