ಅಂಬಿ ಋಣ ತೀರಿಸಲು ಮುಂದಾದ್ರು ಡಿ ಬಾಸ್!

Published : Jan 08, 2019, 03:17 PM IST
ಅಂಬಿ ಋಣ ತೀರಿಸಲು ಮುಂದಾದ್ರು ಡಿ ಬಾಸ್!

ಸಾರಾಂಶ

  ಅಂಬಿ ಮೇಲೆ ದರ್ಶನ್‌ಗೆ ವಿಪರೀತ ಅಭಿಮಾನ. ಅಗಲಿದ ಅಂಬಿಗೆ ತಮ್ಮದೇ ಶೈಲಿಯಲ್ಲಿ ಋಣ ತೀರಿಸಲು ಮುಂದಾಗುತ್ತಿದ್ದಾರೆ ದಾಸ. ಹೇಗೆ? ಏನು ಮಾಡುತ್ತಿದ್ದಾರೆ?

ಜೂನಿಯರ್ ರೆಬೆಲ್ ಸ್ಟಾರ್ ಅಭಿನಯದ 'ಅಮರ್' ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ನಡೆದ ಶೂಟಿಂಗ್‌ನಲ್ಲಿ ದರ್ಶನ್ ಭಾಗಿಯಾದ ವೀಡಿಯೋ ಹಾಗೂ ಫೋಟೋವನ್ನು ಅಭಿಷೇಕ್ ತಮ್ಮ ಇನ್‌ಸ್ಟ್ರಾಗ್ರಾಂ ಪೇಜಿನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

'ಅಮರ್' ಚಿತ್ರದ ಮುಹೂರ್ತ ವೇಳೆ ದರ್ಶನ್ ಕಾಣಿಸಿಕೊಳ್ಳುತ್ತಾರೆ ಎಂದೇ ಎಲ್ಲರೂ ನಿರೀಕ್ಷಿಸಿದ್ದರು. 'ಯಜಮಾನ' ಚಿತ್ರದಲ್ಲಿ ಬ್ಯುಸಿಯಾಗಿದ್ದರಿಂದ ದರ್ಶನ್ ಟ್ವೀಟ್ ಮಾಡಿ ವಿಶ್ ಮಾಡಿದರು. ಆದರೆ, 'ಅಮರ್' ಚಿತ್ರದಲ್ಲಿ ಅವರು ನಟಿಸುತ್ತಾರಾ ಎಂಬ ಸುದ್ದಿಗೆ ಉತ್ತರ ಸಿಕ್ಕಿರಲಿಲ್ಲ. ಇದೀಗ ಈ ಗಾಳಿ ಸುದ್ದಿಗೆ ಸೂಕ್ತ ಉತ್ತರ ಸಿಕ್ಕಿದ್ದು, ಈ ಚಿತ್ರದಲ್ಲಿ ದಾಸ ಕಾಣಿಸಿಕೊಳ್ಳುವುದೀಗ ಖಾತರಿಯಾಗಿದೆ.

ದರ್ಶನ್ 'ನನ್ನ ದೊಡ್ಡ ಮಗ' ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು ಅಂಬಿ. ಇದೀಗ ಈ ಇಬ್ಬರೂ ಒಂದೇ ಚಿತ್ರದಲ್ಲಿ ಕಾಣಿಸಿ ಕೊಳ್ಳುತ್ತಿರುವುದು ಸ್ಯಾಂಡಲ್‌ವುಡ್‌ಗೆ ತುಂಬಾ ಸ್ಪೆಷಲ್.

ಅಂಬಿ ಮಾತೆಂದರೆ ವೇದ ವಾಕ್ಯವೆಂದು ಪಾಲಿಸುತ್ತಿದ್ದ ದರ್ಶನ್, ಯಾವುದೇ ಕೆಲಸ ಶುರು ಮಾಡೋ ಮುನ್ನ ಅಂಬರೀಶ್‌ಗೆ ತಿಳಿಸದೇ ಮುಂದೆ ಹೆಜ್ಜೆ ಇಡುತ್ತಿರಲಿಲ್ಲ. ಅಂಬಿ ಸಾವಿನ ನಂತರವೂ ಯಾವುದೇ ಕೆಲಸವಿದ್ದರೂ, ರೆಬೆಲ್ ಸ್ಟಾರ್ ಸಮಾಧಿಗೆ ನಮಸ್ಕರಿಸಿ, ಮುಂದಿನ ಹೆಜ್ಜೆ ಇಡೋ ಪರಿಪಾಠ ಬೆಳೆಯಿಸಿಕೊಂಡಿದ್ದಾರಂತೆ ಡಿ ಬಾಸ್.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಇದು ಟಾಕ್ಸಿಕ್‌ ಅಲ್ಲ, ಸ್ವೀಟ್‌ ಸುದ್ದಿ.. ಯಶ್‌ಗಾಗಿ ರಾಧಿಕಾ ಪಂಡಿತ್‌ ಬರೆದ ಮನಮೋಹಕ ಸಂದೇಶ ವೈರಲ್!
The Devil Movie: ಕಾಲವೇ ಸತ್ಯ ಹೇಳುತ್ತದೆ. ಸಮಯವೇ ಉತ್ತರಿಸುತ್ತದೆ-ಜೈಲಿನಿಂದಲೇ Darshan ಮೆಸೇಜ್