Tunisha Sharma : ತುನಿಷಾಳನ್ನು ಗೆಳೆಯ ಶೀಜನ್ ಆಸ್ಪತ್ರೆಗೆ ಕರೆದೊಯ್ಯುತ್ತಿರುವ ವಿಡಿಯೋ ವೈರಲ್

By Anusha KbFirst Published Dec 27, 2022, 9:22 PM IST
Highlights

ತುನಿಷಾ ಶರ್ಮಾ ಆತ್ಮಹತ್ಯೆಯ ಬಳಿಕ ಆಕೆಯನ್ನು ಈಗ ಬಂಧಿತನಾಗಿರುವ ಶೀಜನ್ ಹಾಗೂ ಮತ್ತೊಬ್ಬ ಸಹನಟ ಆಸ್ಪತ್ರೆಗೆ ಹೊತ್ತೊಯ್ಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹೊಸದಿಲ್ಲಿ: ನಟಿ ತುನಿಷಾ ಶರ್ಮಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೆಳೆಯ ಶೀಜನ್ ಮೊಹಮ್ಮದ್ ಖಾನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಈ ವಿಚಾರ ಹಲವು ಚರ್ಚೆಗಳಿಗೆ ಕಾರಣವಾಗಿದೆ. ಈ ಮಧ್ಯೆ ತುನಿಷಾ ಶರ್ಮಾ ಆತ್ಮಹತ್ಯೆಯ ಬಳಿಕ ಆಕೆಯನ್ನು ಈಗ ಬಂಧಿತನಾಗಿರುವ ಶೀಜನ್ ಹಾಗೂ ಮತ್ತೊಬ್ಬ ಸಹನಟ ಆಸ್ಪತ್ರೆಗೆ ಹೊತ್ತೊಯ್ಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  ಮಹಾರಾಷ್ಟ್ರದ ನೈಗಾಂವ್‌ನಲ್ಲಿರುವ ಆಸ್ಪತ್ರೆಗೆ ನಟಿ ತುನಿಷಾ ಅವರನ್ನು ಕರೆದೊಯ್ಯುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ (CCTV footage) ಸೆರೆ ಆಗಿದೆ.

ಟಿವಿ ನಟಿ ತುನಿಶಾ ಶರ್ಮಾ ಅವರು ಮಹಾರಾಷ್ಟ್ರದ (Maharashtra) ಪಾಲ್ಘರ್‌ನಲ್ಲಿ(Palghar)ಶೂಟಿಂಗ್‌  ಸೆಟ್‌ನಲ್ಲಿಯೇ  ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಶೀಜನ್ ಖಾನ್‌ನನ್ನು ಪೊಲೀಸರು ಬಂಧಿಸಿದ್ದರು. ಶೀಜನ್ ಖಾನ್‌ ಹಾಗೂ ತುನಿಷಾ ಶರ್ಮಾ ಪರಸ್ಪರ ಪ್ರೇಮಿಸುತ್ತಿದ್ದು, ತುನಿಷಾ ಆತ್ಮಹತ್ಯೆ (suicide)ಮಾಡಿಕೊಳ್ಳುವ 15 ದಿನಗಳ ಹಿಂದಷ್ಟೇ ಇವರಿಬ್ಬರ ಮಧ್ಯೆ ಬ್ರೇಕಪ್ ಆಗಿತ್ತು. 

