ಭಾರತದ ರಸಂಗೆ ಅಮೆರಿಕನ್ನರು ಫಿದಾ..! ವೈರಲ್ ಆಯ್ತು ಸಿಂಪಲ್ ಅಡುಗೆ

Suvarna News   | Asianet News
Published : Dec 04, 2020, 04:23 PM ISTUpdated : Dec 04, 2020, 06:07 PM IST
ಭಾರತದ ರಸಂಗೆ ಅಮೆರಿಕನ್ನರು ಫಿದಾ..! ವೈರಲ್ ಆಯ್ತು ಸಿಂಪಲ್ ಅಡುಗೆ

ಸಾರಾಂಶ

ರಸಂ ಅಂದ್ರೆ ಯಾರಿಗಿಷ್ಟ ಇಲ್ಲ ಹೇಳಿ..? ಭಾರತದ ಈ ಸಿಂಪಲ್ ಅಡುಗೆ ಎಲ್ಲರ ಮನೆಯಲ್ಲೂ ಸಾಮಾನ್ಯ. ಕೇರಳದಲ್ಲಿ ಲೋಟದಲ್ಲಿ ರಸಂ ಕುಡಿದರೆ, ಇನ್ನೂ ಕೆಲವು ಕಡೆ ಅನ್ನದ ಜೊತೆ ಸವಿಯುತ್ತಾರೆ. ಈ ರಸಂ ಈಗ ಅಮೆರಿದಲ್ಲೂ ಫೇಮಸ್ ಆಗಿದೆ

ಜಗತ್ತೇ ಅಮೆರಿಕ ಕೊರೋನಾ ಔಷಧರಿ ತಯಾರಿಸುತ್ತೆ ಎಂದು ಎದುರು ನೋಡುತ್ತಿರುವಾಗ ಅಮೆರಿಕದ ಜನ ಭಾರತದ ಸೌತ್ ಇಂಡಿಯನ್ ಅಡುಗೆ ಬಗ್ಗೆ ಯೋಚಿಸ್ತಿದ್ದಾರೆ, ಅದನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಅಂತೂ ಇಂತೂ ಭಾರತದ ರಸಂ ಅಮೆರಿಕದಲ್ಲಿ ಸುದ್ದಿ ಮಾಡಿದೆ. ಈ ವೈರಲ್ ಟ್ರೆಂಡ್ ಹಿಂದೆ ಇರೋರು ತಮಿಳುನಾಡಿನ ಶೆಫ್.

ಅಮೆರಿಕದಲ್ಲಿ ಲಾಕ್‌ಡೌನ್ ಸಂದರ್ಭ ಹೀಗೆ ಕುಳಿತಿದ್ದಾಗ ಶೆಫ್ ಅರುಣ್ ರಾಜದುರೈ ಅವರಿಗೆ ಈ ಐಡಿಯಾ ಬಂತು. ರಸಂ ಮಾಡೋಕೆ ಬಳಸೋ ಅರಶಿನ, ಬೆಳ್ಳುಳ್ಳಿ, ಶುಂಠಿ ಎಲ್ಲವೂ ಇಮ್ಯುನಿಟಿ ಹೆಚ್ಚಿಸುವ ಅಂಶಗಳು. ಇದು ಕೊರೋನಾ ರೋಗಿಗಳಿಗೆ ನೆರವಾಗಬಹುದು ಎಂದು ಅವರಿಗನಿಸಿತು.

ಚುಮುಚುಮು ಚಳಿಗಾಲಕ್ಕೆ 5 ಬಿಸಿಬಿಸಿ, ಖಾರಖಾರ ರಸಂ ಹಾಗೂ ತಿಳಿಸಾರು ರೆಸಿಪಿಗಳು!

