ಪ್ರೇಯಸಿಯನ್ನು ಕೊಂದು ಪೀಸ್ ಪೀಸ್ ಮಾಡಿದ: ಆ ಅರ್ಧ ಭಾಗ ಇಟ್ಟುಕೊಂಡು, ಇನ್ನರ್ಧ ಭಾಗ ಎಸೆದುಬಿಟ್ಟ..!

ಪ್ರೇಯಸಿಯನ್ನು ಕೊಂದು ಪೀಸ್ ಪೀಸ್ ಮಾಡಿದ: ಆ ಅರ್ಧ ಭಾಗ ಇಟ್ಟುಕೊಂಡು, ಇನ್ನರ್ಧ ಭಾಗ ಎಸೆದುಬಿಟ್ಟ..!

Published : Mar 31, 2026, 09:06 PM IST

ಪರಸ್ತ್ರೀ ವ್ಯಾಮೋಹದಿಂದ ನೌಕಾಪಡೆಯ ಯೋಧನೊಬ್ಬ ತನ್ನ ಪ್ರೇಯಸಿಯನ್ನು ಕೊಂದು ಫ್ರಿಡ್ಜ್‌ನಲ್ಲಿಟ್ಟರೆ, ಮತ್ತೊಂದೆಡೆ ಐಷಾರಾಮಿ ಜೀವನದ ಹಪಾಹಪಿಯಿಂದ ಉಂಟಾದ ಸಾಲದ ಸುಳಿಯಲ್ಲಿ ಸಿಲುಕಿದ ಕುಟುಂಬವೊಂದು ಸರ್ವನಾಶವಾಗಿದೆ. ಈ ಎರಡು ಭೀಕರ ಪ್ರಕರಣಗಳು ಕ್ರೌರ್ಯ ಮತ್ತು ಹಣದ ವ್ಯಾಮೋಹದ ಕರಾಳ ಮುಖ ತೆರೆದಿಡುತ್ತವೆ.

ಸಮಾಜದಲ್ಲಿ ಮಾನವೀಯತೆ ಎಂಬುದು ದಿನೇ ದಿನೇ ಸತ್ತು ಹೋಗುತ್ತಿದೆಯೇ ಎಂಬ ಅನುಮಾನ ಕಾಡುತ್ತಿದೆ. ದೆಹಲಿಯ ಶ್ರದ್ಧಾ ವಾಕರ್ ಪ್ರಕರಣ ಇಡೀ ದೇಶವನ್ನೇ ನಡುಗಿಸಿತ್ತು. ಆದರೆ ಈಗ ಅಂತಹದ್ದೇ ಮತ್ತೊಂದು ಭೀಕರ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಮತ್ತೊಂದೆಡೆ, ಹಣದ ವ್ಯಾಮೋಹ ಮತ್ತು ಐಷಾರಾಮಿ ಜೀವನದ ಹಪಾಹಪಿ ಒಂದು ಸುಂದರ ಕುಟುಂಬವನ್ನೇ ಸ್ಮಶಾನವಾಗಿಸಿದೆ. ಇವತ್ತಿನ ಎಫ್‌.ಐ.ಆರ್ (FIR) ವಿಶೇಷ ವರದಿಯಲ್ಲಿ ಎರಡು ಭೀಕರ ಪ್ರಕರಣಗಳ ಕರಾಳ ಮುಖ ಇಲ್ಲಿದೆ.

ಪ್ರಕರಣ-1: ನೌಕಾಪಡೆ ಯೋಧನಿಂದ 'ಫ್ರಿಡ್ಜ್ ಮರ್ಡರ್'! 