ಸಿಸಿಟಿವಿ ವೀಡಿಯೋದಲ್ಲಿ, ತುನಿಷಾ ಶರ್ಮಾಳನ್ನು ವ್ಯಕ್ತಿಯೊಬ್ಬರು ಮೆಟ್ಟಿಲುಗಳ ಮೇಲೆ ಹೊತ್ತುಕೊಂಡು ಹೋಗುತ್ತಿದ್ದು, ಶೀಜಾನ್ ಖಾನ್ ಮತ್ತು ಮತ್ತೊಬ್ಬ ಮಹಿಳೆ ಅವರ ಹಿಂದಿನಿಂದ ಹೋಗುತ್ತಿದ್ದಾರೆ. ಇದು ಆಸ್ಪತ್ರೆಯ ಆವರಣದ ವಿಡಿಯೋ ಆಗಿದ್ದು, ಅವರು ತುನಿಷಾ ಅವರನ್ನು ಕರೆದುಕೊಂಡು ಆಸ್ಪತ್ರೆಗೆ ಬರುತ್ತಿರುವ ದೃಶ್ಯವಿದೆ. ಸೆಟ್‌ನಲ್ಲಿದ್ದವರು ಆಕೆಯನ್ನು ಆಸ್ಪತ್ರೆಗೆ ಕರೆತಂದಿದ್ದಾರೆ ಎಂದು ನೈಗಾಂವ್ ಆಸ್ಪತ್ರೆಯ ವೈದ್ಯ ಸುರೇಂದ್ರ ಪಾಲ್ ಹೇಳಿದ್ದಾರೆ. ಸುರೇಂದ್ರ ಪಾಲ್ ಅವರು ತುನಿಷಾ ಅವರನ್ನು ಪರಿಶೀಲಿಸಿದಾಗ ಅವಳು ಮೃತಪಟ್ಟಿರುವುದು ಖಚಿತವಾಗಿತ್ತು. 

Tunisha Sharma Death case; ಗರ್ಭಿಣಿಯಾಗಿದ್ದಳು, ಅಬಾರ್ಷನ್ ಮಾಡಿಸಿದ್ಲು; ಗೆಳತಿಯ ಶಾಕಿಂಗ್ ಹೇಳಿಕೆ

ಅವಳನ್ನು ಕರೆತಂದಾಗ ಅವರು ಆಕೆ ಕೋಣೆಯಲ್ಲಿ ಒಳಗಿನಿಂದ ಚಿಲಕ ಹಾಕಿಕೊಂಡಿದ್ದಳು. ಹೊರಗಿನಿಂದ ಬಡಿದಾಗ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಬಾಗಿಲು ಒಡೆದು ಒಳನುಗ್ಗಿದ್ದಾಗ ಆಕೆ ನೇಣು ಹಾಕಿಕೊಂಡಿರುವುದು ಕಂಡು ಬಂತು, ನಂತರ ಆಕೆಯನ್ನು ಇಲ್ಲಿಗೆ ಕರೆತಂದೆವು ಎಂದು ಅವರು ಹೇಳಿದರು ಎಂದು ಸುರೇಂದ್ರ ಪಾಲ್ (Surendra Pal) ಹೇಳಿದ್ದಾರೆ. ಇದಕ್ಕೂ ಮೊದಲು ಕೂಡ ತುನಿಷಾ ಆತ್ಮಹತ್ಯೆಗೆ ಯತ್ನಿಸಿದ್ದಳು ಎಂದು ಶೀಜನ್ ಹೇಳಿದ್ದ. ತುನಿಶಾ ಇದಕ್ಕೂ ಮೊದಲು ಆತ್ಮಹತ್ಯೆಗೆ ಯತ್ನಿಸಿದ್ದಳು, ಆಗ ನಾನೇ ಆಕೆಯನ್ನು ರಕ್ಷಿಸಿದ್ದೆ. ಅಲ್ಲದೇ ಆಕೆಯ ತಾಯಿಗೆ ಆಕೆಯನ್ನು ಕಾಳಜಿಯಿಂದ ನೋಡುವಂತೆ ಹೇಳಿದ್ದೆ ಎಂದು ಪೊಲೀಸ್ ವಿಚಾರಣೆ ವೇಳೆ ಶೀಜನ್ ಹೇಳಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 