ಅರುಣ್ ಮೂರು ಆಸ್ಪತ್ರೆಗಳಲ್ಲಿ ಕೊರೋನಾ ರೋಗಿಗಳಿಗೆ ಆಹಾರವನ್ನು ಒದಗಿಸುತ್ತಿದ್ದರು. ಹಾಗಾಗಿ ರಸಂ ಅನ್ನು ಕಾಂಪ್ಲಿಮೆಂಟರಿ ಡಿಶ್ ಆಗಿ ಸೇರಿಸಿಕೊಳ್ಳಲು ನಿರ್ಧರಿಸಿದ್ರು. ಇದಕ್ಕೆ ಅದ್ಭುತ ಪ್ರತಿಕ್ರೊಯೆ ಸಿಕ್ಕಿದ್ದಲ್ಲದೆ, ಬೇಡಿಕೆ ಹೆಚ್ಚಾಯ್ತು.

ಈ ಇಮ್ಯುನಿಟಿ ಬೂಸ್ಟರ್ ಸೂಪ್ ಅರುಣ್ ಕೆಲಸ ಮಾಡುತ್ತಿದ್ದ ಹೋಟೆಲ್‌ನಲ್ಲಿಯೂ ಪ್ರಮುಖ ಮೆನುಗಳಲ್ಲಿ ಸೇರಿಕೊಂಡಿತು. ನಂತರ ಇದುವೇ ಬೆಸ್ಟ್ ಸೆಲ್ಲರ್ ಆಗಿಯೂ ಮೂಡಿ ಬಂತು. ಈ ಮೂಲಕ ನ್ಯೂಯಾರ್ಕ್, ನ್ಯೂಜೆರ್ಸಿ, ಕೆನಡಾ ಬ್ರಾಂಚ್‌ಗಳಲ್ಲಿಯೂ ರಸಂ ಸಿಕ್ಕಾಪಟ್ಟೆ ಫೇಮಸ್ ಆಯ್ತು. ಇದೀಗ ಪ್ರತಿದಿನ 500-600 ಕಪ್ ರಸಂ ಮಾರಾಟವಾಗುತ್ತಿದೆ.

ದಿನಾ ಒಂದ್ ಲೋಟ ರಸಂ ಕುಡೀರಿ, ರೋಗಕ್ಕೆ ಗುಡ್ ಬೈ ಹೇಳಿ...

ನಾನಿದನ್ನು ಸುಮ್ಮನೆ ಮನೆಯಲ್ಲಿದ್ದಾಗ ಪ್ರಯೋಗ ಮಾಡಿದೆ ಅಷ್ಟೇ. ಆದದರೆ ಈ ರೀತಿ ಸ್ಪಂದನೆ ಸಿಗುತ್ತೆ ಎಂದುಕೊಂಡಿರಲಿಲ್ಲ ಎನ್ನುತ್ತಾರೆ ಅರುಣ್. ಅರಿಯಾಲೂರಿನ ಜಯನ್‌ಕೊಂಡಂನ ಮೀನ್‌ಸುರುಟ್ಟಿ ಮೂಲದವರು ಅರುಣ್. 5 ವರ್ಷದ ಹಿಂದೆ ಅವರು ನ್ಯೂಜೆರ್ಸಿಗೆ ಶಿಫ್ಟ್ ಆಗಿದ್ದರು. 2018ರ ಬೆಸ್ಟ್ ಸೌತ್ ಈಸ್ಟ್ ಏಷ್ನ್ ಶೆಫ್ ಅವಾರ್ಡ್ ಕೂಡಾ ಪಡೆದಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Heart Problemಗೆ ಎಲ್ಲರೂ ಹೇಳೋ ಕಾರಣವಲ್ಲವೇ ಅಲ್ಲ, ಪೌಷ್ಟಿಕ ತಜ್ಞರ ಮಹಾವಂಚನೆ ಬಯಲಿಗೆ
ಆಲೂಗಡ್ಡೆಗೆ ಮೊಳಕೆ ಬಂದರೆ ತಿನ್ನಬಹುದಾ? ತಜ್ಞರ ಎಚ್ಚರಿಕೆ ಏನು, ಯಾವುದು- ಯಾರಿಗೆ ಅಪಾಯ?