ಪೆದ್ದಿ ಸೆಟ್​ನಲ್ಲಿ ಕಣ್ಣೀರಿಟ್ಟಿದ್ರಾ ಜಾನ್ವಿ ಕಪೂರ್? ಚಾಟ್ಸ್ ವಿವರ ವೈರಲ್, ಏನಿದು ಜಾನು ಚಾಟ್ ಸೀಕ್ರೆಟ್!

ಪೆದ್ದಿ ಸೆಟ್​ನಲ್ಲಿ ಕಣ್ಣೀರಿಟ್ಟಿದ್ರಾ ಜಾನ್ವಿ ಕಪೂರ್? ಚಾಟ್ಸ್ ವಿವರ ವೈರಲ್, ಏನಿದು ಜಾನು ಚಾಟ್ ಸೀಕ್ರೆಟ್!

Published : Jun 09, 2026, 05:19 PM IST

ಪೆದ್ದಿ ಸಿನಿಮಾದಲ್ಲಿ ಜಾನ್ವಿ ಕಪೂರ್​ನ ಅಶ್ಲೀಲವಾಗಿ ಚಿತ್ರಿಸಿದ ರೀತಿಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದ್ದು. ನಿರ್ದೇಶಕ ಕ್ಷಮೆ ಕೇಳಿದ್ದು ಗೊತ್ತೇ ಇದೆ. ಆದ್ರೆ ಖುದ್ದು ಜಾನ್ವಿಗೆ ಸಿನಿಮಾ ಸೆಟ್​​ನಲ್ಲೇ ಇದರ ಸೂಚನೆ ಸಿಕ್ಕಿತ್ತಾ..?

ಪೆದ್ದಿ ಸಿನಿಮಾದಲ್ಲಿ ಜಾನ್ವಿ ಕಪೂರ್​ನ ಅಶ್ಲೀಲವಾಗಿ ಚಿತ್ರಿಸಿದ ರೀತಿಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದ್ದು. ನಿರ್ದೇಶಕ ಕ್ಷಮೆ ಕೇಳಿದ್ದು ಗೊತ್ತೇ ಇದೆ. ಆದ್ರೆ ಖುದ್ದು ಜಾನ್ವಿಗೆ ಸಿನಿಮಾ ಸೆಟ್​​ನಲ್ಲೇ ಇದರ ಸೂಚನೆ ಸಿಕ್ಕಿತ್ತಾ..? ನಿರ್ದೇಶಕನ ವರ್ತನೆಯಿಂದ ಜಾನ್ವಿ ಬೇಸರಗೊಂಡಿದ್ರಾ..? ಹೌದು ಅಂತಿವೆ ಜಾನ್ವಿ ಚಾಟಿಂಗ್ ಸ್ಕ್ರೀನ್ ಶಾಟ್ಸ್. ಇತ್ತೀಚಿಗೆ ರಿಲೀಸ್ ಆಗಿರೋ ಪೆದ್ದಿ ಸಿನಿಮಾದಲ್ಲಿ ನಾಯಕಿಯನ್ನ ಅಶ್ಲೀಲವಾಗಿ ತೋರಿಸಿರೋ ವಿಚಾರ ಎಲ್ಲೆಡೆ ಸದ್ದು ಮಾಡ್ತಾ ಇದೆ.

ಜಾನ್ವಿಯನ್ನ ನಿರ್ದೇಶಕ ಬುಚ್ಚಿಬಾಬು ಹೈಪರ್-ಸೆಕ್ಯುವಲೈಸ್  ಆಗಿ ತೋರಿಸಿದ್ದಾರೆ. ಕಾಮದ ಗೊಂಬೆಯಂತೆ ಚಿತ್ರಿಸಿದ್ದಾರೆ ಅಂತ ಟೀಕೆ ವ್ಯಕ್ತವಾಗಿತ್ತು. ಒಂದು ಹಂತದಲ್ಲಿ ಈ ಬಗ್ಗೆ ಹೆಚ್ಚಿದ ಆಕ್ರೋಶ ನೋಡಿ, ನಿರ್ದೇಶಕ ಬುಚ್ಚಿಬಾಬು ಸೋಷಿಯಲ್ ಮಿಡಿಯಾದಲ್ಲಿ ಕ್ಷಮೆ ಕೂಡ ಯಾಚಿಸಿದ್ರು. ಆದರೆ ಈ ರೀತಿ ಚಿತ್ರಿಸುವಾಗ ಜಾನ್ವಿ ಏನ್ ಮಾಡ್ತಾ ಇದ್ರು ಅಂತ ಕೂಡ ಕೆಲವರು ಪ್ರಶ್ನೆ ಮಾಡ್ತಾ ಇದ್ರು. ಅದಕ್ಕೆ ಉತ್ತರವಾಗಿ ಕೆಲ ಜಾನ್ವಿ ಆಪ್ತರು ಜಾನು ಚಾಟಿಂಗ್ ವಿವರಗಳನ್ನ ಶೇರ್ ಮಾಡಿದ್ದಾರೆ. ಅಸಲಿಗೆ ಶೂಟಿಂಗ್ ಟೈಂನಲ್ಲೇ ಬುಚ್ಚಿಬಾಬು ಇಡುವ ಕ್ಯಾಮೆರಾ ಅಂಗಲ್ಸ್ ನೋಡಿ ಜಾನು ಮುಜುಗರ ಪಟ್ಟಿದ್ರಂತೆ.

