ಭೂಮಿಕಾ ಜೊತೆ ಮಲ್ಲಿ! ಅಪ್ಪ-ಮಗನ ಸಮ್ಮಿಲನ: ಒಂದೇ ಸಲಕ್ಕೆ ಅಬ್ಬಬ್ಬಾ Amruthadhaare ಎಷ್ಟೊಂದು ಟ್ವಿಸ್ಟ್​?

Published : Sep 12, 2025, 01:25 PM IST

ಶಕುಂತಲಾ ಮಾಡಿರುವ ಮೋಸ ತಿಳಿದು ಗೌತಮ್​ ಮನೆ ಬಿಟ್ಟು ಹೋಗಿದ್ದಾನೆ. ಭೂಮಿಕಾ ಕೊಡಗಿನಲ್ಲಿ ಟೀಚರ್​ ಆಗಿ ಕೆಲಸ ಮಾಡುತ್ತಿದ್ದಾಳೆ. ಆದರೆ ಭೂಮಿಕಾ ಮನೆಯಲ್ಲಿ ಮಲ್ಲಿ ಇರುವುದು ಕುತೂಹಲ ಮೂಡಿಸಿದೆ. ಅಪ್ಪ-ಮಗನ ಮಿಲನವೂ ಆಗಿದೆ. 

PREV
17
ಊಹಿಸಲಾಗದ ತಿರುವು

ಸಾಮಾನ್ಯವಾಗಿ ಸೀರಿಯಲ್​ ಎಂದರೆ ಹೀಗೆಯೇ ಆಗುತ್ತದೆ ಎಂದು ಊಹಿಸಿಕೊಂಡು ಬಿಡಬಹುದು. ಒಂದಿಷ್ಟು ಎಪಿಸೋಡ್​ ಆಗುತ್ತಿದ್ದಂತೆಯೇ ಮುಂದೆ ಹೀಗೆಯೇ ಆಗುತ್ತದೆ ಎಂದು ವೀಕ್ಷಕರು ಅಂದುಕೊಳ್ಳುತ್ತಾರೆ. 80% ಅದು ಹಾಗೆಯೇ ಆಗಿರುತ್ತದೆ. ವಿಲನ್​ ಬಂಡವಾಳ ಗೊತ್ತಾಗುತ್ತಿದ್ದಂತೆಯೇ ಅಲ್ಲಿ ಸೀರಿಯಲ್​ ದಿ ಎಂಡ್​! ಆದರೆ ಅಮೃತಧಾರೆ (Amruthadhaare) ಮಾತ್ರ ಯಾವ ವೀಕ್ಷಕರು ಅಂದುಕೊಳ್ಳದ ರೀತಿಯಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್​ ಪಡೆದುಕೊಳ್ಳುತ್ತಿದೆ.

27
ಮನೆ ಬಿಟ್ಟು ಹೋದ ಭೂಮಿಕಾ

ಶಕುಂತಲಾ ಮಾಡಿರುವ ಮೋಸ ತಿಳಿದು ಗೌತಮ್​ ಪತ್ನಿಯನ್ನು ಅರಸಿ ಮನೆ ಬಿಟ್ಟು ಹೋಗಿದ್ದಾಳೆ. ಅತ್ತ ಮಗುವಿನ ಬಗ್ಗೆ ಸುಳ್ಳು ಹೇಳಿದ ಕಾರಣ ಮನನೊಂದ ಭೂಮಿಕಾ ಕೊಡಗಿನಲ್ಲಿ ಟೀಚರ್​ ಆಗಿ ಕೆಲಸಕ್ಕೆ ಸೇರಿದ್ದಾಳೆ. ಆದರೆ ಇನ್ನೊಂದು ಕುತೂಹಲ ಎಂದರೆ ಇದೀಗ ಬಿಡುಗಡೆಯಾಗಿರುವ ಪ್ರೊಮೋದಲ್ಲಿ ಭೂಮಿಕಾ ಮನೆಯಲ್ಲಿಯೇ ಮಲ್ಲಿ ಇರುವುದನ್ನು ನೋಡಬಹುದು. ಅಲ್ಲಿಗೆ ಮಲ್ಲಿ ಕೂಡ ಭೂಮಿಕಾಳನ್ನು ಹುಡುಕಿ ಅವರ ಮನೆಯಲ್ಲಿ ಇರುವುದು ತಿಳಿದಿದೆ. ಇದನ್ನು ನೋಡಿ ಸೋಷಿಯಲ್​ ಮೀಡಿಯಾದಲ್ಲಿ ಖುಷಿಯ ಸುರಿಮಳೆಯೇ ಆಗುತ್ತಿದೆ.