ಭಾರತೀಯ ನೌಕಾಪಡೆಯಲ್ಲಿ (Indian Navy) ಸೇವೆ ಸಲ್ಲಿಸುತ್ತಿದ್ದ ಒಬ್ಬ ವ್ಯಕ್ತಿ ದೇಶದ ರಕ್ಷಣೆ ಮಾಡಬೇಕಾದವನು, ಇಂದು ಕಿರಾತಕ ಕೊಲೆಗಡುಕನಾಗಿ ಪೊಲೀಸರ ಅತಿಥಿಯಾಗಿದ್ದಾನೆ. ಈತನಿಗೆ ಮನೆಯಲ್ಲಿ ಬಂಗಾರದಂತಹ ಹೆಂಡತಿ ಇದ್ದರೂ, ಪರಸ್ತ್ರೀ ವ್ಯಾಮೋಹ ಈತನನ್ನು ಪೈಶಾಚಿಕ ಕೃತ್ಯಕ್ಕೆ ಪ್ರೇರೇಪಿಸಿದೆ. ಹೆಂಡತಿ ಮನೆಯಲ್ಲಿ ಇಲ್ಲದ ಸಮಯ ನೋಡಿ ತನ್ನ ಪ್ರೇಯಸಿಯನ್ನು ಮನೆಗೆ ಕರೆಸಿಕೊಂಡಿದ್ದ ಈತ, ಯಾವುದೋ ವಿಚಾರಕ್ಕೆ ಜಗಳವಾಡಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿದಾಗ ಆಕೆಯನ್ನು ಕೊಂದು ಹಾಕಿದ್ದಾನೆ.

ಕೊಲೆ ಮಾಡಿದ ನಂತರ ಸಿಕ್ಕಿಬೀಳುವ ಭಯದಿಂದ ಈತ ಮಾಡಿದ ಕೆಲಸ ಕೇಳಿದರೆ ಎದೆ ನಡುಗುತ್ತದೆ. ಮೃತದೇಹವನ್ನು ಸಾಕ್ಷ್ಯ ನಾಶಪಡಿಸಲು ತುಂಡು ತುಂಡಾಗಿ ಕತ್ತರಿಸಿದ್ದಾನೆ. ದೇಹದ ಅರ್ಧ ಭಾಗವನ್ನು ಫ್ರಿಡ್ಜ್‌ನಲ್ಲಿಟ್ಟರೆ, ಇನ್ನರ್ಧ ಭಾಗವನ್ನು ನಿರ್ಜನ ಪ್ರದೇಶದಲ್ಲಿ ಎಸೆದಿದ್ದಾನೆ. ತಲೆಯನ್ನು ಎಲ್ಲಿಟ್ಟಿದ್ದಾನೆ ಎಂಬುದು ಇನ್ನೂ ನಿಗೂಢವಾಗಿದೆ. ದೆಹಲಿಯ ಶ್ರದ್ಧಾ ವಾಕರ್ ಕೇಸ್‌ ಅನ್ನೇ ನೆನಪಿಸುವ ಈ ಘಟನೆ ನಡೆದ ನಂತರ, ಆರೋಪಿಯೇ ಸ್ವತಃ ಪೊಲೀಸರ ಮುಂದೆ ಬಂದು ಶರಣಾಗಿದ್ದಾನೆ. ಒಬ್ಬ ಯೋಧನಿಗೆ ಇಂತಹ ಕ್ರೂರ ಯೋಚನೆ ಬಂದಿದ್ದಾದರೂ ಹೇಗೆ ಎಂಬುದು ಈಗ ತನಿಖೆಯ ವಿಷಯವಾಗಿದೆ.

ಪ್ರಕರಣ-2: ಐಷಾರಾಮಿ ಜೀವನಕ್ಕೆ ಬಲಿಯಾದ ಕುಟುಂಬ!