ತನ್ನ ಎದೆ, ಸೊಂಟದ ಸುತ್ತಲೇ ಅವರ ಕ್ಯಾಮೆರಾ ಕೋನ ಇರ್ತಾ ಇತ್ತು. ಒಂದು ಹಂತದಲ್ಲಿ ನಾನು ಇದನ್ನ ವಿರೋಧಿಸಿದ್ದೆ ಅಂತ ಜಾನ್ವಿ ಆಪ್ತರ ಬಳಿ ಹೇಳಿಕೊಂಡಿದ್ದಾರೆ. ಇದೇ ವಿಚಾರವಾಗಿ ಜಾನ್ವಿ ಸೆಟ್​ನಲ್ಲಿ ಕಣ್ಣೀರು ಕೂಡ ಹಾಕಿದ್ರಂತೆ. ಆಗ ಖುದ್ದು ರಾಮ್​ಚರಣ್ ಜಾನು ಬೆಂಬಲಕ್ಕೆ ನಿಂತಿದ್ರಂತೆ. ಒಟ್ನಲ್ಲಿ ಚಿತ್ರರಂಗದಲ್ಲಿ ಎಷ್ಟೇ ದೊಡ್ಡ ನಟಿಯರಾದ್ರೂ , ಅವರು ಶೋಷಣೆಗೆ ಒಳಗಾಗ್ತಾರೆ. ಕಮರ್ಷಿಯಲ್ ಸಿನಿಮಾಗಳಲ್ಲಿ ಹೆಣ್ಣನ್ನ ಚಿತ್ರಿಸುವ, ನಡೆಸಿಕೊಳ್ಳುವ ರೀತಿ ಎಷ್ಟು ಕೀಳಾಗಿರುತ್ತೆ ಅನ್ನೋದು ಈ ಜಾನ್ವಿಯ ಈ  ಮೆಸೇಜ್​ಗಳ ಮೂಲಕ ಜಗಜ್ಜಾಹೀರಾಗಿದೆ.

22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
05:4622 ವರ್ಷಗಳ ಬಳಿಕ ಮತ್ತೆ ಬಂತು ಕಲಾಸಿಪಾಳ್ಯ; ಸಿನಿಮಾ ಮೂಲಕ ಫ್ಯಾನ್ಸ್‌ಗೆ 'ಕೆಂಚ'ನ 'ದರ್ಶನ'
13:34Darshan-Boss: ದರ್ಶನ್‌ಗೆ ಯಾಕೆ ಇಷ್ಟೊಂದು ಟೆನ್ಷನ್? 'ಬಾಸ್' ಸಿನಿಮಾದಲ್ಲಿ ಅಂಥದ್ದೇನಿದೆ?
04:23Cine Express: ಸಿನಿ ಪ್ರೇಮಿಗಳಿಗೆ ಗುಡ್ ನ್ಯೂಸ್: ಟೀಸರ್, ಹಾಡು, ಸಿನಿಮಾ ರಿಲೀಸ್ ಮತ್ತು ಮದುವೆ ಸುದ್ದಿ!
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
04:28ಚಿನ್ನೇಗೌಡರ ಪತ್ನಿ ಜಯಮ್ಮ ವಿಧಿವಶ; ವಿಜಯ್ ರಾಘವೇಂದ್ರ, ಶ್ರೀಮುರುಳಿಗೆ ಮಾತೃವಿಯೋಗ
Read more