ಪೆದ್ದಿ ಸೆಟ್​ನಲ್ಲಿ ಕಣ್ಣೀರಿಟ್ಟಿದ್ರಾ ಜಾನ್ವಿ ಕಪೂರ್? ಚಾಟ್ಸ್ ವಿವರ ವೈರಲ್, ಏನಿದು ಜಾನು ಚಾಟ್ ಸೀಕ್ರೆಟ್!

ಪೆದ್ದಿ ಸೆಟ್​ನಲ್ಲಿ ಕಣ್ಣೀರಿಟ್ಟಿದ್ರಾ ಜಾನ್ವಿ ಕಪೂರ್? ಚಾಟ್ಸ್ ವಿವರ ವೈರಲ್, ಏನಿದು ಜಾನು ಚಾಟ್ ಸೀಕ್ರೆಟ್!

Published : Jun 09, 2026, 05:19 PM IST

ಪೆದ್ದಿ ಸಿನಿಮಾದಲ್ಲಿ ಜಾನ್ವಿ ಕಪೂರ್​ನ ಅಶ್ಲೀಲವಾಗಿ ಚಿತ್ರಿಸಿದ ರೀತಿಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದ್ದು. ನಿರ್ದೇಶಕ ಕ್ಷಮೆ ಕೇಳಿದ್ದು ಗೊತ್ತೇ ಇದೆ. ಆದ್ರೆ ಖುದ್ದು ಜಾನ್ವಿಗೆ ಸಿನಿಮಾ ಸೆಟ್​​ನಲ್ಲೇ ಇದರ ಸೂಚನೆ ಸಿಕ್ಕಿತ್ತಾ..?

ಪೆದ್ದಿ ಸಿನಿಮಾದಲ್ಲಿ ಜಾನ್ವಿ ಕಪೂರ್​ನ ಅಶ್ಲೀಲವಾಗಿ ಚಿತ್ರಿಸಿದ ರೀತಿಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದ್ದು. ನಿರ್ದೇಶಕ ಕ್ಷಮೆ ಕೇಳಿದ್ದು ಗೊತ್ತೇ ಇದೆ. ಆದ್ರೆ ಖುದ್ದು ಜಾನ್ವಿಗೆ ಸಿನಿಮಾ ಸೆಟ್​​ನಲ್ಲೇ ಇದರ ಸೂಚನೆ ಸಿಕ್ಕಿತ್ತಾ..? ನಿರ್ದೇಶಕನ ವರ್ತನೆಯಿಂದ ಜಾನ್ವಿ ಬೇಸರಗೊಂಡಿದ್ರಾ..? ಹೌದು ಅಂತಿವೆ ಜಾನ್ವಿ ಚಾಟಿಂಗ್ ಸ್ಕ್ರೀನ್ ಶಾಟ್ಸ್. ಇತ್ತೀಚಿಗೆ ರಿಲೀಸ್ ಆಗಿರೋ ಪೆದ್ದಿ ಸಿನಿಮಾದಲ್ಲಿ ನಾಯಕಿಯನ್ನ ಅಶ್ಲೀಲವಾಗಿ ತೋರಿಸಿರೋ ವಿಚಾರ ಎಲ್ಲೆಡೆ ಸದ್ದು ಮಾಡ್ತಾ ಇದೆ.

ಜಾನ್ವಿಯನ್ನ ನಿರ್ದೇಶಕ ಬುಚ್ಚಿಬಾಬು ಹೈಪರ್-ಸೆಕ್ಯುವಲೈಸ್  ಆಗಿ ತೋರಿಸಿದ್ದಾರೆ. ಕಾಮದ ಗೊಂಬೆಯಂತೆ ಚಿತ್ರಿಸಿದ್ದಾರೆ ಅಂತ ಟೀಕೆ ವ್ಯಕ್ತವಾಗಿತ್ತು. ಒಂದು ಹಂತದಲ್ಲಿ ಈ ಬಗ್ಗೆ ಹೆಚ್ಚಿದ ಆಕ್ರೋಶ ನೋಡಿ, ನಿರ್ದೇಶಕ ಬುಚ್ಚಿಬಾಬು ಸೋಷಿಯಲ್ ಮಿಡಿಯಾದಲ್ಲಿ ಕ್ಷಮೆ ಕೂಡ ಯಾಚಿಸಿದ್ರು. ಆದರೆ ಈ ರೀತಿ ಚಿತ್ರಿಸುವಾಗ ಜಾನ್ವಿ ಏನ್ ಮಾಡ್ತಾ ಇದ್ರು ಅಂತ ಕೂಡ ಕೆಲವರು ಪ್ರಶ್ನೆ ಮಾಡ್ತಾ ಇದ್ರು. ಅದಕ್ಕೆ ಉತ್ತರವಾಗಿ ಕೆಲ ಜಾನ್ವಿ ಆಪ್ತರು ಜಾನು ಚಾಟಿಂಗ್ ವಿವರಗಳನ್ನ ಶೇರ್ ಮಾಡಿದ್ದಾರೆ. ಅಸಲಿಗೆ ಶೂಟಿಂಗ್ ಟೈಂನಲ್ಲೇ ಬುಚ್ಚಿಬಾಬು ಇಡುವ ಕ್ಯಾಮೆರಾ ಅಂಗಲ್ಸ್ ನೋಡಿ ಜಾನು ಮುಜುಗರ ಪಟ್ಟಿದ್ರಂತೆ.