ಅಲ್ಲದೇ ಆತ ದೇಶವನ್ನೇ ಬೆಚ್ಚಿ ಬೀಳಿಸಿದ 25 ಫೀಸ್ ಎಂದೇ ಕುಖ್ಯಾತಿ ಗಳಿಸಿರುವ ಶ್ರದ್ಧಾ ವಾಕರ್ ಕೊಲೆ ಪ್ರಕರಣದಿಂದ ಬೇಸತ್ತು ತುನಿಷಾ ಜೊತೆ ಬ್ರೇಕ್ ಅಪ್ ಮಾಡಿಕೊಂಡಿದ್ದ ಎಂದು ಹೇಳಿಕೊಂಡಿದ್ದ. ದೆಹಲಿಯಲ್ಲಿ ನಡೆದ ಶ್ರದ್ಧಾ ವಾಕರ್ ಕೊಲೆ ಪ್ರಕರಣದಲ್ಲಿ ಆಕೆಯ ಮುಸ್ಲಿಂ ಬಾಯ್‌ಫ್ರೆಂಡ್ ಅಫ್ತಾಬ್ ಪೂನಾವಲಾ (Aaftab Poonawala) ಆಕೆಯನ್ನು 35 ಪೀಸ್‌ಗಳಾಗಿ ಹತ್ಯೆ ಮಾಡಿದ್ದ. ಈ ಪ್ರಕರಣಕ್ಕೆ ಲವ್ ಜಿಹಾದ್ ಆಯಾಮ ನೀಡಲಾಗಿತ್ತು. ಜೊತೆಗೆ ಈ ಪ್ರಕರಣ ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. 

ತುನಿಶಾ ಶರ್ಮಾ ಜತೆ ಬ್ರೇಕಪ್‌ ಆಗಲು ಶ್ರದ್ಧಾ ವಾಕರ್‌ ಹತ್ಯೆ ಕಾರಣ..!

ಇನ್ನು ನಿನ್ನೆ ತುನಿಷಾ ಅವರ ಚಿಕ್ಕಪ್ಪ ಪವನ್ ಶರ್ಮಾ (Pawan Sharma), ಮಾಧ್ಯಮಗಳಿಗೆ ಹೇಳಿಕೆ ನೀಡಿದ ಪ್ರಕಾರ, ಶೀಜನ್ (Sheezan Khan) ಇತರ ಹೆಣ್ಣು ಮಕ್ಕಳೊಂದಿಗೆ ಓಡಾಡುವುದನ್ನು ನೋಡಿದ ನಂತರ ತುನಿಷಾ ಶರ್ಮಾ ಒತ್ತಡಕ್ಕೆ ಒಳಗಾಗಿದ್ದಳು. ಇಬ್ಬರು ಕೂಡ ಮೇಕಪ್ ರೂಮ್‌ನಲ್ಲಿದ್ದರು ಆದರೆ ಅಲ್ಲಿ ಏನಾಯಿತು ಎಂಬುದು ಯಾರಿಗೂ ಗೊತ್ತಿಲ್ಲ, ನಮಗೆ ಕೂಡಲೇ ಸ್ಥಳಕ್ಕೆ ಬರುವಂತೆ ಕರೆ ಬಂದಿತ್ತು ಎಂದು ಪವನ್ ಶರ್ಮಾ ಹೇಳಿದ್ದರು. 

ಈ ಹಿಂದೆಯೂ ತುನಿಷಾ ಆತ್ಮಹತ್ಯೆಗೆ ಯತ್ನಿಸಿದ್ದಳು ಎಂಬ ಶೀಜನ್ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಖಂಡಿತ ಇಲ್ಲ ಇದು ಸಾಧ್ಯವೇ ಇಲ್ಲ. ಆಕೆ ಯಾವತ್ತೂ ಆತ್ಮಹತ್ಯೆಗೆ ಯತ್ನಿಸಿಲ್ಲ. ಆಕೆ ಬಹಳ ಚಿಂತೆಯಲ್ಲಿ ಇದ್ದಳು. ಇದೇ ಕಾರಣಕ್ಕೆ ಆಕೆಯ ತಾಯಿ ಚಿಂತೆಗೊಳಗಾಗಿದ್ದಳು ಎಂದು ಪವನ್ ಶರ್ಮಾ ಹೇಳಿದ್ದಾರೆ. 

Tunisha Sharma Death Case; ಇದು ಲವ್ ಜಿಹಾದ್ ವಿಷಯ: BJP ನಾಯಕರ ಗಂಭೀರ ಆರೋಪ

click me!