ಇದು ಮತ್ತೊಂದು ಕಡೆಯ ಕಥೆ. ಅದೊಂದು ಶ್ರೀಮಂತ ಕುಟುಂಬ, ಯಾರೇ ಸಹಾಯ ಎಂದು ಕೇಳಿದರೂ ಇಲ್ಲ ಎನ್ನುತ್ತಿರಲಿಲ್ಲ. ಮೋಹನಗೌಡ ಎಂಬುವವರು ಚೀಟಿ ವ್ಯವಹಾರದ ಮೂಲಕ ಕೋಟ್ಯಾಂತರ ರೂಪಾಯಿ ಸಂಪಾದಿಸಿದ್ದರು. ಬಂದ ಹಣದಲ್ಲಿ ವಿದೇಶಿ ಪ್ರವಾಸ, ಐಷಾರಾಮಿ ಕಾರುಗಳು ಎಂದು ಮಜಾ ಮಾಡುತ್ತಿದ್ದರು. ಆದರೆ, ಈ ಶೋಕಿ ಲೈಫ್ ಅವರನ್ನ ಕಷ್ಟದ ಸುಳಿಗೆ ದೂಡಿತು. ವ್ಯವಹಾರದಲ್ಲಿ ಒಂದಿಬ್ಬರು ಮೋಸ ಮಾಡಿದರು, ಬರಬೇಕಾದ ಹಣ ಬರಲಿಲ್ಲ. ಇತ್ತ ಇವರು ಮಾಡಿದ ಸಾಲ ಕೋಟಿಗಳ ಗಡಿ ದಾಟಿತ್ತು.

ಸಾಲಗಾರರ ಕಿರುಕುಳ ತಾಳಲಾರದೆ ಇಡೀ ಕುಟುಂಬವೇ ಸರ್ವನಾಶವಾಗುವ ನಿರ್ಧಾರ ಮಾಡಿತು. ಮೋಹನಗೌಡ ತನ್ನ ತಾಯಿ, ಅಕ್ಕ ಮತ್ತು ಅಳಿಯನ ಕತ್ತು ಕೊಯ್ದು ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ಭೀಕರ ಘಟನೆಯಲ್ಲಿ ತಾಯಿ ಮತ್ತು ಅಕ್ಕ ಈಗಾಗಲೇ ಸಾವನ್ನಪ್ಪಿದ್ದಾರೆ. ಮೋಹನಗೌಡ ಮತ್ತು ಆತನ ಅಳಿಯ ಸಾವು-ಬದುಕಿನ ನಡುವೆ ಆಸ್ಪತ್ರೆಯಲ್ಲಿ ಹೋರಾಡುತ್ತಿದ್ದಾರೆ. ಐಷಾರಾಮಿ ಜೀವನದ ಹಪಾಹಪಿ ಹೇಗೆ ಒಂದು ಕುಟುಂಬವನ್ನ ಬೀದಿಗೆ ತಂದು ಸ್ಮಶಾನವಾಗಿಸುತ್ತದೆ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ.

ಕೊನೆಯ ಮಾತು:

ಈ ಎರಡೂ ಪ್ರಕರಣಗಳು ಸಮಾಜಕ್ಕೆ ದೊಡ್ಡ ಪಾಠ ಕಲಿಸುತ್ತಿವೆ. ಕಾಮ ಮತ್ತು ಕ್ರೋಧಕ್ಕೆ ಬಲಿಯಾಗಿ ಮಾಡುವ ಕೊಲೆಗಳು ಒಬ್ಬನನ್ನು ಜೈಲಿಗೆ ತಳ್ಳಿದರೆ, ಅತಿಯಾದ ಆಸೆ ಮತ್ತು ಶೋಕಿ ಜೀವನ ಇಡೀ ಕುಟುಂಬವನ್ನೇ ಬಲಿ ಪಡೆಯುತ್ತದೆ. ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಆತ್ಮಹತ್ಯೆ ಅಥವಾ ಕೊಲೆ ಯಾವುದಕ್ಕೂ ಪರಿಹಾರವಲ್ಲ. ಮನುಷ್ಯತ್ವ ಮತ್ತು ತಾಳ್ಮೆ ಕಳೆದುಕೊಂಡರೆ ಇಂತಹ ದುರಂತಗಳು ಸಂಭವಿಸುತ್ತಲೇ ಇರುತ್ತವೆ.

04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
25:33ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!
26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
Read more