ತನ್ನ ಎದೆ, ಸೊಂಟದ ಸುತ್ತಲೇ ಅವರ ಕ್ಯಾಮೆರಾ ಕೋನ ಇರ್ತಾ ಇತ್ತು. ಒಂದು ಹಂತದಲ್ಲಿ ನಾನು ಇದನ್ನ ವಿರೋಧಿಸಿದ್ದೆ ಅಂತ ಜಾನ್ವಿ ಆಪ್ತರ ಬಳಿ ಹೇಳಿಕೊಂಡಿದ್ದಾರೆ. ಇದೇ ವಿಚಾರವಾಗಿ ಜಾನ್ವಿ ಸೆಟ್​ನಲ್ಲಿ ಕಣ್ಣೀರು ಕೂಡ ಹಾಕಿದ್ರಂತೆ. ಆಗ ಖುದ್ದು ರಾಮ್​ಚರಣ್ ಜಾನು ಬೆಂಬಲಕ್ಕೆ ನಿಂತಿದ್ರಂತೆ. ಒಟ್ನಲ್ಲಿ ಚಿತ್ರರಂಗದಲ್ಲಿ ಎಷ್ಟೇ ದೊಡ್ಡ ನಟಿಯರಾದ್ರೂ , ಅವರು ಶೋಷಣೆಗೆ ಒಳಗಾಗ್ತಾರೆ. ಕಮರ್ಷಿಯಲ್ ಸಿನಿಮಾಗಳಲ್ಲಿ ಹೆಣ್ಣನ್ನ ಚಿತ್ರಿಸುವ, ನಡೆಸಿಕೊಳ್ಳುವ ರೀತಿ ಎಷ್ಟು ಕೀಳಾಗಿರುತ್ತೆ ಅನ್ನೋದು ಈ ಜಾನ್ವಿಯ ಈ  ಮೆಸೇಜ್​ಗಳ ಮೂಲಕ ಜಗಜ್ಜಾಹೀರಾಗಿದೆ.

04:41ಸಾಯಿ ಪಲ್ಲವಿ, ರುಕ್ಮಿಣಿ ವಸಂತ್ ಕೂಡ ಅಲ್ಲ: ಸುಬ್ಬುಲಕ್ಷ್ಮಿ ಬಯೋಪಿಕ್​ಗೆ ರಶ್ಮಿಕಾ ಎಂಟ್ರಿ?
04:18ಸ್ಯಾಂಡಲ್​ವುಡ್​ನಲ್ಲಿ ಮತ್ತೆ ನೆಪೋಟಿಸಂ ಕಿಚ್ಚು: ವಿವಾದಕ್ಕೆ ಅಂತ್ಯ ಹಾಡಿದ ಶಿವಣ್ಣ
03:08Rashmika-Vijay: ವಿಜಯ್ ಕಟ್ಟಿರೋ ತಾಳಿಯಲ್ಲೂ ರಶ್ಮಿಕಾ ಕೈಚಳಕ.. ನ್ಯಾಷನಲ್ ಕ್ರಶ್ ಟ್ಯಾಲೆಂಟ್ ಒಂದೆರಡಲ್ಲ!
02:45ನಟ ದರ್ಶನ್ ಬೇಲ್‌ಗೆ ಮತ್ತೆ ಹಿನ್ನಡೆ: ಪತಿಯ ಬಿಡುಗಡೆಗಾಗಿ ವಿಜಯಲಕ್ಷ್ಮೀ ಪ್ರಯತ್ನ ಫಲ ಕೊಡುತ್ತಾ?
24:34ಸ್ಯಾಂಡಲ್​​ವುಡ್​​ನಲ್ಲಿ ಸಾಲು ಸಾಲು ಅಕಾಲಿಕ ಮರಣ..! ಮೃತ್ಯುಂಜಯ ಹೋಮ ಫಲಿಸಲಿಲ್ವಾ..?
03:06'ಸೆಪ್ಟೆಂಬರ್ 21' ಚಿತ್ರದ ಟ್ರೇಲರ್ ಬಿಡುಗಡೆ: ಪತ್ನಿ ಪ್ರಿಯಾಂಕ ಸಿನಿಮಾಗೆ ರಿಯಲ್ ಸ್ಟಾರ್ ಉಪೇಂದ್ರ ಸಾಥ್‌
05:27ಸಿಂಗರ್‌ನಿಂದ ಹೀರೋವರೆಗೆ: ‘ಲೋ ನವೀನ’ ಮೂಲಕ ನವೀನ್ ಸಜ್ಜು ಹೊಸ ಪ್ರಯಾಣ
03:45ಸಿದ್ದೇಗೌಡರ ಗದ್ಲಗೆ ಜಾಕ್​ಪಾಟ್: ಮತ್ತೆ ಮೋಡಿ ಮಾಡ್ತಾರಾ ಸತೀಶ್​ ನೀನಾಸಂ-ರಚಿತಾ ರಾಮ್?
02:49ಸಪ್ತಮಿ ಗೌಡ ಬಳಿಕ ಪಾಪರಾಜಿಗಳ ಮೇಲೆ ರಣಬೀರ್​ ಕಪೂರ್ ಗರಂ: ರಾಂಗ್ ಆದ ಬಾಲಿವುಡ್​ ರಾಮ!
Read more