ಜಾನಕಿ ಹೆಸರನ್ನ ಅಜರಾಮರಗೊಳಿಸುವ ಭರವಸೆ
ಎಸ್. ಜಾನಕಿ ಅವರ ನಿಧನದ ಬಳಿಕ ಕರ್ನಾಟಕ ಸರ್ಕಾರವೂ ಗೌರವ ಸೂಚಿಸಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, "ಭಾರತದ ಅಪ್ರತಿಮ ಗಾಯಕಿ ಎಸ್. ಜಾನಕಿ ಅವರ ಹೆಸರನ್ನ ಅಜರಾಮರಗೊಳಿಸುವ ಕುರಿತು ಚಿತ್ರರಂಗದ ಪ್ರಮುಖರೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು," ಎಂದು ತಿಳಿಸಿದ್ದಾರೆ.
ಅಭಿಮಾನ ಎಂದರೆ ಇದು... ಸೋಷಿಯಲ್ ಮೀಡಿಯಾದಲ್ಲಿ ಮವೀನ್ ಬಗ್ಗೆ ಈ ಟಾಕ್!
ಇಂದಿನ ಕಾಲದಲ್ಲಿ ಅಭಿಮಾನವು ಹೆಚ್ಚಾಗಿ ಸಾಮಾಜಿಕ ಜಾಲತಾಣಗಳಿಗಷ್ಟೇ ಸೀಮಿತವಾಗಿರುವಾಗ, ಒಬ್ಬ 13 ವರ್ಷದ ಬಾಲಕ ತನ್ನ ಕನಸನ್ನ ನನಸಾಗಿಸಿಕೊಳ್ಳಲು ಬೇರೆ ರಾಜ್ಯಕ್ಕೇ ಹೋದ ಸಾಹಸ, ಆ ನಂತರ ಅವರಿಬ್ಬರಲ್ಲಿ ಮೂಡಿದ ತಾಯಿ-ಮಗನ ಬಾಂಧವ್ಯ ಮತ್ತು ಕೊನೆಯವರೆಗೂ ತೋರಿದ ಸೇವಾಭಾವ, ನಿಜವಾದ ಅಭಿಮಾನ ಹೇಗಿರಬೇಕು ಎಂಬುದಕ್ಕೆ ಅಪರೂಪದ ಉದಾಹರಣೆ ಎನ್ನಬಹುದು. ಎಸ್. ಜಾನಕಿ ಅವರ ಗಾಯನ ಅವರ ಹಾಡುಗಳ ಮೂಲಕ ಶಾಶ್ವತವಾಗಿ ಭಾರತೀಯ ಸಂಗೀತ ಲೋಕದಲ್ಲಿ ಮೊಳಗುತ್ತಲೇ ಇರುತ್ತದೆ. ಹಾಗೇ, ಅಭಿಮಾನದಿಂದ ಆರಂಭವಾಗಿ ಅಮ್ಮ-ಮಗನ ಬಾಂಧವ್ಯದ ಬಂಧವಾಗಿ ಬೆಳೆದ ಜಾನಕಮ್ಮ–ನವೀನ್ ಕಥೆಯೂ ಕನ್ನಡಿಗರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯಲಿದೆ.