Reality Shows Exposed: ನಿಮ್ಮದು ಕಣ್ಣೀರಿನ ಕಥೆನಾ? ಕೇಳಿದಾಗಲೆಲ್ಲಾ ಅಳಲು ಬರತ್ತಾ? ಬೇರೆ ಟ್ಯಾಲೆಂಟೇ ಬೇಡ ಬಿಡಿ... ನೀವು ಸೆಲೆಕ್ಟೆಡ್‌!

Published : Aug 21, 2025, 04:41 PM IST
Reality Show

ಸಾರಾಂಶ

ನಿಮ್ಮದು ಕಣ್ಣೀರಿನ ಕಥೆನಾ? ಕೇಳಿದಾಗಲೆಲ್ಲಾ ಅಳಲು ಬರತ್ತಾ? ಇಷ್ಟು ಟ್ಯಾಲೆಂಟ್‌ ಇದ್ರೆ ಸಾಕು ಬಿಡಿ, ಸೆಲೆಕ್ಟೆಡ್‌! ಇದೇನು ಅಂತೀರಾ? ಇಲ್ಲಿದೆ ನೋಡಿ ಡಿಟೇಲ್ಸ್​... 

ಇಂದು ಯಾವುದೇ ಭಾಷೆಯ ಯಾವುದೇ ರಿಯಾಲಿಟಿ , ಟ್ಯಾಲೆಂಟ್​ ಷೋಗಳನ್ನು ತೆಗೆದುಕೊಳ್ಳಿ. ಅಲ್ಲಿ ಟ್ಯಾಲೆಂಟ್‌ ಇದ್ದವರಿಗೆ ಆದ್ಯತೆ ಎನ್ನುವುದು ನಿಜವಾದರೂ, ಅಲ್ಲಿ ಆ ಷೋದ ಉದ್ದೇಶ ಬಿಟ್ಟು, ಸ್ಪರ್ಧಿಗಳು ಅಳುವುದು, ತಮ್ಮ ಕಣ್ಣೀರಿನ ಕಥೆಯನ್ನು ಹೇಳುವುದು, ಸ್ಪರ್ಧಿಗಳ ಕುಟುಂಬದವರು ಬಂದು ಕಣ್ಣೀರು ಹಾಕುವುದು, ಅದಕ್ಕೆ ತೀರ್ಪುಗಾರರು ಕಣ್ಣೀರು ಸುರಿಸುವುದು... ಇವೇ ರಾರಾಜಿಸುತ್ತಿರುವುದನ್ನು ನೋಡಬಹುದು. ಡಾನ್ಸ್‌, ಸಂಗೀತದಂಥ ರಿಯಾಲಿಟಿ ಷೋಗಳಲ್ಲಿಯೂ ಅವರಲ್ಲಿ ಆ ಟ್ಯಾಲೆಂಟ್​ ಇದ್ಯೋ ಇಲ್ವೋ, ಒಟ್ಟಿನಲ್ಲಿ ಕೇಳಿದಾಗಲೆಲ್ಲಾ ಅಳಬೇಕು, ಅವರ ಹಿನ್ನೆಲೆ ಸ್ವಲ್ಪ ಕಣ್ಣೀರಿನದ್ದು ಆಗಿರಬೇಕು. ಇಲ್ಲದಿದ್ದರೆ ನಿಮ್ಮಲ್ಲಿ ನೃತ್ಯ, ಹಾಡಿನ ಅದೆಷ್ಟು ಟ್ಯಾಲೆಂಟ್​ ಇದ್ದರೂ ಪ್ರಯೋಜನವೇ ಇಲ್ಲ! ಹೆಚ್ಚೆಚ್ಚು ಕಣ್ಣೀರು ಹಾಕಿದರೆ, ನಿಮ್ಮ ಕುಟುಂಬದವರನ್ನು ವೇದಿಕೆಯ ಮೇಲೆ ಕರೆತಂದು ಅವರಿಂದಲೂ ಕಣ್ಣೀರು ಹಾಕಿಸಿ, ನೋಡುವ ವೀಕ್ಷಕರ ಕಣ್ಣಲ್ಲೂ ನೀರು ತರಿಸುವ ಟ್ಯಾಲೆಂಟ್​ ಇದ್ದರೆ ಬಹುತೇಕ ಎಲ್ಲಾ ಭಾಷೆಯ ಯಾವುದೇ ರಿಯಾಲಿಟಿ ಷೋಗೂ ನೀವು ಸೈ, ನೀವೇ ಜೈ...

ಪ್ರತಿನಿತ್ಯ ಟಿವಿಯಲ್ಲಿ ಬರುವ ಹಲವು ರಿಯಾಲಿಟಿ ಷೋಗಳನ್ನು ಅದರಲ್ಲಿಯೂ ವೀಕೆಂಡ್​ಗಳಲ್ಲಿ ಬರುವ ಬೇರೆ ಬೇರೆ ಭಾಷೆಗಳ ಚಾನೆಲ್​ಗಳಲ್ಲಿಯೂ ನೀವು ಇದನ್ನೇ ನೋಡಿರಬಹುದು. ಅಲ್ಲಿಯ ಸ್ಪರ್ಧಿಗಳು ತಾವು ಬಂದಿರುವ ಷೋನಲ್ಲಿ ಎಷ್ಟು ಟ್ಯಾಲೆಂಟ್​ ಇದೆ ಎಂದು ತೋರಿಸುವುದಕ್ಕಿಂತಲೂ ಹೆಚ್ಚಾಗಿ ಒಂದೆಡೆ ಹಾರಾಟ, ಕೂಗಾಟ, ಚೀರಾಟಗಳ ಜೊತೆ ತೀರ್ಪುಗಾರರ ಜೊತೆ ಒಂದಿಷ್ಟು ಡಬಲ್​ ಮೀನಿಂಗ್​ಗಳು ಇದ್ದರೆ, ಮತ್ತೆ ಇರುವುದು ಸ್ಪರ್ಧಿಗಳ, ಅವರ ಕುಟುಂಬದವರ ಕಣ್ಣೀರಿನ ಕಥೆ. ಅಷ್ಟು ಆದ ಮೇಲೆ ಉಳಿದಿದ್ದರೆ ಅದು ಸ್ಪರ್ಧಿಗಳ ನಿಜವಾದ ಟ್ಯಾಲೆಂಟ್​ ಅಷ್ಟೇ. ಹಾಗೆಂದು ಇದನ್ನು ಯಾರ್ಯಾರೋ ಸುಖಾ ಸುಮ್ಮನೇ ಹೇಳುತ್ತಿಲ್ಲ. ಇಂದಿನ ರಿಯಾಲಿಟಿ ಷೋಗಳ ನಿಜವಾದತನವನ್ನು ತೆರೆದಿಟ್ಟಿದ್ದಾರೆ ಖ್ಯಾತ ಗಾಯಕಿ ಅರ್ಚನಾ ಉಡುಪ.

ಅಷ್ಟಕ್ಕೂ ಸದ್ಯ ಅರ್ಚನಾ ಉಡುಪ ಅವರು ಶ್ರೀರಸ್ತು, ಶುಭಮಸ್ತು ಸೀರಿಯಲ್​ನಲ್ಲಿ ರಾಧಾ ಕ್ಯಾರೆಕ್ಟರ್​ ಮಾಡುತ್ತಿದ್ದಾರೆ. ಆದರೆ ಇವರು ಇದಾಗಲೇ ಹಲವು ವರ್ಷಳಿಂದ ಹಿನ್ನೆಲೆ ಗಾಯಕಿಯಾಗಿ ತಮ್ಮ ಸುಮಧುರ ಕಂಠದಿಂದ ಜನರನ್ನು ಮೋಡಿ ಮಾಡಿದವರು. ಇದೀಗ ಅವರು ಸುವರ್ಣ ಪಾಡ್​ಕಾಸ್ಟ್​ಗೆ ನೀಡಿರೋ ಸಂದರ್ಶನದಲ್ಲಿ ಬಹುತೇಕ ರಿಯಾಲಿಟಿ ಷೋಗಳ ಹಣೆಬರಹವನ್ನು ತೆರೆದಿಟ್ಟಿದ್ದಾರೆ. ಬರುವ ಸ್ಪರ್ಧಿಗಳ ಟ್ಯಾಲೆಂಟ್​ಗಳಿಂತಲೂ ಹೆಚ್ಚಾಗಿ ಬೇರೆಯದ್ದೆ ಇಲ್ಲಿ ರಾರಾಜಿಸುತ್ತದೆ ಎಂದು ಅವರು ಹೇಳಿದ್ದಾರೆ. ಅದರಲ್ಲಿಯೂ ಸ್ಪರ್ಧಿಗಳ ಬಡತನ, ಅವರ ಕಣ್ಣೀರಿನ ಕಥೆ ಇದನ್ನೇ ಹೈಲೈಟ್ ಮಾಡಲಾಗುತ್ತದೆ. ಅದಾದ ಬಳಿಕ ಜನರಿಂದ ವೋಟಿಂಗ್​ ಕೇಳಲಾಗುತ್ತದೆ. ಆ ಸಂದರ್ಭದಲ್ಲಿ ವೀಕ್ಷಕರು ಭಾವುಕರಾಗಿರುತ್ತಾರೆ. ಸ್ಪರ್ಧಿಗಳ ನಿಜವಾದ ಟ್ಯಾಲೆಂಟ್​ ಬಿಟ್ಟು ಅವರ ವೈಯಕ್ತಿಕ ಜೀವನ ನೋಡಿ ವೋಟಿಂಗ್​ ಮಾಡುತ್ತಾರೆ. ಇದರಿಂದ ನಿಜವಾಗಿಯೂ ಟ್ಯಾಲೆಂಟ್​ ಇರುವವರಿಗೆ ಅನ್ಯಾಯ ಆಗುತ್ತಿದೆ ಎಂದು ಅರ್ಚನಾ ಅವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ರಿಯಾಲಿಟಿ ಷೋ, ಟ್ಯಾಲೆಂಟ್​ ಷೋಗಳನ್ನು ನೋಡುವ ದೊಡ್ಡ ವರ್ಗವೇ ಇದೆ. ಹಲವರು ಈ ಕೂಗಾಟ, ಚೀರಾಟ ಕೇಳಲಾಗದೇ ಅಥವಾ ಡಬಲ್​ ಮೀನಿಂಗ್​ ಡೈಲಾಗ್​ ಕೇಳಲಾಗದೇ ಇಲ್ಲವೇ ಸ್ಪರ್ಧಿಗಳು ಷೋ ಮಾಡುವುದಕ್ಕಿಂತ ಹೆಚ್ಚಾಗಿ ಕಣ್ಣೀರು ಹಾಕುವುದನ್ನು ನೋಡಲಾಗದೇ ಚಾನೆಲ್ ಚೇಂಜ್​ ಮಾಡುವವರೂ ಇದ್ದಾರೆ. ಪ್ರತಿಭೆಗಳ ಅನಾವರಣ ಆಗಬೇಕಿರುವ ಇಂಥ ಷೋಗಳು ಈಗ ದಿಕ್ಕು ತಪ್ಪುತ್ತಿರುವುದಕ್ಕೆ ಅರ್ಚನಾ ಉಡುಪ ಅವರು ತುಂಬಾ ಬೇಸರ ವ್ಯಕ್ತಪಡಿಸಿದ್ದಾರೆ.

 

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಬಂದವ್ರಿಗೆ ದಾರಿಕೊಡಿ, ಹೋಗೋರಿಗೆ ದಾರಿಬಿಡಿ..'ಜೀ ಕನ್ನಡ ವೇದಿಕೆಯಲ್ಲಿ ಹೇಳಿದ್ದ ಮಾತನ್ನೇ ಬಿಗ್‌ಬಾಸ್‌ನಲ್ಲಿ ಮರೆತ್ರಾ ಗಿಲ್ಲಿ ನಟ!
ಹೀರೋ ಆಗುವ ಮುನ್ನ ಶಾಕ್ ಕೊಟ್ಟ ಅಕೀರಾ ನಂದನ್: ರೇಣು ದೇಸಾಯಿ ಫೋನ್ ಮಾಡಿದಾಗ ಪವನ್ ನಕ್ಕಿದ್ದೇಕೆ?