37
ಆಕಾಶ್​ ನೋಡಿಕೊಳ್ತಿರೋ ಮಲ್ಲಿ

ಅದೇ ಇನ್ನೊಂದೆಡೆ ಮಲ್ಲಿ ಭೂಮಿಕಾ ಮತ್ತು ಗೌತಮ್​ ಪುತ್ರ ಆಕಾಶ್​ನನ್ನು ನೋಡಿಕೊಳ್ಳುತ್ತಿರುವುದು ತಿಳಿಯುತ್ತದೆ. ಆಕಾಶ್​ ಈಗ ಐದು ವರ್ಷದ ಬಾಲಕನಾಗಿದ್ದಾನೆ. (ಈ ಬಾಲಕನ ಪಾತ್ರ ಮಾಡ್ತಿರೋದು ಅಮೃತಧಾರೆ ಆನಂದ್​ ರಿಯಲ್​ ಪುತ್ರ). ಮಲ್ಲಿ ಮತ್ತು ಆಕಾಶ್​ ಸೇರಿ ಭೂಮಿಕಾಳನ್ನು ಫೂಲ್​ ಮಾಡುವ ತಮಾಷೆಯನ್ನೂ ಈ ಪ್ರೊಮೋದಲ್ಲಿ ನೋಡಬಹುದಾಗಿದೆ.

47
ಚಾಲಕನಾದ ಗೌತಮ್​

ಅದೇ ಇನ್ನೊಂದೆಡೆ, ಎಲ್ಲಾ ಆಸ್ತಿಯನ್ನೂ ಶಕುಂತಲಾ, ಜೈದೇವ್​ಗೆ ಬಿಟ್ಟುಕೊಟ್ಟ ಗೌತಮ್​ ಚಾಲಕನಾಗಿ ಕೆಲಸಕ್ಕೆ ಸೇರಿದ್ದಾನೆ. ಅವನ ಕಾರಿಗೆ ಆಕಾಶ್​ ಅಡ್ಡ ಬಂದಿದ್ದಾನೆ. ಗೌತಮ್​ ಅವನನ್ನು ಗದರಿದಾಗ, ಆಕಾಶ್​ ನಾನೇನೋ ಚಿಕ್ಕ ಬಾಲಕ, ನೀವು ನೋಡಿ ಗಾಡಿ ಓಡಿಸಬಾರದೆ ಎಂದು ಪ್ರಶ್ನಿಸಿದ್ದಾನೆ.

57
ಅಪ್ಪ-ಮಗ ಮೀಟ್​

ಹೀಗೆ ಅಪ್ಪ-ಮಗನ ಮಿಲನ ಆಗಿದೆ. ಗೌತಮ್​ ತನ್ನ ಮಗ ಎನ್ನುವುದನ್ನು ಅರಿಯದೇ ಆತನನ್ನು ಕಾರಿನಲ್ಲಿ ಕುಳ್ಳರಿಸಿಕೊಂಡು ಹೋಗುವಾಗ ಹೆಸರು ಕೇಳಿದ್ದಾನೆ. ಆಗ ಆಕಾಶ್​, ತನ್ನ ಹೆಸರನ್ನು ಹೇಳದೇ ಮನೆಯಲ್ಲಿ ನನ್ನನ್ನು ಅಪ್ಪು ಎಂದು ಕರೆಯುತ್ತಾರೆ ಎಂದಿದ್ದಾನೆ. ಅಸಲಿ ಹೆಸರನ್ನೂ ಗೌತಮ್​ ಕೇಳಲ್ಲ. ಏಕೆಂದ್ರೆ ಸೀರಿಯಲ್​ ಮುಂದೆ ಹೋಗಬೇಕಲ್ಲ!

67
ವೀಕ್ಷಕರ ಆಸೆ

ಅಲ್ಲಿಗೆ ಅಪ್ಪ-ಮಗನ ಮಿಲನ ಆಗಿದೆ. ಆದರೆ ಇವರಿಬ್ಬರೂ ಯಾರು ಎನ್ನುವುದು ಬೇಗ ಗೊತ್ತಾಗಲಿ ಎನ್ನುವ ಆಸೆ ವೀಕ್ಷಕರದ್ದು.

77
ಮುಂದೇನಾಗುತ್ತೆ?

ಅದೇ ವೇಳೆ ಎಲ್ಲಾ ಆಸ್ತಿಯನ್ನು ಶಕುಂತಲಾ ಮತ್ತು ಜೈದೇವ್​ಗೆ ಬರೆದುಕೊಟ್ಟು ಬಂದಿರೋದಕ್ಕೂ ನೆಟ್ಟಿಗರು ಗೌತಮ್​ನನ್ನು ಬೈಯುತ್ತಿದ್ದಾರೆ. ಅವರನ್ನು ಬೀದಿಗೆ ಅಟ್ಟಬೇಕಿತ್ತು ಎನ್ನುತ್ತಿದ್ದಾರೆ. ಅದೇ ಇನ್ನೊಂದೆಡೆ, ಹೆತ್ತ ಅಮ್ಮ, ತಂಗಿಯನ್ನು ಬಿಟ್ಟುಬಂದಿರುವ ಬಗ್ಗೆಯೂ ಬೇಸರವಿದೆ. ಮುಂದೇನಾಗುತ್ತೋ ನೋಡಬೇಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories